ETV Bharat / state

ಸಂಸಾರ ಕಲಹ: ಬಿಟ್ಟೋಗಿರುವ ಗಂಡಂದಿರನ್ನು ಮನೆಗೆ ಸೇರಿಸುವಂತೆ ದೇವರಿಗೆ ಪತ್ರ ಬರೆದ ಮಹಿಳೆಯರು!

author img

By

Published : Feb 13, 2021, 10:45 AM IST

Updated : Feb 13, 2021, 10:51 AM IST

ಕೊಳ್ಳೇಗಾಲ ಪಟ್ಟಣದಲ್ಲಿನ ನಾರಾಯಣಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಎರಡು ಪತ್ರಗಳು ದೊರಕಿವೆ. ಪತಿಯನ್ನು ತನ್ನ ಬಳಿ ಕಳುಹಿಸುವಂತೆ ಪತ್ನಿಯರು ಪತ್ರದಲ್ಲಿ ಬೇಡಿಕೊಂಡಿದ್ದಾರೆ.

ನಾರಾಯಣಸ್ವಾಮಿ ದೇವಾಲಯದ ಹುಂಡಿಯಲ್ಲಿ ಎರಡು ಪತ್ರಗಳು ಪತ್ತೆ
Two letter found in Narayana swami temple

ಕೊಳ್ಳೇಗಾಲ(ಚಾಮರಾಜನಗರ): ಪಟ್ಟಣದ ನಾರಾಯಣಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಹುಂಡಿಯಲ್ಲಿ ಎರಡು ಪತ್ರಗಳು ದೊರಕಿವೆ.

ಎರಡು ವರ್ಷಗಳ ಬಳಿಕ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ತಹಶೀಲ್ದಾರ್ ಕುನಾಲ್ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ‌ ಕಾರ್ಯ ನಡೆಯಿತು. ಈ ಬಾರಿ ಸುಮಾರು 1,79,304 ಲಕ್ಷ ರೂ. ಹಣ ಸಂಗ್ರಹವಾಗಿದೆ.

ಓದಿ: ಬೆಂಗಳೂರು: ನೈಜೀರಿಯನ್ ಮೂಲದ ಇಬ್ಬರು ಡ್ರಗ್ಸ್​​​ ಪೆಡ್ಲರ್​ಗಳ ಬಂಧನ

ಹುಂಡಿಯಲ್ಲಿ ಪತ್ರಗಳು ಪತ್ತೆ:

ಹುಂಡಿಯಲ್ಲಿದ್ದ ಹಣ ಎಣಿಕೆ ವೇಳೆ ಎರಡು ಪತ್ರಗಳು ಪತ್ತೆಯಾಗಿವೆ. 'ಓ .... ದೇವರೆ ನನ್ನ ಗಂಡ ಜಗಳವಾಡಿಕೊಂಡು ಬೇರೆ‌ ಹೋಗಿದ್ದಾನೆ. ಅವನಿಗೆ ಒಳ್ಳೆಯ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡುವಂತೆ ಕಳುಹಿಸು' ಹೀಗೆ ಇಬ್ಬರು ಮಹಿಳೆಯರು ತಮ್ಮ ಗಂಡಂದಿರನ್ನು ತಮ್ಮ ಬಳಿ ಸೇರಿಸುವಂತೆ ದೇವರಿಗೆ ಮೊರೆಯಿಟ್ಟಿದ್ದಾರೆ. ಪತ್ರದಲ್ಲಿ ವಿಳಾಸ, ಫೋನ್ ನಂಬರ್ ಯಾವುದು ಇಲ್ಲ.

ಕೊಳ್ಳೇಗಾಲ(ಚಾಮರಾಜನಗರ): ಪಟ್ಟಣದ ನಾರಾಯಣಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಹುಂಡಿಯಲ್ಲಿ ಎರಡು ಪತ್ರಗಳು ದೊರಕಿವೆ.

ಎರಡು ವರ್ಷಗಳ ಬಳಿಕ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ತಹಶೀಲ್ದಾರ್ ಕುನಾಲ್ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ‌ ಕಾರ್ಯ ನಡೆಯಿತು. ಈ ಬಾರಿ ಸುಮಾರು 1,79,304 ಲಕ್ಷ ರೂ. ಹಣ ಸಂಗ್ರಹವಾಗಿದೆ.

ಓದಿ: ಬೆಂಗಳೂರು: ನೈಜೀರಿಯನ್ ಮೂಲದ ಇಬ್ಬರು ಡ್ರಗ್ಸ್​​​ ಪೆಡ್ಲರ್​ಗಳ ಬಂಧನ

ಹುಂಡಿಯಲ್ಲಿ ಪತ್ರಗಳು ಪತ್ತೆ:

ಹುಂಡಿಯಲ್ಲಿದ್ದ ಹಣ ಎಣಿಕೆ ವೇಳೆ ಎರಡು ಪತ್ರಗಳು ಪತ್ತೆಯಾಗಿವೆ. 'ಓ .... ದೇವರೆ ನನ್ನ ಗಂಡ ಜಗಳವಾಡಿಕೊಂಡು ಬೇರೆ‌ ಹೋಗಿದ್ದಾನೆ. ಅವನಿಗೆ ಒಳ್ಳೆಯ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡುವಂತೆ ಕಳುಹಿಸು' ಹೀಗೆ ಇಬ್ಬರು ಮಹಿಳೆಯರು ತಮ್ಮ ಗಂಡಂದಿರನ್ನು ತಮ್ಮ ಬಳಿ ಸೇರಿಸುವಂತೆ ದೇವರಿಗೆ ಮೊರೆಯಿಟ್ಟಿದ್ದಾರೆ. ಪತ್ರದಲ್ಲಿ ವಿಳಾಸ, ಫೋನ್ ನಂಬರ್ ಯಾವುದು ಇಲ್ಲ.

Last Updated : Feb 13, 2021, 10:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.