ETV Bharat / state

ಕೋವಿಡ್‌ ಕಾಲದಲ್ಲೂ ಶೇ 25ರಷ್ಟು ಶುಲ್ಕ ಹೆಚ್ಚಳ: ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯ ಪರಿಸ್ಥಿತಿ ಇದು..

ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಶೇ. 25 ಶುಲ್ಕ ಹೆಚ್ಚಳ ಮಾಡಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

author img

By

Published : Jul 1, 2021, 4:16 PM IST

chamarajanagar
ಶಾಲಾ ಶುಲ್ಕ ಹೆಚ್ಚಳ: ಪಾಲಕರ ಆಕ್ರೋಶ

ಚಾಮರಾಜನಗರ: ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರ ಚಾಮರಾಜನಗರದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಯು ಶೇ. 25 ಶುಲ್ಕ ಹೆಚ್ಚಳ ಮಾಡಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಶುಲ್ಕ ಹೆಚ್ಚಳ ಮಾಡಿದ್ದು, ಹಣ ಪಾವತಿಸದ ಮಕ್ಕಳಿಗೆ ಆನ್​​ಲೈನ್ ಪಾಠ ಮಾಡುವುದಿಲ್ಲ ಎಂದು ಆಡಳಿತ ಮಂಡಲಿ ಹೇಳುತ್ತಿದೆ.

ಶಾಲಾ ಶುಲ್ಕ ಹೆಚ್ಚಳ: ಪಾಲಕರ ಆಕ್ರೋಶ

ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಆಡಳಿತ ಮಂಡಲಿಯ ನಡುವೆ ಇಂದು ಜಟಾಪಟಿ ನಡೆಯಿತು. ಈಗ ಶೇ.70 ರಷ್ಟು ಶುಲ್ಕ ಪಾವತಿಸಿ ಸೆಪ್ಟೆಂಬರ್​​ನಲ್ಲಿ ಉಳಿದ ಶೇ.30 ರಷ್ಟನ್ನು ಪಾವತಿಸಬೇಕೆಂದು ಶಾಲಾ ಆಡಳಿತ ಮಂಡಲಿ ಹೇಳುತ್ತಿದೆ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಕೊರೊನಾ ಸಂಕಷ್ಟ ಕಾಲದಲ್ಲೂ ಶುಲ್ಕ ಹೆಚ್ಚಿಸಿರುವುದು ಖಂಡನೀಯ. ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರದ್ದೇ ಈ ಕಥೆಯಾದರೆ ಹೇಗೆ? ಎಂದು ಪಾಲಕರಾದ ಡಾ.ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಶುಲ್ಕ ಪಾವತಿಸದಿರಲು ಪಾಲಕರು ನಿರ್ಧರಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಹೊಸಪೇಟೆಯಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್​ ನಾಯ್ಕ್​​ ಸಹೋದರನ ವಿರುದ್ಧ ಕೇಸ್​

ಚಾಮರಾಜನಗರ: ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರ ಚಾಮರಾಜನಗರದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಯು ಶೇ. 25 ಶುಲ್ಕ ಹೆಚ್ಚಳ ಮಾಡಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಶುಲ್ಕ ಹೆಚ್ಚಳ ಮಾಡಿದ್ದು, ಹಣ ಪಾವತಿಸದ ಮಕ್ಕಳಿಗೆ ಆನ್​​ಲೈನ್ ಪಾಠ ಮಾಡುವುದಿಲ್ಲ ಎಂದು ಆಡಳಿತ ಮಂಡಲಿ ಹೇಳುತ್ತಿದೆ.

ಶಾಲಾ ಶುಲ್ಕ ಹೆಚ್ಚಳ: ಪಾಲಕರ ಆಕ್ರೋಶ

ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಆಡಳಿತ ಮಂಡಲಿಯ ನಡುವೆ ಇಂದು ಜಟಾಪಟಿ ನಡೆಯಿತು. ಈಗ ಶೇ.70 ರಷ್ಟು ಶುಲ್ಕ ಪಾವತಿಸಿ ಸೆಪ್ಟೆಂಬರ್​​ನಲ್ಲಿ ಉಳಿದ ಶೇ.30 ರಷ್ಟನ್ನು ಪಾವತಿಸಬೇಕೆಂದು ಶಾಲಾ ಆಡಳಿತ ಮಂಡಲಿ ಹೇಳುತ್ತಿದೆ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಕೊರೊನಾ ಸಂಕಷ್ಟ ಕಾಲದಲ್ಲೂ ಶುಲ್ಕ ಹೆಚ್ಚಿಸಿರುವುದು ಖಂಡನೀಯ. ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರದ್ದೇ ಈ ಕಥೆಯಾದರೆ ಹೇಗೆ? ಎಂದು ಪಾಲಕರಾದ ಡಾ.ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಶುಲ್ಕ ಪಾವತಿಸದಿರಲು ಪಾಲಕರು ನಿರ್ಧರಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಹೊಸಪೇಟೆಯಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್​ ನಾಯ್ಕ್​​ ಸಹೋದರನ ವಿರುದ್ಧ ಕೇಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.