ETV Bharat / state

ನೈಟ್ ಸಫಾರಿ ವಿವಾದ: ಬಂಡೀಪುರದಲ್ಲಿ ನಟ ಧನ್ವೀರ್​​ ವಿರುದ್ಧ ಎಫ್ಐಆರ್​​ - ಬಂಡೀಪುರದಲ್ಲಿ ದಾಖಲಾಯ್ತು ನಟ ಧನ್ವೀರ್ ವಿರುದ್ಧ ಎಫ್ಐಆರ್

ನಟ ಧನ್ವೀರ್ ಸಫಾರಿ ವಿವಾದದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ, ಸಂಜೆ 6.30ರ ಒಳಗೆ ಕಾಡು ಬಿಟ್ಟು ಹೊರಗಿರಬೇಕು ಎಂದು ಸಫಾರಿ ಚಾಲಕರು, ಗೈಡ್​​​ಗಳಿಗೆ ಖಡಕ್ ಸೂಚನೆ ನೀಡಿದೆ.

Night Safari Controversy FIR against actor Dhanveer registered in Bandipur
ಬಂಡೀಪುರದಲ್ಲಿ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲು
author img

By

Published : Oct 27, 2020, 8:38 AM IST

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್ 27(1)ರ ಪ್ರಕಾರ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಬಂಡೀಪುರ ಸಿಎಫ್​​ಒ ಬಾಲಚಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಸಫಾರಿ ಸಮಯದ ಬಳಿಕವೂ ಕಾಡಿನಲ್ಲಿ ಇದ್ದಿದ್ದರಿಂದ ಅತಿಕ್ರಮ ಪ್ರವೇಶ ಎಂದು ಎಫ್ಐಆರ್ ದಾಖಲಿಸಲಾಗಿದೆ. 25 ಸಾವಿರ ರೂ.ವರೆಗೂ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Night Safari Controversy FIR against actor Dhanveer registered in Bandipur
ಬಂಡೀಪುರದಲ್ಲಿ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲು

ವಿಚಾರಣೆ ವರದಿ ಸಲ್ಲಿಕೆ: ನೈಟ್ ಸಫಾರಿ ವಿವಾದದ ಬಳಿಕ ಧನ್ವೀರ್ ಅವರನ್ನು ವಿಚಾರಣೆ ನಡೆಸಿದ್ದ ಆರ್​​​​ಎಫ್ಒ ನವೀನ್ ಕುಮಾರ್ ಇಂದು ವರದಿ ಸಲ್ಲಿಸಲಿದ್ದಾರೆ. ಹುಲಿಗೆ ಸಫಾರಿ ಜೀಪಿನ ಲೈಟ್ ಹಾಯಿಸಿ ತೊಂದರೆ ಉಂಟು ಮಾಡಲಾಗಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸುರುವುದಾಗಿ ತಿಳಿದು ಬಂದಿದೆ.

ನಟ ಧನ್ವೀರ್ ಸಫಾರಿ ವಿವಾದದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ, ಸಂಜೆ 6.30ರ ಒಳಗೆ ಕಾಡು ಬಿಟ್ಟು ಹೊರಗಿರಬೇಕು ಎಂದು ಸಫಾರಿ ಚಾಲಕರು, ಗೈಡ್​​ಗಳಿಗೆ ಖಡಕ್ ಸೂಚನೆ ನೀಡಿದೆ.

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್ 27(1)ರ ಪ್ರಕಾರ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಬಂಡೀಪುರ ಸಿಎಫ್​​ಒ ಬಾಲಚಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಸಫಾರಿ ಸಮಯದ ಬಳಿಕವೂ ಕಾಡಿನಲ್ಲಿ ಇದ್ದಿದ್ದರಿಂದ ಅತಿಕ್ರಮ ಪ್ರವೇಶ ಎಂದು ಎಫ್ಐಆರ್ ದಾಖಲಿಸಲಾಗಿದೆ. 25 ಸಾವಿರ ರೂ.ವರೆಗೂ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Night Safari Controversy FIR against actor Dhanveer registered in Bandipur
ಬಂಡೀಪುರದಲ್ಲಿ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲು

ವಿಚಾರಣೆ ವರದಿ ಸಲ್ಲಿಕೆ: ನೈಟ್ ಸಫಾರಿ ವಿವಾದದ ಬಳಿಕ ಧನ್ವೀರ್ ಅವರನ್ನು ವಿಚಾರಣೆ ನಡೆಸಿದ್ದ ಆರ್​​​​ಎಫ್ಒ ನವೀನ್ ಕುಮಾರ್ ಇಂದು ವರದಿ ಸಲ್ಲಿಸಲಿದ್ದಾರೆ. ಹುಲಿಗೆ ಸಫಾರಿ ಜೀಪಿನ ಲೈಟ್ ಹಾಯಿಸಿ ತೊಂದರೆ ಉಂಟು ಮಾಡಲಾಗಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸುರುವುದಾಗಿ ತಿಳಿದು ಬಂದಿದೆ.

ನಟ ಧನ್ವೀರ್ ಸಫಾರಿ ವಿವಾದದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ, ಸಂಜೆ 6.30ರ ಒಳಗೆ ಕಾಡು ಬಿಟ್ಟು ಹೊರಗಿರಬೇಕು ಎಂದು ಸಫಾರಿ ಚಾಲಕರು, ಗೈಡ್​​ಗಳಿಗೆ ಖಡಕ್ ಸೂಚನೆ ನೀಡಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.