ETV Bharat / state

ಈ ದೇಶದಲ್ಲಿ ಇರಲು ಇವರೆಷ್ಟು ಅರ್ಹರು?: ಜಮೀರ್​ ನಡೆಗೆ ಸೋಮಣ್ಣ ಗರಂ

author img

By

Published : May 1, 2022, 10:30 AM IST

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯದವರಿಗೆ ಫುಡ್ ಕಿಟ್​​ ವಿತರಿಸುತ್ತಿರುವವರು ಈ ದೇಶದಲ್ಲಿ ಇರಲು ಎಷ್ಟು ಅರ್ಹರು? ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದರು.

Minister V somanna
ಸಚಿವ ವಿ.ಸೋಮಣ್ಣ

ಚಾಮರಾಜನಗರ: ಈ ದೇಶದಲ್ಲಿ ಇಂತವರು ಇರಲು ಎಷ್ಟು ಅರ್ಹರು? ಎಂದು ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಗಳಿಗೆ ಫುಡ್‌ ಕಿಟ್‌ ವಿತರಿಸಿದ ಶಾಸಕ ಜಮೀರ್ ನಡೆಗೆ ಸೋಮಣ್ಣ ಕಿಡಿಕಾರಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಮ್ಮ ದೇಶದಲ್ಲಿ ಈ ರೀತಿಯ ಪ್ರಸಂಗಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ. ಇದನ್ನು ಮಾಧ್ಯಮಗಳು ನೋಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.


ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಅವರು ರಾಜೀನಾಮೆ ಕೇಳುತ್ತಿರುತ್ತಾರೆ. ಅಕ್ರಮ ನಡೆದಿರುವ ಬಗ್ಗೆ ತನಿಖೆಯಾಗುತ್ತಿದೆ. ಈ ರೀತಿಯ ಚಟುವಟಿಕೆಯನ್ನು ತಹಬದಿಗೆ ತರಲು ಸಿಎಂ ಮುಂದಾಗಿದ್ದಾರೆ. ಸರ್ಕಾರ ಸರಿಯಾದ ಪಥದಲ್ಲೇ ನಡೆಯತ್ತಿದೆ ಎಂದು ಪರೋಕ್ಷವಾಗಿ ಗೃಹ ಸಚಿವರನ್ನು ಬೆಂಬಲಿಸಿದರು‌.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಬಂಧಿತ ಆರೋಪಿಗಳ ಕುಟುಂಬಸ್ಥರಿಗೆ ಶಾಸಕ ಜಮೀರ್ ಸಹಾಯಹಸ್ತ!

ಚಾಮರಾಜನಗರ: ಈ ದೇಶದಲ್ಲಿ ಇಂತವರು ಇರಲು ಎಷ್ಟು ಅರ್ಹರು? ಎಂದು ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಗಳಿಗೆ ಫುಡ್‌ ಕಿಟ್‌ ವಿತರಿಸಿದ ಶಾಸಕ ಜಮೀರ್ ನಡೆಗೆ ಸೋಮಣ್ಣ ಕಿಡಿಕಾರಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಮ್ಮ ದೇಶದಲ್ಲಿ ಈ ರೀತಿಯ ಪ್ರಸಂಗಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ. ಇದನ್ನು ಮಾಧ್ಯಮಗಳು ನೋಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.


ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಅವರು ರಾಜೀನಾಮೆ ಕೇಳುತ್ತಿರುತ್ತಾರೆ. ಅಕ್ರಮ ನಡೆದಿರುವ ಬಗ್ಗೆ ತನಿಖೆಯಾಗುತ್ತಿದೆ. ಈ ರೀತಿಯ ಚಟುವಟಿಕೆಯನ್ನು ತಹಬದಿಗೆ ತರಲು ಸಿಎಂ ಮುಂದಾಗಿದ್ದಾರೆ. ಸರ್ಕಾರ ಸರಿಯಾದ ಪಥದಲ್ಲೇ ನಡೆಯತ್ತಿದೆ ಎಂದು ಪರೋಕ್ಷವಾಗಿ ಗೃಹ ಸಚಿವರನ್ನು ಬೆಂಬಲಿಸಿದರು‌.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಬಂಧಿತ ಆರೋಪಿಗಳ ಕುಟುಂಬಸ್ಥರಿಗೆ ಶಾಸಕ ಜಮೀರ್ ಸಹಾಯಹಸ್ತ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.