ETV Bharat / state

ಮಾಜಿ ಸಂಸದ  ಧ್ರುವನಾರಾಯಣ್ ವಿರುದ್ದ ಜಿ ಎನ್ ನಂಜುಂಡಸ್ವಾಮಿ ವಾಗ್ದಾಳಿ

ಚಾಮರಾಜನಗರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪತ್ರಿಕಾ‌ಗೋಷ್ಠಿ ನಡೆಸಿ, ಈ‌ ರೀತಿ ಹೇಳಿಕೆ ನೀಡಿರುವುದು ಅವರ ಅರೆ ಪ್ರಜ್ಞಾವಂತಿಕೆಯಾಗಿದೆ. ಮಾಜಿ ಸಂಸದರಾಗಿ ವಿವೇಕದಿಂದ ಮಾತನಾಡುವುದನ್ನು ಬಿಟ್ಟು, ಅವಿವೇಕದಿಂದ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

author img

By

Published : Apr 30, 2020, 5:01 PM IST

Updated : Apr 30, 2020, 10:23 PM IST

ಮಾಜಿ ಶಾಸಕ ಜಿ.ಎನ್​. ನಂಜುಂಡಸ್ವಾಮಿ
ಮಾಜಿ ಶಾಸಕ ಜಿ.ಎನ್​. ನಂಜುಂಡಸ್ವಾಮಿ

ಕೊಳ್ಳೇಗಾಲ : ಮಾಜಿ‌ ಸಂಸದ ಧೃವ ನಾರಾಯಣ್ ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ತಪ್ಪು ಮಾಹಿತಿ ನೀಡಿ, ಸಾರ್ವಜನಿಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ‌ ಜಿ ಎನ್ ನಂಜುಂಡಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಉದ್ಯಮಿಗಳ 68 ಸಾವಿರ ಕೋಟಿ ರೂ. ಸಾಲದ ಹಣವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ. ಈ ರೀತಿ ಅವರು ಹೇಳಿರುವುದನ್ನು ನಾನು ಖಂಡಿಸುತ್ತೇನೆ, ಇದು ದೇಶದ್ರೋಹದ ಕೆಲಸ ಎಂದರು.

ಜಿ ಎನ್ ನಂಜುಂಡಸ್ವಾಮಿ ವಾಗ್ದಾಳಿ

ಚಾಮರಾಜನಗರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪತ್ರಿಕಾ‌ಗೋಷ್ಠಿ ನಡೆಸಿ, ಈ‌ ರೀತಿ ಹೇಳಿಕೆ ನೀಡಿರುವುದು ಅವರ ಅರೆ ಪ್ರಜ್ಞಾವಂತಿಕೆಯಾಗಿದೆ. ಮಾಜಿ ಸಂಸದರಾಗಿ ವಿವೇಕದಿಂದ ಮಾತನಾಡುವುದನ್ನು ಬಿಟ್ಟು, ಅವಿವೇಕದಿಂದ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕೊರೊನಾ ಸಮಯದಲ್ಲೂ ದೇಶದ ಬಡ ಜನತೆ, ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಈ ರೀತಿ ಸುಳ್ಳು ಆಪಾದನೆ ಮಾಡಿರುವುದ್ದರಿಂದ, ಧ್ರುವ ನಾರಾಯಣ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದಾರೆ.

ಕೊಳ್ಳೇಗಾಲ : ಮಾಜಿ‌ ಸಂಸದ ಧೃವ ನಾರಾಯಣ್ ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ತಪ್ಪು ಮಾಹಿತಿ ನೀಡಿ, ಸಾರ್ವಜನಿಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ‌ ಜಿ ಎನ್ ನಂಜುಂಡಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಉದ್ಯಮಿಗಳ 68 ಸಾವಿರ ಕೋಟಿ ರೂ. ಸಾಲದ ಹಣವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ. ಈ ರೀತಿ ಅವರು ಹೇಳಿರುವುದನ್ನು ನಾನು ಖಂಡಿಸುತ್ತೇನೆ, ಇದು ದೇಶದ್ರೋಹದ ಕೆಲಸ ಎಂದರು.

ಜಿ ಎನ್ ನಂಜುಂಡಸ್ವಾಮಿ ವಾಗ್ದಾಳಿ

ಚಾಮರಾಜನಗರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪತ್ರಿಕಾ‌ಗೋಷ್ಠಿ ನಡೆಸಿ, ಈ‌ ರೀತಿ ಹೇಳಿಕೆ ನೀಡಿರುವುದು ಅವರ ಅರೆ ಪ್ರಜ್ಞಾವಂತಿಕೆಯಾಗಿದೆ. ಮಾಜಿ ಸಂಸದರಾಗಿ ವಿವೇಕದಿಂದ ಮಾತನಾಡುವುದನ್ನು ಬಿಟ್ಟು, ಅವಿವೇಕದಿಂದ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕೊರೊನಾ ಸಮಯದಲ್ಲೂ ದೇಶದ ಬಡ ಜನತೆ, ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಈ ರೀತಿ ಸುಳ್ಳು ಆಪಾದನೆ ಮಾಡಿರುವುದ್ದರಿಂದ, ಧ್ರುವ ನಾರಾಯಣ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದಾರೆ.

Last Updated : Apr 30, 2020, 10:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.