ETV Bharat / state

ಇದ್ಯಾವ ಕಾನೂನಿದು?.. ಕಾಡುಹಂದಿ ಬೇಟೆಗೆ ಹೋಗಲಿಲ್ಲವೆಂದು 15 ಕುಟುಂಬಕ್ಕೆ ಊರಿನಿಂದ ಬಹಿಷ್ಕಾರ..

author img

By

Published : Sep 23, 2019, 8:54 PM IST

ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ 15 ಕುಟುಂಬಗಳಿಗೆ ಊರ ಜನರೆಲ್ಲ ಸೇರಿ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆಯಲ್ಲಿ ನಡೆದಿದೆ.

ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ ಬಹಿಷ್ಕಾರ..

ಚಾಮರಾಜನಗರ: ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ 15ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆಯಲ್ಲಿ ನಡೆದಿದೆ.

ಕೋಟೆಕೆರೆ ಗ್ರಾಮದ ಒಂದು ಕೋಮಿನಲ್ಲಿ ಆಗಾಗ ಕಾಡುಪ್ರಾಣಿಗಳ ಶಿಕಾರಿಗೆ ತೆರಳಿ ಕಾಡುಹಂದಿ ಮಾಂಸವನ್ನು ಸಮನಾಗಿ ಹಂಚಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ. ಬೇಟೆಗೆ ಹೋಗದವರು ದಂಡ ಕಟ್ಟಬೇಕಿದ್ದು, ದಂಡ ಕಟ್ಟದ 15 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ.

Excommunication for not going wild hunting in Chamarajnagar
ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ ಬಹಿಷ್ಕಾರ..

ಬಹಿಷ್ಕಾರಕ್ಕೆ ಒಳಗಾದವರೊಂದಿಗೆ ಯಾರೂ ಮಾತನಾಡಬಾರದು, ಶುಭ-ಅಶುಭ ಕಾರ್ಯಗಳಿಗೆ ಅವರನ್ನು ಸೇರಿಸಬಾರದು ಎಂದು ಗ್ರಾಮದ ಜನರು ಆದೇಶಿಸಿದ್ದಾರೆಂದು ಈಟಿವಿ ಭಾರತಕ್ಕೆ ಸ್ವಾಮಿ ಎಂಬುವರು ದೂರವಾಣಿ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಇದು ಬೇಗೂರಿನ ಕೋಟೆಕೆರೆ ಕಾನೂನು.!?

ಸಾಮಾಜಿಕ ಬಹಿಷ್ಕಾರದ ಸಂಬಂಧ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಯಜಮಾನರನ್ನು ಕರೆಸಿ ಎಚ್ಚರಿಕೆ ನೀಡಿದ್ದರೂ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ. ಬೇಟೆಯಾಡುವುದೇ ಅಪರಾಧವಾಗಿದ್ದು, ಬೇಟೆಯಾಡದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

ಚಾಮರಾಜನಗರ: ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ 15ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆಯಲ್ಲಿ ನಡೆದಿದೆ.

ಕೋಟೆಕೆರೆ ಗ್ರಾಮದ ಒಂದು ಕೋಮಿನಲ್ಲಿ ಆಗಾಗ ಕಾಡುಪ್ರಾಣಿಗಳ ಶಿಕಾರಿಗೆ ತೆರಳಿ ಕಾಡುಹಂದಿ ಮಾಂಸವನ್ನು ಸಮನಾಗಿ ಹಂಚಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ. ಬೇಟೆಗೆ ಹೋಗದವರು ದಂಡ ಕಟ್ಟಬೇಕಿದ್ದು, ದಂಡ ಕಟ್ಟದ 15 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ.

Excommunication for not going wild hunting in Chamarajnagar
ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ ಬಹಿಷ್ಕಾರ..

ಬಹಿಷ್ಕಾರಕ್ಕೆ ಒಳಗಾದವರೊಂದಿಗೆ ಯಾರೂ ಮಾತನಾಡಬಾರದು, ಶುಭ-ಅಶುಭ ಕಾರ್ಯಗಳಿಗೆ ಅವರನ್ನು ಸೇರಿಸಬಾರದು ಎಂದು ಗ್ರಾಮದ ಜನರು ಆದೇಶಿಸಿದ್ದಾರೆಂದು ಈಟಿವಿ ಭಾರತಕ್ಕೆ ಸ್ವಾಮಿ ಎಂಬುವರು ದೂರವಾಣಿ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಇದು ಬೇಗೂರಿನ ಕೋಟೆಕೆರೆ ಕಾನೂನು.!?

ಸಾಮಾಜಿಕ ಬಹಿಷ್ಕಾರದ ಸಂಬಂಧ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಯಜಮಾನರನ್ನು ಕರೆಸಿ ಎಚ್ಚರಿಕೆ ನೀಡಿದ್ದರೂ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ. ಬೇಟೆಯಾಡುವುದೇ ಅಪರಾಧವಾಗಿದ್ದು, ಬೇಟೆಯಾಡದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

Intro:ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ ಬಹಿಷ್ಕಾರ: ಇದು ಬೇಗೂರಿನ ಕೋಟೆಕೆರೆ ಕಾನೂನು!

ಚಾಮರಾಜನಗರ: ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ ೧೫ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆಯಲ್ಲಿ ನಡೆದಿದೆ

Body:ಕೋಟೆಕೆರೆ ಗ್ರಾಮದ ಒಂದು ಕೋಮಿನಲ್ಲಿ ಆಗಾಗ್ಗೆ ಕಾಡುಪ್ರಾಣಿಗಳ ಶಿಕಾರಿಗೆ ತೆರಳಿ ಕಾಡುಹಂದಿ ಮಾಂಸವನ್ನು ಸಮನಾಗಿ ಹಂಚಿಕೊಳ್ಳುವ ಪದ್ಧತಿ ಇದೆ.ಬೇಟೆಗೆ ಹೋಗದವರು ದಂಡ ಕಟ್ಟಬೇಕಿದ್ದು ದಂಡ ಕಟ್ಟದ ೧೫ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ.

ಬಹಿಷ್ಕಾರಕ್ಕೆ ಒಳಗಾದವರೊಂದಿಗೆ ಯಾರೂ ಮಾತನಾಡಬಾರದು, ಶುಭ-ಅಶುಭ ಕಾರ್ಯಗಳಿಗೆ ಅವರನ್ನು ಸೇರಿಸಬಾರದು ಎಂದು ಗ್ರಾಮದ ಜನರು ಆದೇಶಿಸಿದ್ದಾರೆಂದು ಈಟಿವಿ ಭಾರತಕ್ಕೆ ಸ್ವಾಮಿ ಎಂಬವರು ದೂರವಾಣಿ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಇನ್ನು, ಸಾಮಾಜಿಕ ಬಹಿಷ್ಕಾರದ ಸಂಬಂಧ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಯಜಮಾನರನ್ನು ಕರೆಸಿ ಎಚ್ಚರಿಕೆ ನೀಡಿಯೂ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ ಎಂದು ತಿಳಿದುಬಂದಿದೆ.

Conclusion:ಒಟ್ಟಿನಲ್ಲಿ ಬೇಟೆಯಾಡುವುದೇ ಅಪರಾಧವಾಗಿದ್ದು ಬೇಟೆಯಾಡದವರನ್ನು ಸಾಮಾಜಿಕ ಬಹಿಷ್ಕಾರ ಹಾಕಿರುವುದು ಅಕ್ಷಮ್ಯವೇ ಸರಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.