ETV Bharat / state

ಚಾಮರಾಜನಗರದಲ್ಲಿ ಕೊರೊನಾ ಮಣಿಸಿದ 7 ತಿಂಗಳ ಮಗು - ಕೋವಿಡ್ -19 ಲೇಟೆಸ್ಟ್ ನ್ಯೂಸ್

ಮಗುವಿಗೆ ಕೊರೊನಾ ಬಂದಿದೆ ಎಂದು ನರ್ಸ್​ಗಳು ನಮ್ಮ ಮನೆ ಹುಡುಕಾಡುತ್ತಿದ್ದಾರೆ ಎಂದು ತಿಳಿದು ಆತಂಕವಾಯಿತು. ನಾನು ಮಾತ್ರ ಮಗುವಿನೊಂದಿಗೆ ತೆರಳಲು ಅವಕಾಶ ಇದ್ದಿದ್ದರಿಂದ ಇನ್ನು ಹೆಚ್ಚು ಆತಂಕಗೊಂಡೆ. ಮೊದಲ 4 ದಿನ ಕೋವಿಡ್ ಆಸ್ಪತ್ರೆಯಲ್ಲಿ ಬಳಿಕ 3 ದಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಪ್ರತ್ಯೇಕವಾಗಿರಿಸಿದ್ದರು..

corona in Chamarajnagar ಚಾಮರಾಜನಗರ ಕೊರೊನಾ
ಕೊರೊನಾ ಮಣಿಸಿದ 7 ತಿಂಗಳ ಮಗು
author img

By

Published : Jul 24, 2020, 10:28 PM IST

Updated : Jul 24, 2020, 10:42 PM IST

ಚಾಮರಾಜನಗರ : ತಾಲೂಕಿನ ಸಾಗಡೆ ಗ್ರಾಮದ ಬೆಳ್ಳಶೆಟ್ಟಿ-ಸಿದ್ದಮ್ಮ ದಂಪತಿಯ 7 ತಿಂಗಳ ಮಗು ಮನೋಜ್‌ಕುಮಾರ್ ಇಂದು ಕೊರೊನಾ ಮುಕ್ತವಾಗಿ ಕೋವಿಡ್ ಕೇರ್ ಸೆಂಟರ್‌ನಿಂದ ಬಿಡುಗಡೆಯಾಗುವ ಮೂಲಕ ಹಲವರಿಗೆ ಆತ್ಮಸ್ಥೈರ್ಯ ನೀಡಿದೆ.

ಕೊರೊನಾ ಮಣಿಸಿದ 7 ತಿಂಗಳ ಮಗು

ಸಿದ್ದಮ್ಮ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿಗೆ ವಿವಾಹವಾಗಿದ್ದರು‌. ಕಳೆದ ಜನವರಿ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಬಾಣಂತನಕ್ಕೆಂದು ಸಾಗಡೆಯ ತವರು ಮನೆಗೆ ಬಂದಿದ್ದರು. ಆದರೆ, 15 ದಿನಗಳ ಹಿಂದೆ ಮಗುವಿಗೆ ಕಪಾಲಗುರುವಾಗಿತ್ತು. ಜೊತೆಗೆ, ಜ್ವರವು ಬಂದು 2-3 ದಿನ ನಿದ್ರೆ ಮಾಡದೇ ಅಳುತ್ತಿದ್ದರಿಂದ ಕಬ್ಬಹಳ್ಳಿ ಆಸ್ಪತ್ರೆಗೆ ತೋರಿಸಿ, ಗಂಟಲು ದ್ರವವನ್ನು ನೀಡಿ ಬಂದಿದ್ದರು. ಎರಡು ದಿನಗಳ ಬಳಿಕ ಮಗುವಿನ ಕೋವಿಡ್ ಟೆಸ್ಟ್​ ರಿಪೋರ್ಟ್​ ಪಾಸಿಟಿವ್ ಬಂದಿತು ಎಂದು ಸಿದ್ದಮ್ಮರ ಬಾವ ಮಹದೇವಶೆಟ್ಟಿ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡರು.

ಮಗುವಿಗೆ ಕೊರೊನಾ ಬಂದಿದೆ ಎಂದು ನರ್ಸ್​ಗಳು ನಮ್ಮ ಮನೆ ಹುಡುಕಾಡುತ್ತಿದ್ದಾರೆ ಎಂದು ತಿಳಿದು ಆತಂಕವಾಯಿತು. ನಾನು ಮಾತ್ರ ಮಗುವಿನೊಂದಿಗೆ ತೆರಳಲು ಅವಕಾಶ ಇದ್ದಿದ್ದರಿಂದ ಇನ್ನು ಹೆಚ್ಚು ಆತಂಕಗೊಂಡೆ. ಮೊದಲ 4 ದಿನ ಕೋವಿಡ್ ಆಸ್ಪತ್ರೆಯಲ್ಲಿ ಬಳಿಕ 3 ದಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಪ್ರತ್ಯೇಕವಾಗಿ ಇರಿಸಿದ್ದರು. ಮಾತ್ರೆ, ಚುಚ್ಚುಮದ್ದು ಅಂತಹದ್ದೇನು ಕೊಡಲಿಲ್ಲ. ಎರಡು ರೀತಿಯ ಸಿರಪ್​ಗಳನ್ನು ನೀಡಿದ್ದರಷ್ಟೇ ಎಂದು ಮನೋಜ್ ತಾಯಿ ಸಿದ್ದಮ್ಮ ತಮ್ಮ ಅನುಭವ ಹಂಚಿಕೊಂಡರು.

ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ ನರ್ಸ್​ಗಳು, ವೈದ್ಯರು ಚೆನ್ನಾಗಿ ಉಪಚರಿಸಿದರು. ‌ಊಟ-ತಿಂಡಿ ವಿಚಾರದಲ್ಲಂತೂ ಮನೆಯವರಂತೆ ಕಂಡರು. ಈವರೆಗೂ ಮಗುವಿಗೆ ಹೇಗೆ ಕೊರೊನಾ ಬಂದಿತೆಂದು ಗೊತ್ತಾಗಲಿಲ್ಲ. ಆದರೂ ದೇವರ ದಯೆಯಿಂದ ಆರೋಗ್ಯವಾಗಿ ವಾಪಾಸ್ಸಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಚಾಮರಾಜನಗರ : ತಾಲೂಕಿನ ಸಾಗಡೆ ಗ್ರಾಮದ ಬೆಳ್ಳಶೆಟ್ಟಿ-ಸಿದ್ದಮ್ಮ ದಂಪತಿಯ 7 ತಿಂಗಳ ಮಗು ಮನೋಜ್‌ಕುಮಾರ್ ಇಂದು ಕೊರೊನಾ ಮುಕ್ತವಾಗಿ ಕೋವಿಡ್ ಕೇರ್ ಸೆಂಟರ್‌ನಿಂದ ಬಿಡುಗಡೆಯಾಗುವ ಮೂಲಕ ಹಲವರಿಗೆ ಆತ್ಮಸ್ಥೈರ್ಯ ನೀಡಿದೆ.

ಕೊರೊನಾ ಮಣಿಸಿದ 7 ತಿಂಗಳ ಮಗು

ಸಿದ್ದಮ್ಮ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿಗೆ ವಿವಾಹವಾಗಿದ್ದರು‌. ಕಳೆದ ಜನವರಿ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಬಾಣಂತನಕ್ಕೆಂದು ಸಾಗಡೆಯ ತವರು ಮನೆಗೆ ಬಂದಿದ್ದರು. ಆದರೆ, 15 ದಿನಗಳ ಹಿಂದೆ ಮಗುವಿಗೆ ಕಪಾಲಗುರುವಾಗಿತ್ತು. ಜೊತೆಗೆ, ಜ್ವರವು ಬಂದು 2-3 ದಿನ ನಿದ್ರೆ ಮಾಡದೇ ಅಳುತ್ತಿದ್ದರಿಂದ ಕಬ್ಬಹಳ್ಳಿ ಆಸ್ಪತ್ರೆಗೆ ತೋರಿಸಿ, ಗಂಟಲು ದ್ರವವನ್ನು ನೀಡಿ ಬಂದಿದ್ದರು. ಎರಡು ದಿನಗಳ ಬಳಿಕ ಮಗುವಿನ ಕೋವಿಡ್ ಟೆಸ್ಟ್​ ರಿಪೋರ್ಟ್​ ಪಾಸಿಟಿವ್ ಬಂದಿತು ಎಂದು ಸಿದ್ದಮ್ಮರ ಬಾವ ಮಹದೇವಶೆಟ್ಟಿ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡರು.

ಮಗುವಿಗೆ ಕೊರೊನಾ ಬಂದಿದೆ ಎಂದು ನರ್ಸ್​ಗಳು ನಮ್ಮ ಮನೆ ಹುಡುಕಾಡುತ್ತಿದ್ದಾರೆ ಎಂದು ತಿಳಿದು ಆತಂಕವಾಯಿತು. ನಾನು ಮಾತ್ರ ಮಗುವಿನೊಂದಿಗೆ ತೆರಳಲು ಅವಕಾಶ ಇದ್ದಿದ್ದರಿಂದ ಇನ್ನು ಹೆಚ್ಚು ಆತಂಕಗೊಂಡೆ. ಮೊದಲ 4 ದಿನ ಕೋವಿಡ್ ಆಸ್ಪತ್ರೆಯಲ್ಲಿ ಬಳಿಕ 3 ದಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಪ್ರತ್ಯೇಕವಾಗಿ ಇರಿಸಿದ್ದರು. ಮಾತ್ರೆ, ಚುಚ್ಚುಮದ್ದು ಅಂತಹದ್ದೇನು ಕೊಡಲಿಲ್ಲ. ಎರಡು ರೀತಿಯ ಸಿರಪ್​ಗಳನ್ನು ನೀಡಿದ್ದರಷ್ಟೇ ಎಂದು ಮನೋಜ್ ತಾಯಿ ಸಿದ್ದಮ್ಮ ತಮ್ಮ ಅನುಭವ ಹಂಚಿಕೊಂಡರು.

ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ ನರ್ಸ್​ಗಳು, ವೈದ್ಯರು ಚೆನ್ನಾಗಿ ಉಪಚರಿಸಿದರು. ‌ಊಟ-ತಿಂಡಿ ವಿಚಾರದಲ್ಲಂತೂ ಮನೆಯವರಂತೆ ಕಂಡರು. ಈವರೆಗೂ ಮಗುವಿಗೆ ಹೇಗೆ ಕೊರೊನಾ ಬಂದಿತೆಂದು ಗೊತ್ತಾಗಲಿಲ್ಲ. ಆದರೂ ದೇವರ ದಯೆಯಿಂದ ಆರೋಗ್ಯವಾಗಿ ವಾಪಾಸ್ಸಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

Last Updated : Jul 24, 2020, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.