ETV Bharat / state

2019ರಲ್ಲಿ ಚಾಮರಾಜನಗರ ಜಿಲ್ಲೆಯನ್ನ ತಲ್ಲಣಿಸಿದ ಅಪರಾಧ ಪ್ರಕರಣಗಳು.. - 2019 Crime Stories of Chamarajanagar

ಇಡೀ ಜಗತ್ತೇ ಹೊಸ ವರ್ಷದ ನವ ಉಲ್ಲಾಸದಲ್ಲಿದೆ. 2019ನೇ ವರ್ಷಕ್ಕೆ ಗುಡ್​ ಬಾಯ್​ ಹೇಳಿ ನೂತನ ವರ್ಷವನ್ನು ಈಗಾಗಲೇ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಆದರೆ, ಕಳೆದ 2019ನೇ ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ, ದುರ್ಘಟನೆಗಳು ಸಂಭವಿಸಿವೆ. ಕೆಲ ಘಟನೆಗಳಂತೂ ಮನಕಲಕುವಂತಿತ್ತು..

2019 Crime Stories of Chamarajanagar
ಚಾಮರಾಜನಗರದ ಅಪರಾಧ ಸುದ್ದಿಗಳತ್ತ ಹಿನ್ನೋಟ
author img

By

Published : Jan 1, 2020, 12:03 PM IST

ಚಾಮರಾಜನಗರ: ಇಡೀ ಜಗತ್ತೇ ಹೊಸ ವರ್ಷದ ನವ ಉಲ್ಲಾಸದಲ್ಲಿದೆ. 2019ನೇ ವರ್ಷಕ್ಕೆ ಗುಡ್​ ಬಾಯ್​ ಹೇಳಿ ನೂತನ ವರ್ಷವನ್ನು ಈಗಾಗಲೇ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಆದರೆ, ಕಳೆದ ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ, ದುರ್ಘಟನೆಗಳು ಸಂಭವಿಸಿವೆ. ಕೆಲ ಘಟನೆಗಳಂತೂ ಮನಕಲಕುವಂತಿದ್ದವು.. ಆ ಎಲ್ಲದರ ಬಗ್ಗೆ ಒಂದು ಹಿನ್ನೋಟ.

2019ರಲ್ಲಿ ಚಾಮರಾಜನಗರವಷ್ಟೇ ಅಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಗುಂಡ್ಲುಪೇಟೆ ಹೊರವಲಯದಲ್ಲಿ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಓಂಕಾರ್ ಪ್ರಸಾದ್ ಪ್ರಕರಣ. ತಂದೆ-ತಾಯಿ, ಗರ್ಭಿಣಿ ಪತ್ನಿ, ಮಗನನ್ನು ಕೊಂದು‌ ತಾನೂ ಗುಂಡಿಕ್ಕಿಕೊಂಡ‌ ಈ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು.

ಮದುವೆ ಮುಗಿಸಿ ವಿಹಾರಕ್ಕೆಂದು ಕೊಳ್ಳೇಗಾಲ ತಾಲೂಕಿನ‌ ಶಿವನಸಮುದ್ರಕ್ಕೆ ಬಂದಿದ್ದ ಬೆಂಗಳೂರು ಮೂಲದ ಮನೋಜ್ ಕುಮಾರ್, ಲೋಕೇಶ್ ಹಾಗೂ ವೀಣಾ ಎಂಬ ಸ್ನೇಹಿತರು ನೀರುಪಾಲಾಗಿದ್ದು, ಡಾಕ್ಟರ್ ಆಗಬೇಕೆಂದುಕೊಂಡಿದ್ದ ಬೇಗೂರಿನ ಧನಂಜಯ ಎಂಬ ಬಾಲಕ ಬ್ರೈನ್ ಟ್ಯೂಮರ್​​ಗೆ ಬಲಿಯಾದದ್ದು, ಬೇಡರಪುರದ ಶ್ವೇತಾ ಎಂಬ ಮೂರು ವರ್ಷದ ಬಾಲಕಿ ನೀರೆಂದು ಭಾವಿಸಿ ಸೀಮೆ ಎಣ್ಣೆ ಕುಡಿದು ಅಸುನೀಗಿದ್ದು, ಹೊಳೆಯಲ್ಲಿ ಸ್ನಾನ ಮಾಡುವಾಗ ಹೆಬ್ಬಸೂರಿನ‌ ತಾಯಿ-ಮಗಳು ಮೃತಪಟ್ಟ ದುರ್ಷಟನೆ, ಪಾರಿವಾಳ ಹಿಡಿಯುವಾಗ ದೇಗುಲದ ಗೋಪುರದಿಂದ ಬಿದ್ದು ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದ್ದು, ನೆಂಟರ ಮನೆಗೆ ಹೋಗುವ ಧಾವಂತದಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ಕಾಲು ತುಂಡಾದದ್ದು, ತಾಯಿಗೆ ಅನಾರೋಗ್ಯವೆಂದು ಸಾಲ ಪಡೆದ ಯುವಕನ ಆತ್ಮಹತ್ಯೆ, ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ರಸ್ತೆ ಅಪಘಾತದಲ್ಲಿ ಅಸುನೀಗಿದ ತಂದೆ- ತಾಯಿ ಮೃತದೇಹಗಳ ಮುಂದೆ ಕುಳಿತ ಕಂದಮ್ಮ ಹೀಗೆ ಹಲವಾರು ದುರಂತಗಳು 2019ರಲ್ಲಿ ನಡೆದು ಹೋಗಿದೆ.

ಈ ಮೇಲಿನವು ಮನಕಲಕುವ ಘಟನೆಗಳಾದರೆ ಇನ್ನೂ ಕೆಲ ನಾಚಿಕೆಗೇಡಿನ ಘಟನೆಗಳು ಜಿಲ್ಲೆಯಲ್ಲಿ ನಡೆದು ಹೋಗಿದೆ. ಜಿಲ್ಲೆಯ ಏಕಲವ್ಯ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ ವೇಳೆ ಪ್ರಾಂಶುಪಾಲನೇ ಲೈಂಗಿಕ ದೌರ್ಜನ್ಯ ಎಸಗಿದ್ದು, ವೃದ್ಧನೊಬ್ಬ ಪಕ್ಕದ ಮನೆಯ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಇಡ್ಲಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ, ನೆಂಟರ ಮನೆಗೆ ಮಾವಿನ ಹಣ್ಣನ್ನು ತಿನ್ನಲು ಹೋದ 15ರ ಬಾಲಕನೋರ್ವ ಅಪ್ರಾಪ್ತೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದು, ಗಾಂಜಾ ಮಾರುವಂತೆ ಮಗನನ್ನೇ ತಾಯಿ ಒತ್ತಾಯಿಸಿದ್ದು, ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಕೊಂದ ವರದಿಗಳು ಜನರಲ್ಲಿ ಆಕ್ರೋಶ ಮೂಡಿಸಿದ್ದವು.

ಸ್ಕಿಮ್ಮಿಂಗ್ ಯಂತ್ರ ಬಳಸಿ ಎಟಿಎಂ ದರೋಡೆ, ಒಟಿಪಿ ಪಡೆದು ಹಣ ಎಗರಿಸಿದ ಪ್ರಕರಣಗಳು, ಬೈಕ್ ಕಳ್ಳತನ ಹೀಗೆ ಒಂದಾದ ನಂತರ ಒಂದು ಅಪರಾಧ ಪ್ರಕರಣಗಳು ನಡೆದವು. ನಗರ ಪ್ರದೇಶದಲ್ಲಷ್ಟೇ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗಳಲ್ಲೂ ನಡೆದು ಮಹಿಳೆಯರ ಚಿನ್ನಾಭರಣ ಎಗರಿಸಿದ ಪ್ರಕರಣಗಳು ನಡೆದಿವೆ.

ಹೇಗಿದೆ ಗಡಿಜಿಲ್ಲೆಯ ಕ್ರೈಂ ರೇಟ್ ?

2019 ರ ಜ.1ರಿಂದ ಡಿ. 25 ರವರರೆಗಿನ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ಜಿಲ್ಲೆಯಲ್ಲಿ 17 ಕೊಲೆ ಪ್ರಕರಣಗಳು ದಾಖಲಾಗಿವೆ. ಕೊಲೆಯತ್ನ 59, ಖೋಟಾ ನೋಟಿನ ಪ್ರಕರಣ 1, ಡಕಾಯಿತಿ-5, ರಾಬರಿ-5, ಮನೆಗಳ್ಳತನ 58 ಪ್ರಕರಣಗಳು 2019ನೇ ವರ್ಷದಲ್ಲಿ ದಾಖಲಾಗಿದೆ. ಉಳಿದಂತೆ, ಅಪಘಾತದಲ್ಲಿ 136 ಮಂದಿ ಮೃತಪಟ್ಟಿದ್ದು, 439 ಮಂದಿ ಗಾಯಗೊಂಡಿದ್ದರು. ಜಿಲ್ಲೆಯಲ್ಲಿ ಒಟ್ಟು 99 ಗಲಭೆ ಪ್ರಕರಣಗಳು ನಡೆದಿವೆ. 351 ಮಂದಿ ಹೊಡೆದಾಡದಲ್ಲಿ ಗಾಯಗೊಂಡಿದ್ದಾರೆ‌. 31 ಅಪಹರಣ ಪ್ರಕರಣ, 52 ವರದಕ್ಷಿಣೆ ಪ್ರಕರಣ, 147 ಲೈಂಗಿಕ ದೌರ್ಜನ್ಯ, 8 ಅತ್ಯಾಚಾರ, 21ಸರ್ಕಾರಿ ನೌಕರರ ಮೇಲಿನ ಹಲ್ಲೆ ಪ್ರಕರಣ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

ಬೆಂಗಳೂರಿಗೂ ಹಬ್ಬಿದ್ದ ಮಲೆಮಹದೇಶ್ವರ ಬೆಟ್ಡದ ತಪ್ಪಲಿನ ಗಾಂಜಾ ಘಮಲು ಈ ಬಾರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2018 ರಲ್ಲಿ 46 ಪ್ರಕರಣ ದಾಖಲಾಗಿದ್ದರೆ ಈ ಬಾರಿ ಅದು 10 ಕ್ಕೆ ಇಳಿದಿದೆ. ಪೋಸ್ಕೋ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಾಗಿದ್ದು 28 ಇದ್ದದ್ದು ಈ ಬಾರಿ 31 ಆಗಿವೆ. 513 ಅಬಕಾರಿ ಕೇಸುಗಳು, 20 ಎಸ್ಸಿ-ಎಸ್ಟಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು, 4 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ, 4 ಗೋಹತ್ಯೆ ಪ್ರಕರಣ, 3 ಪ್ರಾಣಿ ಬಲಿ ಪ್ರಕರಣ 173 ಜೂಜಿನ ಪ್ರಕರಣಗಳ ದಾಖಲಾಗಿವೆ.

ಚಾಮರಾಜನಗರ: ಇಡೀ ಜಗತ್ತೇ ಹೊಸ ವರ್ಷದ ನವ ಉಲ್ಲಾಸದಲ್ಲಿದೆ. 2019ನೇ ವರ್ಷಕ್ಕೆ ಗುಡ್​ ಬಾಯ್​ ಹೇಳಿ ನೂತನ ವರ್ಷವನ್ನು ಈಗಾಗಲೇ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಆದರೆ, ಕಳೆದ ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ, ದುರ್ಘಟನೆಗಳು ಸಂಭವಿಸಿವೆ. ಕೆಲ ಘಟನೆಗಳಂತೂ ಮನಕಲಕುವಂತಿದ್ದವು.. ಆ ಎಲ್ಲದರ ಬಗ್ಗೆ ಒಂದು ಹಿನ್ನೋಟ.

2019ರಲ್ಲಿ ಚಾಮರಾಜನಗರವಷ್ಟೇ ಅಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಗುಂಡ್ಲುಪೇಟೆ ಹೊರವಲಯದಲ್ಲಿ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಓಂಕಾರ್ ಪ್ರಸಾದ್ ಪ್ರಕರಣ. ತಂದೆ-ತಾಯಿ, ಗರ್ಭಿಣಿ ಪತ್ನಿ, ಮಗನನ್ನು ಕೊಂದು‌ ತಾನೂ ಗುಂಡಿಕ್ಕಿಕೊಂಡ‌ ಈ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು.

ಮದುವೆ ಮುಗಿಸಿ ವಿಹಾರಕ್ಕೆಂದು ಕೊಳ್ಳೇಗಾಲ ತಾಲೂಕಿನ‌ ಶಿವನಸಮುದ್ರಕ್ಕೆ ಬಂದಿದ್ದ ಬೆಂಗಳೂರು ಮೂಲದ ಮನೋಜ್ ಕುಮಾರ್, ಲೋಕೇಶ್ ಹಾಗೂ ವೀಣಾ ಎಂಬ ಸ್ನೇಹಿತರು ನೀರುಪಾಲಾಗಿದ್ದು, ಡಾಕ್ಟರ್ ಆಗಬೇಕೆಂದುಕೊಂಡಿದ್ದ ಬೇಗೂರಿನ ಧನಂಜಯ ಎಂಬ ಬಾಲಕ ಬ್ರೈನ್ ಟ್ಯೂಮರ್​​ಗೆ ಬಲಿಯಾದದ್ದು, ಬೇಡರಪುರದ ಶ್ವೇತಾ ಎಂಬ ಮೂರು ವರ್ಷದ ಬಾಲಕಿ ನೀರೆಂದು ಭಾವಿಸಿ ಸೀಮೆ ಎಣ್ಣೆ ಕುಡಿದು ಅಸುನೀಗಿದ್ದು, ಹೊಳೆಯಲ್ಲಿ ಸ್ನಾನ ಮಾಡುವಾಗ ಹೆಬ್ಬಸೂರಿನ‌ ತಾಯಿ-ಮಗಳು ಮೃತಪಟ್ಟ ದುರ್ಷಟನೆ, ಪಾರಿವಾಳ ಹಿಡಿಯುವಾಗ ದೇಗುಲದ ಗೋಪುರದಿಂದ ಬಿದ್ದು ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದ್ದು, ನೆಂಟರ ಮನೆಗೆ ಹೋಗುವ ಧಾವಂತದಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ಕಾಲು ತುಂಡಾದದ್ದು, ತಾಯಿಗೆ ಅನಾರೋಗ್ಯವೆಂದು ಸಾಲ ಪಡೆದ ಯುವಕನ ಆತ್ಮಹತ್ಯೆ, ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ರಸ್ತೆ ಅಪಘಾತದಲ್ಲಿ ಅಸುನೀಗಿದ ತಂದೆ- ತಾಯಿ ಮೃತದೇಹಗಳ ಮುಂದೆ ಕುಳಿತ ಕಂದಮ್ಮ ಹೀಗೆ ಹಲವಾರು ದುರಂತಗಳು 2019ರಲ್ಲಿ ನಡೆದು ಹೋಗಿದೆ.

ಈ ಮೇಲಿನವು ಮನಕಲಕುವ ಘಟನೆಗಳಾದರೆ ಇನ್ನೂ ಕೆಲ ನಾಚಿಕೆಗೇಡಿನ ಘಟನೆಗಳು ಜಿಲ್ಲೆಯಲ್ಲಿ ನಡೆದು ಹೋಗಿದೆ. ಜಿಲ್ಲೆಯ ಏಕಲವ್ಯ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ ವೇಳೆ ಪ್ರಾಂಶುಪಾಲನೇ ಲೈಂಗಿಕ ದೌರ್ಜನ್ಯ ಎಸಗಿದ್ದು, ವೃದ್ಧನೊಬ್ಬ ಪಕ್ಕದ ಮನೆಯ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಇಡ್ಲಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ, ನೆಂಟರ ಮನೆಗೆ ಮಾವಿನ ಹಣ್ಣನ್ನು ತಿನ್ನಲು ಹೋದ 15ರ ಬಾಲಕನೋರ್ವ ಅಪ್ರಾಪ್ತೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದು, ಗಾಂಜಾ ಮಾರುವಂತೆ ಮಗನನ್ನೇ ತಾಯಿ ಒತ್ತಾಯಿಸಿದ್ದು, ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಕೊಂದ ವರದಿಗಳು ಜನರಲ್ಲಿ ಆಕ್ರೋಶ ಮೂಡಿಸಿದ್ದವು.

ಸ್ಕಿಮ್ಮಿಂಗ್ ಯಂತ್ರ ಬಳಸಿ ಎಟಿಎಂ ದರೋಡೆ, ಒಟಿಪಿ ಪಡೆದು ಹಣ ಎಗರಿಸಿದ ಪ್ರಕರಣಗಳು, ಬೈಕ್ ಕಳ್ಳತನ ಹೀಗೆ ಒಂದಾದ ನಂತರ ಒಂದು ಅಪರಾಧ ಪ್ರಕರಣಗಳು ನಡೆದವು. ನಗರ ಪ್ರದೇಶದಲ್ಲಷ್ಟೇ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗಳಲ್ಲೂ ನಡೆದು ಮಹಿಳೆಯರ ಚಿನ್ನಾಭರಣ ಎಗರಿಸಿದ ಪ್ರಕರಣಗಳು ನಡೆದಿವೆ.

ಹೇಗಿದೆ ಗಡಿಜಿಲ್ಲೆಯ ಕ್ರೈಂ ರೇಟ್ ?

2019 ರ ಜ.1ರಿಂದ ಡಿ. 25 ರವರರೆಗಿನ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ಜಿಲ್ಲೆಯಲ್ಲಿ 17 ಕೊಲೆ ಪ್ರಕರಣಗಳು ದಾಖಲಾಗಿವೆ. ಕೊಲೆಯತ್ನ 59, ಖೋಟಾ ನೋಟಿನ ಪ್ರಕರಣ 1, ಡಕಾಯಿತಿ-5, ರಾಬರಿ-5, ಮನೆಗಳ್ಳತನ 58 ಪ್ರಕರಣಗಳು 2019ನೇ ವರ್ಷದಲ್ಲಿ ದಾಖಲಾಗಿದೆ. ಉಳಿದಂತೆ, ಅಪಘಾತದಲ್ಲಿ 136 ಮಂದಿ ಮೃತಪಟ್ಟಿದ್ದು, 439 ಮಂದಿ ಗಾಯಗೊಂಡಿದ್ದರು. ಜಿಲ್ಲೆಯಲ್ಲಿ ಒಟ್ಟು 99 ಗಲಭೆ ಪ್ರಕರಣಗಳು ನಡೆದಿವೆ. 351 ಮಂದಿ ಹೊಡೆದಾಡದಲ್ಲಿ ಗಾಯಗೊಂಡಿದ್ದಾರೆ‌. 31 ಅಪಹರಣ ಪ್ರಕರಣ, 52 ವರದಕ್ಷಿಣೆ ಪ್ರಕರಣ, 147 ಲೈಂಗಿಕ ದೌರ್ಜನ್ಯ, 8 ಅತ್ಯಾಚಾರ, 21ಸರ್ಕಾರಿ ನೌಕರರ ಮೇಲಿನ ಹಲ್ಲೆ ಪ್ರಕರಣ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

ಬೆಂಗಳೂರಿಗೂ ಹಬ್ಬಿದ್ದ ಮಲೆಮಹದೇಶ್ವರ ಬೆಟ್ಡದ ತಪ್ಪಲಿನ ಗಾಂಜಾ ಘಮಲು ಈ ಬಾರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2018 ರಲ್ಲಿ 46 ಪ್ರಕರಣ ದಾಖಲಾಗಿದ್ದರೆ ಈ ಬಾರಿ ಅದು 10 ಕ್ಕೆ ಇಳಿದಿದೆ. ಪೋಸ್ಕೋ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಾಗಿದ್ದು 28 ಇದ್ದದ್ದು ಈ ಬಾರಿ 31 ಆಗಿವೆ. 513 ಅಬಕಾರಿ ಕೇಸುಗಳು, 20 ಎಸ್ಸಿ-ಎಸ್ಟಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು, 4 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ, 4 ಗೋಹತ್ಯೆ ಪ್ರಕರಣ, 3 ಪ್ರಾಣಿ ಬಲಿ ಪ್ರಕರಣ 173 ಜೂಜಿನ ಪ್ರಕರಣಗಳ ದಾಖಲಾಗಿವೆ.

Intro:ಚಾಮರಾಜನಗರದಲ್ಲಿ ಬೆಚ್ಚಿ ಬೀಳಿಸಿದ ಅಪರಾಧ ಸುದ್ದಿಗಳು- ಮನಕಲಕಿದ ಘಟನೆಗಳು ಇದೇ ನೋಡಿ...


ಚಾಮರಾಜನಗರ: 2020ರ ಹೊಸ್ತಿಲಿನಲ್ಲಿ ನಿಂತಿದ್ದೇವೆ ಕಾನೂನು ಕಟ್ಟಲೆಗಳನ್ನು ಉಲ್ಲಂಘಿಸಿ, ಮೃಗೀಯ ವರ್ತನೆಗಳನ್ನು ತೋರಿದ ಅಪರಾಧ ಸುದ್ದಿಗಳು ಜಿಲ್ಲೆಯಲ್ಲಿ ಸಾಕಷ್ಟು ಘಟಿಸಿತು. ಅಪರಾಧಲೋಕ 2019 ರಲ್ಲೂ ಜಾಗೃತಗೊಂಡು ಸಾಕಷ್ಟು ಪ್ರಕರಣಗಳು ಆಕ್ರೋಶ, ಆತಂಕ ಮೂಡಿಸಿದರೆ ಕೆಲವು ಘಟನೆಗಳಂತೂ ಮನ ಕಲಕಿದವು.

Body:2019 ರಲ್ಲಿ ಇಡೀ ಚಾಮರಾಜನಗರವಷ್ಟೇ ಅಲ್ಲದೇ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಗುಂಡ್ಲುಪೇಟೆ ಹೊರವಲಯದಲ್ಲಿ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಓಂಕಾರ್ ಪ್ರಸಾದ್ ಪ್ರಕರಣ. ಸಾಲು ಸಾಲಾಗಿ ತಂದೆ-ತಾಯಿ, ಗರ್ಭಿಣಿ ಪತ್ನಿ, ಮಗನನ್ನು ಕೊಂದು‌ ತಾನೂ ಗುಂಡಿಕ್ಕಿಕೊಂಡ‌ ಪ್ರಕರಣ ನಿಜಕ್ಕೂ ಧಾರುಣವೆನಿಸಿತು.

ಇನ್ನು, ಮದುವೆ ಮುಗಿಸಿಕೊಂಡು ವಿಹಾರಕ್ಕೆಂದು ಕೊಳ್ಳೇಗಾಲ ತಾಲೂಕಿನ‌ ಶಿವನಸಮುದ್ರಕ್ಕೆ ಬಂದಿದ್ದ ಬೆಂಗಳೂರು ಮೂಲದ ಮನೋಜ್ ಕುಮಾರ್, ಲೋಕೇಶ್ ಹಾಗೂ ವೀಣಾ ಎಂಬ ಸ್ನೇಹಿತರು ನೀರುಪಾಲಾಗಿದ್ದು, ಡಾಕ್ಟರ್ ಆಗಬೇಕೆಂದುಕೊಂಡಿದ್ದ ಬೇಗೂರಿನ ಧನಂಜಯ ಎಂಬ ಬಾಲಕ ಬ್ರೈನ್ ಟ್ಯೂಮರ್ ಗೆ ಬಲಿಯಾದದ್ದು, ಬೇಡರಪುರದ ಶ್ವೇತಾ ಎಂಬ ಮೂರು ವರ್ಷದ ಬಾಲಕಿ ನೀರೆಂದು ಭಾವಿಸಿ ಸೀಮೆಎಣ್ಣೆಯನ್ನು ಕುಡಿದು ಅಸುನೀಗಿದ್ದು, ಹೊಳೆಯಲ್ಲಿ ಸ್ನಾನ ಮಾಡುವಾಗ ಹೆಬ್ಬಸೂರಿನ‌ ತಾಯಿ-ಮಗಳು ಮೃತಪಟ್ಟಿದ್ದು, ಪಾರಿವಾಳ ಹಿಡಿಯುವಾಗ ದೇಗುಲ ಗೋಪುರದಿಂದ ಬಿದ್ದ ಬಾಲಕನ ಜೀವ ಹಾರಿಹೋದದ್ದು, ನೆಂಟರ ಮನೆಗೆ ಹೋಗುವ ಧಾವಂತದಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ಕಾಲು ತುಂಡಾದದ್ದು, ತಾಯಿಗೆ ಅನಾರೋಗ್ಯವೆಂದು ಸಾಲ ಪಡೆದ ಯುವಕ ಭಗ್ನ ಪ್ರೇಮದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ರಸ್ತೆ ಅಪಘಾತದಲ್ಲಿ ತಂದೆ- ತಾಯಿ ಮೃತದೇಹಗಳ ಮುಂದೆ ಏನು ಅರಿಯದೇ ಕುಳಿತ ಮಗುವಿನ ಘಟನೆ
ಜನರ ಕಣ್ಣನ್ನು ಒದ್ದೆಯಾಗಿಸಿತು.‌

ಛೀ..ತೂ.. ಇಂಥವರು ಇರ್ತಾರಾ... :

ಛೀ.. ತೂ.. ಇಂಥವರು ಇರ್ತಾರಾ ಎಂಬ ಜನರ ಉದ್ಘಾರವನ್ನು ತೋರ್ಪಡಿಸಿದ ಹಲವು ನೀಚ ಘಟನೆಗಳು ಜಿಲ್ಲೆಯಲ್ಲಾಯಿತು. ಏಕಲವ್ಯ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ ವೇಳೆ ಪ್ರಾಂಶುಪಾಲನೇ ಲೈಂಗಿಕ ದೌರ್ಜನ್ಯ ನೀಡಿದ್ದು, ಎದುರುಮನೆಯ ವೃದ್ಧ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಇಡ್ಲಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ, ನೆಂಟರ ಮನೆಗೆ ಮಾವಿನ ಹಣ್ಣನ್ನು ತಿನ್ನಲು ಹೋದ ೧೫ರ ಬಾಲಕನೋರ್ವ ಅಪ್ರಾಪ್ತೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದು, ಗಾಂಜಾ ಮಾರುವಂತೆ ಮಗನನ್ನೇ ತಾಯಿ ಒತ್ತಾಯಿಸಿದ್ದು, ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಕೊಂದ ವರದಿಗಳು ಜನರಲ್ಲಿ ಆಕ್ರೋಶ ಮೂಡಿಸಿದವು.

ನೈಜಿರಿಯನ್ ಕಳ್ಳರ ಆತಂಕ: ಸ್ಕಿಮ್ಮಿಂಗ್ ಯಂತ್ರ ಬಳಸಿದ್ದು ಕೂಡ ಈ ವರ್ಷ ಕೊಳ್ಳೇಗಾಲದಲ್ಲಿ ನಡೆಯಿತು. ಜೊತೆಗೆ, ಬಣ್ಣದ ಆಸೆ ತೋರಿಸಿ otp ಪಡೆದು ಹಣ ಎಗರಿಸಿದ ಪ್ರಕರಣಗಳು ಒಂದಾದ ನಂತರ ಒಂದಾಗಿದ್ದು ನಗರ ಪ್ರದೇಶದಲ್ಲಷ್ಟೇ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗಳಲ್ಲಿ ಆದದ್ದು, ವೃದ್ಧರ- ಮಹಿಳೆಯರ ಚಿನ್ನಾಭರಣಗಳನ್ನು ಮರಳು ಮಾಡಿ ಎಗರಿಸಿದ್ದು ಈ ವರ್ಷ ಹೆಚ್ಚಾದ್ದರಿಂದ ಕೊಂಚ ಆತಂಕ್ಕೂ ಕಾರಣವಾಗಿತ್ತು. ಇದಕ್ಕೆ ಇಂಬು ನೀಡುವಂತೆ, ಬೈಕ್ ಕಳ್ಳತನ ಪ್ರಕರಣ ಹೆಚ್ಚಾಗಿದ್ದು ಗಡಿಜಿಲ್ಲೆ ಜನರಿಗೆ ಕಳವಳ ಮೂಡಿಸಿದವು.

ಹೇಗಿದೆ ಗಡಿಜಿಲ್ಲೆ ಕ್ರೈಂ ರೇಟ್:

2019 ರ ಜ.೧ ರಿಂದ ಡಿ. ೨೫ ರವರರೆಗಿನ ಅಂಕಿ ಅಂಶಗಳ ಪ್ರಕಾರ 2018 ರಲ್ಲಿ 17 ಕೊಲೆ ಪ್ರಕರಣ ದಾಖಲಾಗಿದ್ದು 2019 ರಲ್ಲೂ 17 ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಯತ್ನ 2018 ರಲ್ಲಿ 58, 2019 ರಲ್ಲಿ 59 , ಖೋಟಾ ನೋಟಿನ ಪ್ರಕರಣ 1, ಡಕಾಯಿತಿ-5, ರಾಬರಿ-5, ಮನೆಗಳ್ಳತನ 58 ಪ್ರಕರಣಗಳು ಈ ವರ್ಷ ದಾಖಲಾಗಿದೆ.

ಉಳಿದಂತೆ, ಅಪಘಾತದಲ್ಲಿ 136 ಮಂದಿ ಮೃತಪಟ್ಟಿದ್ದು ಕಳೆದ ವರ್ಷ 154 ಮಂದಿ ಅಸುನೀಗಿದ್ದರು. ಅಪಘಾತದಲ್ಲಿ ಈ ವರ್ಷ 439 ಮಂದಿ ಗಾಯಗೊಂಡಿದ್ದರೇ ಕಳೆದ ವರ್ಷ 425 ಮಂದಿ ಗಾಯಗೊಂಡಿದ್ದರು. ಈ ವರ್ಷ 99 ಗಲಭೆಗಳು ನಡೆದಿದ್ದು 351 ಮಂದಿ ಹೊಡೆದಾಡದಲ್ಲಿ ಗಾಯಗೊಂಡಿದ್ದಾರೆ‌. 31 ಅಪಹರಣ ಪ್ರಕರಣ, 52 ವರದಕ್ಷಿಣೆ ಪ್ರಕರಣ, 147 ಲೈಂಗಿಕ ದೌರ್ಜನ್ಯ, 8 ಅತ್ಯಾಚಾರ, ಸರ್ಕಾರಿ ನೌಕರರ ಮೇಲಿನ ಹಲ್ಲೆಯ
21 ಪ್ರಕರಣ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದೆ.

ಬೆಂಗಳೂರಿಗೂ ಹಬ್ಬಿದ್ದ ಮಲೆಮಹದೇಶ್ವರ ಬೆಟ್ಡದ ತಪ್ಪಲಿನ ಗಾಂಜಾ ಘಮಲು ಈ ಬಾರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು 2018 ರಲ್ಲಿ 46 ಪ್ರಕರಣ ದಾಖಲಾಗಿದ್ದರೆ ಈ ಬಾರಿ ಅದು 10 ಕ್ಕೆ ಇಳಿದಿದೆ. ಪೋಸ್ಕೋ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಾಗಿದ್ದು 28 ಇದ್ದದ್ದು ಈ ಬಾರಿ 31 ಪ್ರಕರಣ ದಾಖಲಾಗಿದೆ. 513 ಅಬಕಾರಿ ಕೇಸುಗಳು, 20 ಎಸ್ಸಿಎಸ್ಟಿ ಆ್ಯಕ್ಟ್, 4 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ, 4 ಗೋ ಹತ್ಯೆ ಪ್ರಕರಣ, 3 ಪ್ರಾಣಿ ಬಲಿ ಪ್ರಕರಣ 173 ಜೂಜಿನ ಪ್ರಕರಣಗಳ ದಾಖಲಾಗಿದೆ.

Conclusion:ಒಟ್ಟಿನಲ್ಲಿ ಸೈಬರ್ ಜಾಲದಲ್ಲಿ ಹಣ ವಂಚನೆ, ಬೈಕ್ ಮತ್ತು ಮನೆಗಳ್ಳರ ಮೇಲೆ ಪೊಲೀಸರು ತೀವ್ರ ನಿಗಾ ಇಡಬೇಕಿದ್ದು ಅಕ್ರಮ ಲಾಟರಿ ಮಾರಾಟ, ವೇಶ್ಯಾವಾಟಿಕೆ ಮತ್ತು ಗಾಂಜಾ ಬೆಳೆಯುವುದನ್ನು ಪೊಲೀಸರು ಜಿಲ್ಲೆಯಲ್ಲಿ ಸಂಪೂರ್ಣ ನಿರ್ಮೂಲನೆ ಗೊಳಿಸಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.