ETV Bharat / state

ಅಲಿಕಲ್ಲು ಮಳೆಗೆ ತತ್ತರಿಸಿದ ದ್ರಾಕ್ಷಿ ಬೆಳೆಗಾರರು

author img

By

Published : May 26, 2019, 11:08 PM IST

ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತಲಿನ ರೈತರು ಬೆಳೆದ ದ್ರಾಕ್ಷಿ, ಮಾವು, ಹಲಸು ಬೆಳೆ ನಾಶವಾಗಿದೆ.

ಅಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನಾಶ

ಬೆಂಗಳೂರು: ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದೆ.

ಹೌದು, ಬಿಸಿಲಿನ ಝಳಕ್ಕೆ ಬರಗಾಲದ ನಡುವೆಯೂ ದ್ರಾಕ್ಷಿ ಬೆಳೆಗಾರರು ಹಗಲು ರಾತ್ರಿ ಎನ್ನದೆ ದುಡಿದು ಉತ್ತಮ ಬೆಳೆ ಬೆಳೆದಿದ್ದರು. ಆದ್ರೆ ಎರಡು ಮೂರು ಗಂಟೆ ಬಿದ್ದ ಮಳೆ ಬೆಳೆಗಾರರ ಜೀವನದಲ್ಲಿ ಬರ ಸಿಡಿಲು ಬಡಿದಂತಾಗಿದೆ.

ಅಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನಾಶ

ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತಲಿನ ರೈತರು ಬೆಳೆದ ದ್ರಾಕ್ಷಿ, ಮಾವು, ಹಲಸು ಬೆಳೆ ನಾಶವಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ದ್ರಾಕ್ಷಿ ಸಂಪೂರ್ಣ ನೆಲ ಕಚ್ಚಿದೆ. 15 ವರ್ಷಗಳ ಬಳಿಕ ಅಲಿಕಲ್ಲು ಮಳೆ ಬಿದ್ದಿದ್ದು ರೈತರ ಬಾಳಿನಲ್ಲಿ ನೋವು ತಂದೊಡ್ಡಿದೆ.

ಸುಮಾರು ನಾಲ್ಕೈದು ವರ್ಷಗಳ ನಂತರ ದ್ರಾಕ್ಷಿ ಬೆಳೆಗೆ ಅಧಿಕ ಬೆಲೆ ಬಂದಿತ್ತು. ಒಂದು ಕೆ.ಜಿ ಗೆ 50 ರಿಂದ 60 ರೂ. ಮಾರುಕಟ್ಟೆಯಲ್ಲಿ ಬೆಲೆ ಬಂದಿತ್ತು. ಆದೇ ರೀತಿ ಬೆಲೆಗೆ ಅನುಗುಣವಾಗಿ ಬೆಳೆಯೂ ಸಹ ಬಹಳ ಉತ್ತಮವಾಗಿತ್ತು. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತೆ ಅನೇಕ ರೈತರು ಬೆಳೆದ ಕೋಟ್ಯಾಂತರ ರೂ. ಮೌಲ್ಯದ ಬೆಳೆ‌ ನಾಶವಾಗಿದೆ. ಬರಗಾಲದಲ್ಲಿ ಪಟ್ಟ ಪರಿಶ್ರಮಕ್ಕೆ ಇದೀಗ ಪ್ರತಿಫಲವಿಲ್ಲದಂತಾಗಿದೆ.

ಇನ್ನು ದ್ರಾಕ್ಷಿ ಬೆಳೆದ ರೈತರ ತೋಟಗಳಿಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದೆ.

ಹೌದು, ಬಿಸಿಲಿನ ಝಳಕ್ಕೆ ಬರಗಾಲದ ನಡುವೆಯೂ ದ್ರಾಕ್ಷಿ ಬೆಳೆಗಾರರು ಹಗಲು ರಾತ್ರಿ ಎನ್ನದೆ ದುಡಿದು ಉತ್ತಮ ಬೆಳೆ ಬೆಳೆದಿದ್ದರು. ಆದ್ರೆ ಎರಡು ಮೂರು ಗಂಟೆ ಬಿದ್ದ ಮಳೆ ಬೆಳೆಗಾರರ ಜೀವನದಲ್ಲಿ ಬರ ಸಿಡಿಲು ಬಡಿದಂತಾಗಿದೆ.

ಅಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನಾಶ

ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತಲಿನ ರೈತರು ಬೆಳೆದ ದ್ರಾಕ್ಷಿ, ಮಾವು, ಹಲಸು ಬೆಳೆ ನಾಶವಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ದ್ರಾಕ್ಷಿ ಸಂಪೂರ್ಣ ನೆಲ ಕಚ್ಚಿದೆ. 15 ವರ್ಷಗಳ ಬಳಿಕ ಅಲಿಕಲ್ಲು ಮಳೆ ಬಿದ್ದಿದ್ದು ರೈತರ ಬಾಳಿನಲ್ಲಿ ನೋವು ತಂದೊಡ್ಡಿದೆ.

ಸುಮಾರು ನಾಲ್ಕೈದು ವರ್ಷಗಳ ನಂತರ ದ್ರಾಕ್ಷಿ ಬೆಳೆಗೆ ಅಧಿಕ ಬೆಲೆ ಬಂದಿತ್ತು. ಒಂದು ಕೆ.ಜಿ ಗೆ 50 ರಿಂದ 60 ರೂ. ಮಾರುಕಟ್ಟೆಯಲ್ಲಿ ಬೆಲೆ ಬಂದಿತ್ತು. ಆದೇ ರೀತಿ ಬೆಲೆಗೆ ಅನುಗುಣವಾಗಿ ಬೆಳೆಯೂ ಸಹ ಬಹಳ ಉತ್ತಮವಾಗಿತ್ತು. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತೆ ಅನೇಕ ರೈತರು ಬೆಳೆದ ಕೋಟ್ಯಾಂತರ ರೂ. ಮೌಲ್ಯದ ಬೆಳೆ‌ ನಾಶವಾಗಿದೆ. ಬರಗಾಲದಲ್ಲಿ ಪಟ್ಟ ಪರಿಶ್ರಮಕ್ಕೆ ಇದೀಗ ಪ್ರತಿಫಲವಿಲ್ಲದಂತಾಗಿದೆ.

ಇನ್ನು ದ್ರಾಕ್ಷಿ ಬೆಳೆದ ರೈತರ ತೋಟಗಳಿಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Intro:KN BNG_01_260519_Rain_Crop loss_Ambarish_7203301
Slug : ಅಲಿ ಕಲ್ಲು ಮಳೆಗೆ ದ್ರಾಕ್ಷಿ ಬೆಳೆಗಾರರು ತತ್ತರ


ಬೆಂಗಳೂರು: ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿ ಕಲ್ಲು ಮಳೆ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದೆ. ಬಿಸಿಲಿನ ಝಳಕ್ಕೆ ಬರಗಾಲದ ನಡುವೆಯೂ ದ್ರಾಕ್ಷಿ ಬೆಳೆಗಾರರು ಹಗಲು ರಾತ್ರಿ ಎನ್ನದೆ ದುಡಿದು ಉತ್ತಮ ಬೆಳೆ ಬೆಳೆದಿದ್ದರು ಅದ್ರೆ ಎರಡು ಮೂರು ಗಂಟೆ ಬಿದ್ದ ಮಳೆ ಬೆಳೆಗಾರರ ಜೀವನದಲ್ಲಿ ಬರ ಸಿಡಿಲು ಬಡೆದಂತಾಗಿದೆ..

ಹೌದು ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿ ಕಲ್ಲು ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತ ರೈತರು ಬೆಳೆದ ದ್ರಾಕ್ಷಿ,ಮಾವು,ಹಲಸು ಬೆಳೆ ನಾಶವಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ದ್ರಾಕ್ಷಿ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ.15 ವರ್ಷಗಳ ಬಳಿಕ ಅಲಿ ಕಲ್ಲು ಮಳೆ ಬಿದ್ದಿದ್ದು ರೈತರ ಬಾಳಿನಲ್ಲಿ ನೋವು ತಂದೊಡ್ಡಿದೆ..

ಬೈಟ್ : ನಾರಾಯಣಸ್ವಾಮಿ, ರೈತ

ಇನ್ನೂ ಸುಮಾರು ನಾಲ್ಕೈದು ವರ್ಷಗಳ ನಂತರ ದ್ರಾಕ್ಷಿ ಬೆಳೆಗೆ ಅಧಿಕ ಬೆಲೆ ಬಂದಿತ್ತು. ಒಂದು ಕೆಜಿಗೆ 50 ರಿಂದ 60 ರೂ ಮಾರುಕಟ್ಟೆಯಲ್ಲಿ ಬೆಲೆ ಬಂದಿತ್ತು. ಇನ್ನೂ ಬೆಲೆಗೆ ಅನುಗುಣವಾಗಿ ಬೆಳೆಯೂ ಸಹ ಬಹಳ ಉತ್ತಮವಾಗಿತ್ತು. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತೆ ಅನೇಕ ರೈತರು ಬೆಳೆದ ಕೋಟ್ಯಂತರ ರೂ ಮೌಲ್ಯದ ಬೆಳೆ‌ ನಾಶವಾಗಿದೆ. ಬರಗಾಲದಲ್ಲಿ ಪಟ್ಟ ಪರಿಶ್ರಮಕ್ಕೆ ಇದೀಗ ಪ್ರತಿಫಲವಿಲ್ಲದಂತಾಗಿದೆ.

ಬೈಟ್ : ಕೃಷ್ಣಪ್ಪ, ರೈತ

ಇನ್ನು ದ್ರಾಕ್ಷಿ ಬೆಳೆದ ರೈತರ ತೋಟಗಳಿಗೆ ತೋಟಗಾರಿಕಾ ಇಲಾಖಾ ಅಧಿಕಾರಿಗಳು ಬೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.. ಅಲ್ಲದೇ ದೇವನಹಳ್ಳಿ ಸುತ್ತಮುತ್ತಲಿನ ದ್ರಾಕ್ಷಿ ಬೆಳೆಗಾರರು ಇನ್ ನ್ಯೂ ರೆನ್ಸ್ ಮಾಡಿಸಿಕೊಳ್ಳಬೇಕು..ಎರಡು ವರ್ಷಗಳಿಂದ ಇದರ ಕುರಿತು ಮಾಹಿತಿ ನೀಡಿದ್ರು ಕೆಲವರು ಬಿಟ್ಟರೆ ಹೆಚ್ಚು ರೈತರು ಇದರ ಸದುಪಯೋಗ ಪಡಿಸಿಕೊಂಡಿಲ್ಲ.. ಇದರಿಂದ ಆದರೂ ಎಲ್ಲಾ ಬೆಳೆಗಾರರು ಇನ್ಷ್ಯೂರೆನ್ಸ್ ಮಾಡಿಸಿಕೊಳ್ಳಬೇಕು ಎಂದರು..

ಬೈಟ್ : ಮಂಜುನಾಥ್, ತೋಟಗಾರಿಕೆ ಇಲಾಖೆ ಅಧಿಕಾರಿ

ಒಟ್ಟಿನಲ್ಲಿ ರೈತರು ಬಿರು ಬೇಸಿಗೆಯಲ್ಲಿ ತಾಪಮಾನಕ್ಕೆ ತತ್ತರಿಸಿ ಹೋಗಿದ್ರು. ಮಳೆಗಾಗಿ ಕಾತುರದಿಂದ ಕಾಯುತ್ತಿದ್ದರು ಆದ್ರೆ ಅಲಿ ಕಲ್ಲು ಸಹಿತ ಬಿರುಗಾಳಿಗೆ ರೈತರು ನಷ್ಟ ಅನುಭವಿಸಿದಂತಾಗಿದೆ.. ನಷ್ಟಕ್ಕೆ ಸರ್ಕಾರ ಪರಿಹಾರ ಒದಗಿಸಬೇಕೆಂಬುದು ರೈತರ ಆಶಯ..Body:NoConclusion:No

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.