ETV Bharat / state

ಡೈರಿ ಪಾಲಿಟಿಕ್ಸ್: ಕೋರಂ ಇಲ್ಲ!ಬಮೂಲ್ ಚುನಾವಣೆ ಮುಂದೂಡಿಕೆ

ಬಮೂಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಗೆ ಕೋರಂ ಅಭಾವ ಉಂಟಾಗಿ ಮುಂದೂಡಲ್ಪಟ್ಟಿದೆ.

author img

By

Published : May 22, 2019, 7:23 PM IST

ಬಮೂಲ್ ಚುನಾವಣೆ

ಬೆಂಗಳೂರು:ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಕೋರಂ ಅಭಾವ ಉಂಟಾಗಿ, ಇಂದು ಹೈ ಡ್ರಾಮಾವೇ ನಡೆದು ಹೋಗಿದ್ದು, ಈಗ ಚುನಾವಣೆಯೇ ಮುಂದೂಡಲಾಗಿದೆ‌‌.

ಮೂರು ವರ್ಷಗಳಿಗೊಮ್ಮೆ ಬಮೂಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನ ನರಸಿಂಹಮೂರ್ತಿ ಮತ್ತು ರಾಜ್ ಕುಮಾರ್ ನಡುವೆ ಪೈಪೋಟಿ ಜೋರಾಗಿತ್ತು. ನರಸಿಂಹಮೂರ್ತಿ ಮಾಗಡಿಯ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದು, ರಾಜ್ ಕುಮಾರ್ ಕನಕಪುರದವರಾಗಿದ್ದಾರೆ.

ಇಬ್ಬರೂ ಕಾಂಗ್ರೆಸ್​ನವರೇ ಆದರೂ ನರಸಿಂಹಮೂರ್ತಿಗೆ ಜೆಡಿಎಸ್​ ಸಚಿವ ಹೆಚ್ ಡಿ ರೇವಣ್ಣ ಬೆಂಬಲವಿದೆ ಎನ್ನಲಾಗಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರದಿಂದ ನರಸಿಂಹಮೂರ್ತಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ನರಸಿಂಹಮೂರ್ತಿಗೆ 2014 ರಲ್ಲಿ ಅವರು ನಡೆಸಿದ್ದರೆನ್ನಲಾದ ಅವ್ಯವಹಾರವೊಂದರ ಕುರಿತಾಗಿ ನೋಟಿಸ್ ನೀಡಿ ಅನರ್ಹ ಮಾಡಲಾಗಿದೆ. 2014ರಲ್ಲಿ ಪತ್ರಿಕೆಗಳಿಗೆ ಜಾಹೀರಾತು ಕೊಡದೇ ನೇಮಕಾತಿ ಮಾಡಿದ್ದ ಆರೋಪ ನರಸಿಂಹಮೂರ್ತಿಯವರ ಮೇಲಿತ್ತು. ಇದರಿಂದ ನರಸಿಂಹಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯಲ್ಲ ಎನ್ನುವ ಮಾತು ಕೇಳಿಬಂತು.

ಬಮೂಲ್ ಚುನಾವಣೆ

ಬಮೂಲ್​ನಲ್ಲಿ ಒಟ್ಟು 13 ಜನ ನಿರ್ದೇಶಕರಿದ್ದು, ಅವರಲ್ಲಿ 7 ಜನ ಕಾಂಗ್ರೆಸ್, 3 ಬಿಜೆಪಿ ಮತ್ತು 3 ಜೆಡಿಎಸ್​ ಪಕ್ಷಗಳಿಗೆ ಸೇರಿದವರು. ಆದ್ರೆ ನಿನ್ನೆ ತಡರಾತ್ರಿಯವರೆಗೂ ಇದ್ದ ನರಸಿಂಹಮೂರ್ತಿಯ ಹೆಸರು ಬೆಳಗಾಗುವಷ್ಟರಲ್ಲಿ ಕೈಬಿಟ್ಟಿದ್ದು ಅನೇಕರಿಗೆ ಶಾಕ್ ಹೊಡೆದಂತಾಗಿತ್ತು. ಖಾಸಗಿ ಹೊಟೇಲ್​ನಲ್ಲಿ ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಭೆ ಕೂಡ ನಡೆಯಿತು. ಶಾಸಕರಾದ ಎಸ್ ಟಿ ಸೋಮಶೇಖರ್, ಸಂಸದ ಡಿ ಕೆ ಸುರೇಶ್ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ರಾಜ್​ ಕುಮಾರ್​ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸೋದು ನಿರ್ಧಾರವಾಯ್ತು.

ಇದೇ ವೇಳೆ ಡೈರಿಗೆ ಭೇಟಿ ನೀಡಿ ಮಾತಾನಾಡಿದ ಡಿ ಕೆ ಸುರೇಶ್, ನಿರ್ದೇಶಕರುಗಳಿಗೆ ಒಗ್ಗಟ್ಟಾಗಿ ಕೆಲಸ ಮಾಡಿ ಸಂಸ್ಥೆ ಉಳಿಸಿ ಎಂದು ತಿಳಿಸಿದ್ದೇವೆ. ಅಸಮಾಧಾನ ಇಲ್ಲ, ಹೊಸಬರು-ಹಳಬರ ಸಮ್ಮಿಲನದಲ್ಲಿ ಇದು ನಡೆಯಬೇಕು. ಲಕ್ಷಾಂತರ ರೈತರು ಇದನ್ನು ನಂಬಿಕೊಂಡಿದ್ದಾರೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎರಡು ಅರ್ಜಿಗಳು ಅಧ್ಯಕ್ಷ ಸ್ಥಾನಕ್ಕೆ, ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಬಂದಿವೆ. ಚುನಾವಣಾ ಅಧಿಕಾರಿಗಳು ಇನ್ನುಳಿದ ನಿರ್ಧಾರ ಮಾಡಲಿದ್ದಾರೆ. ನಾಳೆ ಇಷ್ಟೊತ್ತಿಗೆ ಫಲಿತಾಂಶ ನಿರೀಕ್ಷೆ ಮಾಡಿದ್ದೇವೆ ಅಂತ ತಿಳಿಸಿ ಹೊರಟು ಹೋದರು.

ಕೋರಂ ಇಲ್ಲದೆ ಚುನಾವಣೆ ಮುಂದೂಡಿಕೆ:

ಇದೆಲ್ಲದರ ನಡುವೆ ನರಸಿಂಹಮೂರ್ತಿ ಆಗಿದ್ದಾಗಲಿ ಎಂದು ತಾನೂ ಹೋಗಿ ನಾಮಪತ್ರ ಸಲ್ಲಿಸಿಯೇ ಬಿಟ್ಟರು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ನರಸಿಂಹಮೂರ್ತಿ ಮತ್ತು ರಾಜ್​ ಕುಮಾರ್ ಇಬ್ಬರೂ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ಉಪಾಧ್ಯಕ್ಷರಾಗಿದ್ದ ದೇವನಹಳ್ಳಿಯ ಶ್ರೀನಿವಾಸ್ ಮುಂದುವರೆಯಲಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದು ಕೇವಲ ಅವರೊಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇಷ್ಟೆಲ್ಲದರ ನಡುವೆ ನರಸಿಂಹಮೂರ್ತಿಗೆ ಅನ್ಯಾಯವಾಗಿದೆ ಎಂದು ಅವರ ಬೆಂಬಲಿಗರು ಅನೇಕ ನಿರ್ದೇಶಕರು ಸಭೆಗೆ ಗೈರಾದರು. ಬಮೂಲ್ ಚುನಾವಣಾಧಿಕಾರಿ ನಿರ್ದೇಶಕರುಗಳನ್ನು ಸಭೆಗೆ ಕರೆಯಲೇ ಇಲ್ಲ. ಇದೆಲ್ಲದರ ಪರಿಣಾಮ ಕೋರಂ ಇಲ್ಲದ ಕಾರಣ ಚುನಾವಣೆಯನ್ನು ಮುಂದೂಡಲಾಯ್ತು.

ಇಷ್ಟೆಲ್ಲಾ ಹೈಡ್ರಾಮಾದ ಹಿಂದೆ ಸಚಿವ ಹೆಚ್ ಡಿ ರೇವಣ್ಣ, ಸಂಸದ ಡಿ ಕೆ ಸುರೇಶ್ ನಡುವಣ ಮುಸುಕಿನ ಗುದ್ದಾಟ ಬಹಿರಂಗವಾದಂತಾಯ್ತು. ವಿದೇಶ ಪ್ರವಾಸದಲ್ಲಿರೋ ಸಚಿವ ಡಿ ಕೆ ಶಿವಕುಮಾರ್ ಸ್ವದೇಶಕ್ಕೆ ವಾಪಸ್ಸಾದ ಮೇಲೆ ಮುಂದಿನ ದಿನಾಂಕ ನಿರ್ಧರಿಸಲಾಗುವುದು. ಅಲ್ಲಿವರೆಗೆ ಅಸಮಾಧಾನಗಳೆಲ್ಲಾ ನಿವಾರಣೆಯಾಗಿ ನಿರ್ದೇಶಕರ ಅವಿರೋಧ ಆಯ್ಕೆಯಾಗುತ್ತಾ? ಅಥವಾ ಈ ವಿವಾದ ಮತ್ತಷ್ಟು ಕಗ್ಗಂಟಾಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

ಬೆಂಗಳೂರು:ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಕೋರಂ ಅಭಾವ ಉಂಟಾಗಿ, ಇಂದು ಹೈ ಡ್ರಾಮಾವೇ ನಡೆದು ಹೋಗಿದ್ದು, ಈಗ ಚುನಾವಣೆಯೇ ಮುಂದೂಡಲಾಗಿದೆ‌‌.

ಮೂರು ವರ್ಷಗಳಿಗೊಮ್ಮೆ ಬಮೂಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನ ನರಸಿಂಹಮೂರ್ತಿ ಮತ್ತು ರಾಜ್ ಕುಮಾರ್ ನಡುವೆ ಪೈಪೋಟಿ ಜೋರಾಗಿತ್ತು. ನರಸಿಂಹಮೂರ್ತಿ ಮಾಗಡಿಯ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದು, ರಾಜ್ ಕುಮಾರ್ ಕನಕಪುರದವರಾಗಿದ್ದಾರೆ.

ಇಬ್ಬರೂ ಕಾಂಗ್ರೆಸ್​ನವರೇ ಆದರೂ ನರಸಿಂಹಮೂರ್ತಿಗೆ ಜೆಡಿಎಸ್​ ಸಚಿವ ಹೆಚ್ ಡಿ ರೇವಣ್ಣ ಬೆಂಬಲವಿದೆ ಎನ್ನಲಾಗಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರದಿಂದ ನರಸಿಂಹಮೂರ್ತಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ನರಸಿಂಹಮೂರ್ತಿಗೆ 2014 ರಲ್ಲಿ ಅವರು ನಡೆಸಿದ್ದರೆನ್ನಲಾದ ಅವ್ಯವಹಾರವೊಂದರ ಕುರಿತಾಗಿ ನೋಟಿಸ್ ನೀಡಿ ಅನರ್ಹ ಮಾಡಲಾಗಿದೆ. 2014ರಲ್ಲಿ ಪತ್ರಿಕೆಗಳಿಗೆ ಜಾಹೀರಾತು ಕೊಡದೇ ನೇಮಕಾತಿ ಮಾಡಿದ್ದ ಆರೋಪ ನರಸಿಂಹಮೂರ್ತಿಯವರ ಮೇಲಿತ್ತು. ಇದರಿಂದ ನರಸಿಂಹಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯಲ್ಲ ಎನ್ನುವ ಮಾತು ಕೇಳಿಬಂತು.

ಬಮೂಲ್ ಚುನಾವಣೆ

ಬಮೂಲ್​ನಲ್ಲಿ ಒಟ್ಟು 13 ಜನ ನಿರ್ದೇಶಕರಿದ್ದು, ಅವರಲ್ಲಿ 7 ಜನ ಕಾಂಗ್ರೆಸ್, 3 ಬಿಜೆಪಿ ಮತ್ತು 3 ಜೆಡಿಎಸ್​ ಪಕ್ಷಗಳಿಗೆ ಸೇರಿದವರು. ಆದ್ರೆ ನಿನ್ನೆ ತಡರಾತ್ರಿಯವರೆಗೂ ಇದ್ದ ನರಸಿಂಹಮೂರ್ತಿಯ ಹೆಸರು ಬೆಳಗಾಗುವಷ್ಟರಲ್ಲಿ ಕೈಬಿಟ್ಟಿದ್ದು ಅನೇಕರಿಗೆ ಶಾಕ್ ಹೊಡೆದಂತಾಗಿತ್ತು. ಖಾಸಗಿ ಹೊಟೇಲ್​ನಲ್ಲಿ ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಭೆ ಕೂಡ ನಡೆಯಿತು. ಶಾಸಕರಾದ ಎಸ್ ಟಿ ಸೋಮಶೇಖರ್, ಸಂಸದ ಡಿ ಕೆ ಸುರೇಶ್ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ರಾಜ್​ ಕುಮಾರ್​ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸೋದು ನಿರ್ಧಾರವಾಯ್ತು.

ಇದೇ ವೇಳೆ ಡೈರಿಗೆ ಭೇಟಿ ನೀಡಿ ಮಾತಾನಾಡಿದ ಡಿ ಕೆ ಸುರೇಶ್, ನಿರ್ದೇಶಕರುಗಳಿಗೆ ಒಗ್ಗಟ್ಟಾಗಿ ಕೆಲಸ ಮಾಡಿ ಸಂಸ್ಥೆ ಉಳಿಸಿ ಎಂದು ತಿಳಿಸಿದ್ದೇವೆ. ಅಸಮಾಧಾನ ಇಲ್ಲ, ಹೊಸಬರು-ಹಳಬರ ಸಮ್ಮಿಲನದಲ್ಲಿ ಇದು ನಡೆಯಬೇಕು. ಲಕ್ಷಾಂತರ ರೈತರು ಇದನ್ನು ನಂಬಿಕೊಂಡಿದ್ದಾರೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎರಡು ಅರ್ಜಿಗಳು ಅಧ್ಯಕ್ಷ ಸ್ಥಾನಕ್ಕೆ, ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಬಂದಿವೆ. ಚುನಾವಣಾ ಅಧಿಕಾರಿಗಳು ಇನ್ನುಳಿದ ನಿರ್ಧಾರ ಮಾಡಲಿದ್ದಾರೆ. ನಾಳೆ ಇಷ್ಟೊತ್ತಿಗೆ ಫಲಿತಾಂಶ ನಿರೀಕ್ಷೆ ಮಾಡಿದ್ದೇವೆ ಅಂತ ತಿಳಿಸಿ ಹೊರಟು ಹೋದರು.

ಕೋರಂ ಇಲ್ಲದೆ ಚುನಾವಣೆ ಮುಂದೂಡಿಕೆ:

ಇದೆಲ್ಲದರ ನಡುವೆ ನರಸಿಂಹಮೂರ್ತಿ ಆಗಿದ್ದಾಗಲಿ ಎಂದು ತಾನೂ ಹೋಗಿ ನಾಮಪತ್ರ ಸಲ್ಲಿಸಿಯೇ ಬಿಟ್ಟರು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ನರಸಿಂಹಮೂರ್ತಿ ಮತ್ತು ರಾಜ್​ ಕುಮಾರ್ ಇಬ್ಬರೂ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ಉಪಾಧ್ಯಕ್ಷರಾಗಿದ್ದ ದೇವನಹಳ್ಳಿಯ ಶ್ರೀನಿವಾಸ್ ಮುಂದುವರೆಯಲಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದು ಕೇವಲ ಅವರೊಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇಷ್ಟೆಲ್ಲದರ ನಡುವೆ ನರಸಿಂಹಮೂರ್ತಿಗೆ ಅನ್ಯಾಯವಾಗಿದೆ ಎಂದು ಅವರ ಬೆಂಬಲಿಗರು ಅನೇಕ ನಿರ್ದೇಶಕರು ಸಭೆಗೆ ಗೈರಾದರು. ಬಮೂಲ್ ಚುನಾವಣಾಧಿಕಾರಿ ನಿರ್ದೇಶಕರುಗಳನ್ನು ಸಭೆಗೆ ಕರೆಯಲೇ ಇಲ್ಲ. ಇದೆಲ್ಲದರ ಪರಿಣಾಮ ಕೋರಂ ಇಲ್ಲದ ಕಾರಣ ಚುನಾವಣೆಯನ್ನು ಮುಂದೂಡಲಾಯ್ತು.

ಇಷ್ಟೆಲ್ಲಾ ಹೈಡ್ರಾಮಾದ ಹಿಂದೆ ಸಚಿವ ಹೆಚ್ ಡಿ ರೇವಣ್ಣ, ಸಂಸದ ಡಿ ಕೆ ಸುರೇಶ್ ನಡುವಣ ಮುಸುಕಿನ ಗುದ್ದಾಟ ಬಹಿರಂಗವಾದಂತಾಯ್ತು. ವಿದೇಶ ಪ್ರವಾಸದಲ್ಲಿರೋ ಸಚಿವ ಡಿ ಕೆ ಶಿವಕುಮಾರ್ ಸ್ವದೇಶಕ್ಕೆ ವಾಪಸ್ಸಾದ ಮೇಲೆ ಮುಂದಿನ ದಿನಾಂಕ ನಿರ್ಧರಿಸಲಾಗುವುದು. ಅಲ್ಲಿವರೆಗೆ ಅಸಮಾಧಾನಗಳೆಲ್ಲಾ ನಿವಾರಣೆಯಾಗಿ ನಿರ್ದೇಶಕರ ಅವಿರೋಧ ಆಯ್ಕೆಯಾಗುತ್ತಾ? ಅಥವಾ ಈ ವಿವಾದ ಮತ್ತಷ್ಟು ಕಗ್ಗಂಟಾಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

Intro:ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಶುರುವಾಯ್ತು ಡೈರಿ ಪಾಲಿಟಿಕ್ಸ್; ಕೋರಂಯಿಲ್ಲದೇ ಬಮೂಲ್ ಚುನಾವಣೆ ಮುಂದೂಡಿಕೆ..

ಬೆಂಗಳೂರು: ಬೆಂಗಳೂರು ಡೈರಿ(ಬಮೂಲ್) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಕೋರಂ ಅಭಾವ ಉಂಟಾಗಿ, ಈಗ ಚುನಾವಣೆಯೇ ಮುಂದೂಡಲಾಗಿದೆ‌‌.. ಅಂದಹಾಗೇ, ಮೈತ್ರಿ ಸರ್ಕಾರದಲ್ಲಿ‌ ಎಲ್ಲವೂ ಸರಿಯಿಲ್ಲ ಅನ್ನೋದು‌, ಮತ್ತೊಮ್ಮೆ ಡೈರಿ ಪಾಲಿಟಿಕ್ಸ್ ನಲ್ಲೂ ಸಾಬೀತು ಆಗಿದೆ. ಇಂದು ಬೆಂಗಳೂರು ಡೈರಿಯಲ್ಲಿ ದೊಡ್ಡ ಹೈ ಡ್ರಾಮಾವೇ ನಡೆದು ಹೋಯಿತು. ಇಷ್ಟೆಲ್ಲಾ ಹೈಡ್ರಾಮಾದ ಹಿಂದೆ ರಾಜಕೀಯ ನಾಯಕರ ಕೈವಾಡ ಮತ್ತು ಪಗಡೆಯಾಟಗಳು ಜೋರಾಗಿ ನಡೆದವು...

ಮೂರು ವರ್ಷಗಳಿಗೊಮ್ಮೆ ಬಮೂಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ನರಸಿಂಹಮೂರ್ತಿ ಮತ್ತು ರಾಜ್ ಕುಮಾರ್ ನಡುವೆ ಪೈಪೋಟಿ ಜೋರಾಗಿತ್ತು. ನರಸಿಂಹಮೂರ್ತಿ ಮಾಗಡಿಯ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದು ರಾಜ್ ಕುಮಾರ್ ಕನಕಪುರದವರಾಗಿದ್ದಾರೆ. ಇಬ್ಬರೂ ಕಾಂಗ್ರೆಸ್ಸಿನವರೇ ಆದರೂ ನರಸಿಂಹಮೂರ್ತಿಗೆ ಜೆಡಿಎಸ್​ ಸಚಿವ ಎಚ್ ಡಿ ರೇವಣ್ಣ ಕೃಪಾಕಟಾಕ್ಷವಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರದಿಂದ ನರಸಿಂಹಮೂರ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ನರಸಿಂಹಮೂರ್ತಿಗೆ 2014ರಲ್ಲಿ ಆತ ನಡೆಸಿದ್ದನೆನ್ನಲಾದ ಅವ್ಯವಹಾರವೊಂದರ ಕುರಿತಾಗಿ ನೋಟೀಸ್ ನೀಡಿ ಡಿಸ್​ಕ್ವಾಲಿಫೈ ಮಾಡಿದರು..‌

2014ರಲ್ಲಿ ಪತ್ರಿಕೆಗಳಿಗೆ ಜಾಹೀರಾತು ಕೊಡದೇ ನೇಮಕಾತಿ ಮಾಡಿದ್ದ ಆರೋಪ ನರಸಿಂಹಮೂರ್ತಿಯ ಮೇಲಿತ್ತು. ಆತನಿಗೆ ನೋಟೀಸ್ ನೀಡದ ಅಧಿಕಾರಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿ ಕೊಂಡುಬಿಟ್ಟರು. ಇದೆಲ್ಲದ್ರಿಂದಾಗಿ ನರಸಿಂಹಮೂರ್ತಿ ಅಧ್ಯಕ್ಷಸ್ಥಾನಕ್ಕೆ ಯೋಗ್ಯ ವ್ಯಕ್ತಿಯಲ್ಲ ಎನ್ನುವ ಮಾತು ಕೇಳಿಬಂತು.

ಆಗ ಕೇಳಿ ಬಂದಿದ್ದೇ ರಾಜ್ ಕುಮಾರ್ ಹೆಸರು. ಕಾಂಗ್ರೆಸ್ಸಿನವರೇ ಆದ ರಾಜ್ ಕುಮಾರ್ ಬಗೆ ಡಿಕೆ ಬ್ರದರ್ಸ್ ಬೆನ್ನುಲುಬಾಗಿ ನಿಂತಿದ್ರು. ನರಸಿಂಹಮೂರ್ತಿಯ ಮೇಲೆ ಆರೋಪ, ನೋಟಿಸ್ ಎಲ್ಲಾ ಆಗ್ತಿದ್ದಂತೆ ರಾಜ್ಕುಮಾರ್​ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಮತ್ತು ನರಸಿಂಹಮೂರ್ತಿಯ ಹೆಸರನ್ನು ಕೈಬಿಡಲಾಗುತ್ತದೆ ಎಂದು ಕಾಂಗ್ರೆಸ್ ವಲಯದಲ್ಲೇ ನಿರ್ಧಾರವಾಯ್ತು.

ಬಮೂಲ್​ನಲ್ಲಿ ಒಟ್ಟು 13 ಜನ ನಿರ್ದೇಶಕರಿದ್ದಾರೆ. ಅವರಲ್ಲಿ 7 ಜನ ಕಾಂಗ್ರೆಸ್, 3 ಬಿಜೆಪಿ ಮತ್ತು 3 ಜೆಡಿಎಸ್​ ಪಕ್ಷಗಳಿಗೆ ಸೇರಿದವರು. ಆದ್ರೆ ನಿನ್ನೆ ತಡರಾತ್ರಿಯವರೆಗೂ ಇದ್ದ ನರಸಿಂಹಮೂರ್ತಿಯ ಹೆಸರು ಬೆಳಗಾಗುವಷ್ಟರಲ್ಲಿ ಕೈಬಿಟ್ಟಿದ್ದು ಅನೇಕರಿಗೆ ಶಾಕ್ ಹೊಡೆದಂತಾಗಿತ್ತು. ಖಾಸಗಿ ಹೋಟೆಲಿನಲ್ಲಿ ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಭೆ ಕೂಡಾ ನಡೆಯಿತು. ಶಾಸಕರಾದ ಎಸ್ ಟಿ ಸೋಮಶೇಖರ್, ಡಿ ಕೆ ಸುರೇಶ್ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಕುಮಾರ್​ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸೋದು ನಿರ್ಧಾರವಾಯ್ತು.

ಇದೇ ವೇಳೆ ಡೈರಿಗೆ ಭೇಟಿ ನೀಡಿ ಮಾತಾನಾಡಿದ ಡಿ ಕೆ ಸುರೇಶ್, ನಿರ್ದೇಶಕರುಗಳಿಗೆ ಒಗ್ಗಟ್ಟಾಗಿ ಕೆಲಸ ಮಾಡಿ ಸಂಸ್ಥೆ ಉಳಿಸಿ ಎಂದು ತಿಳಿಸಿದ್ದೇವೆ..
ಅಸಮಾಧಾನ ಇಲ್ಲ, ಹೊಸಬರು ಹಳಬರ ಸಮ್ಮಿಲನದಲ್ಲಿ ಇದು ನಡೆಯಬೇಕು.. ಲಕ್ಷಾಂತರ ರೈತರು ಇದನ್ನು ನಂಬಿಕೊಂಡಿದ್ದಾರೆ.. ಎಲ್ರೂ ಒಟ್ಟಾಗಿ ಕೆಲಸ ಮಾಡಬೇಕಿದೆ.. ಎರಡು ಅರ್ಜಿಗಳು ಅಧ್ಯಕ್ಷ ಸ್ಥಾನಕ್ಕೆ, ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಬಂದಿವೆ.. ಚುನಾವಣಾ ಅಧಿಕಾರಿಗಳು ಇನ್ನುಳಿದ ನಿರ್ಧಾರ ಮಾಡಲಿದ್ದಾರೆ.. ನಾಳೆ ಇಷ್ಟೊತ್ತಿಗೆ ಫಲಿತಾಂಶ ನಿರೀಕ್ಷೆ ಮಾಡಿದ್ದೇವೆ ಅಂತ ತಿಳಿಸಿ ಹೊರಟು ಹೋದರು..

ಬೈಟ್: ಡಿ ಕೆ ಸುರೇಶ್, ಸಚಿವ

ಇದೆಲ್ಲದರ ನಡುವೆ ಸೋತು ಸಪ್ಪೆಯಾಗಿದ್ದ ನರಸಿಂಹಮೂರ್ತಿ ಆಗಿದ್ದಾಗ್ಲಿ ಎಂದು ತಾನೂ ಹೋಗಿ ನಾಮಪತ್ರ ಸಲ್ಲಿಸಿಯೇ ಬಿಟ್ರು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ನರಸಿಂಹಮೂರ್ತಿ ಮತ್ತು ರಾಜ್ಕುಮಾರ್ ಇಬ್ಬರೂ ನಾಮಪತ್ರ ಸಲ್ಲಿಸಿದ್ರು. ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ಉಪಾಧ್ಯಕ್ಷರಾಗಿದ್ದ ದೇವನಹಳ್ಳಿಯ ಶ್ರೀನಿವಾಸ್ ಮುಂದುವರೆಯಲಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದು ಕೇವಲ ಅವರೊಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ರು. ಇಷ್ಟೆಲ್ಲದರ ನಡುವೆ ನರಸಿಂಹಮೂರ್ತಿಗೆ ಅನ್ಯಾಯವಾಗಿದೆ ಎಂದು ಅವರ ಬೆಂಬಲಿಗರು ಅನೇಕ ನಿರ್ದೇಶಕರು ಸಭೆಗೇ ಗೈರಾದರು. ಬಮೂಲ್ ಚುನಾವಣಾ ಅಧಿಕಾರಿ ನಿರ್ದೇಶಕರುಗಳನ್ನು ಸಭೆಗೆ ಕರೆಯಲೇ ಇಲ್ಲ. ಇದೆಲ್ಲದರ ಪರಿಣಾಮ ಕೋರಮ್ ಇಲ್ಲದ ಕಾರಣದಿಂದ ಚುನಾವಣೆಯನ್ನು ಮುಂದೂಡಲಾಯ್ತು.

ಬೈಟ್: ಅಂಜನಪ್ಪ, ಹಾಲಿ ಅಧ್ಯಕ್ಷ, ಬಮೂಲ್

ಇಷ್ಟೆಲ್ಲಾ ಹೈಡ್ರಾಮಾದ ಹಿಂದೆ ಸಚಿವರಾದ ಎಚ್ ಡಿ ರೇವಣ್ಣ, ಡಿ ಕೆ ಸುರೇಶ್ ನಡುವಣ ಮುಸುಕಿನ ಗುದ್ದಾಟ ಬಹಿರಂಗವಾದಂತಾಯ್ತು. ವಿದೇಶ ಪ್ರವಾಸದಲ್ಲಿರೋ ಸಚಿವ ಡಿ ಕೆ ಶಿವಕುಮಾರ್ ಸ್ವದೇಶಕ್ಕೆ ವಾಪಸ್ಸಾದ್ಮೇಲೆ ಮುಂದಿನ ದಿನಾಂಕ ನಿರ್ಧರಿಸಲಾಗುವುದು. ಅಲ್ಲಿವರಗೆ ಅಸಮಾಧಾನಗಳೆಲ್ಲಾ ನಿವಾರಣೆಯಾಗಿ ನಿರ್ದೇಶಕರ ಅವಿರೋಧ ಆಯ್ಕೆಯಾಗುತ್ತಾ ಅಥವಾ ಈ ವಿವಾದ ಮತ್ತಷ್ಟು ಕಗ್ಗಂಟಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

KN_BNG_01_22_BANGALORE_DAIRY_ELECTION_SCRIPT_DEEPA_7201801

Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.