ಬೀದರ್: ಭೀಕರ ಬರದಿಂದ ಭೂಮಿ ಬರಡಾಗಿದ್ದು, ಜನರು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಗರದಲ್ಲಿ ಉಲ್ಬಣಗೊಂಡಿದೆ.
ನಗರದ ಸಂಗಮೇಶ್ವರ ಬಡಾವಣೆಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಕಳೆದ ಎರಡು ತಿಂಗಳಿಂದ ಈ ಬಡಾವಣೆ ನಿವಾಸಿಗರು ಕುಡಿಯುವ ಹನಿ ನೀರಿಗೂ ಪರದಾಡ್ತಿದ್ದಾರೆ. ಬೆಳಿಗ್ಗೆ, ರಾತ್ರಿಯಾದ್ರೆ ಸಾಕು ಎರಡು ಕಿಲೋ ಮಿಟರ್ ದೂರದ ಬೋರ್ವೇಲ್ ನಿಂದ ನೀರು ತಂದು ಬಳಕೆ ಮಾಡಬೇಕಾಗಿದೆ.
ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದ ಜನ ನಾಯಕರು ಬೆಟ್ಟದಷ್ಟು ಭರವಸೆ ಕೊಟ್ಟು ಈಗ ಕಾಣದಂತೆ ಮಾಯವಾಗಿದ್ದಾರೆ. ನಗರಸಭೆ ಅಧಿಕಾರಿಗಳು ಕಣ್ಣಿಗೆ ಕಂಡರು ಜಾಣಕುರುಡರಂತೆ ವರ್ತಿಸುತ್ತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಾಗತೊಡಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.