ETV Bharat / state

ಬಹಿರಂಗ ಪ್ರಚಾರಕ್ಕೆ ತೆರೆ... 'ಕತ್ತಲ ರಾತ್ರಿ' ಆಟ ಶುರು?

ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.

author img

By

Published : Apr 22, 2019, 6:30 PM IST

ಬೀದರ್ ನಲ್ಲಿ ಚುನಾವಣೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ.

ಬೀದರ್ : ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಜಿಲ್ಲೆಯಲ್ಲಿ ರಾತ್ರಿ ರಾಜಕಾರಣ ಶುರುವಾಗಿದೆ. ಇಷ್ಟು ದಿನ ಭರ್ಜರಿ ಪ್ರಚಾರ ಮಾಡಿದ್ದ ಪಕ್ಷಗಳ ಅಭ್ಯರ್ಥಿಗಳು ಸದ್ಯ ಮತದಾರನ ಮನವೊಲಿಸಲು 'ಕತ್ತಲ ರಾತ್ರಿ'ಗೆ ಪ್ಲಾನ್ ಶುರು ಮಾಡಿದ್ದಾರಂತೆ.

ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ಅವರ ನಡುವೆ ನೆರ ಹಣಾಹಣಿ ನಡೆದಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಬೀದರ್ ನಲ್ಲಿ ಚುನಾವಣೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ.

ಪ್ರತಿ ಚುನಾವಣೆಯಲ್ಲೂ ಬೂತ್ ಮಟ್ಟದಲ್ಲಿ ಮತದಾರರ ಮುಂದೆ ಆಮಿಷವಿಡುವ ಕೆಲಸಕ್ಕೆ ಕೆಲವರು ಮುಂದಾಗ್ತಾರೆ. ಅದಕ್ಕಾಗೆ ಮತದಾನದ ಪೂರ್ವ ದಿನವನ್ನು ಜನ 'ಕತ್ತಲ ರಾತ್ರಿ' ಎನ್ನುತ್ತಾರೆ. ಈ ಬಾರಿಯ ಚುನಾವಣೆಯಲ್ಲೂ ಇಂಥದ್ದೆನಾದ್ರು ಗಿಮಿಕ್ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗ್ತಿದೆ.

ಹೇಗಿದೆ ಬೀದರ್ ಗ್ರೌಂಡ್

ಜಿಲ್ಲೆಯಲ್ಲಿ ಒಟ್ಟು 1773912 ಜನ ಮತದಾರಿದ್ದು, 918595 ಪುರುಷ ಮತ್ತು 855214 ಮಹಿಳಾ ಹಾಗೂ 103 ಇತರ ಮತದಾರಿದ್ದಾರೆ. 20219 ಜನ ವಿಶೇಷ ಚೇತನ ಮತದಾರರು ಅದರಲ್ಲಿ 12893 ಪುರುಷರು ಮತ್ತು 7322 ಮಹಿಳಾ ಹಾಗೂ 01 ಇತರೆ ಮತದಾರರಿದ್ದಾರೆ. ಒಟ್ಟು 1999 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.

ಬೀದರ್ : ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಜಿಲ್ಲೆಯಲ್ಲಿ ರಾತ್ರಿ ರಾಜಕಾರಣ ಶುರುವಾಗಿದೆ. ಇಷ್ಟು ದಿನ ಭರ್ಜರಿ ಪ್ರಚಾರ ಮಾಡಿದ್ದ ಪಕ್ಷಗಳ ಅಭ್ಯರ್ಥಿಗಳು ಸದ್ಯ ಮತದಾರನ ಮನವೊಲಿಸಲು 'ಕತ್ತಲ ರಾತ್ರಿ'ಗೆ ಪ್ಲಾನ್ ಶುರು ಮಾಡಿದ್ದಾರಂತೆ.

ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ಅವರ ನಡುವೆ ನೆರ ಹಣಾಹಣಿ ನಡೆದಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಬೀದರ್ ನಲ್ಲಿ ಚುನಾವಣೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರನ ಮನವೊಲಿಸಲು ಪ್ರಯತ್ನ ನಡೆಯುತ್ತಿದೆ.

ಪ್ರತಿ ಚುನಾವಣೆಯಲ್ಲೂ ಬೂತ್ ಮಟ್ಟದಲ್ಲಿ ಮತದಾರರ ಮುಂದೆ ಆಮಿಷವಿಡುವ ಕೆಲಸಕ್ಕೆ ಕೆಲವರು ಮುಂದಾಗ್ತಾರೆ. ಅದಕ್ಕಾಗೆ ಮತದಾನದ ಪೂರ್ವ ದಿನವನ್ನು ಜನ 'ಕತ್ತಲ ರಾತ್ರಿ' ಎನ್ನುತ್ತಾರೆ. ಈ ಬಾರಿಯ ಚುನಾವಣೆಯಲ್ಲೂ ಇಂಥದ್ದೆನಾದ್ರು ಗಿಮಿಕ್ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗ್ತಿದೆ.

ಹೇಗಿದೆ ಬೀದರ್ ಗ್ರೌಂಡ್

ಜಿಲ್ಲೆಯಲ್ಲಿ ಒಟ್ಟು 1773912 ಜನ ಮತದಾರಿದ್ದು, 918595 ಪುರುಷ ಮತ್ತು 855214 ಮಹಿಳಾ ಹಾಗೂ 103 ಇತರ ಮತದಾರಿದ್ದಾರೆ. 20219 ಜನ ವಿಶೇಷ ಚೇತನ ಮತದಾರರು ಅದರಲ್ಲಿ 12893 ಪುರುಷರು ಮತ್ತು 7322 ಮಹಿಳಾ ಹಾಗೂ 01 ಇತರೆ ಮತದಾರರಿದ್ದಾರೆ. ಒಟ್ಟು 1999 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.

Intro:ಮೌನವಾದ ಲೀಡರ್, ಗುಟ್ಟು ಬಿಡದ ಓಟರ್: ಸೈಲೆಂಟಾಗಿ ನಡಿತಿದೆ 'ಖತಲ್ ರಾತ್ರಿ'ಯ ಪ್ಲ್ಯಾನರ್...!

ಬೀದರ್:
ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿಳ್ತಿದ್ದಂಗೆ ಚುನಾವಣೆ ಆಯೋಗದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪಕ್ಷಗಳ ನಾಯಕರು ಮೌನವಾದ್ರೆ ತಿಂಗಳುಗಳ ಕಾಲ ಅಬ್ಬರದ ಪ್ರಚಾರ ನೋಡಿ ಕೊನೆಗು ಗುಟ್ಟು ಬಿಡದೆ ಸುಮ್ಮನಾಗಿದ್ದಾನೆ ಬೀದರನ ಮತದಾರ. ಈ ನಡುವೆ ಮತದಾನ ಪೂರ್ವ ಕೊನೆ ದಿನವಾದ ಇಂದು 'ಖತಲ್ ರಾತ್ರಿ' ಗೆ ಪ್ಲ್ಯಾನ್ ಆಗುವ ಭಯ ಎರಡು ಪಕ್ಷಗಳಿಗೆ ಕಾಡ್ತಿದೆ.

ಹೌದು. ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ಅವರ ನಡುವೆ ನೆರ ಹಣಾಹಣಿ ಇದ್ದು ತಿಂಗಳುಗಳ ಕಾಲ ಭರ್ಜರಿ ಪ್ರಚಾರ ಮಾಡಿದ ಎರಡು ಪಕ್ಷಗಳ ಮುಖಂಡರು ಮತದಾನ ಪೂರ್ವ ದಿನದ ಇಂದು ಆಂತರಿಕವಾಗಿ ಮತಗಟ್ಟೆಯ ಸಿದ್ದತೆಗಳು ಮಾಡಿಕೊಳ್ತಿದ್ದು ಈ ವೇಳೆಯಲ್ಲಿ ಫೈನಲ್ ರೌಂಡ್ ನ (ಡೆಂಜರಸ್) ಮತಯಾಚನೆ ಯ ಭಯ ಎರಡು ಪಕ್ಷಗಳಿಗೆ ಕಾಡ್ತಿದೆ.

ಚುನಾವಣೆ ಆಯೋಗದ ಹದ್ದಿನ ಕಣ್ಣಿನ ನಿಗಾದ ನಡುವೆ ರಂಗೋಲಿ ಕೆಳಗೆ ನುಗ್ಗಿ ಮತದಾರನ ಮನವೊಲಿಸುವ ಎಲ್ಲದಕ್ಕೂ ಮೀರಿದ ಪ್ರಚಾರದ ಕೊನೆ ಭಾಗ ಕ್ಷೇತ್ರದಲ್ಲಿ ನಡೆಯುವ ಆತಂಕವಿದ್ದು ಮತದಾರನಿಗೆ ಚಾಪೆ ಕೆಳಗಿಂದ ಮನವೊಲಿಸುವ ಪ್ರಯತ್ನಗಳು ನಡೆಯುವುದನ್ನೆ 'ಖತಲ್ ರಾತ್ರಿ' ಎಂದು ರಾಜಕೀಯ ಭಾಷೆಯಲ್ಲಿ ಮಾತನಾಡಿಕೊಳ್ತಾರೆ.

ಪ್ರತಿ ಚುನಾವಣೆಯಲ್ಲೂ ಬೂತ್ ಮಟ್ಟದಲ್ಲಿ ಮತದಾರ ಮುಂದೆ ಆಮಿಷ ಹೊಡುವ ಕೆಲಸಕ್ಕೆ ಕೆಲವರು ಮುಂದಾಗ್ತಾರೆ. ಅದಕ್ಕಾಗೆ ಮತದಾನದ ಪೂರ್ವ ದಿನವನ್ನು 'ಖತಲ್ ರಾತ್' ಎನ್ನಲಾಗುತ್ತೆ. ಈ ಬಾರಿಯ ಚುನಾವಣೆಯಲ್ಲೂ ಇಂಥದ್ದೆನಾದ್ರು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳಾಗ್ತಿವೆ.

ಹೇಗಿದೆ ಬೀದರ್ ಗ್ರೌಂಡ್ ಝೀರೋ:

ಬೀದರ್ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿ ಸೇರಿದಂತೆ ಕಲ್ಬುರ್ಗಿ ಜಿಲ್ಲೆಯ ಎರಡು ಕ್ಷೇತ್ರಗಳನ್ನೊಳಗೊಂಡು ಒಟ್ಟು 8 ವಿಧಾನಸಭೆ ಕ್ಷೇತ್ರ ಹೊಂದಿರುವ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 1773912 ಜನ ಮತದಾರರು ಮತ ಚಲಾಯಿಸಲಿದ್ದು ಇದಕ್ಕಾಗಿ 1999 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಬೀದರ್ ಉತ್ತರ, ಭಾಲ್ಕಿ, ಬಸವಕಲ್ಯಾಣ, ಔರಾದ್, ಹುಮನಾಬಾದ್, ಆಳಂದ, ಚಿಂಚೋಳಿ, ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರಗಳು ಒಳಗೊಂಡಿದೆ.

* 1773912 ಮತದಾರರ ಪೈಕಿ 918595 ಪುರುಷ , 855214 ಮಹಿಳೆಯರು ಹಾಗೂ 103 ಜನ ಇತರರು ಇದ್ದಾರೆ.

* 20219 ಜನ ವಿಶೇಷ ಚೇತನ ಮತದಾರರಿದ್ದು ಈ ಪೈಕಿ 12893 ಪುರುಷ, 7322 ಮಹಿಳಾ ಹಾಗೂ 01 ಇತರೆ ಮತದಾರರಿದ್ದಾರೆ.

ವಿಧಾನಸಭೆ ಕ್ಷೇತ್ರವಾರು ಮತದಾರರ ವಿವರ:

ಬಸವಕಲ್ಯಾಣ:
ಒಟ್ಟು 229957 ಮತದಾರರಿದ್ದು ಈ ಪೈಕಿ 120538 ಪುರುಷ, 109415 ಮಹಿಳಾ ಹಾಗೂ 4 ಜನ ಇತರೆ ಮತದಾರರಿದ್ದಾರೆ.

ಹುಮನಾಬಾದ್:
ಒಟ್ಟು 243463 ಮತದಾರರಿದ್ದು ಈ ಪೈಕಿ 126205 ಪುರುಷರು, 117245 ಮಹಿಳೆಯರು ಹಾಗೂ 13 ಜನ ಇತರೆ ಮತದಾರರಿದ್ದಾರೆ.

ಬೀದರ್ ದಕ್ಷಿಣ:
ಒಟ್ಟು 203847 ಮತದಾರರಿದ್ದು ಈ ಪಕಿ 105163 ಪುರುಷರು, 98680 ಮಹಿಳೆಯರು ಹಾಗೂ 4 ಜನ ಇತರೆ ಮತದಾರರಿದ್ದಾರೆ.

ಬೀದರ್ ಉತ್ತರ:
ಒಟ್ಟು 221846 ಮತದಾರರಿದ್ದು ಈ ಪೈಕಿ 113219 ಪುರುಷರು, 108603 ಹಾಗೂ 24 ಜನ ಇತರೆ ಮತದಾರರಿದ್ದಾರೆ.

ಭಾಲ್ಕಿ:
ಒಟ್ಟು 230226 ಮತದಾರರಿದ್ದು ಈ ಪೈಕಿ 120227 ಪುರುಷರು, 100994 ಹಾಗೂ 05 ಇತರೆ ಮತದಾರಿದ್ದಾರೆ.

ಔರಾದ್(ಮೀಸಲು):
ಒಟ್ಟು 218337 ಮತದಾರರಿದ್ದು ಈ ಪೈಕಿ 113190 ಪುರುಷರು, 105145 ಮಹಿಳೆಯರು ಹಾಗೂ 02 ಇತರೆ ಮತದಾರರಿದ್ದಾರೆ.

ಚಿಂಚೊಳಿ(ಕಲ್ಬುರ್ಗಿ ಜಿಲ್ಲೆ):
ಒಟ್ಟು ಮತದಾರರು 193782 ಮತದಾರರಿದ್ದು ಈ ಪೈಕಿ 98994 ಜನ ಪುರುಷರು, 94772 ಮಹಿಳೆಯರು ಹಾಗೂ 16 ಜನ ಇತರೆ ಮತದಾರರಿದ್ದಾರೆ.

ಆಳಂದ(ಕಲ್ಬುರ್ಗಿ):
ಒಟ್ಟು 232454 ಮತದಾರರಿದ್ದು ಈ ಪೈಕಿ 121059 ಪುರುಷರು, 111360 ಮಹಿಳೆಯರು ಹಾಗೂ 35 ಜನ ಇತರೆ ಮತದಾರರಿದ್ದಾರೆ.Body:ಅನೀಲಕುಮಾರ್ ದೇಶಮುಖ್Conclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.