ETV Bharat / state

ವಸತಿ ಯೋಜನೆ ಅಕ್ರಮ ಆರೋಪ: ಈಶ್ವರ ಖಂಡ್ರೆ ರಾಜೀನಾಮೆಗೆ ಸಂಸದ ಖೂಬಾ ಆಗ್ರಹ...!

ಈಶ್ವರ ಖಂಡ್ರೆ ಅವರು 2015 ರಿಂದ 2019 ರವರೆಗೆ ಭಾಲ್ಕಿ ಕ್ಷೇತ್ರದಲ್ಲಿ ಬೊಗಸ್ ಫಲಾನುಭವಿಗಳಿಗೆ ತಮ್ಮ ಮನೆಯಲ್ಲೇ ಹಕ್ಕು ಪತ್ರಗಳನ್ನು ಪ್ರಿಂಟ್​ ಮಾಡಿ ಸಾಮೂಹಿಕವಾಗಿ ಹಂಚಿಕೆ ಮಾಡಿದ್ದಾರೆ. ಸರ್ಕಾರದ ಸಚಿವರಾಗಿದ್ದಕ್ಕೆ ಆ ಎಲ್ಲಾ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 91 ಕೋಟಿ ರೂ. ನಷ್ಟವಾಗಿದ್ದು, ಈ ನಷ್ಟ ಖುದ್ದು ಈಶ್ವರ ಖಂಡ್ರೆ ಅವರೇ ಭರಿಸಬೇಕು ಎಂದು ಖೂಬಾ ಒತ್ತಾಯಿಸಿದ್ದಾರೆ.

author img

By

Published : May 9, 2020, 3:05 PM IST

Bhagavanta khuba
ಸಂಸದ ಭಗವಂತ ಖೂಬಾ

ಬೀದರ್: ಅಧಿಕಾರ ದುರ್ಬಳಕೆ ಹಾಗೂ ದಬ್ಬಾಳಿಕೆ ಮೂಲಕ ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಅಕ್ರಮವಾಗಿ 26,000 ಮನೆಗಳ ಹಂಚಿಕೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ತಮ್ಮ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕು ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 2015 ರಿಂದ 2019 ರವರೆಗೆ ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆ ಅವರು ಬೊಗಸ್ ಫಲಾನುಭವಿಗಳಿಗೆ ತಮ್ಮ ಮನೆಯಲ್ಲೇ ಹಕ್ಕು ಪತ್ರಗಳನ್ನು ಪ್ರಿಂಟ್​ ಮಾಡಿ ಸಾಮೂಹಿಕವಾಗಿ ಹಂಚಿಕೆ ಮಾಡಿದ್ದಾರೆ. ಸರ್ಕಾರದ ಸಚಿವರಾಗಿದಕ್ಕೆ ಆ ಎಲ್ಲ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 91 ಕೋಟಿ ರುಪಾಯಿ ನಷ್ಟವಾಗಿದ್ದು, ಈ ನಷ್ಟ ಖುದ್ದು ಈಶ್ವರ ಖಂಡ್ರೆ ಅವರೇ ಭರಿಸಬೇಕು ಎಂದು ಖೂಬಾ ಒತ್ತಾಯಿಸಿದ್ದಾರೆ.

ಸಂಸದ ಭಗವಂತ ಖೂಬಾ

ಸುದ್ದಿಗೋಷ್ಠಿಯುದ್ದಕ್ಕೂ ಈಶ್ವರ ಖಂಡ್ರೆ ಅವರನ್ನು ಈಶ್ವರ ಬಾಬಾ ಎಂದು ಸಂಭೋಧಿಸಿ ಮಾತನಾಡಿದ ಭಗವಂತ ಖೂಬಾ ಅವರು ರಾಜೀವಗಾಂಧಿ ಗ್ರಾಮೀಣ ವಸತಿ ಯೋಜನೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ವೇಳೆಯಲ್ಲಿ ಭಾರಿ ಮಟ್ಟದಲ್ಲಿ ಅಕ್ರಮ ನಡೆದಿರುವುದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಉಪ್ಪು ತಿಂದವನು ನೀರು ಕುಡಿಯಬೇಕು ಶಾಸಕ ಈಶ್ವರ ಖಂಡ್ರೆ ಉಪ್ಪು ತಿಂದಿದ್ದಾರೆ ಹೀಗಾಗಿ ನೀರು ಅವರೇ ಕುಡಿಯಬೇಕು ಎಂದು ಖೂಬಾ ಲೇವಡಿ ಮಾಡಿದ್ದಾರೆ.

ಈಶ್ವರ ಖಂಡ್ರೆ ಅವರು ನೈತಿಕತೆಯಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡದಿದ್ದರೆ ವಿಧಾನಸಭೆ ಹಾಗೂ ಬೀದಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಖೂಬಾ ಎಚ್ಚರಿಕೆ ನೀಡಿದರು. ಈ ವೇಳೆಯಲ್ಲಿ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ಹಾಗೂ ಬಿಜೆಪಿ ಮುಖಂಡ ಡಿ.ಕೆ ಸಿದ್ರಾಮ್ ಉಪಸ್ಥಿತರಿದ್ದರು.

ಬೀದರ್: ಅಧಿಕಾರ ದುರ್ಬಳಕೆ ಹಾಗೂ ದಬ್ಬಾಳಿಕೆ ಮೂಲಕ ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಅಕ್ರಮವಾಗಿ 26,000 ಮನೆಗಳ ಹಂಚಿಕೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ತಮ್ಮ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕು ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 2015 ರಿಂದ 2019 ರವರೆಗೆ ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆ ಅವರು ಬೊಗಸ್ ಫಲಾನುಭವಿಗಳಿಗೆ ತಮ್ಮ ಮನೆಯಲ್ಲೇ ಹಕ್ಕು ಪತ್ರಗಳನ್ನು ಪ್ರಿಂಟ್​ ಮಾಡಿ ಸಾಮೂಹಿಕವಾಗಿ ಹಂಚಿಕೆ ಮಾಡಿದ್ದಾರೆ. ಸರ್ಕಾರದ ಸಚಿವರಾಗಿದಕ್ಕೆ ಆ ಎಲ್ಲ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 91 ಕೋಟಿ ರುಪಾಯಿ ನಷ್ಟವಾಗಿದ್ದು, ಈ ನಷ್ಟ ಖುದ್ದು ಈಶ್ವರ ಖಂಡ್ರೆ ಅವರೇ ಭರಿಸಬೇಕು ಎಂದು ಖೂಬಾ ಒತ್ತಾಯಿಸಿದ್ದಾರೆ.

ಸಂಸದ ಭಗವಂತ ಖೂಬಾ

ಸುದ್ದಿಗೋಷ್ಠಿಯುದ್ದಕ್ಕೂ ಈಶ್ವರ ಖಂಡ್ರೆ ಅವರನ್ನು ಈಶ್ವರ ಬಾಬಾ ಎಂದು ಸಂಭೋಧಿಸಿ ಮಾತನಾಡಿದ ಭಗವಂತ ಖೂಬಾ ಅವರು ರಾಜೀವಗಾಂಧಿ ಗ್ರಾಮೀಣ ವಸತಿ ಯೋಜನೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ವೇಳೆಯಲ್ಲಿ ಭಾರಿ ಮಟ್ಟದಲ್ಲಿ ಅಕ್ರಮ ನಡೆದಿರುವುದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಉಪ್ಪು ತಿಂದವನು ನೀರು ಕುಡಿಯಬೇಕು ಶಾಸಕ ಈಶ್ವರ ಖಂಡ್ರೆ ಉಪ್ಪು ತಿಂದಿದ್ದಾರೆ ಹೀಗಾಗಿ ನೀರು ಅವರೇ ಕುಡಿಯಬೇಕು ಎಂದು ಖೂಬಾ ಲೇವಡಿ ಮಾಡಿದ್ದಾರೆ.

ಈಶ್ವರ ಖಂಡ್ರೆ ಅವರು ನೈತಿಕತೆಯಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡದಿದ್ದರೆ ವಿಧಾನಸಭೆ ಹಾಗೂ ಬೀದಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಖೂಬಾ ಎಚ್ಚರಿಕೆ ನೀಡಿದರು. ಈ ವೇಳೆಯಲ್ಲಿ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ಹಾಗೂ ಬಿಜೆಪಿ ಮುಖಂಡ ಡಿ.ಕೆ ಸಿದ್ರಾಮ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.