ETV Bharat / state

ಬೀದಿಬದಿ ಜೀವನ ನಡೆಸುತ್ತಿರುವ ನಿರಾಶ್ರಿತರಿಗೆ ಸಚಿವ ಪ್ರಭು ಚೌವ್ಹಾಣ್​​​ರಿಂದ​ ಊಟ ವಿತರಣೆ

author img

By

Published : Mar 30, 2020, 3:02 PM IST

ಸಚಿವ ಪ್ರಭು ಚವ್ಹಾಣ್​ ಬೀದಿಬದಿ ಬದುಕು ನಡೆಸುತ್ತಿರುವ ಜನರಿಗೆ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಊಟ ನೀಡಲು ಆರಂಭಿಸಿದ್ದಾರೆ. ಇಂದಿನಿಂದ ಲಾಕ್​ಡೌನ್ ಆದೇಶ ಅವಧಿ ಮುಗಿಯುವವರೆಗೆ ಊಟ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

minister-prabhu-chauvan-provide-to-poor-people
ಬೀದಿ ಬದಿ ಜೀವನ ನಡೆಸುವವರಿಗೆ ಸಚಿವ ಪ್ರಭು ಚವ್ಹಾಣ್​ ಊಟ ವಿತರಣೆ

ಬೀದರ್: ಲಾಕ್​ಡೌನ್​​ನಿಂದಾಗಿ ಊಟ ಇಲ್ಲದೆ ಕಂಗಾಲಾಗಿರುವ ನಿರಾಶ್ರಿತರಿಗೆ ಎರಡು ಹೊತ್ತು ಊಟ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್​ ಅಭಿಯಾನ ಆರಂಭಿಸಿದ್ದಾರೆ.

ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಡಿದ ಸಚಿವ ಪ್ರಭು ಚೌವ್ಹಾಣ್​ ಬೀದಿಬದಿ ಬದುಕು ನಡೆಸುತ್ತಿರುವ ಜನರಿಗೆ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಊಟ ನೀಡಲು ಆರಂಭಿಸಿದ್ದಾರೆ. ಇಂದಿನಿಂದ ಲಾಕ್​ಡೌನ್ ಆದೇಶ ಅವಧಿ ಮುಗಿಯುವವರೆಗೆ ಊಟ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿಕ್ಲಿ ಬಾರ್ಡರ್ ಚೆಕ್ ಪೋಸ್ಟ್, ಮುರ್ಕಿ, ಕಮಲನಗರ ಹಾಗೂ ಔರಾದ್ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ಬದುಕು ಸಾಗಿಸುವ ನಿರಾಶ್ರಿತರಿಗೆ ಈ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಚೆಕ್ ಪೋಸ್ಟ್​​ಗಳಲ್ಲಿ ಅಧಿಕಾರಿಗಳು ಖಡಕ್ ಆಗಿ ವರ್ತಿಸಬೇಕಾಗಿದೆ. ಯಾರೇ ಇದ್ದರೂ ರಾಜ್ಯದ ಗಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ. ಸೋಂಕಿತರು ರಾಜ್ಯಕ್ಕೆ ಬಂದ್ರೆ ಅನಾಹುತವಾಗುವ ಸಂಭವವಿದ್ದು, ಹದ್ದಿನ ಕಣ್ಣಿಡುವಂತೆ ಸೂಚನೆ ನೀಡಿದ್ದಾರೆ.

ಬೀದರ್: ಲಾಕ್​ಡೌನ್​​ನಿಂದಾಗಿ ಊಟ ಇಲ್ಲದೆ ಕಂಗಾಲಾಗಿರುವ ನಿರಾಶ್ರಿತರಿಗೆ ಎರಡು ಹೊತ್ತು ಊಟ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್​ ಅಭಿಯಾನ ಆರಂಭಿಸಿದ್ದಾರೆ.

ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಡಿದ ಸಚಿವ ಪ್ರಭು ಚೌವ್ಹಾಣ್​ ಬೀದಿಬದಿ ಬದುಕು ನಡೆಸುತ್ತಿರುವ ಜನರಿಗೆ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಊಟ ನೀಡಲು ಆರಂಭಿಸಿದ್ದಾರೆ. ಇಂದಿನಿಂದ ಲಾಕ್​ಡೌನ್ ಆದೇಶ ಅವಧಿ ಮುಗಿಯುವವರೆಗೆ ಊಟ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿಕ್ಲಿ ಬಾರ್ಡರ್ ಚೆಕ್ ಪೋಸ್ಟ್, ಮುರ್ಕಿ, ಕಮಲನಗರ ಹಾಗೂ ಔರಾದ್ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ಬದುಕು ಸಾಗಿಸುವ ನಿರಾಶ್ರಿತರಿಗೆ ಈ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಚೆಕ್ ಪೋಸ್ಟ್​​ಗಳಲ್ಲಿ ಅಧಿಕಾರಿಗಳು ಖಡಕ್ ಆಗಿ ವರ್ತಿಸಬೇಕಾಗಿದೆ. ಯಾರೇ ಇದ್ದರೂ ರಾಜ್ಯದ ಗಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ. ಸೋಂಕಿತರು ರಾಜ್ಯಕ್ಕೆ ಬಂದ್ರೆ ಅನಾಹುತವಾಗುವ ಸಂಭವವಿದ್ದು, ಹದ್ದಿನ ಕಣ್ಣಿಡುವಂತೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.