ETV Bharat / state

ಶಾಲಾ ಮಕ್ಕಳ ಅಪಾಯದ ಬಸ್ ಪ್ರಯಾಣ: ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಜಲಸಂಗಿ-ದುಬಲಗುಂಡಿ ಗ್ರಾಮಕ್ಕೆ ಏಕೈಕ ಬಸ್ ವ್ಯವಸ್ಥೆಯಿರುವುದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಅಪಾಯಕಾರಿಯಾದ ರೀತಿಯಲ್ಲಿ ಬಾಗಿಲಲ್ಲೇ ನೇತಾಡಿಕೊಂಡು ಪ್ರಯಾಣಿಸುತ್ತಿದ್ದು, ಸಾರಿಗೆ ಇಲಾಖೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

author img

By

Published : Aug 27, 2019, 11:59 PM IST

ಬಸ್ಸಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

ಬೀದರ್ : ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ನೇತಾಡಿಕೊಂಡು ಬಸ್ಸಲ್ಲಿ ಪ್ರಯಾಣಿಸುತ್ತಿದ್ದು, ಸಾರಿಗೆ ಇಲಾಖೆ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಮನಾಬಾದ್ ತಾಲೂಕಿನ ಜಲಸಂಗಿ-ದುಬಲಗುಂಡಿ ಭಾಗದಲ್ಲಿ ಬೆಳ್ಳಗಿನ ಹೊತ್ತು ಮಕ್ಕಳು ಶಾಲೆಗೆ ಹೊಗುವ ಸಂದರ್ಭದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಎಕೈಕ ಬಸ್ ಬರುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಸ್ ಹೊಂದಿರುವುದರಿಂದ, ಈ ಬಸ್ಸನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಸ್​ನಲ್ಲಿ ಸ್ಥಳದ ಕೊರತೆ ಎದುರಾಗಿ ವಿದ್ಯಾರ್ಥಿಗಳು ಬಾಗಿಲಿನಲ್ಲೆ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಒಂದೇ ಬಸ್ ಬರುವುದರಿಂದ ಬಸ್ ತುಂಬಿ ತುಳುಕುತ್ತಿರುತ್ತವೆ. ಆದ್ದರಿಂದ ಕೆಲ ಮಕ್ಕಳು ಶಾಲೆಗೆ ಹೋದರೆ ಇನ್ನು ಕೆಲವರು ವಾಪಸ್ ಮನೆಗೆ ಹಿಂದುರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ಸಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

ಬಸ್ ಏರಿದರರೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಲು ಆಗದೆ ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಕಾಲಕ್ಕೆ ಬಸ್ ಬಾರದಿರುವುದು ಮತ್ತು ಬಂದ ಬಸ್​ನಲ್ಲಿ ಪ್ರಯಾಣಿಸಲು ಅಸಾಧ್ಯವಾಗಿರುವುದು ಈ ಭಾಗದ ಮಕ್ಕಳು ಶಾಲಾ-ಕಾಲೇಜಿಗೆ ಗೈರಾಗುವಂತೆ ಮಾಡಿದೆ. ಇರುವ ಒಂದು ಬಸ್​ನಲ್ಲಿ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಈಶಾನ್ಯ ಸಾರಿಗೆ ಸಂಸ್ಥೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಾಸ್ ಇರುವ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಬೀದರ್ : ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ನೇತಾಡಿಕೊಂಡು ಬಸ್ಸಲ್ಲಿ ಪ್ರಯಾಣಿಸುತ್ತಿದ್ದು, ಸಾರಿಗೆ ಇಲಾಖೆ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಮನಾಬಾದ್ ತಾಲೂಕಿನ ಜಲಸಂಗಿ-ದುಬಲಗುಂಡಿ ಭಾಗದಲ್ಲಿ ಬೆಳ್ಳಗಿನ ಹೊತ್ತು ಮಕ್ಕಳು ಶಾಲೆಗೆ ಹೊಗುವ ಸಂದರ್ಭದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಎಕೈಕ ಬಸ್ ಬರುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಸ್ ಹೊಂದಿರುವುದರಿಂದ, ಈ ಬಸ್ಸನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಸ್​ನಲ್ಲಿ ಸ್ಥಳದ ಕೊರತೆ ಎದುರಾಗಿ ವಿದ್ಯಾರ್ಥಿಗಳು ಬಾಗಿಲಿನಲ್ಲೆ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಒಂದೇ ಬಸ್ ಬರುವುದರಿಂದ ಬಸ್ ತುಂಬಿ ತುಳುಕುತ್ತಿರುತ್ತವೆ. ಆದ್ದರಿಂದ ಕೆಲ ಮಕ್ಕಳು ಶಾಲೆಗೆ ಹೋದರೆ ಇನ್ನು ಕೆಲವರು ವಾಪಸ್ ಮನೆಗೆ ಹಿಂದುರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ಸಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

ಬಸ್ ಏರಿದರರೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಲು ಆಗದೆ ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಕಾಲಕ್ಕೆ ಬಸ್ ಬಾರದಿರುವುದು ಮತ್ತು ಬಂದ ಬಸ್​ನಲ್ಲಿ ಪ್ರಯಾಣಿಸಲು ಅಸಾಧ್ಯವಾಗಿರುವುದು ಈ ಭಾಗದ ಮಕ್ಕಳು ಶಾಲಾ-ಕಾಲೇಜಿಗೆ ಗೈರಾಗುವಂತೆ ಮಾಡಿದೆ. ಇರುವ ಒಂದು ಬಸ್​ನಲ್ಲಿ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಈಶಾನ್ಯ ಸಾರಿಗೆ ಸಂಸ್ಥೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಾಸ್ ಇರುವ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Intro:ಶಾಲಾ ಮಕ್ಕಳ ಅಪಾಯದ ಬಸ್ ಪ್ರಯಾಣ- ಕಣ್ಮುಚ್ಚಿ ಕುಳಿತ ಸಾರಿಗೆ ಸಂಸ್ಥೆ...!

ಬೀದರ್:
ಶಾಲೆಗೆ ಹೊಗಿ ನಾಲ್ಕಕ್ಷರ ಕಲಿತು ವಿದ್ಯಾವಂತನಾಗಲು ಈ ಭಾಗದ ಮಕಗಕಳು ಜೀವದ ಹಂಗು ತೊರೆದು ಕಷ್ಟಪಡುವಂತಾಗಿದೆ. ಬಸ್ ನಲ್ಲಿ ಜೋತು ಬಿದ್ದು ಅಪಾಯದಂಚಿನ ಪ್ರಯಾಣ ಮಾಡಿ ಶಾಲೆಗೆ ಹೊಗುವಂಥ ದಯನೀಯ ಸ್ಥೀತಿ ಕಂಡು ಬಂದಿದೆ.

ಹೌದು. ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ-ದುಬಲಗುಂಡಿ ಹುಮನಾಬಾದ್ ಭಾಗದಲ್ಲಿ ಬೆಳಿಗ್ಗೆ ಮಕ್ಕಳು ಶಾಲೆಗೆ ಹೊಗುವ ಸಂದರ್ಭದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಎಕೈಕ್ ಬಸ್ ಬರುತ್ತದೆ. ಆದ್ರೆ ಪಾಸ್ ಪಡೆದ ವಿಧ್ಯಾರ್ಥಿಗಳು ಹೆಚ್ಚಾಗಿರ್ತಾರೆ ಬಸ್ ನಲ್ಲಿ ಸ್ಥಳದ ಕೊರತೆ ಇರೊದ್ರಿಂದ ಕೆಲವ ವಿಧ್ಯಾರ್ಥಿಗಳು ಬಾಗಿಲಿನಲ್ಲೆ ಜೋತು ಬಿದ್ದು ಪ್ರಯಾಣ ಮಾಡುವಂಥ ಅನಿವಾರ್ಯತೆ ಎದುರಾಗಿದ್ದು ಕೆಲ ಮಕ್ಕಳು ಶಾಲೆಗೆ ಹೊದ್ರೆ ಮತ್ತೆ ಕೆಲವರು ವಾಪಸ್ಸ್ ಮನೆಗೆ ಹಿಂದುರುಗುವಂಥ ದುಸ್ಥೀತಿ ನಿರ್ಮಾಣವಾಗಿದೆ.

ಹೀಗಾಗಿ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುವ ನೂರಾರು ವಿಧ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುವಂತಾಗಿದ್ದು ಬರುವ ಬಸ್ ಕೂಡ ಮೊದಲೆ ಫೂಲ್ ಪ್ರಯಾಣಿಕರನ್ನು ತುಂಬಕೊಂಡು ಜಲಸಂಗಿ ಗ್ರಾಮದ ವರಗೆ ಬರುತ್ತದೆ ಹೀಗಾಗಿ ಜಲಸಂಗಿ ಗ್ರಾಮದ ಮಕ್ಕಳು ಹುಮನಾಬಾದ್ ಹೊಗಬೇಕು ಅಂದ್ರೆ ಈ ಬಸ್ ನಲ್ಲೆ ಪ್ರಯಾಣ ಮಾಡಬೇಕು ಹೀಗಾಗಿ ಸಕಾಲಕ್ಕೆ ಬಸ್ ಬಾರದಿರುವುದು ಈ ಭಾಗದ ಮಕ್ಕಳು ಶಿಕ್ಷಣದಿಂದ ವಂಚನೆ ಗೊಳಗಾಗುವಂತಾಗಿದೆ. ಅಲ್ಲೆ ಬರುವ ಒಂದೆ ಒಂದು ಬಸ್ ನಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವಂಥ ದುರಂತ ಸ್ಥೀತಿ ನಿರ್ಮಾಣವಾಗಿದ್ದು ಈ ಭಾಗದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈಶಾನ್ಯ ಸಾರಿಗೆ ಸಂಸ್ಥೆ ಬೆಳಗ್ಗಿನ ಹಾಗೂ ಸಂಜೆ ಸಮಯದಲ್ಲಿ ಪಾಸ್ ರಹಿತ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್ ಗಳ ಓಡಿಸುವ ಅಗತ್ಯವಿದೆ ಎಂದು ವಿಧ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಬೈಟ್-೦೧: ಭೀಮರೆಡ್ಡಿ ಸಿಂಧನಕೇರಾ - ಸ್ಥಳೀಯ.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.