ETV Bharat / state

ನಿಮಗೇ ಅಭ್ಯರ್ಥಿ ಸಿಗ್ತಿಲ್ಲ, ನಮಗೇನ್ ಕೇಳ್ತಿರಿ: ಡಿಕೆಶಿ ಹೇಳಿಕೆಗೆ ಶೆಟ್ಟರ್ ವ್ಯಂಗ್ಯ - undefined

ನಿಮಗೆ ಅಭ್ಯರ್ಥಿ ಸಿಗ್ತಿಲ್ಲ. ನಮಗೇನ್ ಕೇಳ್ತಿರೀ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್ ಡಿಕೆಶಿಗೆ ಟಾಂಗ್​ ನೀಡಿದ್ದಾರೆ.

ಲೋಕಸಭಾ ಚುನಾವಣಾ ನಿಮಿತ್ತ ಪೂರ್ವಭಾವಿ ಸಭೆ
author img

By

Published : Mar 26, 2019, 8:28 PM IST

ಬಳ್ಳಾರಿ: ನಿಮಗೆ ಅಭ್ಯರ್ಥಿ ಸಿಗ್ತಿಲ್ಲ. ನಮಗೇನ್ ಕೇಳ್ತಿರಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು

ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿಂದು ನಡೆದ ಲೋಕಸಭಾ ಚುನಾವಣಾ ನಿಮಿತ್ತ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿ ಅಭ್ಯರ್ಥಿ ಕೊರತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್​​ ವ್ಯಂಗ್ಯ ವಾಡಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಿಮಗೆ ಅಭ್ಯರ್ಥಿ ಸಿಗಲಿಲ್ಲ. ಆ ಕಾರಣಕ್ಕಾಗಿಯೇ ಎಲ್ಲೋ ಬೆಂಗಳೂರಿನಿಂದ ಕರೆದುಕೊಂಡು ಬಂದು ಕಳೆದ ಉಪಚುನಾವಣೆ ಹಾಗೂ ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೀರಿ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್

ನಾವ್ ಎಲ್ಲಿಂದಲೋ ಕರೆದುಕೊಂಡು ಬರುತ್ತೀವಿ. ಅದನ್ನ ನಮಗೇನ್ ಹೇಳ್ತೀರಿ ಎಂದು ಕುಟುಕಿದರು.ಒಂದೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸದ ನಿಮ್ಮ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು, ಇಲ್ಲಿಗೆ ತಂದು ನಿಲ್ಲಿಸಿದ್ರಿ. ನಿಮ್ಮಲ್ಲಿಯೇ ಅಭ್ಯರ್ಥಿ ಕೊರತೆಯಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನ ಮೂರು ಕ್ಷೇತ್ರ ಹಾಗೂ ಕಾರವಾರ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಒಲ್ಲೆ ಎನ್ನುತ್ತಿದ್ದಾರೆ. ಬಹುತೇಕ ಕಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಇದು‌ ಕಾಂಗ್ರೆಸ್ ಪರಿಸ್ಥಿತಿ ಎಂದರು.

ಗ್ರಾಜ್ಯುಯೇಟ್ ಆಗಬೇಕಿಲ್ಲ:

ಪಾರ್ಲಿಮೆಂಟ್​​​ಗೆ ಆಯ್ಕೆಯಾಗಲು ಅಭ್ಯರ್ಥಿ ಗ್ರಾಜ್ಯುಯೇಟ್ ಆಗಿರಬೇಕು ಎಂದೇನಿಲ್ಲ. ಶ್ರೀಸಾಮಾನ್ಯರ ಕಷ್ಟಗಳು ಹಾಗೂ ಅವರೊಂದಿಗೆ ಬೆರೆಯುವಂತಹ ಮನಸ್ಸು ಹಾಗೂ ರಾಜಕೀಯ ಚಾಣಾಕ್ಷತನ‌ ಇರಬೇಕು. ಇವತ್ತು ದೇಶದಲ್ಲಿ ಎಷ್ಟೋ ಮಂದಿ ಪಿಯುಸಿ, ಎಸ್​ಎಸ್ಎಲ್​ಸಿ​ ಹಾಗೂ ಅನಕ್ಷರಸ್ಥರೂ‌ ಕೂಡ ಉತ್ತಮ ರಾಜಕಾರಣಿಗಳಾಗಿದ್ದಾರೆ. ತಮಿಳುನಾಡಿನಲ್ಲಿ ಕಾಮರಾಜ ಎಂಬುವರು ಅನಕ್ಷರಸ್ಥರು. ಅವರೂ ಕೂಡ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅವರೊಬ್ಬ ಕಾಂಗ್ರೆಸ್ಸಿಗರು ಆಗಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು, ಒಂದಿಷ್ಟು ಆಂಗ್ಲ ಭಾಷೆಯಲಿ ಠುಸ್, ಬುಸ್ ಅಂತಾ ಮಾತನಾಡಿದ್ರೆ ಸಾಲದು. ಶ್ರೀಸಾಮಾನ್ಯರ ಕಷ್ಟ, ಸುಖಗಳ ಕುರಿತು ಅರಿಯಬೇಕು. ಆಗ ಮಾತ್ರ ಉತ್ತಮ ರಾಜಕಾರಣಿಯಾಗಲಿದ್ದಾರೆ ಎಂದರು. ಹೀಗಾಗಿ, ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಬಳ್ಳಾರಿ ಲೋಕಸಭಾ ಕ್ಷೇತ್ರವನ್ನ ಮಾದರಿ ಲೋಕಸಭಾ ಕ್ಷೇತ್ರದತ್ತ ಕೊಂಡೊಯ್ಯುಲಿದ್ದಾರೆಂಬ ಅಚಲವಾದ ವಿಶ್ವಾಸ ನನಗಿದೆ ಎಂದರು.

ಬಳ್ಳಾರಿ: ನಿಮಗೆ ಅಭ್ಯರ್ಥಿ ಸಿಗ್ತಿಲ್ಲ. ನಮಗೇನ್ ಕೇಳ್ತಿರಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು

ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿಂದು ನಡೆದ ಲೋಕಸಭಾ ಚುನಾವಣಾ ನಿಮಿತ್ತ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿ ಅಭ್ಯರ್ಥಿ ಕೊರತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್​​ ವ್ಯಂಗ್ಯ ವಾಡಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಿಮಗೆ ಅಭ್ಯರ್ಥಿ ಸಿಗಲಿಲ್ಲ. ಆ ಕಾರಣಕ್ಕಾಗಿಯೇ ಎಲ್ಲೋ ಬೆಂಗಳೂರಿನಿಂದ ಕರೆದುಕೊಂಡು ಬಂದು ಕಳೆದ ಉಪಚುನಾವಣೆ ಹಾಗೂ ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೀರಿ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್

ನಾವ್ ಎಲ್ಲಿಂದಲೋ ಕರೆದುಕೊಂಡು ಬರುತ್ತೀವಿ. ಅದನ್ನ ನಮಗೇನ್ ಹೇಳ್ತೀರಿ ಎಂದು ಕುಟುಕಿದರು.ಒಂದೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸದ ನಿಮ್ಮ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು, ಇಲ್ಲಿಗೆ ತಂದು ನಿಲ್ಲಿಸಿದ್ರಿ. ನಿಮ್ಮಲ್ಲಿಯೇ ಅಭ್ಯರ್ಥಿ ಕೊರತೆಯಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನ ಮೂರು ಕ್ಷೇತ್ರ ಹಾಗೂ ಕಾರವಾರ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಒಲ್ಲೆ ಎನ್ನುತ್ತಿದ್ದಾರೆ. ಬಹುತೇಕ ಕಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಇದು‌ ಕಾಂಗ್ರೆಸ್ ಪರಿಸ್ಥಿತಿ ಎಂದರು.

ಗ್ರಾಜ್ಯುಯೇಟ್ ಆಗಬೇಕಿಲ್ಲ:

ಪಾರ್ಲಿಮೆಂಟ್​​​ಗೆ ಆಯ್ಕೆಯಾಗಲು ಅಭ್ಯರ್ಥಿ ಗ್ರಾಜ್ಯುಯೇಟ್ ಆಗಿರಬೇಕು ಎಂದೇನಿಲ್ಲ. ಶ್ರೀಸಾಮಾನ್ಯರ ಕಷ್ಟಗಳು ಹಾಗೂ ಅವರೊಂದಿಗೆ ಬೆರೆಯುವಂತಹ ಮನಸ್ಸು ಹಾಗೂ ರಾಜಕೀಯ ಚಾಣಾಕ್ಷತನ‌ ಇರಬೇಕು. ಇವತ್ತು ದೇಶದಲ್ಲಿ ಎಷ್ಟೋ ಮಂದಿ ಪಿಯುಸಿ, ಎಸ್​ಎಸ್ಎಲ್​ಸಿ​ ಹಾಗೂ ಅನಕ್ಷರಸ್ಥರೂ‌ ಕೂಡ ಉತ್ತಮ ರಾಜಕಾರಣಿಗಳಾಗಿದ್ದಾರೆ. ತಮಿಳುನಾಡಿನಲ್ಲಿ ಕಾಮರಾಜ ಎಂಬುವರು ಅನಕ್ಷರಸ್ಥರು. ಅವರೂ ಕೂಡ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅವರೊಬ್ಬ ಕಾಂಗ್ರೆಸ್ಸಿಗರು ಆಗಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು, ಒಂದಿಷ್ಟು ಆಂಗ್ಲ ಭಾಷೆಯಲಿ ಠುಸ್, ಬುಸ್ ಅಂತಾ ಮಾತನಾಡಿದ್ರೆ ಸಾಲದು. ಶ್ರೀಸಾಮಾನ್ಯರ ಕಷ್ಟ, ಸುಖಗಳ ಕುರಿತು ಅರಿಯಬೇಕು. ಆಗ ಮಾತ್ರ ಉತ್ತಮ ರಾಜಕಾರಣಿಯಾಗಲಿದ್ದಾರೆ ಎಂದರು. ಹೀಗಾಗಿ, ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಬಳ್ಳಾರಿ ಲೋಕಸಭಾ ಕ್ಷೇತ್ರವನ್ನ ಮಾದರಿ ಲೋಕಸಭಾ ಕ್ಷೇತ್ರದತ್ತ ಕೊಂಡೊಯ್ಯುಲಿದ್ದಾರೆಂಬ ಅಚಲವಾದ ವಿಶ್ವಾಸ ನನಗಿದೆ ಎಂದರು.

Intro:ನನ್ನಿಂದಲೇ ಕಾಂಗ್ರೇಸ್ ಎನ್ನುವ ಡಿಕೆಶಿಗೆ ಕಾಂಗ್ರೇಸ್ ನ ಶಾಸಕರು, ಸಂಸದ ಅವರ ಹೆಣ ಹೋರುವ ಸಮಯ ಬಂದಿದೆ, ಹಾಗೇ ನರೇಂದ್ರ ಮೋದಿಯ ಪಲ್ಲಕ್ಕಿ ಹೋರುವ ಪರಿಸ್ಥಿತಿ ಬಂದಿದೆ ಮತ್ತು ಡಿಕೆಶಿ ಬಹಳ ಸೋಕ್ಕು ಬಂದಿದೆ ತನ್ನಿಂದಲ್ಲೇ ಕಾಂಗ್ರೇಶ್ ಎನ್ನುವ ಮಾತಗಳನ್ನು ಹಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯ ಮಾತನಾಡಿದರು.


Body:ನಗರದ ಟಿಬಿ ಸ್ಕ್ಯಾನಿಕ್ಟೋರಿಯಂ ರಸ್ತೆಯಲ್ಲಿನ
ಟಿಎಸ್ಆರ್ ಸಭಾಂಗಣದಲ್ಲಿ ಇಂದು ಸಂಜೆ ಭಾರತೀಯ ಜನತಾ ಪಕ್ಷ ಬಳ್ಳಾರಿ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಾರ್ಯಕರ್ತರ ಸಭೆ ನಡೆಯಿತು.

ಡಿಕೆಶಿಗೆ ವ್ಯಂಗ್ಯ ಮಾಡಿದ ಜಗದೀಶ ಶೆಟ್ಟರ್;

ಡಿಕೆಶಿಗೆ ಮೈತುಂಬಿದೆ, ಕಾಂಗ್ರೇಸ್ ನಲ್ಲಿ ಹೆಣ ಹೊರುವವನ್ನು ನಾನೆ, ಪಲ್ಲಕ್ಕಿ ಹೊರುವವನು ನಾನೇ ಎನ್ನುವ ಮಾತನ್ನು ನನ್ನ ಬಿಟ್ಟು ಬೇರೆಯಾರು ಕಾಂಗ್ರೇಸ್ ನಲ್ಲಿ ಇಲ್ಲ ಎನ್ನುವ ಮಾತನ್ನು ಡಿಕೆಶಿ ಹೇಳಿದ್ದಾನೆ.

ಅದಕ್ಕೆ ಡಿಕೆಶಿ ಖಾಯಂ ಆಗಿ ಹೆಣ ಹೋರಬೇಕು ಮತ್ತೇ ಮೋದಿಯ ಪಲ್ಲಕ್ಕಿ ಹೋರಬೇಕೆಂದ ಆದು ಯಾವ್ ? ಹೆಣ, ಕಾಂಗ್ರೇಸ್ ಹೆಣ ಎಂದ ಜಗದೀಶ್ ಶೆಟ್ಟರ್.

ಕಾರ್ಯಕ್ರಮ ಉದ್ಘಾಟನಾ ಮಾಡಿ ಮಾತಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬೈ ಎಲೆಕ್ಷನ್ ನಲ್ಲಿ ಹಣ ಹಂಚಿ ಎರಡುವರೆ ಲಕ್ಷ ಅಂತರದಲ್ಲಿ ಗೆದ್ದಿರಬಹದು ಆದ್ರೇ ಮೆನ್ ಲೋಕಸಭಾ ಎಲೆಕ್ಷನ್ ಗೆಲ್ಲಲು ಸಾಧ್ಯವಿಲ್ಲ.

23ರ ಲೋಕಸಭಾ ಚುನಾವಣಾಯಲ್ಲಿ ಲೋಕಸಭಾ ಬಿಜೆಪಿಯ ಅಭ್ಯರ್ಥಿ ದೇವೆಂದ್ರಪ್ಪ ಅವರನ್ನು 1 ಲಕ್ಷ ಅಂತರದಲ್ಲಿ ಜಯಶೀಲರನ್ನಾಗಿ ಮಾಡುತ್ತೇವೆ ಎಂದರು ಶೆಟ್ಟರ್ ತಿಳಿಸಿದರು.

ಚುನಾವಣಾ ಸಮಯದಲ್ಲಿ ಮಾತ್ರ ಡಿಕೆಶಿವಕುಮಾರ್ ಬರತ್ತಾರೆ ಹಾಗೇ ಇಡಿ ಕಾಂಗ್ರೇಸ್ ಎಲ್ಲಾ ಶಾಸಕರು, ಸಂಸದರು,
ಮಾಜಿ ಮುಖ್ಯಮಂತ್ರಿ ಅನೇಕ ಬಂದು ಹೋಗಿದ್ದಾರೆ.
ಇನ್ನೂ ಇದು ಬಳ್ಳಾರಿ ನಡೆಯೊದಿಲ್ಲ ಎಂದರು.

ಮರಳಿ ಡಿಕೆಶಿ ಕನಕಪುರ, ಬೆಂಗಳೂರು, ರಾಮನಗರಕ್ಕೆ ಓಡಿ ಹೋಗಬೇಕು ಹಾಗೇ ಬಳ್ಳಾರಿ ಗ್ರಾಮಾಂತರ ಬಿಜೆಪಿಯ ಕಾರ್ಯಕರ್ತರು ಮಾಡಬೇಕೆಂದು ಹೇಳಿದರು.

ಬಿಜೆಪಿಗೆ ಸೇರಿಕೊಂಡ ಕಾಂಗ್ರೇಸ್ ಕಾರ್ಯಕರ್ತರು:

ಬಳ್ಳಾರಿ ಗ್ರಾಮೀಣ ಭಾಗದಲ್ಲಿನ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ಬಟ್ಟೆಯ ಸಾಲುಹಾಕಿ ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿಕೊಂಡರು.

ನೀತಿ ಸಂಹಿತೆ ಉಲ್ಲಂಘನೆ:

ಈ ಸಭಾಂಗಣದಕ್ಕೆ ಆಗಮಿಸುತ್ತಿದ್ದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಶಾಸಕ ಶ್ರೀರಾಮುಲು ಇನ್ನಿತರ ಬಿಜೆಪಿ ಮುಖಂಡರು ಬರುವ ಸಮಯದಲ್ಲಿ ಚುನಾವಣಾ ಅಧಿಕಾರಿಗಳ ಮುಂದೆ ಪಟಾಕಿಗಳನ್ನು ಹಚ್ಚಿದರು.

ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಲೋಕಸಭೆಯ ಬಿಜೆಪಿ ಉಸ್ತುವಾರಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಳ್ಳಾರಿ ಲೋಕಸಭಾ ಚುನಾವಣಾ ಅಭ್ಯರ್ಥಿ ವೈ.ದೇವೆಂದ್ರಪ್ಪ, ಶಾಸಕ ಶ್ರೀರಾಮುಲು, ಮಾಜಿ ಸಂಸದ ಪಕ್ಕಿರಪ್ಪ, ವಿಧಾನಪರಿಷತ್ ನ ಮಾಜಿ ಸದಸ್ಯ ಮೃತ್ಯುಂಜಯ ಜಿನಿಗಾ, ಚನ್ನಬಸವನಗೌಡ, ಗುರುಲಿಂಗನ ಗೌಡ, ಡಾ.ಮಣಿಪಾಲ್ ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು


Conclusion:ಒಟ್ಟಾರೆಯಾಗಿ ಜಗದೀಶ್ ಶೆಟ್ಟರ್ ಅವಸರದ ಕಾರ್ಯಕರ್ತರ ಸಭೆಯಿಂದ ಕೆಲವರು ಶೆಟ್ಟರ್ ಜೊತೆಗೆ ಸೆಲ್ಪಿಗೆ ಮರೆ ಹೋದರೇ ಇನ್ನು ಕೆಲ ಕಾರ್ಯಕರ್ತರು ಶ್ರೀರಾಮುಲು ಮಾತುಗಳನ್ನು ಕೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.