ETV Bharat / state

ಬಳ್ಳಾರಿ: ವಿವಿಧ ಕಾಮಗಾರಿಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಭೂಮಿಪೂಜೆ

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಇಂದು ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

author img

By

Published : Sep 18, 2020, 6:28 PM IST

ಭೂಮಿಪೂಜೆ
ಭೂಮಿಪೂಜೆ

ಬಳ್ಳಾರಿ : ನಗರದ ವಡ್ಡರಬಂಡೆಯ ಬಳಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 40 ಲಕ್ಷ ರೂ.ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕ ಸೋಮಶೇಖರ್ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.

ನಂತರ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ 36 ಲಕ್ಷ ರೂ.ವೆಚ್ಚದ ಎಸ್‌ಪಿಟಿ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ನಗರದ ಅಂದ್ರಾಳ್ ಬಳಿಯ ಹೌಸಿಂಗ್ ಬೋರ್ಡ್ ನಲ್ಲಿ 1.70 ಕೋಟಿ ರೂ.ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಿಸಿ‌ ಚಾಲನೆ ನೀಡಿದರು.

ಬುಡಾ ಅಧ್ಯಕ್ಷ‌ ದಮ್ಮೂರು ಶೇಖರ್, ಬಳ್ಳಾರಿ ‌ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ಕೆಯುಡಬ್ಲ್ಯೂಎಸ್ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಸ್.ನಿಲೀಶ್ ಭಾಷಾ, ಮುಖಂಡರಾದ ವೀರಶೇಖರ ರೆಡ್ಡಿ, ಜಿ.ಕೃಷ್ಣಾರೆಡ್ಡಿ, ಬುಡಾ ಆಯುಕ್ತ ಈರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಳ್ಳಾರಿ : ನಗರದ ವಡ್ಡರಬಂಡೆಯ ಬಳಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 40 ಲಕ್ಷ ರೂ.ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕ ಸೋಮಶೇಖರ್ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.

ನಂತರ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ 36 ಲಕ್ಷ ರೂ.ವೆಚ್ಚದ ಎಸ್‌ಪಿಟಿ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ನಗರದ ಅಂದ್ರಾಳ್ ಬಳಿಯ ಹೌಸಿಂಗ್ ಬೋರ್ಡ್ ನಲ್ಲಿ 1.70 ಕೋಟಿ ರೂ.ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಿಸಿ‌ ಚಾಲನೆ ನೀಡಿದರು.

ಬುಡಾ ಅಧ್ಯಕ್ಷ‌ ದಮ್ಮೂರು ಶೇಖರ್, ಬಳ್ಳಾರಿ ‌ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ಕೆಯುಡಬ್ಲ್ಯೂಎಸ್ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಸ್.ನಿಲೀಶ್ ಭಾಷಾ, ಮುಖಂಡರಾದ ವೀರಶೇಖರ ರೆಡ್ಡಿ, ಜಿ.ಕೃಷ್ಣಾರೆಡ್ಡಿ, ಬುಡಾ ಆಯುಕ್ತ ಈರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.