ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅಗ್ರಿ ವಾರ್ ರೂಮ್ ಆರಂಭಿಸಿದೆ.
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿರುವ ಕಾರಣ ರೈತರು ರೈತ ಕೇಂದ್ರಗಳಿಗೆ ತೆರಳಿ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೃಷಿ ಚಟುವಟಿಕೆಗಳ ಮಾಹಿತಿ ಕೊರತೆ ನೀಗಿಸಲು ಅಗ್ರಿ ವಾರ್ ರೂಮ್ ಪ್ರಾರಂಭಿಸಲಾಗಿದೆ. ರೈತರು ಟೋಲ್ ಫ್ರೀ ಸಂಖ್ಯೆ 1800- 4250470ಕ್ಕೆ ಕರೆ ಮಾಡಿ ಕೃಷಿ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದಲ್ಲದೆ ಕೃಷಿ ಮತ್ತು ಕೃಷಿ ಸಂಬಂಧಿತ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೊಯ್ಲೋತ್ತರ ಸಂಸ್ಕರಣೆ, ಅಣಬೆ ಬೇಸಾಯ ಇತ್ಯಾದಿ ವಿಷಯಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆಯಲು ಕೇಂದ್ರದ ವಿಜ್ಞಾನಿಗಳನ್ನು ನೇರವಾಗಿ ಸಂಪರ್ಕಿಸಬಹುದೆಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಕೆ.ರಮೇಶ್ ತಿಳಿಸಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈತರು ಸಂಪರ್ಕಿಸಬೇಕಾದ ಕೃಷಿ ವಿಜ್ಞಾನ ಕೇಂದ್ರದ ವಿವಿಧ ವಿಷಯ ತಜ್ಞರ ದೂರವಾಣಿ ಸಂಖ್ಯೆಗಳು ಈ ರೀತಿ ಇವೆ.
ಡಾ. ಬಿ.ಕೆ.ರಮೇಶ್, ಪಶು ವಿಜ್ಞಾನ – 94806 -96317
ಡಾ. ಆರ್.ಪಿ.ಜಯಪ್ರಕಾಶ ನಾರಾಯಣ, ತೋಟಗಾರಿಕೆ– 80735 -37388
ಡಾ. ಎಂ.ಆರ್.ಗೋವಿಂದಪ್ಪ, ಸಸ್ಯರೋಗ ಶಾಸ್ತ್ರ- 97424- 46509
ಡಾ. ಎಸ್.ರವಿ, ಮಣ್ಣು ವಿಜ್ಞಾನ – 94489-96717
ಡಾ. ವಿ.ಆನಂದಕುಮಾರ್, ಕೀಟ ಶಾಸ್ತ್ರ– 96206 88996
ಡಾ. ಹೆಚ್.ಶಿಲ್ಪಾ, ಗೃಹ ವಿಜ್ಞಾನ– 83100 -79671
ಜಗದೀಶ ನಾಯ್ಕ, ಹವಾಮಾನ ತಜ್ಞ– 77603 -37407