ETV Bharat / state

'ಗರೀಬಿ ಹಟಾವೋ'ದಿಂದ ಕಾಂಗ್ರೆಸ್​ನವರ ಬಡತನ ನಿವಾರಣೆಯಾಗಿದೆ: ಸಚಿವೆ ಶಶಿಕಲಾ ಜೊಲ್ಲೆ

author img

By

Published : Jan 13, 2021, 7:55 PM IST

ಇತಿಹಾಸವನ್ನು ನೋಡಿದಾಗ ಕಾಂಗ್ರೆಸ್​ ಆಳ್ವಿಕೆಯಲ್ಲಿ ಜನರ ಬಡತನ ನಿವಾರಣೆಯಾಗಿಲ್ಲ. 'ಗರೀಬಿ ಹಟಾವೋ'ದಿಂದ ಕಾಂಗ್ರೆಸ್​​ವರ ಬಡತನ ನಿವಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೊಸಪೇಟೆಯಲ್ಲಿ ಹೇಳಿಕೆ ನೀಡಿದ್ದಾರೆ.

minister shashikala said garibi hatavo removes congress poverty
ಹೊಸಪೇಟೆ

ಹೊಸಪೇಟೆ: ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಇತಿಹಾಸವನ್ನು ನೋಡಿದಾಗ ಜನರ ಬಡತನ ನಿವಾರಣೆಯಾಗಿಲ್ಲ.‌ ಕಾಂಗ್ರೆಸ್​​ನವರ ಬಡತನ 'ಗರೀಬಿ ಹಟಾವೋ'ದಿಂದ ನಿವಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಜನಸೇವಕ ಕಾರ್ಯಕ್ರಮ

ನಗರದ ಖಾಸಗಿ ಹೋಟೆಲ್​‌ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಮಾತನಾಡಿ, ಕಾಂಗ್ರೆಸ್​ನವರಿಗೆ ಜನ ಬೆಂಬಲ ಕಡಿಮೆಯಾಗಿದೆ. 40 ವರ್ಷದಿಂದ ಕಾಂಗ್ರೆಸ್ ಲೂಟಿ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳು ಜನರ ಸೇವೆ ಮಾಡುತ್ತಿದ್ದಾರೆ ಎಂದ್ರು.

ಕಾಂಗ್ರೆಸ್​​ನವರಿಗೆ ನಾಚಿಗೆಯಾಗಬೇಕು. ಗೋ ಹತ್ಯೆ‌ ಕುರಿತು ಸಂವಿಧಾನದಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಗಾಂಧೀಜಿ ಅವರು ಸಹ ಹೇಳಿದ್ದಾರೆ‌. ಗಾಂಧೀಜಿ ಯಾರು.. ಕಾಂಗ್ರೆಸ್​ನವರು. ಅವರು ಸಹ ಗೋ ಹತ್ಯೆ ನಿಷೇಧ ಕಾಯ್ದೆ ಆಗಬೇಕು ಎಂದು ಹೇಳಿದ್ದರು. ‌ಈಗ ಕಾಂಗ್ರೆಸ್​​ನವರು ಗೋ ರಾಜಕಾರಣ ಮಾಡುತ್ತಿದ್ದಾರೆ. ನಾವು ಒಂದು ಆಕಳನ್ನು ಕೊಲ್ಲಲು ಬಿಡುವುದಿಲ್ಲ ಎಂದರು.‌

ಇದೇ ಸಂದರ್ಭ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜ ಯಗಳಿಸಿದ ಸುಧಾ ಜೋಗತಿ ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ಸನ್ಮಾನಿಸಿದರು.‌ ಇದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೂವಿನ ಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿಡಿನೂ ಇಲ್ಲ, ಪಾಡಿನೂ ಇಲ್ಲ.. ಯತ್ನಾಳ್ ಸುಮ್ನೆ ಹೇಳ್ತಾರೆ ಅಷ್ಟೇ ಎಂದ ಈಶ್ವರಪ್ಪ

ಹೊಸಪೇಟೆ: ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಇತಿಹಾಸವನ್ನು ನೋಡಿದಾಗ ಜನರ ಬಡತನ ನಿವಾರಣೆಯಾಗಿಲ್ಲ.‌ ಕಾಂಗ್ರೆಸ್​​ನವರ ಬಡತನ 'ಗರೀಬಿ ಹಟಾವೋ'ದಿಂದ ನಿವಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಜನಸೇವಕ ಕಾರ್ಯಕ್ರಮ

ನಗರದ ಖಾಸಗಿ ಹೋಟೆಲ್​‌ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಮಾತನಾಡಿ, ಕಾಂಗ್ರೆಸ್​ನವರಿಗೆ ಜನ ಬೆಂಬಲ ಕಡಿಮೆಯಾಗಿದೆ. 40 ವರ್ಷದಿಂದ ಕಾಂಗ್ರೆಸ್ ಲೂಟಿ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳು ಜನರ ಸೇವೆ ಮಾಡುತ್ತಿದ್ದಾರೆ ಎಂದ್ರು.

ಕಾಂಗ್ರೆಸ್​​ನವರಿಗೆ ನಾಚಿಗೆಯಾಗಬೇಕು. ಗೋ ಹತ್ಯೆ‌ ಕುರಿತು ಸಂವಿಧಾನದಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಗಾಂಧೀಜಿ ಅವರು ಸಹ ಹೇಳಿದ್ದಾರೆ‌. ಗಾಂಧೀಜಿ ಯಾರು.. ಕಾಂಗ್ರೆಸ್​ನವರು. ಅವರು ಸಹ ಗೋ ಹತ್ಯೆ ನಿಷೇಧ ಕಾಯ್ದೆ ಆಗಬೇಕು ಎಂದು ಹೇಳಿದ್ದರು. ‌ಈಗ ಕಾಂಗ್ರೆಸ್​​ನವರು ಗೋ ರಾಜಕಾರಣ ಮಾಡುತ್ತಿದ್ದಾರೆ. ನಾವು ಒಂದು ಆಕಳನ್ನು ಕೊಲ್ಲಲು ಬಿಡುವುದಿಲ್ಲ ಎಂದರು.‌

ಇದೇ ಸಂದರ್ಭ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜ ಯಗಳಿಸಿದ ಸುಧಾ ಜೋಗತಿ ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ಸನ್ಮಾನಿಸಿದರು.‌ ಇದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೂವಿನ ಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿಡಿನೂ ಇಲ್ಲ, ಪಾಡಿನೂ ಇಲ್ಲ.. ಯತ್ನಾಳ್ ಸುಮ್ನೆ ಹೇಳ್ತಾರೆ ಅಷ್ಟೇ ಎಂದ ಈಶ್ವರಪ್ಪ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.