ETV Bharat / state

ಗಣಿನಗರಿಯಲ್ಲಿ ಗಗನಕ್ಕೇರಿ ಭೂಮಿ ಬೆಲೆ: ಮಧ್ಯಮ ವರ್ಗದವರಿಗೆ ನೆರವಾದ ಗೃಹ ಮಂಡಳಿ ಪ್ರಾಪರ್ಟಿ ಎಕ್ಸ್ ಪೋ

author img

By

Published : Sep 5, 2019, 8:06 PM IST

ಜಿಲ್ಲೆಯಲ್ಲಿ ಕರ್ನಾಟಕ ಗೃಹ ಮಂಡಳಿಯ ಖಾಲಿಯಿರುವ ನಿವೇಶನಗಳಲ್ಲಿ ವಸತಿ ಬಡಾವಣೆ ನಿರ್ಮಿಸುವ‌ ಮೂಲಕ ಅತ್ಯಂತ ಅಗ್ಗದ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಿತರಿಸಲು ಮುಂದಾಗಿದೆ.

ಗಣಿನಗರಿಯಲ್ಲಿ ಭೂಮಿ ಬೆಲೆ ದುಬಾರಿ: ಮಧ್ಯಮ ವರ್ಗದವರಿಗೆ ನೆರವಾದ ಕರ್ನಾಟಕ ಗೃಹ ಮಂಡಳಿ ಪ್ರಾಪರ್ಟಿ ಎಕ್ಸ್ ಪೋ

ಬಳ್ಳಾರಿ: ರಾಜಧಾನಿ ಬೆಂಗಳೂರು ನಂತರ ಬಳ್ಳಾರಿಯಲ್ಲಿ ಭೂಮಿಗೆ ಬಹುಬೇಡಿಕೆಯಿದೆ. ಅದರಿಂದ ಬಡ ಹಾಗೂ ಮಧ್ಯಮವರ್ಗದವರಿಗೆ ಇಲ್ಲಿ ಭೂಮಿಕೊಳ್ಳುವುದು ಕನಸಿನ ಮಾತಾಗಿತ್ತು. ಆದರೆ, ಈ ದುಬಾರಿ ಬೆಲೆಯನ್ನು ಹೋಗಲಾಡಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ.

ಗಣಿನಗರಿಯಲ್ಲಿ ಭೂಮಿ ಬೆಲೆ ದುಬಾರಿ: ಮಧ್ಯಮ ವರ್ಗದವರಿಗೆ ನೆರವಾದ ಕರ್ನಾಟಕ ಗೃಹ ಮಂಡಳಿ ಪ್ರಾಪರ್ಟಿ ಎಕ್ಸ್ ಪೋ

ಹೌದು, ಕರ್ನಾಟಕ ಗೃಹ ಮಂಡಳಿಯ ಖಾಲಿಯಿರುವ ನಿವೇಶನಗಳಲ್ಲಿ ವಸತಿ ಬಡಾವಣೆ ನಿರ್ಮಿಸುವ‌ ಮುಖೇನ ಅತ್ಯಂತ ಅಗ್ಗದ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಿತರಿಸಲು ಮುಂದಾಗಿರೋದು ವಿಶೇಷವೇ ಸರಿ. ಅದರಲ್ಲೂ ಗಣಿನಗರಿಯಲ್ಲಿ ನಿವೇಶನ ಖರೀದಿಸಬೇಕೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ನೆಲೆಸಿರುವ ಮಧ್ಯಮ ಹಾಗೂ ಬಡ ವರ್ಗದವರಿಗೆ ನಿವೇಶನ ಖರೀದಿಸಬೇಕು ಎಂದ್ರೆ ಆಕಾಶವೇ ಮೇಲೆ ಬಿದ್ದಂತೆ ಭಾಸವಾಗುತ್ತದೆ. ಅಂಥವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವಲ್ಲಿ ಕರ್ನಾಟಕ ಗೃಹ ಮಂಡಳಿ ಯಶಸ್ವಿಯಾಗಿದೆ.

ಸೆಪ್ಟೆಂಬರ್ 4 ಮತ್ತು 5 ರಂದು ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿರುವ ಕರ್ನಾಟಕ ಗೃಹ‌ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಧ್ಯಮ ಹಾಗೂ ಬಡ ವರ್ಗದವರ ಕನಸಿನ ಮನೆ ಅಥವಾ ನಿವೇಶನ ಕಲ್ಪಿಸಿಕೊಡುವ ಕಾರ್ಯದಲ್ಲಿ ತೊಡಗಿಕೊಂಡಿರೋದು ವಿಶೇಷ ಎನಿಸಿತ್ತು.

ಬಳ್ಳಾರಿ ನಗರ ಹೊರವರ್ತುಲದ ಗೋನಾಳು ರಸ್ತೆಯ ಅಂದ್ರಾಳ್ ಬೈಪಾಸ್ ಹಾಗೂ ಬೆಂಗಳೂರು - ಹೊಸಪೇಟೆ ರಸ್ತೆಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕರ್ನಾಟಕ ಗೃಹ ಮಂಡಳಿ ಸುಸಜ್ಜಿತ ಕಾಂಪೌಂಡ್ ಹಾಗೂ ಬಡಾವಣೆಗಳನ್ನು ನಿರ್ಮಿಸಿದ್ದು, ಈ ಎರಡು ದಿನಗಳ ಕಾಲ ನಡೆದ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಂದಿ ನಿವೇಶನ, ಮನೆಗಳ ಖರೀದಿಯಲ್ಲಿ ತೊಡಗಿದ್ದಾರೆ.

ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದೆ. ಮುಂಗಡವಾಗಿ ಕರ್ನಾಟಕ ಗೃಹ ಮಂಡಳಿ ಆಯುಕ್ತರ ಹೆಸರಿನಡಿ ಅಂದಾಜು ₹50,000 ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಲ್ಲಿಸಿ, ತಮಗಿಷ್ಟವಾದ ನಿವೇಶನ ಅಥವಾ ಮನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದಲ್ಲದೇ, ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಅಂದಾಜು 3 ಎಕರೆಯಲ್ಲಿ 60* 40 ಅನುಪಾತದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ.‌ ಅಲ್ಲೀಪುರ ಬಳಿಯ ಬಿಐಟಿಎಂ ಕಾಲೇಜು ಎದುರುಗಡೆ ಅಂದಾಜು 132 ಎಕರೆಯಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಈಗಾಗಲೇ 1608 ಅರ್ಜಿದಾರರು ಮುಂಗಡ ಹಣ ಪಾವತಿಸಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಉಭಯ ವಸತಿ ಬಡಾವಣೆಗಳಲ್ಲಿನ ನಿವೇಶನ ಅಥವಾ ಮನೆಗಳನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಈ ರೀತಿಯ ಎಕ್ಸ್ ಪೋ ಮೇಳವನ್ನು ಆಯೋಜಿಸುವ ಮುಖೇನ ಹಂಚಿಕೆ ಮಾಡಲಾಗುವುದು ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ತಿಳಿಸಿದ್ದಾರೆ.

ಬಳ್ಳಾರಿ: ರಾಜಧಾನಿ ಬೆಂಗಳೂರು ನಂತರ ಬಳ್ಳಾರಿಯಲ್ಲಿ ಭೂಮಿಗೆ ಬಹುಬೇಡಿಕೆಯಿದೆ. ಅದರಿಂದ ಬಡ ಹಾಗೂ ಮಧ್ಯಮವರ್ಗದವರಿಗೆ ಇಲ್ಲಿ ಭೂಮಿಕೊಳ್ಳುವುದು ಕನಸಿನ ಮಾತಾಗಿತ್ತು. ಆದರೆ, ಈ ದುಬಾರಿ ಬೆಲೆಯನ್ನು ಹೋಗಲಾಡಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ.

ಗಣಿನಗರಿಯಲ್ಲಿ ಭೂಮಿ ಬೆಲೆ ದುಬಾರಿ: ಮಧ್ಯಮ ವರ್ಗದವರಿಗೆ ನೆರವಾದ ಕರ್ನಾಟಕ ಗೃಹ ಮಂಡಳಿ ಪ್ರಾಪರ್ಟಿ ಎಕ್ಸ್ ಪೋ

ಹೌದು, ಕರ್ನಾಟಕ ಗೃಹ ಮಂಡಳಿಯ ಖಾಲಿಯಿರುವ ನಿವೇಶನಗಳಲ್ಲಿ ವಸತಿ ಬಡಾವಣೆ ನಿರ್ಮಿಸುವ‌ ಮುಖೇನ ಅತ್ಯಂತ ಅಗ್ಗದ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಿತರಿಸಲು ಮುಂದಾಗಿರೋದು ವಿಶೇಷವೇ ಸರಿ. ಅದರಲ್ಲೂ ಗಣಿನಗರಿಯಲ್ಲಿ ನಿವೇಶನ ಖರೀದಿಸಬೇಕೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ನೆಲೆಸಿರುವ ಮಧ್ಯಮ ಹಾಗೂ ಬಡ ವರ್ಗದವರಿಗೆ ನಿವೇಶನ ಖರೀದಿಸಬೇಕು ಎಂದ್ರೆ ಆಕಾಶವೇ ಮೇಲೆ ಬಿದ್ದಂತೆ ಭಾಸವಾಗುತ್ತದೆ. ಅಂಥವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವಲ್ಲಿ ಕರ್ನಾಟಕ ಗೃಹ ಮಂಡಳಿ ಯಶಸ್ವಿಯಾಗಿದೆ.

ಸೆಪ್ಟೆಂಬರ್ 4 ಮತ್ತು 5 ರಂದು ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿರುವ ಕರ್ನಾಟಕ ಗೃಹ‌ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಧ್ಯಮ ಹಾಗೂ ಬಡ ವರ್ಗದವರ ಕನಸಿನ ಮನೆ ಅಥವಾ ನಿವೇಶನ ಕಲ್ಪಿಸಿಕೊಡುವ ಕಾರ್ಯದಲ್ಲಿ ತೊಡಗಿಕೊಂಡಿರೋದು ವಿಶೇಷ ಎನಿಸಿತ್ತು.

ಬಳ್ಳಾರಿ ನಗರ ಹೊರವರ್ತುಲದ ಗೋನಾಳು ರಸ್ತೆಯ ಅಂದ್ರಾಳ್ ಬೈಪಾಸ್ ಹಾಗೂ ಬೆಂಗಳೂರು - ಹೊಸಪೇಟೆ ರಸ್ತೆಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕರ್ನಾಟಕ ಗೃಹ ಮಂಡಳಿ ಸುಸಜ್ಜಿತ ಕಾಂಪೌಂಡ್ ಹಾಗೂ ಬಡಾವಣೆಗಳನ್ನು ನಿರ್ಮಿಸಿದ್ದು, ಈ ಎರಡು ದಿನಗಳ ಕಾಲ ನಡೆದ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಂದಿ ನಿವೇಶನ, ಮನೆಗಳ ಖರೀದಿಯಲ್ಲಿ ತೊಡಗಿದ್ದಾರೆ.

ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದೆ. ಮುಂಗಡವಾಗಿ ಕರ್ನಾಟಕ ಗೃಹ ಮಂಡಳಿ ಆಯುಕ್ತರ ಹೆಸರಿನಡಿ ಅಂದಾಜು ₹50,000 ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಲ್ಲಿಸಿ, ತಮಗಿಷ್ಟವಾದ ನಿವೇಶನ ಅಥವಾ ಮನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದಲ್ಲದೇ, ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಅಂದಾಜು 3 ಎಕರೆಯಲ್ಲಿ 60* 40 ಅನುಪಾತದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ.‌ ಅಲ್ಲೀಪುರ ಬಳಿಯ ಬಿಐಟಿಎಂ ಕಾಲೇಜು ಎದುರುಗಡೆ ಅಂದಾಜು 132 ಎಕರೆಯಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಈಗಾಗಲೇ 1608 ಅರ್ಜಿದಾರರು ಮುಂಗಡ ಹಣ ಪಾವತಿಸಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಉಭಯ ವಸತಿ ಬಡಾವಣೆಗಳಲ್ಲಿನ ನಿವೇಶನ ಅಥವಾ ಮನೆಗಳನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಈ ರೀತಿಯ ಎಕ್ಸ್ ಪೋ ಮೇಳವನ್ನು ಆಯೋಜಿಸುವ ಮುಖೇನ ಹಂಚಿಕೆ ಮಾಡಲಾಗುವುದು ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ತಿಳಿಸಿದ್ದಾರೆ.

Intro:ಗಣಿನಗರಿಯಲಿ ಭೂಮಿ ಬೆಲೆ ದುಬಾರಿ
ಮಧ್ಯಮವರ್ಗದವರಿಗೆ ನೆರವಾದ ಕರ್ನಾಟಕ ಗೃಹ ಮಂಡಳಿ ಪ್ರಾಪರ್ಟಿ ಎಕ್ಸ್ ಪೋ
ಬಳ್ಳಾರಿ: ರಾಜಧಾನಿ ಬೆಂಗಳೂರು ನಂತ್ರ ಬಳ್ಳಾರಿಯ ಭೂಮಿಗೆ ಬಹುಬೇಡಿಕೆಯಿದೆ. ಅದರಿಂದ ಬಡ ಹಾಗೂ ಮಧ್ಯಮವರ್ಗದ ವರಿಗೆ ಭೂಮಿ ಬೆಲೆ ಬಹುದುಬಾರಿಯಾಗಿದೆ. ಅದನ್ನು ದುಬಾರಿ ಬೆಲೆಯನ್ನು ಹೋಗಲಾಡಿಸಲು ಕರ್ನಾಟಕ ಗೃಹ ಮಂಡಳಿಯು ಮುಂದಾಗಿದೆ.
ಕರ್ನಾಟಕ ಗೃಹ ಮಂಡಳಿಯ ಖಾಲಿಯಿರುವ ನಿವೇಶನಗಳಲ್ಲಿ ವಸತಿ ಬಡಾವಣೆ ನಿರ್ಮಿಸುವ‌ ಮುಖೇನ ಅತ್ಯಂತ ಅಗ್ಗದ ದರ ದಲ್ಲಿ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಿತರಿಸಲು ಮುಂದಾಗಿರೋದು ವಿಶೇಷವೇ ಸರಿ.
ಅದರಲ್ಲೂ ಗಣಿನಗರಿಯಲ್ಲಿ ನಿವೇಶನ ಖರೀದಿಸಬೇಕೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ನೆಲೆಸಿರುವ ಮಧ್ಯಮ ಹಾಗೂ ಬಡ ವರ್ಗದವರಿಗೆ ನಿವೇಶನ ಖರೀದಿಸಬೇಕೆಂದ್ರೆ ಆಕಾಶವೇ ಮೇಲೆ ಬಿದ್ದಂತೆ ಭಾಸವಾಗುತ್ತದೆ. ಅಂಥವರಿಗೆ
ಸೂಕ್ತ ವೇದಿಕೆ ಕಲ್ಪಿಸಿಕೊಡುವಲ್ಲಿ ಕರ್ನಾಟಕ ಗೃಹ ಮಂಡಳಿ ಯಶಸ್ವಿಯಾಗಿದೆ.
ಸೆಪ್ಟೆಂಬರ್ 4 ಮತ್ತು 5 ರಂದು ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿರುವ ಕರ್ನಾಟಕ ಗೃಹ‌ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಧ್ಯಮ ಹಾಗೂ ಬಡ ವರ್ಗದವರ ಕನಸಿನ ಮನೆ ಅಥವಾ ನಿವೇಶನ ಕಲ್ಪಿಸಿಕೊಡುವ ಕಾರ್ಯದಲ್ಲಿ ತೊಡಗಿಕೊಂಡಿರೋದು ವಿಶೇಷ ಎನಿಸಿತ್ತು.
ಬಳ್ಳಾರಿ ನಗರ ಹೊರವರ್ತುಲದ ಗೋನಾಳು ರಸ್ತೆಯ ಅಂದ್ರಾಳ್ ಬೈಪಾಸ್ ಹಾಗೂ ಬೆಂಗಳೂರು- ಹೊಸಪೇಟೆ ರಸ್ತೆಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕರ್ನಾಟಕ ಗೃಹ ಮಂಡಳಿ ಸುಸಜ್ಜಿತ ಕಂಪೌಂಡ್ ಹಾಗೂ ಬಡಾವಣೆಗಳನ್ನು ನಿರ್ಮಿಸಿದ್ದು, ಈ ಎರಡು ದಿನಗಳಕಾಲ ನಡೆದ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಂದಿ ನಿವೇಶನ, ಮನೆಗಳ ಖರೀದಿಯಲ್ಲಿ ತೊಡಗಿದ್ದಾರೆ.
ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದೆ. ಮುಂಗಡವಾಗಿ ಕರ್ನಾಟಕ ಗೃಹ ಮಂಡಳಿ ಆಯುಕ್ತರ ಹೆಸರಿನಡಿ ಅಂದಾಜು 50, 000 ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಲ್ಲಿಸಿ, ತಮಗಿಷ್ಟವಾದ ನಿವೇಶನ ಅಥವಾ ಮನೆ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.
ಪ್ರಾಪರ್ಟಿ ಎಕ್ಸ್ ಪೋದಲ್ಲಿ ಮೊದಲನೇಯ ದಿನ ಅಂದಾಜು 250 ಕ್ಕೂ ಅಧಿಕಮಂದಿ ಪಾಲ್ಗೊಂಡು ತಮಗಿಷ್ಟವಾದ ನಿವೇಶನ ಹಾಗೂ ಮನೆಗಳನ್ನು ಖರೀದಿಸಿದ್ದಾರೆ ಎಂದು ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ತಿಳಿಸಿದ್ದಾರೆ.
ಗೋನಾಳು ರಸ್ತೆಯಲ್ಲಿರುವ ಅಂದ್ರಾಳು ಬೈಪಾಸ್ ಎರಡು ವಸತಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಅಂದಾಜು 38 ಎಕರೆಯಲ್ಲಿ 508 ಸ್ವತ್ತುಗಳ ಪೈಕಿ 2017 ರಲ್ಲಿ 25 ಮನೆಗಳು ನಿರ್ಮಿಸಲಾಗಿದೆ. ನಿನ್ನೆಯ ದಿನ ನಡೆದ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ 18 ಮನೆ ಗಳು, 16 ನಿವೇಶನಗಳನ್ನು ಸಾರ್ವಜನಿಕರು ಖರೀದಿಸಿದ್ದಾರೆ.
ಬೆಂಗಳೂರು- ಹೊಸಪೇಟೆ ಹೊರವರ್ತುಲ ರಸ್ತೆ ಅಂದಾಜು 110 ಎಕರೆಯಲ್ಲಿ ವಸತಿ ಬಡಾವಣೆ‌ ನಿರ್ಮಿಸಲಾಗಿದೆ. 2017ರ ಮಾರ್ಚ್ ನಲ್ಲಿ ಕೆಲವನ್ನು ಹಂಚಿಕೆ ಮಾಡಿದೆ.
Body:350 ನಿವೇಶನಗಳು ಹಾಗೂ 40 ಮನೆಗಳು ಖಾಲಿಯಿದ್ದು, ಈ ಎರಡು ದಿನಗಳ ಕಾಲ ನಡೆದ ಎಕ್ಸ್ ಪೋದಲ್ಲಿ ಸುಮಾರು 126 ನಿವೇಶನ ಹಾಗೂ 6 ಮನೆ ಗಳ ಹಂಚಿಕೆ ಪ್ರಕ್ರಿಯೆ ನಡೆದಿದೆ.
ಇದಲ್ಲದೇ, ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಅಂದಾಜು 3 ಎಕರೆಯಲ್ಲಿ 60* 40 ಅನುಪಾತದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ.‌ ಅಲ್ಲೀಪುರ ಬಳಿಯ ಬಿಐಟಿಎಂ ಕಾಲೇಜು ಎದುರುಗಡೆ ಅಂದಾಜು 132 ಎಕರೆಯಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಈಗಾಗಲೇ 1608 ಅರ್ಜಿದಾರರು ಮುಂಗಡ ಹಣ ಪಾವತಿಸಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಉಭಯ ವಸತಿ ಬಡಾವಣೆಗಳಲ್ಲಿನ ನಿವೇಶನ ಅಥವಾ ಮನೆ ಗಳನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಈ ರೀತಿಯ ಎಕ್ಸ್ ಪೋ ಮೇಳವನ್ನು ಆಯೋಜಿಸುವ ಮುಖೇನ ಹಂಚಿಕೆ ಮಾಡಲಾಗುವುದೆಂದರು ಶಿವಶಂಕರ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_2_PROPERTY_EXPO_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.