ETV Bharat / state

ಬಳ್ಳಾರಿಯಲ್ಲಿ ಗರಿಗೆದರಿದ ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆ : ಮೂರು ಬಣಗಳಲ್ಲಿ‌‌‌‌ ತೀವ್ರ ಪೈಪೋಟಿ!

author img

By

Published : Jul 4, 2019, 9:03 PM IST

Updated : Jul 4, 2019, 10:12 PM IST

ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾ‌ನಕ್ಕೆ ತೀವ್ರ ಪೈಪೋಟಿ ಎದುರಾಗಿದ್ದು, ಒಂದು ರೀತಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ .

ರಾಜ್ಯ ಸರ್ಕಾರಿ ನೌಕರರ ಸಂಘ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜುಲೈ 13ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾ‌ನಕ್ಕೆ ಎಲೆಕ್ಷನ್​ ನಡೆಯಲಿದೆ. ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿಂದು ಚುನಾವಣಾಧಿಕಾರಿ ರಾಜಾರೆಡ್ಡಿಯವರಿಗೆ ಎರಡು ಬಣದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.

ಬಳ್ಳಾರಿಯಲ್ಲಿ ಗರಿಗೆದರಿದ ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆ

ಕಳೆದ ಜೂನ್ 13 ರಂದು‌ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು‌ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಇಲಾಖೆಗಳ 62 ಸದಸ್ಯರು ಹಾಗೂ ಆಯಾ ತಾಲೂಕು ಘಟಕದ ಅಂದಾಜು ಹತ್ತು ಮಂದಿ ಅಧ್ಯಕ್ಷರು, ಈ ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್​ನ ಸದಸ್ಯ ಸ್ಥಾನಕ್ಕೆ ಚುನಾವಣೆ ಮುಖೇನ ಆಯ್ಕೆ ಮಾಡುತ್ತಾರೆ. ಮಾಜಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಮಾಜಿ ಸದಸ್ಯ ಡಾ. ರಾಜಶೇಖರ ಗಾಣಿಗೇರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ ಬಣದಿಂದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ರಾಜಕೀಯ ಪಕ್ಷಗಳ ಚುನಾವಣೆಗಿಂತಲೂ ಕಮ್ಮಿಯೇನಿಲ್ಲ:

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯು ರಾಜಕೀಯ ಪಕ್ಷಗಳ ಚುನಾವಣೆಗಿಂತಲೂ ಕಮ್ಮಿಯೇನಿಲ್ಲ. ‌ಬಣ ರಾಜಕಾರಣ ನೌಕರರಲ್ಲೂ‌ ಶುರುವಾಗಿದೆ. ಕಳೆದ ಬಾರಿ ಎರಡು ಬಣಗಳಿದ್ದ ನೌಕರರ ಸಂಘ ಈಗ ಮೂರು‌ ಬಣಗಳಾಗಿವೆ. ಜಾತಿ ಲೆಕ್ಕಾಚಾರ, ಆಮಿಷಗಳಿಗೇನು ಕಮ್ಮಿಯಿಲ್ಲ. ಹಳೆ ಪಿಂಚಣಿ ಸೌಲಭ್ಯ, ಎಚ್​ಆರ್​ಎ ಸೌಲಭ್ಯ ಸೇರಿದಂತೆ ನೌಕರರ ಹಿತಾಸಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ಕಾರ್ಯ ಕೈಗೊಳ್ಳಬೇಕೆಂದು‌ ಮೂರು ಬಣಗಳ ಇರಾದೆ ಆಗಿದೆ. ಈ ದಿನ ನಾಮಪತ್ರ ಸಲ್ಲಿಕೆ ಮಾಡಿರುವ ಮಲ್ಲೇಶಪ್ಪ ಬಣದ ಶಿವಾಜಿರಾವ್, ಸಿ.ನಿಂಗಪ್ಪ ಇದೇ ಧಾಟಿಯಲ್ಲಿ ಹೇಳುತ್ತಿದ್ದಾರೆ. ಡಾ.ರಾಜಶೇಖರ ಗಾಣಿಗೇರ ಅವರೂ ಕೂಡ ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ.

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜುಲೈ 13ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾ‌ನಕ್ಕೆ ಎಲೆಕ್ಷನ್​ ನಡೆಯಲಿದೆ. ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿಂದು ಚುನಾವಣಾಧಿಕಾರಿ ರಾಜಾರೆಡ್ಡಿಯವರಿಗೆ ಎರಡು ಬಣದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.

ಬಳ್ಳಾರಿಯಲ್ಲಿ ಗರಿಗೆದರಿದ ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆ

ಕಳೆದ ಜೂನ್ 13 ರಂದು‌ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು‌ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಇಲಾಖೆಗಳ 62 ಸದಸ್ಯರು ಹಾಗೂ ಆಯಾ ತಾಲೂಕು ಘಟಕದ ಅಂದಾಜು ಹತ್ತು ಮಂದಿ ಅಧ್ಯಕ್ಷರು, ಈ ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್​ನ ಸದಸ್ಯ ಸ್ಥಾನಕ್ಕೆ ಚುನಾವಣೆ ಮುಖೇನ ಆಯ್ಕೆ ಮಾಡುತ್ತಾರೆ. ಮಾಜಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಮಾಜಿ ಸದಸ್ಯ ಡಾ. ರಾಜಶೇಖರ ಗಾಣಿಗೇರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ ಬಣದಿಂದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ರಾಜಕೀಯ ಪಕ್ಷಗಳ ಚುನಾವಣೆಗಿಂತಲೂ ಕಮ್ಮಿಯೇನಿಲ್ಲ:

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯು ರಾಜಕೀಯ ಪಕ್ಷಗಳ ಚುನಾವಣೆಗಿಂತಲೂ ಕಮ್ಮಿಯೇನಿಲ್ಲ. ‌ಬಣ ರಾಜಕಾರಣ ನೌಕರರಲ್ಲೂ‌ ಶುರುವಾಗಿದೆ. ಕಳೆದ ಬಾರಿ ಎರಡು ಬಣಗಳಿದ್ದ ನೌಕರರ ಸಂಘ ಈಗ ಮೂರು‌ ಬಣಗಳಾಗಿವೆ. ಜಾತಿ ಲೆಕ್ಕಾಚಾರ, ಆಮಿಷಗಳಿಗೇನು ಕಮ್ಮಿಯಿಲ್ಲ. ಹಳೆ ಪಿಂಚಣಿ ಸೌಲಭ್ಯ, ಎಚ್​ಆರ್​ಎ ಸೌಲಭ್ಯ ಸೇರಿದಂತೆ ನೌಕರರ ಹಿತಾಸಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ಕಾರ್ಯ ಕೈಗೊಳ್ಳಬೇಕೆಂದು‌ ಮೂರು ಬಣಗಳ ಇರಾದೆ ಆಗಿದೆ. ಈ ದಿನ ನಾಮಪತ್ರ ಸಲ್ಲಿಕೆ ಮಾಡಿರುವ ಮಲ್ಲೇಶಪ್ಪ ಬಣದ ಶಿವಾಜಿರಾವ್, ಸಿ.ನಿಂಗಪ್ಪ ಇದೇ ಧಾಟಿಯಲ್ಲಿ ಹೇಳುತ್ತಿದ್ದಾರೆ. ಡಾ.ರಾಜಶೇಖರ ಗಾಣಿಗೇರ ಅವರೂ ಕೂಡ ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ.

Intro:ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆ
ಗಣಿನಾಡಿನಲ್ಲಿ ಗರಿಗೆದರಿದ ಚುನಾವಣೆ: ಮೂರು ಬಣಗಳಲ್ಲಿ‌‌‌‌ ತೀವ್ರ ಪೈಪೋಟಿ!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯು ಒಂದಿಲ್ಲೊಂದು ಸುದ್ದಿಯಲ್ಲಿರುತ್ತದೆ. ಅದರಂತೆಯೇ ಜುಲೈ 13ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾ‌ನಕ್ಕೆ ತೀವ್ರ‌ ಪೈಪೋಟಿ ನಡೆದಿದೆ.
ಈ ಚುನಾವಣೆಯು ಒಂದು ರೀತಿಯಲ್ಲೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯ ಲ್ಲಿಂದು ಚುನಾವಣಾಧಿಕಾರಿ ರಾಜಾರೆಡ್ಡಿಯವರಿಗೆ ಎರಡು ಬಣದ ಸ್ಪರ್ಧಾಳುಗಳು ತಮ್ಮ ಅಪಾರ ಸಂಖ್ಯೆಯ ನೌಕರರಿಂದ ಅಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ‌.
ಕಳೆದ ಜೂನ್ 13 ರಂದು‌ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು‌ ಚುನಾವಣೆ ಮುಖೇನ ಆಯ್ಕೆ ಮಾಡಲಾಗಿತ್ತು.
ಜಿಲ್ಲೆಯ ನಾನಾ ಇಲಾಖೆಗಳ 62 ಮಂದಿ ಸದಸ್ಯರು
ಹಾಗೂ ಆಯಾ ತಾಲೂಕು ಘಟಕದ ಅಂದಾಜು ಹತ್ತು
ಮಂದಿ ಅಧ್ಯಕ್ಷರು, ಈ ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ನ ಸದಸ್ಯ ಸ್ಥಾನಕ್ಕೆ ಚುನಾವಣೆ ಮುಖೇನ ಆಯ್ಕೆ ಮಾಡುತ್ತಾರೆ.
ಮಾಜಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಮಾಜಿ ಸದಸ್ಯ ಡಾ. ರಾಜಶೇಖರ ಗಾಣಿಗೇರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ ಬಣದಿಂದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಪರಿಷತ್ತಿನ ಸದಸ್ಯ‌ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.


Body:ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ ಬಣದಿಂದ ಶಿವಾಜಿರಾವ್ ಘೋರ್ಪಡೆ, ಮಾಜಿ‌ ಸದಸ್ಯ‌ ರಾಜಶೇಖರ ಗಾಣಿಗೇರ ಅವರ ಬಣದಿಂದ ಶ್ರೀನಿವಾಸಲು ಹಾಗೂ ನೇರವಾಗಿ ಸಿ.ನಿಂಗಪ್ಪ ಅವರು ಕಣಕ್ಕಿಳಿದಿದ್ದಾರೆ.
ರಾಜ್ಯ ಪರಿಷತ್ತಿನ ಸದಸ್ಯತ್ವ ಸದಸ್ಯತ್ವ ಸ್ಥಾನಕ್ಕೆ ಮೂರು ಬಣಗಳಿಂದ ಕಣಕ್ಕಿಳಿದಿದ್ದಾರೆ.
ರಾಜಕೀಯ ಪಕ್ಷಗಳ ಚುನಾವಣೆಗಿಂತಲೂ ಕಮ್ಮಿಯೇನಿಲ್ಲ: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯು ರಾಜಕೀಯ ಪಕ್ಷಗಳ ಚುನಾವಣೆ ಗಿಂತಲೂ ಕಮ್ಮಿಯೇನಿಲ್ಲ. ‌ಬಣ ರಾಜಕಾರಣ ನೌಕರರಲ್ಲೂ‌ ಶುರುವಾಗಿದೆ. ಕಳೆದ ಬಾರಿ ಎರಡು ಬಣಗಳಿದ್ದ ನೌಕರರ ಸಂಘ ಈಗ ಮೂರು‌ ಬಣ ಗಳಾಗಿವೆ. ಜಾತಿ ಲೆಕ್ಕಾಚಾರ, ಆಮಿಷಗಳಿಗೇನು ಇಲ್ಲಿಯೂ ಕೂಡ ಕಮ್ಮಿಯಿಲ್ಲ.
ಹಳೆ ಪಿಂಚಣಿ ಸೌಲಭ್ಯ, ಎಚ್ ಆರ್ ಎ ಸೌಲಭ್ಯ ಸೇರಿದಂತೆ ನೌಕರರ ಹಿತಾಸಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ಕಾರ್ಯ ಚಟುವಟಿಕೆ ಕೈಗೊಳ್ಳಬೇಕೆಂದು‌ ಮೂರು ಬಣಗಳ ಇರಾದೆ ಆಗಿದೆ. ಈ ದಿನ ನಾಮಪತ್ರ ಸಲ್ಲಿಕೆ ಮಾಡಿರುವ ಮಲ್ಲೇಶಪ್ಪ ಬಣದ ಶಿವಾಜಿರಾವ್, ಸಿ.ನಿಂಗಪ್ಪ ಇದೇ ಧಾಟಿಯಲ್ಲಿ ಹೇಳುತ್ತಿ ದ್ದಾರೆ. ಡಾ.ರಾಜಶೇಖರ ಗಾಣಿಗೇರ ಅವರೂ ಕೂಡ ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮುಂದೆ ಸಾಗುವತ್ತ ಮಾತ ನಾಡುತ್ತಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.



Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_GOVT_NGOS_PRESIDENT_ELECTION_7203310
Last Updated : Jul 4, 2019, 10:12 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.