ETV Bharat / state

ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ: ಜ.11 ರಂದು ನಿವೇಶನಗಳ ಬಹಿರಂಗ ಹರಾಜು

author img

By

Published : Dec 23, 2020, 3:24 PM IST

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 52 ವಾಸಯೋಗ್ಯ ಮೂಲೆ/ಬಿಡಿ ನಿವೇಶನ ಸೇರಿದಂತೆ ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು ಹಾಗೂ ಪ್ರಾಧಿಕಾರದ ಆವರಣದಲ್ಲಿರುವ ಖಾಲಿ ಜಾಗಗಳನ್ನು ಬರುವ ಜ.11 ರಂದು ಬಹಿರಂಗ ಹರಾಜು ಹಾಕಲು ಸಭೆಯಲ್ಲಿ ನಿರ್ಧರಿಸಲಾಗಿದೆ.

Bellary Urban Development Authority meeting news
ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ

ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಗರದ ಬುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

Bellary Urban Development Authority meeting news
ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 52 ವಾಸಯೋಗ್ಯ ಮೂಲೆ/ಬಿಡಿ ನಿವೇಶನ ಸೇರಿದಂತೆ ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು ಹಾಗೂ ಪ್ರಾಧಿಕಾರದ ಆವರಣದಲ್ಲಿರುವ ಖಾಲಿ ಜಾಗಗಳನ್ನು ಬರುವ ಜ.11 ರಂದು ಬಹಿರಂಗ ಹರಾಜು ಹಾಕಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಘವೇಂದ್ರ ಕಾಲೋನಿ 2ನೇ ಹಂತ-26 ವಾಸಯೋಗ್ಯ ನಿವೇಶನಗಳು, ಕನಕ ದುರ್ಗಮ್ಮ ಬಡಾವಣೆಯಲ್ಲಿ -01 ವಾಸಯೋಗ್ಯ ನಿವೇಶನ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ-07 ವಾಸಯೋಗ್ಯ ನಿವೇಶನಗಳು ಹಾಗೂ ವಾಣಿಜ್ಯ ನಿವೇಶನ - 01, ಡಾ.ಸರ್.ಎಂ.ವಿ. ಲಾರಿ ತಂಗುದಾಣ ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು-11, ಕುವೆಂಪುನಗರದಲ್ಲಿ-03 ವಾಸಯೋಗ್ಯ ನಿವೇಶನಗಳು, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿ 3 ಖಾಲಿ ಜಾಗಗಳಿವೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.

ಓದಿ: ಆನ್‌ಲೈನ್ ಮದ್ಯಪ್ರಿಯರಿಗೆ ಸರ್ಕಾರದ ಶಾಕ್: ಇನ್ಮೇಲೆ‌ ಮನೆ ಬಾಗಿಲಿಗೆ‌ ಬರಲ್ಲ ಎಣ್ಣೆ

ಬಿ‌.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ, ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸಲು ಇ - ಟೆಂಡರ್ ಪ್ರಾಕ್ಯೂಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸುವ ಕುರಿತು ಸಭೆಯಲ್ಲಿ ಅನುಮೋದಿಸಲಾಯಿತು.

bellary-urban-development-authority-meeting-news
ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ

ಪ್ರಾಧಿಕಾರದ ವ್ಯಾಪ್ತಿಯಲ್ಲಿ BOT ಮಾದರಿಯಲ್ಲಿ ನಿಯಮಾನುಸಾರ 20 ಜಾಹೀರಾತು ಫಲಕಗಳನ್ನು, ಪ್ರತಿಯೊಂದಕ್ಕೆ 10 ಲಕ್ಷ ರೂಪಾಯಿಗಳಂತೆ ನಿರ್ಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ ನಡುವಳಿಗಳಿಗೆ ಅನುಮೋದನೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ವೀರೇಂದ್ರ ಕುಂದಗೋಳ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್ ಇತರರು ಉಪಸ್ಥಿತರಿದ್ದರು.

ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಗರದ ಬುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

Bellary Urban Development Authority meeting news
ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 52 ವಾಸಯೋಗ್ಯ ಮೂಲೆ/ಬಿಡಿ ನಿವೇಶನ ಸೇರಿದಂತೆ ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು ಹಾಗೂ ಪ್ರಾಧಿಕಾರದ ಆವರಣದಲ್ಲಿರುವ ಖಾಲಿ ಜಾಗಗಳನ್ನು ಬರುವ ಜ.11 ರಂದು ಬಹಿರಂಗ ಹರಾಜು ಹಾಕಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಘವೇಂದ್ರ ಕಾಲೋನಿ 2ನೇ ಹಂತ-26 ವಾಸಯೋಗ್ಯ ನಿವೇಶನಗಳು, ಕನಕ ದುರ್ಗಮ್ಮ ಬಡಾವಣೆಯಲ್ಲಿ -01 ವಾಸಯೋಗ್ಯ ನಿವೇಶನ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ-07 ವಾಸಯೋಗ್ಯ ನಿವೇಶನಗಳು ಹಾಗೂ ವಾಣಿಜ್ಯ ನಿವೇಶನ - 01, ಡಾ.ಸರ್.ಎಂ.ವಿ. ಲಾರಿ ತಂಗುದಾಣ ವರ್ಕ್ ಶಾಪ್ ವಾಣಿಜ್ಯ ನಿವೇಶನಗಳು-11, ಕುವೆಂಪುನಗರದಲ್ಲಿ-03 ವಾಸಯೋಗ್ಯ ನಿವೇಶನಗಳು, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿ 3 ಖಾಲಿ ಜಾಗಗಳಿವೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.

ಓದಿ: ಆನ್‌ಲೈನ್ ಮದ್ಯಪ್ರಿಯರಿಗೆ ಸರ್ಕಾರದ ಶಾಕ್: ಇನ್ಮೇಲೆ‌ ಮನೆ ಬಾಗಿಲಿಗೆ‌ ಬರಲ್ಲ ಎಣ್ಣೆ

ಬಿ‌.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ, ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸಲು ಇ - ಟೆಂಡರ್ ಪ್ರಾಕ್ಯೂಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸುವ ಕುರಿತು ಸಭೆಯಲ್ಲಿ ಅನುಮೋದಿಸಲಾಯಿತು.

bellary-urban-development-authority-meeting-news
ಬುಡಾದಿಂದ ಬಳ್ಳಾರಿ ಜನತೆಗೆ ಸಿಹಿ ಸುದ್ದಿ

ಪ್ರಾಧಿಕಾರದ ವ್ಯಾಪ್ತಿಯಲ್ಲಿ BOT ಮಾದರಿಯಲ್ಲಿ ನಿಯಮಾನುಸಾರ 20 ಜಾಹೀರಾತು ಫಲಕಗಳನ್ನು, ಪ್ರತಿಯೊಂದಕ್ಕೆ 10 ಲಕ್ಷ ರೂಪಾಯಿಗಳಂತೆ ನಿರ್ಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ ನಡುವಳಿಗಳಿಗೆ ಅನುಮೋದನೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ವೀರೇಂದ್ರ ಕುಂದಗೋಳ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.