ಬಳ್ಳಾರಿ: ಮಾರುಕಟ್ಟೆಯ ಬೆಲೆಗನುಗುಣವಾಗಿ ಪಿಂಚಣಿ ಹೆಚ್ಚಳ ಮಾಡಿ ಎಂದು ಭವಿಷ್ಯ ನಿಧಿ ವಂತಿಗೆದಾರರ ಮತ್ತು ಪಿಂಚಣಿದಾರರ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಮಲ್ಲೇಶಪ್ಪ ಈಟಿವಿ ಭಾರತ ನೊಂದಿಗೆ ಮಾತನಾಡಿದರು.
ನಗರದ ತಾಳೂರು ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಅವರು, ಈ ಸಮಯದಲ್ಲಿ ಈಟಿವಿ ಭಾರತ ನೊಂದಿಗೆ ಬಿ.ಮಲ್ಲೇಶ್ ಮಾತನಾಡಿ ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಯಾವುದೇ ವಂತಿಗೆ ಇಲ್ಲದೇ 1000 ರೂಪಾಯಿ ಗಿಂತ ಮೇಲ್ಪಟ್ಟು ಹಣ ನೀಡುತ್ತಿವೆ. ಅದರಲ್ಲಿ ದೆಹಲಿ ಸರ್ಕಾರ 2500 ರೂ, ಆಂದ್ರಪ್ರದೇಶ ಸರ್ಕಾರ 3000 ರೂಪಾಯಿ ನೀಡುತ್ತಿದೆ. ಕೇಂದ್ರ ಸರ್ಕಾರ ಭವಿಷ್ಯ ನಿಧಿ ವಂತಿಗೆ ಸಲ್ಲಿಸಿದ ಪಿಂಚಣಿದಾರರಿಗೆ ಸರ್ಕಾರದ ವತಿಯಿಂದ ಕೇವಲ 75 ರೂಪಾಯಿ ಸಹಾಯಧನ ನೀಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಕಾರ್ಮಿಕ ಇಲಾಖೆಯಿಂದ ಮತ್ತು ಕಾರ್ಮಿಕ ಮಂತ್ರಿಗಳಿಂದ ಉತ್ಪಾದನಾ ಕ್ಷೇತ್ರದ ಬೆನ್ನೆಲುಬಾಗಿಲರುವ ನಿವೃತ್ತ ಕಾರ್ಮಿಕರ ಶೋಷಣೆ ಮತ್ತು ಅನ್ಯಾಯ ನಿರಂತರವಾಗಿ ನಡೆಯುತ್ತಿದೆ. ಭಾರತ 60 ಲಕ್ಷ ಪಿಂಚಣಿದಾರರನ್ನು ಪ್ರತಿನಿಧಿಸುತ್ತಿದ್ದು, ಖಾಸಗಿ, ಅರೆಸರ್ಕಾರ, ಸಹಕಾರ ರಂಗದ ಒಡೆತನದ ಭವಿಷ್ಯ ನಿಧಿ ವಂತಿಗೆದಾರರ, ನಿವೃತ್ತ ನೌಕರರ ಹಕ್ಕುಗಳಿಗಾಗಿ 2010 ರಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಬೇಡಿಕೆಗಳು:147ನೇ ರಾಜ್ಯಸಭಾ ವರದಿಯನ್ನು ಜಾರಿಗೆ ತರಬೇಕು. ಕನಿಷ್ಠ 7500 ಪಿಂಚಣಿ ನಿಗದಿಪಡಿಸಬೇಕು. 1971 ಮತ್ತು ಇಪಿಎಸ್ 1995 ಎರಡೂ ಯೋಜನೆಗಳಲ್ಲಿ ವಂತಿಗೆ ನೀಡಿದ ಕಾರ್ಮಿಕರಿಗೆ ಎರಡು ಯೋಜನೆಗಳ ಪ್ರತ್ಯೇಕ ಲೆಕ್ಕಚಾರ ಮಾಡಿ ಪಿಂಚಣಿ ನಿಗದಿಪಡಿಸಬೇಕು.ಇಪಿಎಸ್ 1995 ರ ಪ್ಯಾರಾ 32 ರ ಪ್ರಕಾರ ಪ್ರತಿ ವರ್ಷ ಮಾರುಕಟ್ಟೆ ಬೆಲೆಗನುಗುಣವಾಗಿ ಪಿಂಚಣಿ ನಿಗದಿಪಡಿಸಬೇಕು. ಇದನ್ನು ಸಬ್ 2000 ವರೆಗೆ ಕೊಡಲಾಗಿದೆ. 2001 ರಿಂದ ನೀಡಿಲ್ಲ. ಬಾಕಿಯನ್ನು ಪಾವತಿಸಬೇಕು. ವೈದ್ಯಕೀಯ ಸೌಲಭ್ಯ ನೀಡಬೇಕು.20 ವರ್ಷ ಸೇವದ ಸಲ್ಲಿಸಿದ ಎಲ್ಲಾರಿಗೂ ಎರಡು ವೆಟೇಜ್ ಕೊಡಬೇಕು ಎಂದು ಬೇಡಿಕೆಗಳನ್ನು ಇಟ್ಟರು.
ಈ ಪ್ರತಿಭಟನೆಯಲ್ಲಿ ನೂರಾರು ನಿವೃತ್ತ ನೌಕರರು ಭಾಗವಹಿಸಿದರು.