ETV Bharat / state

ಬರಿಗಾಲಲ್ಲೇ ಟೆಂಪಲ್​ ರನ್​, ಡಿಸಿ ಕಚೇರಿಗೆ ತೆರಳಿದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ! - undefined

ಇಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಡಿಸಿ ಕಚೇರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ನಗರದಲ್ಲಿರುವ ವಿವಿಧ ದೇವಾಯಲಗಳಿಗೆ ಬರಿಗಾಲಲ್ಲೇ ಭೇಟಿ ನೀಡುವ ಮೂಲಕ ಗಮನ ಸೆಳೆದರು.

ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ
author img

By

Published : Apr 1, 2019, 7:55 PM IST

Updated : Apr 1, 2019, 8:04 PM IST

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರು ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದರು. ಬರಿಗಾಲಲ್ಲೇ ನಡೆದುಕೊಂಡು ಹೋಗಿ ಗಮನ ಸೆಳೆದರು.

ಇದಕ್ಕೂ ಮುಂಚೆ ಅಭ್ಯರ್ಥಿ ದೇವೇಂದ್ರಪ್ಪ ಅವರು ನಗರದ ಕೋಟೆ ‌ಮಲ್ಲೇಶ್ವರ ದೇಗುಲ, ಬಸವನಕುಂಟೆಯ ಬಸವೇಶ್ವರ ದೇಗುಲ ಹಾಗೂ ಕನಕದುರ್ಗಮ್ಮ ದೇಗುಲಕ್ಕೆ ಬರಿಗಾಲಲ್ಲೇ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಡಿಸಿ ಕಚೇರಿಗೆ ತೆರಳಿದ ಅವರು ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಾ. ವಿ.ರಾಮ ಪ್ರಸಾತ್ ಮನೋಹರ್​ಗೆ ಸಲ್ಲಿಸಿದರು.

ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರಪ್ಪ, ಪ್ರತಿದಿನವೂ ಒಳ್ಳೆಯ ದಿನವೇ. ನಾಳೆ ನಮ್ಮೆಲ್ಲ ನಾಯಕರು ಬುರುತ್ತಾರಲ್ಲ ಅದು ಶ್ರೇಷ್ಠ ಇದೆ. ನಾಳೆಯ ದಿನ ಬಿರುಬಿಸಿಲಿನ ಝಳದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗಬಾರದು ಎಂದು ಹೇಳಿ ಈ ದಿನ ಪರಿಶೀಲನಾ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗಿದೆ. ನಾಳೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು. ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್​ ಶೆಟ್ಟರ್, ಬಿ. ಶ್ರೀರಾಮುಲು ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಬಹಿರಂಗ ಸಭೆ:

ನಗರದ ಡಾ.ರಾಜ್ ರಸ್ತೆಯಲ್ಲಿನ ಗೋಶ್ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ನಾಳೆ ಬೆಳಗ್ಗೆ 11.30 ಗಂಟೆಗೆ ಬಹಿರಂಗ ಸಭೆಯನ್ನ ನಡೆಯಲಿದೆ. ಬಳಿಕ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರು ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದರು. ಬರಿಗಾಲಲ್ಲೇ ನಡೆದುಕೊಂಡು ಹೋಗಿ ಗಮನ ಸೆಳೆದರು.

ಇದಕ್ಕೂ ಮುಂಚೆ ಅಭ್ಯರ್ಥಿ ದೇವೇಂದ್ರಪ್ಪ ಅವರು ನಗರದ ಕೋಟೆ ‌ಮಲ್ಲೇಶ್ವರ ದೇಗುಲ, ಬಸವನಕುಂಟೆಯ ಬಸವೇಶ್ವರ ದೇಗುಲ ಹಾಗೂ ಕನಕದುರ್ಗಮ್ಮ ದೇಗುಲಕ್ಕೆ ಬರಿಗಾಲಲ್ಲೇ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಡಿಸಿ ಕಚೇರಿಗೆ ತೆರಳಿದ ಅವರು ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಾ. ವಿ.ರಾಮ ಪ್ರಸಾತ್ ಮನೋಹರ್​ಗೆ ಸಲ್ಲಿಸಿದರು.

ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರಪ್ಪ, ಪ್ರತಿದಿನವೂ ಒಳ್ಳೆಯ ದಿನವೇ. ನಾಳೆ ನಮ್ಮೆಲ್ಲ ನಾಯಕರು ಬುರುತ್ತಾರಲ್ಲ ಅದು ಶ್ರೇಷ್ಠ ಇದೆ. ನಾಳೆಯ ದಿನ ಬಿರುಬಿಸಿಲಿನ ಝಳದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗಬಾರದು ಎಂದು ಹೇಳಿ ಈ ದಿನ ಪರಿಶೀಲನಾ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗಿದೆ. ನಾಳೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು. ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್​ ಶೆಟ್ಟರ್, ಬಿ. ಶ್ರೀರಾಮುಲು ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಬಹಿರಂಗ ಸಭೆ:

ನಗರದ ಡಾ.ರಾಜ್ ರಸ್ತೆಯಲ್ಲಿನ ಗೋಶ್ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ನಾಳೆ ಬೆಳಗ್ಗೆ 11.30 ಗಂಟೆಗೆ ಬಹಿರಂಗ ಸಭೆಯನ್ನ ನಡೆಯಲಿದೆ. ಬಳಿಕ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

Intro:ಬರಿಗಾಲಲ್ಲೇ ಡಿಸಿ ಕಚೇರಿಗೆ ಬಂದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ!
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ಸಾಂಕೇತಿಕ ಉಮೇದುವಾರಿಕೆ ಸಲ್ಲಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿಗೆ ಇಂದು ಬರಿಗಾಲಲ್ಲೇ ಬಂದರು.
ಇದಕ್ಕೂ ಮುಂಚೆ ಅಭ್ಯರ್ಥಿ ದೇವೇಂದ್ರಪ್ಪ ಅವರು ನಗರದ ಕೋಟೆ ‌ಮಲ್ಲೇಶ್ವರ ದೇಗುಲ, ಬಸವನಕುಂಟೆಯ ಬಸವೇಶ್ವರ ದೇಗುಲ ಹಾಗೂ ಕನಕದುರ್ಗಮ್ಮ ದೇಗುಲಕ್ಕೆ ಬರಿಗಾಲಲ್ಲೇ ಕಾರಿನಲ್ಲಿ ತೆರಳಿ ವಿಶೇಷಪೂಜೆ ಸಲ್ಲಿಸಿ, ನೇರವಾಗಿ ಡಿಸಿ ಕಚೇರಿಗೆ ಆಗಮಿಸಿದ ಅವರು, ಎರಡು ಪ್ರತಿಗಳುಳ್ಳ ನಾಮ
ಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾತ್ ಮನೋಹರಗೆ ಸಲ್ಲಿಸಿದ್ದಾರೆ.
ಮನಸೆಳೆದ ಬಿಳಿಯ ಗೋಸಿ: ಡಿಸಿ ಕಚೇರಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ತಮ್ಮ ಎದುರಿಗೆ
ಬರುವವರೆಲ್ಲರಿಗೂ ಎರಡು ಕೈಮುಗಿದು ನಮಸ್ಕರಿಸುತ್ತಾ ಗಮನ ಸೆಳೆದರು. ಅಲ್ಲದೇ, ಉದ್ದನೆಯ ತೋಳಿನ ಅಂಗಿ‌ ಮೇಲೆ ನೀಲಿಬಣ್ಣದ ಕೋಟ್ ಹಾಗೂ ಕೇಸರಿ ಬಣ್ಣದ ಟವೆಲ್ ಹಾಕಿಕೊಂಡ ದೇವೇಂದ್ರಪ್ಪನವರು ಬಿಳಿ ಪಂಚೆಯ ಗೋಸಿ ತೊಟ್ಟುಕೊಂಡು ರೈತಾಪಿವರ್ಗದವರಂತೆ ಕಾಣಿಸಿಕೊಂಡರು. ಅದು ನೋಡುಗರ ವಿಶೇಷ ಗಮನ ಸೆಳೆಯಿತು.




Body:ಮೊಮ್ಮಕ್ಕಳು ಸಾಥ್: ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ ಡಿಸಿ ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಇಬ್ಬರು ಮೊಮ್ಮಕ್ಕಳೂ ಕೂಡ ಸಾಥ್‌ ನೀಡಿದರು. ದೇವೇಂದ್ರಪ್ಪನವರು ಅವರಿಬ್ಬರನ್ನ ಎಲ್ಲರಿಗೂ‌ ಪರಿಚಯಿಸಿಕೊಟ್ಟರು.
ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರಪ್ಪ,
ಈ ದಿನ ಒಳ್ಳೆಯ ದಿನವಂತ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸೋದಕ್ಕೆ ಬಂದೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿದಿನವೂ ಒಳ್ಳೆಯ ದಿನವೇ.
ನಾಳೆಯ ದಿನ ಬಿರುಬಿಸಿಲಿನ ಝಳದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗಬಾರದು ಅಂತಾ ಹೇಳಿ. ಈ ದಿನ ಪರಿಶೀಲನೆ ಪ್ರಕ್ರಿಯೆಯನ್ನ ಪೂರ್ಣಗೊಳಿಸಿ, ಜಿಲ್ಲಾಧಿಕಾರಿ ಡಾ‌.ವಿ.ರಾಮ ಪ್ರಸಾತ್ ಮನೋಹರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್, ಬಿ.ಶ್ರೀ ರಾಮುಲು ಅವರು‌ ನಾಳೆಯ ದಿನ ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮಾತನಾಡಿ, ನಗರದ ಕನಕದುರ್ಗಮ್ಮ ದೇಗುಲದಿಂದ
ಬೆಳಿಗ್ಗೆ 10.30 ಪಾದಯಾತ್ರೆ ಮುಖೇನ ಮೆರವಣಿಗೆ ನಡೆಸಲಾಗುವುದೆಂದರು.
ಬಹಿರಂಗ ಸಭೆ: ನಗರದ ಡಾ.ರಾಜ್ ರಸ್ತೆಯಲ್ಲಿನ ಗೋಶ್ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಬಹಿರಂಗ ಸಭೆಯನ್ನ ನಡೆಯಲಿದ್ದು, ಆ ಬಳಿಕ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದೆಂದರು.
ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚನ್ನಬಸವನಗೌಡ ಪಾಟೀಲ, ಮಹಿಳಾ ಘಟಕ ಅಧ್ಯಕ್ಷೆ ಕೆ.ಶಶಿಕಲ, ಮುಖಂಡರಾದ ಮೃತ್ಯುಂಜಯ ಜಿನಗ, ಮುರಹರಗೌಡ, ಕೃಷ್ಣಮೋಹನ್, ಬಿ.ಕೆ.ರಾಮಲಿಂಗಪ್ಪ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.





Conclusion:R_KN_BEL_03_010419_BJP_CANDIDATE_DEVENDRAPPA_VEERESH GK

R_KN_BEL_04_010419_BJP_CANDIDATE_DEVENDRAPPA_VEERESH GK

R_KN_BEL_05_010419_BJP_CANDIDATE_DEVENDRAPPA_VEERESH GK

R_KN_BEL_06_010419_BJP_CANDIDATE_DEVENDRAPPA_VEERESH GK
Last Updated : Apr 1, 2019, 8:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.