ETV Bharat / state

ಮಾಲವಿ ಫಕ್ಕೀರಸ್ವಾಮಿ ಉರುಸ್​​ನಲ್ಲಿ ಪ್ರಸಾದ ಸೇವಿಸಿ 120 ಮಂದಿ ಅಸ್ವಸ್ಥ!

ಫಕ್ಕೀರಸ್ವಾಮಿ ಉರುಸ್​​​ನಲ್ಲಿ ಪ್ರಸಾದ ಸೇವಿಸಿ ಅಂದಾಜು 120 ಕ್ಕೂ ಅಧಿಕ ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ನಡೆದಿದೆ.

author img

By

Published : Mar 15, 2020, 2:37 AM IST

Malawi Fakiriswami Urus
ಫಕ್ಕೀರಸ್ವಾಮಿ ಉರುಸ್​​ನಲ್ಲಿ ಪ್ರಸಾದ ಸೇವಿಸಿ 120 ಮಂದಿ ಅಸ್ವಸ್ಥ

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಫಕ್ಕೀರಸ್ವಾಮಿ ಉರುಸ್​​​ನಲ್ಲಿ ಪ್ರಸಾದ ಸೇವಿಸಿ ಅಂದಾಜು 120 ಕ್ಕೂ ಅಧಿಕ ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ.

ಮಾಲವಿ ಗ್ರಾಮದ ಫಕ್ಕೀರಸ್ವಾಮಿ ಕಮಿಟಿಯವರು ಉರುಸ್​​ಗೆ ಬಂದ ಭಕ್ತರಿಗೋಸ್ಕರ ಪ್ರಸಾದದ ವ್ಯವಸ್ಥೆ ಮಾಡಿಸಿದ್ದರು. ಅನ್ನ- ಸಾಂಬಾರ್ ಹಾಗೂ ಸಿಹಿಖಾದ್ಯ ಗೋಧಿ ಪದಾರ್ಥದ ಮಾದ್ಲಿಯನ್ನ ಭಕ್ತರ ಪ್ರಸಾದಕ್ಕೆ ಮಾಡಿಸಿದ್ರು. ಅಸ್ವಸ್ಥರಾದ ಈ 120 ಮಂದಿ ಪೈಕಿ ಏಳೆಂಟು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಫಕ್ಕೀರಸ್ವಾಮಿ ಉರುಸ್​​ನಲ್ಲಿ ಪ್ರಸಾದ ಸೇವಿಸಿ 120 ಮಂದಿ ಅಸ್ವಸ್ಥ

ಪ್ರಸಾದವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ಪೂಜಾರ್ ತಿಳಿಸಿದ್ದಾರೆ. ಪ್ರಸಾದ ಸೇವನೆ ಮಾಡುತ್ತಿದ್ದಂತೆಯೇ ನೂರಾರು ಭಕ್ತರಿಗೆ ವಾಂತಿ-ಭೇದಿ ಶುರುವಾಗಿದೆ. ಕೂಡಲೇ ಹಗರಿಬೊಮ್ಮನಹಳ್ಳಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಫಕ್ಕೀರಸ್ವಾಮಿ ಉರುಸ್​​​ನಲ್ಲಿ ಪ್ರಸಾದ ಸೇವಿಸಿ ಅಂದಾಜು 120 ಕ್ಕೂ ಅಧಿಕ ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ.

ಮಾಲವಿ ಗ್ರಾಮದ ಫಕ್ಕೀರಸ್ವಾಮಿ ಕಮಿಟಿಯವರು ಉರುಸ್​​ಗೆ ಬಂದ ಭಕ್ತರಿಗೋಸ್ಕರ ಪ್ರಸಾದದ ವ್ಯವಸ್ಥೆ ಮಾಡಿಸಿದ್ದರು. ಅನ್ನ- ಸಾಂಬಾರ್ ಹಾಗೂ ಸಿಹಿಖಾದ್ಯ ಗೋಧಿ ಪದಾರ್ಥದ ಮಾದ್ಲಿಯನ್ನ ಭಕ್ತರ ಪ್ರಸಾದಕ್ಕೆ ಮಾಡಿಸಿದ್ರು. ಅಸ್ವಸ್ಥರಾದ ಈ 120 ಮಂದಿ ಪೈಕಿ ಏಳೆಂಟು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಫಕ್ಕೀರಸ್ವಾಮಿ ಉರುಸ್​​ನಲ್ಲಿ ಪ್ರಸಾದ ಸೇವಿಸಿ 120 ಮಂದಿ ಅಸ್ವಸ್ಥ

ಪ್ರಸಾದವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ಪೂಜಾರ್ ತಿಳಿಸಿದ್ದಾರೆ. ಪ್ರಸಾದ ಸೇವನೆ ಮಾಡುತ್ತಿದ್ದಂತೆಯೇ ನೂರಾರು ಭಕ್ತರಿಗೆ ವಾಂತಿ-ಭೇದಿ ಶುರುವಾಗಿದೆ. ಕೂಡಲೇ ಹಗರಿಬೊಮ್ಮನಹಳ್ಳಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.