ಚಿಕ್ಕೋಡಿ: ಶಿವಸೇನೆ ಪುಂಡಾಟಿಕೆ ಮತ್ತೆ ಮುಂದುವರೆದಿದೆ, ಹೆದ್ದಾರಿಯಲ್ಲಿ ಕರ್ನಾಟಕದ ವಾಹನಗಳನ್ನು ತಡೆದು ಜೈ ಮಹಾರಾಷ್ಟ್ರ ಪೋಸ್ಟರ್ ಅಂಟಿಸಿ ವಿಕೃತಿ ಮೆರೆದಿದ್ದಾರೆ.
ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಸೇನೆ ಗೂಂಡಾಗಳು ಕರ್ನಾಟಕದ ವಾಹನಗಳ ಮೇಲೆ ದಾಳಿ ಮಾಡಿ ಜಯ ಮಹಾರಾಷ್ಟ್ರ ಎಂಬ ಪೋಸ್ಟರ್ ಅಂಟಿಸುತ್ತಿದ್ದಾರೆ. ಪ್ರಶ್ನಿಸುವವರ ಬಳಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎನ್ನಲಾಗಿದೆ.
ಬೆಳಗಾವಿ ನಗರಪಾಲಿಕೆ ಮೇಲಿನ ಕನ್ನಡ ಧ್ವಜ ತೆರವುಗೊಳಿಸುವವರೆಗೆ ನಾವು ಆಂದೋಲನ ಮುಂದುವರೆಸುವುದಾಗಿ ಬೆದರಿಕೆ ಹಾಕಿ, ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ದಟತನ ಪ್ರದರ್ಶಿಸುತ್ತಿದ್ದಾರೆ.
ಇದನ್ನೂ ಓದಿ.. ಮೋದಿ, ಬೈಡನ್, ಸ್ಕಾಟ್ ಹೆಣೆದ ಲಸಿಕೆ ಬಲೆಯಲ್ಲಿ 'ಚೀನಾ' ವಿಲವಿಲ.. ಭಾರತದಿಂದ ಮಾತ್ರ ಸಾಧ್ಯವೆಂದ ಕ್ವಾಡ್!