ETV Bharat / state

ಪ್ರಧಾನಿ ಸ್ಥಾನ ಕೊಟ್ರೂ ರಮೇಶ್​ ಪಕ್ಷಕ್ಕೆ ವಾಪಸ್​​​​ ಬರಲ್ಲ: ಸತೀಶ್​​ ಜಾರಕಿಹೊಳಿ

ಪಕ್ಷದ ಸಭೆಗಳಲ್ಲಿ ನಾನು ಪದೇ ಪದೆ ಹೇಳಿದ್ದೇನೆ. ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರೂ ಸರ್ಕಾರ ಬೀಳಿಸುವುದನ್ನ ಮಾತ್ರ ಬಿಡುವುದಿಲ್ಲ-ಸತೀಶ್​ ಜಾರಕಿಹೊಳಿ

author img

By

Published : Jul 13, 2019, 2:57 PM IST

Updated : Jul 13, 2019, 3:14 PM IST

ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಯಾವುದೇ ಪದವಿ ಬೇಡವಾಗಿದ್ದು, ಕೇವಲ ಸರ್ಕಾರ ಬೀಳಿಸುವುದಷ್ಟೇ ಅವನ ತಲೆಯಲ್ಲಿದೆ ಎಂದು ಸಹೋದರನ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪಕ್ಷದ ಸಭೆಗಳಲ್ಲಿ ನಾನು ಪದೇ ಪದೆ ಹೇಳಿದ್ದೇನೆ. ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರು ಸರ್ಕಾರ ಕೆಡುವುವ ಕೆಲಸ ಮಾತ್ರ ಬಿಡುವುದಿಲ್ಲ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ತೊಂದರೆ ಇಲ್ಲ. ರಾಜೀನಾಮೆ ನೀಡಿದ ನಮ್ಮ ಪಕ್ಷದ ಶಾಸಕರು ವಾಪಸ್ ಬರುತ್ತಾರೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ

ಬಿಜೆಪಿ ಕೈವಾಡ:

ಸಮ್ಮಿಶ್ರ ಸರ್ಕಾರದ ಅಸ್ಥಿರತೆಗೆ ಬಿಜೆಪಿ ಹಿಂದಿನಿಂದ ಕೆಲಸ ಮಾಡುತ್ತಿದೆ. ಶಾಸಕರ ರಾಜೀನಾಮೆ ಕೊಡಿಸಿ ಲಕ್ಷಾಂತರ ಹಣ ಖರ್ಚು ಮಾಡಿ ಮುಂಬೈಗೆ ಕಳುಹಿಸಲಾಗಿದೆ. ಬಿಜೆಪಿ ಹಣದಿಂದ ಸರ್ಕಾರ ಕೆಡುವಲು ಹೊರಟಿದೆ ಎಂದು ಆರೋಪಿಸಿದರು.

ಬೆಳಗಾವಿ ಕಾರಣ:

ರಾಜ್ಯ ರಾಜಕಾರಣದಲ್ಲಿ ಈ ರೀತಿ ಬದಲಾವಣೆಯಾಗಲು ಬೆಳಗಾವಿ ಮೂಲ ಕಾರಣ. ಇಲ್ಲಿಂದಲೇ ಅನೇಕ ಬೆಳವಣಿಗೆಗಳು ನಡೆದವು ಎಂದು ಹೇಳುವ ಮೂಲಕ, ರಮೇಶ್ ಹಾಗೂ ಡಿಕೆಶಿ ನಡುವಿನ ಮುಸುಕಿನ ಗುದ್ದಾಟ ಪರಿಣಾಮವಾಗಿ ಇವೆಲ್ಲ ಬೆಳವಣಿಗೆ ನಡೆದಿವೆ ಎಂಬಂತೆ ಪರೋಕ್ಷವಾಗಿ ನುಡಿದರು.

ನಮ್ಮ ಶಾಸಕರನ್ನು ಕರೆತರಲಾಗುತ್ತದೆ. ರಾಜೀನಾಮೆ ನೀಡಿದವರೆಲ್ಲರು ತಮ್ಮ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮನವೊಲಿಸುವ ಕೆಲಸ ಮಾಡಲಾಗುವುದು ಎಂದರು.

ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಯಾವುದೇ ಪದವಿ ಬೇಡವಾಗಿದ್ದು, ಕೇವಲ ಸರ್ಕಾರ ಬೀಳಿಸುವುದಷ್ಟೇ ಅವನ ತಲೆಯಲ್ಲಿದೆ ಎಂದು ಸಹೋದರನ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪಕ್ಷದ ಸಭೆಗಳಲ್ಲಿ ನಾನು ಪದೇ ಪದೆ ಹೇಳಿದ್ದೇನೆ. ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರು ಸರ್ಕಾರ ಕೆಡುವುವ ಕೆಲಸ ಮಾತ್ರ ಬಿಡುವುದಿಲ್ಲ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ತೊಂದರೆ ಇಲ್ಲ. ರಾಜೀನಾಮೆ ನೀಡಿದ ನಮ್ಮ ಪಕ್ಷದ ಶಾಸಕರು ವಾಪಸ್ ಬರುತ್ತಾರೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ

ಬಿಜೆಪಿ ಕೈವಾಡ:

ಸಮ್ಮಿಶ್ರ ಸರ್ಕಾರದ ಅಸ್ಥಿರತೆಗೆ ಬಿಜೆಪಿ ಹಿಂದಿನಿಂದ ಕೆಲಸ ಮಾಡುತ್ತಿದೆ. ಶಾಸಕರ ರಾಜೀನಾಮೆ ಕೊಡಿಸಿ ಲಕ್ಷಾಂತರ ಹಣ ಖರ್ಚು ಮಾಡಿ ಮುಂಬೈಗೆ ಕಳುಹಿಸಲಾಗಿದೆ. ಬಿಜೆಪಿ ಹಣದಿಂದ ಸರ್ಕಾರ ಕೆಡುವಲು ಹೊರಟಿದೆ ಎಂದು ಆರೋಪಿಸಿದರು.

ಬೆಳಗಾವಿ ಕಾರಣ:

ರಾಜ್ಯ ರಾಜಕಾರಣದಲ್ಲಿ ಈ ರೀತಿ ಬದಲಾವಣೆಯಾಗಲು ಬೆಳಗಾವಿ ಮೂಲ ಕಾರಣ. ಇಲ್ಲಿಂದಲೇ ಅನೇಕ ಬೆಳವಣಿಗೆಗಳು ನಡೆದವು ಎಂದು ಹೇಳುವ ಮೂಲಕ, ರಮೇಶ್ ಹಾಗೂ ಡಿಕೆಶಿ ನಡುವಿನ ಮುಸುಕಿನ ಗುದ್ದಾಟ ಪರಿಣಾಮವಾಗಿ ಇವೆಲ್ಲ ಬೆಳವಣಿಗೆ ನಡೆದಿವೆ ಎಂಬಂತೆ ಪರೋಕ್ಷವಾಗಿ ನುಡಿದರು.

ನಮ್ಮ ಶಾಸಕರನ್ನು ಕರೆತರಲಾಗುತ್ತದೆ. ರಾಜೀನಾಮೆ ನೀಡಿದವರೆಲ್ಲರು ತಮ್ಮ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮನವೊಲಿಸುವ ಕೆಲಸ ಮಾಡಲಾಗುವುದು ಎಂದರು.

Intro:ಪ್ರಧಾನಿ ಸ್ಥಾನ ಕೊಟ್ಟರು ರಮೇಶ್ ಸರ್ಕಾರ ಉರುಳಿಸುವ ಕೆಲಸ ಬಿಡಲ್ಲ : ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ : ರಮೇಶ್ ಜಾರಕಿಹೊಳಿಗೆ ಯಾವುದೇ ಪದವಿ ಬೇಡವಾಗಿದ್ದು ಕೇವಲ ಸರ್ಕಾರ ಬೀಳಿಸುವುದಷ್ಟೆ ಅವನ ತಲೆಯಲ್ಲಿದೆ ಎಂದು. ಸಹೋದರ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.




Body:ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ. ಪಕ್ಷದ ಸಭೆಗಳಲ್ಲಿ ನಾನು ಪದೇ ಪದೇ ಹೇಳಿದ್ದೇನೆ. ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟರು ಸರ್ಕಾರ ಕೆಡುವುದು ಮಾತ್ರ ಬಿಡುವುದಿಲ್ಲ ಎಂದರು. ಸಧ್ಯಕ್ಕೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಯಾವುದೇ ತೊಂದರೆ ಇಲ್ಲ ರಾಜೀನಾಮೆ ನೀಡಿದ ನಮ್ಮ ಪಕ್ಷದ ಶಾಸಕರು ವಾಪಸ್ ಬರುತ್ತಾರೆ ಎಂದರು.

ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ : ಸಮ್ಮಿಶ್ರ ಸರ್ಕಾರದ ಅಸ್ಥಿರತೆಗೆ ಬಿಜೆಪಿ ಹಿಂದಿನಿಂದ ಕೆಲಸ ಮಾಡುತ್ತಿದೆ. ಶಾಸಕರ ರಾಜೀನಾಮೆ ಕೊಡಿಸಿ ಲಕ್ಷಾಂತರ ಹಣ ಕರ್ಚುಮಾಡಿ ಮುಂಬೈಗೆ ಕಳುಹಿಸಲಾಗಿದೆ. ಬಿಜೆಪಿ ಹಣದಿಂದ ಸರ್ಕಾರ ಕೆಡುವಲು ಹೊರಟಿದೆ ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರದ ಈ ಪರಿಸ್ಥಿತಿಗೆ ಬೆಳಗಾವಿ ಕಾರಣ : ರಾಜ್ಯ ರಾಜಕಾರಣದಲ್ಲಿ ಈ ರೀತಿ ಬದಲಾವಣೆಯಾಗಲು ಬೆಳಗಾವಿ ಮೂಲ ಕಾರಣ. ಇಲ್ಲಿಂದಲೇ ಅನೇಕ ಬೆಳವಣಿಗೆಗಳು ನಡೆದವು ಎಂದು ಹೇಳುವ ಮೂಲಕ, ರಮೇಶ್ ಹಾಗೂ ಡಿಕೆಶಿ ನಡುವಿನ ಮುಸುಕಿನ ಗುದ್ದಾಟ ಪರಿಣಾಮವಾಗಿ ಇವೆಲ್ಲ ಬೆಳವಣಿಗೆ ನಡೆದವು ಎಂಬುದು ಸಾರ್ವಜನಿಕರ ಅನುಮಾನ.

Conclusion:ನಮ್ಮ ಶಾಸಕರನ್ನು ಕರೆ ತರಲಾಗುತ್ತದೆ. ರಾಜೀನಾಮೆ ನೀಡಿದವರೆಲ್ಲರು ತಮ್ಮ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ, ಅವರ ಎಲ್ಲಾ ಸಮಸ್ಯೆಗಳನ್ನು ಪರಿಸಿಲಿಸಿ ಮನ ಒಲಿಸುವ ಕೆಲಸ ಮಾಡಲಾಗುವುದು ಎಂದರು.

ವಿನಾಯಕ ಮಠಪತಿ
ಬೆಳಗಾವಿ

Last Updated : Jul 13, 2019, 3:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.