ETV Bharat / state

ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿಯ ಹಿರೇಮಠ

author img

By

Published : Mar 27, 2020, 9:08 PM IST

ಕೊರೊನಾ ವೈರಸ್ ಈಗ ಎಲ್ಲೆಡೆ​ ಭೀತಿ ಹುಟ್ಟಿಸಿದೆ. ಇನ್ನು ಈ ಮಹಾಮಾರಿ ತಡೆಗೆ ಇಡೀ ದೇಶವನ್ನೇ ಲಾಕ್​​ಡೌನ್​ ಮಾಡಲಾಗಿದೆ. ಇದರಿಂದ ಜನ ಮನೆಯಿಂದ ಹೊರ ಬರಲೂ ಆಗುತ್ತಿಲ್ಲ.

hukkerimatt
ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿ ಹಿರೇಮಠ

ಚಿಕ್ಕೋಡಿ: ಕೊರೊನಾ ವೈರಸ್​ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್​ ಆಗಿದೆ. ಈ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗಾಗಿ ಜಿಲ್ಲೆಯ ಹುಕ್ಕೇರಿ ಹಿರೇಮಠ ಮುಂದೆ ಬಂದಿದೆ.

ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿ ಹಿರೇಮಠ

ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಕೆಜಿ ಅಕ್ಕಿ, ತಲಾ 1 ಕೆಜಿ ಸಕ್ಕರೆ, ರವೆ, ಹಿಟ್ಟು, ಎಣ್ಣೆ, ಬಿಸ್ಕತ್ತು, ಬಟ್ಟೆ ಸೋಪ್, ಚಹಾ ಪುಡಿಯಂತಹ ದಿನಸಿ ವಸ್ತುಗಳನ್ನ ಪೊಲೀಸರ ಮೂಲಕ ಜನರಿಗೆ ವಿತರಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸ್ವಾಮೀಜಿ, ವೈದ್ಯರು, ಪೊಲೀಸರು, ಸ್ವಚ್ಛತಾ ಕೆಲಸ ಮಾಡುವ ಜನರೇ ನಮಗೆ ದೇವರುಗಳು. ಹಾಗಾಗಿ ಅವರ ಕೆಲಸಗಳನ್ನ ಮೆಚ್ಚಲೇಬೇಕು. ಮನೆಯಲ್ಲೇ ಇದ್ದು ಕೊರೊನಾ ವಿರುದ್ದ ಹೋರಾಡಬೇಕು ಎಂದು ಕರೆ ನೀಡಿದರು.

ಚಿಕ್ಕೋಡಿ: ಕೊರೊನಾ ವೈರಸ್​ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್​ ಆಗಿದೆ. ಈ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗಾಗಿ ಜಿಲ್ಲೆಯ ಹುಕ್ಕೇರಿ ಹಿರೇಮಠ ಮುಂದೆ ಬಂದಿದೆ.

ಬಡವರಿಗೆ ಸಹಾಯಹಸ್ತ ಚಾಚಿದ ಹುಕ್ಕೇರಿ ಹಿರೇಮಠ

ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಕೆಜಿ ಅಕ್ಕಿ, ತಲಾ 1 ಕೆಜಿ ಸಕ್ಕರೆ, ರವೆ, ಹಿಟ್ಟು, ಎಣ್ಣೆ, ಬಿಸ್ಕತ್ತು, ಬಟ್ಟೆ ಸೋಪ್, ಚಹಾ ಪುಡಿಯಂತಹ ದಿನಸಿ ವಸ್ತುಗಳನ್ನ ಪೊಲೀಸರ ಮೂಲಕ ಜನರಿಗೆ ವಿತರಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸ್ವಾಮೀಜಿ, ವೈದ್ಯರು, ಪೊಲೀಸರು, ಸ್ವಚ್ಛತಾ ಕೆಲಸ ಮಾಡುವ ಜನರೇ ನಮಗೆ ದೇವರುಗಳು. ಹಾಗಾಗಿ ಅವರ ಕೆಲಸಗಳನ್ನ ಮೆಚ್ಚಲೇಬೇಕು. ಮನೆಯಲ್ಲೇ ಇದ್ದು ಕೊರೊನಾ ವಿರುದ್ದ ಹೋರಾಡಬೇಕು ಎಂದು ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.