ETV Bharat / state

ಚಿಕ್ಕೋಡಿಯಲ್ಲಿ ಶಾಲೆಗೆ ಹೋದ ಬಾಲಕ ಕಾಣೆ, ಪ್ರಕರಣ ದಾಖಲು

author img

By

Published : Aug 2, 2020, 2:38 PM IST

ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೋದ ಬಾಲಕ ಮರಳಿ ಮನೆಗೆ ಬಾರದೆ ಕಾಣೆಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಕಂಡುಬಂದಿದೆ.

 Boy missing
Boy missing

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಶಾಲೆಗೆ ಹೋಗುತ್ತೇನೆ ಎಂದು ಜ.09 ರಂದು ಮನೆಯಿಂದ ಹೊರ ಹೋದ ಬಾಲಕ ಕಾಣೆಯಾಗಿರುವ ಘಟನೆ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಕಾಣೆಯಾದ ಕುರಿತು ಪ್ರಕಟಣೆ
ಕಾಣೆಯಾದ ಕುರಿತು ಪ್ರಕಟಣೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಜ್ಞಾನೇಶ್ವರ ಮಾಯಪ್ಪಾ ಖೋತ (15) ಕಾಣೆಯಾದ ಬಾಲಕ. ಈ ಕುರಿತು ಬಾಲಕನ ತಂದೆ ಮಾಯಪ್ಪಾ ಮಾರುತಿ ಖೋತ, ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಜ್ಞಾನೇಶ್ವರ 5 ಇಂಚು ಎತ್ತರವಿದ್ದು, ದುಂಡು ಮುಖ, ಸಾದ ಕಪ್ಪು ಮೈಬಣ್ಣ ಹೊಂದಿದ್ದಾನೆ. ಜೊತೆಗೆ ಕನ್ನಡ, ಹಿಂದಿ, ಮರಾಠಿ ಭಾಷೆಗಳನ್ನು ಮಾತನಾಡುತ್ತಾನೆ.

ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಡಚಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08331 - 235233 ಹಾಗೂ ಮಾಯಪ್ಪಾ ಮಾರುತಿ ಖೋತ - 7411861474 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಶಾಲೆಗೆ ಹೋಗುತ್ತೇನೆ ಎಂದು ಜ.09 ರಂದು ಮನೆಯಿಂದ ಹೊರ ಹೋದ ಬಾಲಕ ಕಾಣೆಯಾಗಿರುವ ಘಟನೆ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಕಾಣೆಯಾದ ಕುರಿತು ಪ್ರಕಟಣೆ
ಕಾಣೆಯಾದ ಕುರಿತು ಪ್ರಕಟಣೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಜ್ಞಾನೇಶ್ವರ ಮಾಯಪ್ಪಾ ಖೋತ (15) ಕಾಣೆಯಾದ ಬಾಲಕ. ಈ ಕುರಿತು ಬಾಲಕನ ತಂದೆ ಮಾಯಪ್ಪಾ ಮಾರುತಿ ಖೋತ, ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಜ್ಞಾನೇಶ್ವರ 5 ಇಂಚು ಎತ್ತರವಿದ್ದು, ದುಂಡು ಮುಖ, ಸಾದ ಕಪ್ಪು ಮೈಬಣ್ಣ ಹೊಂದಿದ್ದಾನೆ. ಜೊತೆಗೆ ಕನ್ನಡ, ಹಿಂದಿ, ಮರಾಠಿ ಭಾಷೆಗಳನ್ನು ಮಾತನಾಡುತ್ತಾನೆ.

ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಡಚಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08331 - 235233 ಹಾಗೂ ಮಾಯಪ್ಪಾ ಮಾರುತಿ ಖೋತ - 7411861474 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.