ETV Bharat / state

ಬುದ್ದಿ ಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ..!

author img

By

Published : Aug 18, 2019, 3:46 AM IST

ಅಕ್ಕ- ತಮ್ಮ ಜಗಳವಾಡುತ್ತಿದ್ದರು, ಇದನ್ನು ನೋಡಿದ ತಂದೆ ಬುದ್ದಿ ಮಾತು ಹೇಳಿದ್ದಾರೆ. ಅಷ್ಟಕ್ಕೆ ನೊಂದ ಬಾಲಕ ಮನೆ ಬಿಟ್ಟು ಹೋಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Young boy missing

ಬೆಂಗಳೂರು: ಜಗಳ ಆಡುತ್ತಿದ್ದ ಮಕ್ಕಳಿಗೆ ತಂದೆ ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ನೊಂದ ಬಾಲಕ ಮನೆಯಿಂದ ನಾಪತ್ತೆಯಾಗಿದ್ದಾನೆ.

ರತನ್ ಗೌಡ(14) ನಾಪತ್ತೆಯಾಗಿರುವ ಬಾಲಕ. ಈತ ಮಹಾಲಕ್ಷ್ಮೀ ಲೇಔಟ್​ನ ನಿವಾಸಿ ಮನೋಹರ್ ಎಂಬುವವರ ಮಗ. ರತನ್ ಗೌಡ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದು, ಈತ ವಿದ್ಯಾಭಾರತಿ ಸ್ಕೂಲ್​ನಲ್ಲಿ 7ನೇ ತರಗತಿ ಓದುತ್ತಿದ್ದ. ನಿನ್ನೆಅಕ್ಕನ ಜೊತೆ ಜಗಳ ಮಾಡುತ್ತಿದ್ದ. ಇದನ್ನು ಗಮನಿಸಿದ ತಂದೆ ಮನೋಹರ್ ಬುದ್ದಿ ಮಾತು ಹೇಳಿದ್ದಾರೆ. ಇದಾದ ಬಳಿಕ ಅಪ್ಪನಿಂದ ಏಟು ಬೀಳಬಹುದೆಂಬ ಭಯದಲ್ಲಿ ಬಾಲಕ ಮನೆ ಬಿಟ್ಟಿರಬಹುದು ಎನ್ನಲಾಗುತ್ತಿದೆ.

ನಿನ್ನೆ ರಾತ್ರಿ ಮನೆಯಿಂದ ಆಚೆ ಹೋದವನು ಇದುವರೆಗೂ ಮನೆಗೆ ಬಂದಿಲ್ಲ. ಇದರಿಂದ ಭಯಗೊಂಡ ದಂಪತಿ‌ ಬಾಲಕನಿಗಾಗಿ ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಮೆಜೆಸ್ಟಿಕ್ ಸುತ್ತಮುತ್ತ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ಮನೋಹರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗ ಇದ್ದು, ಕಾಣೆಯಾಗಿರುವ ರತನ್​ಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ ಎನ್ನಲಾಗುತ್ತಿದೆ. ಮಗ ಕಾಣೆಯಾದ ಕುರಿತು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು: ಜಗಳ ಆಡುತ್ತಿದ್ದ ಮಕ್ಕಳಿಗೆ ತಂದೆ ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ನೊಂದ ಬಾಲಕ ಮನೆಯಿಂದ ನಾಪತ್ತೆಯಾಗಿದ್ದಾನೆ.

ರತನ್ ಗೌಡ(14) ನಾಪತ್ತೆಯಾಗಿರುವ ಬಾಲಕ. ಈತ ಮಹಾಲಕ್ಷ್ಮೀ ಲೇಔಟ್​ನ ನಿವಾಸಿ ಮನೋಹರ್ ಎಂಬುವವರ ಮಗ. ರತನ್ ಗೌಡ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದು, ಈತ ವಿದ್ಯಾಭಾರತಿ ಸ್ಕೂಲ್​ನಲ್ಲಿ 7ನೇ ತರಗತಿ ಓದುತ್ತಿದ್ದ. ನಿನ್ನೆಅಕ್ಕನ ಜೊತೆ ಜಗಳ ಮಾಡುತ್ತಿದ್ದ. ಇದನ್ನು ಗಮನಿಸಿದ ತಂದೆ ಮನೋಹರ್ ಬುದ್ದಿ ಮಾತು ಹೇಳಿದ್ದಾರೆ. ಇದಾದ ಬಳಿಕ ಅಪ್ಪನಿಂದ ಏಟು ಬೀಳಬಹುದೆಂಬ ಭಯದಲ್ಲಿ ಬಾಲಕ ಮನೆ ಬಿಟ್ಟಿರಬಹುದು ಎನ್ನಲಾಗುತ್ತಿದೆ.

ನಿನ್ನೆ ರಾತ್ರಿ ಮನೆಯಿಂದ ಆಚೆ ಹೋದವನು ಇದುವರೆಗೂ ಮನೆಗೆ ಬಂದಿಲ್ಲ. ಇದರಿಂದ ಭಯಗೊಂಡ ದಂಪತಿ‌ ಬಾಲಕನಿಗಾಗಿ ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಮೆಜೆಸ್ಟಿಕ್ ಸುತ್ತಮುತ್ತ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ಮನೋಹರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗ ಇದ್ದು, ಕಾಣೆಯಾಗಿರುವ ರತನ್​ಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ ಎನ್ನಲಾಗುತ್ತಿದೆ. ಮಗ ಕಾಣೆಯಾದ ಕುರಿತು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Intro:Body:ಬುದ್ದಿ ಮಾತು ಹೇಳಿದಕ್ಕೆ ಮನೆ ಬಿಟ್ಟು ಬಾಲಕ..!

ಬೆಂಗಳೂರು: ಜಗಳ ಆಡುತ್ತಿದ್ದ ಮಕ್ಕಳಿಗೆ ಅಪ್ಪ ಬುದ್ದಿಮಾತು ಹೇಳಿದ್ದಕ್ಕೆ ಮಗ ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ‌ನಡೆದಿದೆ..
ರತನ್ ಗೌಡ 14 ವರ್ಷ ನಾಪತ್ತೆಯಾಗಿರುವ ಬಾಲಕ. ಮಹಾಲಕ್ಷ್ಮೀ ಲೇಔಟ್ ನ ಮನೆಯಿಂದ ಮನೋಹರ್ ಎಂಬವರ ಮಗ ರತನ್ ಗೌಡ ನೆನ್ನೆ ರಾತ್ರಿಯಿಂದ ಕಾಣೆಯಾಗಿದ್ದಾನೆ. ಏರಿಯಾದ ವಿದ್ಯಾಭಾರತಿ ಸ್ಕೂಲ್ ನಲ್ಲಿ 7ನೇ ತರಗತಿ ಓದುತ್ತಿದ್ದ.ನೆನ್ನೆ ಬೆಳಗ್ಗೆ ಅಕ್ಕನ ಜೊತೆ ಜಗಳ ಮಾಡುತ್ತಿದ್ದಾಗ ತಂದೆ ಮನೋಹರ್ ಬುದ್ದಿಮಾತು ಹೇಳಿದ್ದ ..ಸಂಜೆಗೆ ಅಪ್ಪನಿಂದ ಏಟು ಬೀಳಬಹುದೆಂಬ ಭಯದಲ್ಲಿ ಮನೆ ಬಿಟ್ಟಿರಬಹುದು ಎನ್ನಲಾಗ್ತಿದೆ.. ನೆನ್ನೆರಾತ್ರಿ 8-15 ಕ್ಕೆ ಮನೆಯಿಂದ ಆಚೆ ಹೋಗಿರುವವನು ಇದುವರೆಗೂ ಮನೆಗೆ ಬಂದಿಲ್ಲ. ಇದರಿಂದ ಭಯಗೊಂಡ ಮನೋಹರ್ ದಂಪತಿ‌ ಮಗನಿಗಾಗಿ ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಮೆಜೆಸ್ಟಿಕ್ ಸುತ್ತಮುತ್ತ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ಮನೋಹರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗ.ಓದಿನಲ್ಲಿ ಅಸಕ್ತಿಯಿಲ್ಲದ ರತನ್ ಗೌಡ ಅಪ್ಪನ ಮಾತಿನಿಂದ ಸೈಲೆಂಟ್ ಆಗಿದ್ದ..ಆದರೆ ಮನೆ ಬಿಟ್ಟು ಹೋಗುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ.. ಕಾಣೆಯಾದ ಕಾರಣ ಮಹಾಲಕ್ಷ್ಮೀಲೇಔಟ್ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಅಂತ ಪೋಷಕರು ತಮ್ಮ‌ ಅಳಲು ತೋಡಿಕೊಂಡಿದ್ದಾರೆ.
Conclusion:ಬಾಲಕ ಪೊಟೊ ಬ್ಲರ್ ಮಾಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.