ETV Bharat / state

ಕೋಲಾರ ಜಿಲ್ಲಾ ಆಸ್ಪತ್ರೆ ದುಃಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯುತ್ತೇವೆ: ಕೋಟಾ ಶ್ರೀನಿವಾಸ ಪೂಜಾರಿ

ಕೋಲಾರ ಜಿಲ್ಲಾ ಆಸ್ಪತ್ರೆಯ ಸ್ಥಿತಿ ತರಕಾರಿ ಮಾರುಕಟ್ಟೆಯಂತೆ ಭಾಸವಾಗುತ್ತಿದೆ - ಜೆಡಿಎಸ್ ಸಚೇತಕ ಗೋವಿಂದರಾಜು.

author img

By

Published : Feb 14, 2023, 9:44 PM IST

ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು : ಕೋಲಾರ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ದೃಷ್ಟಿಯಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಜೆಡಿಎಸ್ ಸಚೇತಕ ಗೋವಿಂದರಾಜು ಅಭಿಪ್ರಾಯ ಪಟ್ಟಿದ್ದಾರೆ. ನಿಯಮ 72 ರ ಅಡಿ ಗಮನ ಸೆಳೆಯುವ ಸೂಚನೆ ಅಡಿ ಕೋಲಾರ ಜಿಲ್ಲಾ ಆಸ್ಪತ್ರೆ ದುಃಸ್ಥಿತಿ, ಅವ್ಯವಸ್ಥೆ, ಸಿಬ್ಬಂದಿ ಕೊರತೆ ವಿಚಾರವಾಗಿ ನಡೆಸಿದ ಚರ್ಚೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೀಡಿದ ಉತ್ತರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಸಚಿವರ ಜತೆ ಸಾಕಷ್ಟು ಸಾರಿ ಪ್ರಸ್ತಾಪ ಮಾಡಿದ್ದೇನೆ. ಆದರೆ ಪ್ರಯೋಜನ ಆಗಿಲ್ಲ. ಸರ್ಕಾರ ನೀಡಿದ ಉತ್ತರ ಸರಿ ಇಲ್ಲ. ಸಮಾಧಾನಕರ ಉತ್ತರ ಇದಲ್ಲ. ಇಲ್ಲಿರುವ ಉತ್ತರ ಅಲ್ಲಿರುವ ಸ್ಥಿತಿ ಅಜಗಜಾಂತರ. 18 ಮಂದಿ ಮಾತ್ರ ನುರಿತ ತಜ್ಞರಿದ್ದಾರೆ.

ದೋಷಪೂರಿತ ಮಾಹಿತಿ ಇದಾಗಿದೆ: ಐಸಿಯುಗೆ ಅಗತ್ಯ ವೈದ್ಯರಿಲ್ಲ. ಆಸ್ಪತ್ರೆಯ ಸ್ಥಿತಿ ಕೋಲಾರ ತರಕಾರಿ ಮಾರುಕಟ್ಟೆಯಂತೆ ಭಾಸವಾಗುತ್ತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಂದಲೇ ಮಾತನಾಡಿ ಮಾಹಿತಿ ಪಡೆದಿದ್ದೇನೆ. ನಾನು ಸ್ವತಃ ಹಣ ಹೂಡಿ, ಸ್ನೇಹಿತರಿಂದ ಹಣ ಹಾಕಿಸಿ 90 ಕೋಟಿ ರೂ. ಅನುದಾನ ನೀಡಿದ್ದೇನೆ. ಆದರೆ, ಅದಕ್ಕೆ ಅಗತ್ಯ ಅಭಿವೃದ್ಧಿ ಆಗಿಲ್ಲ. ದೋಷಪೂರಿತ ಮಾಹಿತಿ ಇದಾಗಿದೆ ಎಂದರು. ಸ್ಥಳಕ್ಕೆ ತೆರಳಿದರೆ ಪರಿಸ್ಥಿತಿ ಅರಿವಾಗುತ್ತದೆ. ಇಲ್ಲಿನ ಎಲ್ಲ ಸಮಸ್ಯೆಗೆ ಪರಿಹಾರವಾಗಬೇಕು ಎಂದರು.

ಸಭಾನಾಯಕರು ಮಾತನಾಡಿ, ಮೂರು ರಾಜ್ಯದ 1500 ಮಂದಿ ಹೊರರೋಗಿಗಳಾಗಿ ಭೇಟಿ ನೀಡುತ್ತಾರೆ. 300 ಮಂದಿ ಒಳರೋಗಿಗಳಾಗಿ ಇರುತ್ತಾರೆ. ಅಲ್ಲಿನ ಪರಿಸ್ಥಿತಿ ಅರಿವು ಮೂಡಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳನ್ನು ಕಳುಹಿಸಿ ವರದಿ ತರಿಸುತ್ತೇನೆ. ಗೋವಿಂದರಾಜು ಅವರನ್ನೂ ಜತೆಯಲ್ಲಿ ತೆರಳಲು ವ್ಯವಸ್ಥೆ ಮಾಡುತ್ತೇವೆ. ಅದಾದ ನಂತರವೂ ಸಮಸ್ಯೆ ಉಳಿದರೆ ಮತ್ತೆ ಪರಿಹರಿಸಲು ಯತ್ನಿಸುತ್ತೇವೆ ಎಂದು ಭರವಸೆ ಕೊಟ್ಟರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಿಯಮ 330 ರ ಅಡಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಾಕಷ್ಟು ಸೇವೆ ಸಲ್ಲಿಸುತ್ತಾರೆ. ಇವರನ್ನು ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಾರೆ.

ಹೊರಗುತ್ತಿಗೆ ನೌಕರರನ್ನಾಗಿ ತೆಗೆದುಕೊಳ್ಳಲಾಗುತ್ತದೆ. 5-6 ಸಾವಿರ ರೂ. ನೀಡಲಾಗುತ್ತದೆ. ಆದರೆ, ಸರ್ಕಾರ 12 ಸಾವಿರ ರೂ. ಪಾವತಿಸುತ್ತದೆ. 6 ಸಾವಿರ ಗ್ರಾಮ ಪಂಚಾಯಿತಿಯಲ್ಲಿ 30 ಸಾವಿರ ಜನರಿಗೆ 15 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಯಾವುದೇ ರೀತಿ ಭವಿಷ್ಯ ನಿಧಿ, ವಿಮೆ ಸವಲತ್ತು ಇಲ್ಲ. ನೌಕರರಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಹೇಳಿ ಅವನ್ನು ವಿವರಿಸಿದರು. ಸಿ ಮತ್ತು ಡಿ ದರ್ಜೆ ನೌಕರರನ್ನು ಗುತ್ತಿಗೆ ಆಧಾರದಿಂದ ವರ್ಗಾಯಿಸಿ ಸರ್ಕಾರಿ ನೌಕರರನ್ನಾಗಿ ಭದ್ರತೆ ಒದಗಿಸಬೇಕು ಎಂದರು.

ಹಲವು ಬೇಡಿಕೆ ಮುಂದಿಟ್ಟಿದ್ದಾರೆ: ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಮುಖ್ಯಮಂತ್ರಿಗಳು ವಿಚಾರ ಓದಿ ವಿಸ್ತೃತ ಉತ್ತರ ನೀಡಿದ್ದಾರೆ. ಸಿ ಮತ್ತು ಡಿ ದರ್ಜೆ ನೌಕರರು ನನ್ನನ್ನೂ ಭೇಟಿ ಆಗಿದ್ದರು. ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಅಗತ್ಯ ಸಂದರ್ಭದಲ್ಲಿ‌ ಒದಗುವ ಅವಕಾಶ ಬಳಸಿ ನ್ಯಾಯ ಒದಗಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಅಡಕೆಗೆ ಕ್ಯಾನ್ಸರ್ ತರಿಸುವುದಲ್ಲ, ಗುಣಪಡಿಸುವ ಶಕ್ತಿ ಇದೆ ಎಂಬ ವರದಿ ಕೈಸೇರಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಕೋಲಾರ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ದೃಷ್ಟಿಯಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಜೆಡಿಎಸ್ ಸಚೇತಕ ಗೋವಿಂದರಾಜು ಅಭಿಪ್ರಾಯ ಪಟ್ಟಿದ್ದಾರೆ. ನಿಯಮ 72 ರ ಅಡಿ ಗಮನ ಸೆಳೆಯುವ ಸೂಚನೆ ಅಡಿ ಕೋಲಾರ ಜಿಲ್ಲಾ ಆಸ್ಪತ್ರೆ ದುಃಸ್ಥಿತಿ, ಅವ್ಯವಸ್ಥೆ, ಸಿಬ್ಬಂದಿ ಕೊರತೆ ವಿಚಾರವಾಗಿ ನಡೆಸಿದ ಚರ್ಚೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೀಡಿದ ಉತ್ತರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಸಚಿವರ ಜತೆ ಸಾಕಷ್ಟು ಸಾರಿ ಪ್ರಸ್ತಾಪ ಮಾಡಿದ್ದೇನೆ. ಆದರೆ ಪ್ರಯೋಜನ ಆಗಿಲ್ಲ. ಸರ್ಕಾರ ನೀಡಿದ ಉತ್ತರ ಸರಿ ಇಲ್ಲ. ಸಮಾಧಾನಕರ ಉತ್ತರ ಇದಲ್ಲ. ಇಲ್ಲಿರುವ ಉತ್ತರ ಅಲ್ಲಿರುವ ಸ್ಥಿತಿ ಅಜಗಜಾಂತರ. 18 ಮಂದಿ ಮಾತ್ರ ನುರಿತ ತಜ್ಞರಿದ್ದಾರೆ.

ದೋಷಪೂರಿತ ಮಾಹಿತಿ ಇದಾಗಿದೆ: ಐಸಿಯುಗೆ ಅಗತ್ಯ ವೈದ್ಯರಿಲ್ಲ. ಆಸ್ಪತ್ರೆಯ ಸ್ಥಿತಿ ಕೋಲಾರ ತರಕಾರಿ ಮಾರುಕಟ್ಟೆಯಂತೆ ಭಾಸವಾಗುತ್ತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಂದಲೇ ಮಾತನಾಡಿ ಮಾಹಿತಿ ಪಡೆದಿದ್ದೇನೆ. ನಾನು ಸ್ವತಃ ಹಣ ಹೂಡಿ, ಸ್ನೇಹಿತರಿಂದ ಹಣ ಹಾಕಿಸಿ 90 ಕೋಟಿ ರೂ. ಅನುದಾನ ನೀಡಿದ್ದೇನೆ. ಆದರೆ, ಅದಕ್ಕೆ ಅಗತ್ಯ ಅಭಿವೃದ್ಧಿ ಆಗಿಲ್ಲ. ದೋಷಪೂರಿತ ಮಾಹಿತಿ ಇದಾಗಿದೆ ಎಂದರು. ಸ್ಥಳಕ್ಕೆ ತೆರಳಿದರೆ ಪರಿಸ್ಥಿತಿ ಅರಿವಾಗುತ್ತದೆ. ಇಲ್ಲಿನ ಎಲ್ಲ ಸಮಸ್ಯೆಗೆ ಪರಿಹಾರವಾಗಬೇಕು ಎಂದರು.

ಸಭಾನಾಯಕರು ಮಾತನಾಡಿ, ಮೂರು ರಾಜ್ಯದ 1500 ಮಂದಿ ಹೊರರೋಗಿಗಳಾಗಿ ಭೇಟಿ ನೀಡುತ್ತಾರೆ. 300 ಮಂದಿ ಒಳರೋಗಿಗಳಾಗಿ ಇರುತ್ತಾರೆ. ಅಲ್ಲಿನ ಪರಿಸ್ಥಿತಿ ಅರಿವು ಮೂಡಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳನ್ನು ಕಳುಹಿಸಿ ವರದಿ ತರಿಸುತ್ತೇನೆ. ಗೋವಿಂದರಾಜು ಅವರನ್ನೂ ಜತೆಯಲ್ಲಿ ತೆರಳಲು ವ್ಯವಸ್ಥೆ ಮಾಡುತ್ತೇವೆ. ಅದಾದ ನಂತರವೂ ಸಮಸ್ಯೆ ಉಳಿದರೆ ಮತ್ತೆ ಪರಿಹರಿಸಲು ಯತ್ನಿಸುತ್ತೇವೆ ಎಂದು ಭರವಸೆ ಕೊಟ್ಟರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಿಯಮ 330 ರ ಅಡಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಾಕಷ್ಟು ಸೇವೆ ಸಲ್ಲಿಸುತ್ತಾರೆ. ಇವರನ್ನು ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಾರೆ.

ಹೊರಗುತ್ತಿಗೆ ನೌಕರರನ್ನಾಗಿ ತೆಗೆದುಕೊಳ್ಳಲಾಗುತ್ತದೆ. 5-6 ಸಾವಿರ ರೂ. ನೀಡಲಾಗುತ್ತದೆ. ಆದರೆ, ಸರ್ಕಾರ 12 ಸಾವಿರ ರೂ. ಪಾವತಿಸುತ್ತದೆ. 6 ಸಾವಿರ ಗ್ರಾಮ ಪಂಚಾಯಿತಿಯಲ್ಲಿ 30 ಸಾವಿರ ಜನರಿಗೆ 15 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಯಾವುದೇ ರೀತಿ ಭವಿಷ್ಯ ನಿಧಿ, ವಿಮೆ ಸವಲತ್ತು ಇಲ್ಲ. ನೌಕರರಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಹೇಳಿ ಅವನ್ನು ವಿವರಿಸಿದರು. ಸಿ ಮತ್ತು ಡಿ ದರ್ಜೆ ನೌಕರರನ್ನು ಗುತ್ತಿಗೆ ಆಧಾರದಿಂದ ವರ್ಗಾಯಿಸಿ ಸರ್ಕಾರಿ ನೌಕರರನ್ನಾಗಿ ಭದ್ರತೆ ಒದಗಿಸಬೇಕು ಎಂದರು.

ಹಲವು ಬೇಡಿಕೆ ಮುಂದಿಟ್ಟಿದ್ದಾರೆ: ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಮುಖ್ಯಮಂತ್ರಿಗಳು ವಿಚಾರ ಓದಿ ವಿಸ್ತೃತ ಉತ್ತರ ನೀಡಿದ್ದಾರೆ. ಸಿ ಮತ್ತು ಡಿ ದರ್ಜೆ ನೌಕರರು ನನ್ನನ್ನೂ ಭೇಟಿ ಆಗಿದ್ದರು. ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಅಗತ್ಯ ಸಂದರ್ಭದಲ್ಲಿ‌ ಒದಗುವ ಅವಕಾಶ ಬಳಸಿ ನ್ಯಾಯ ಒದಗಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಅಡಕೆಗೆ ಕ್ಯಾನ್ಸರ್ ತರಿಸುವುದಲ್ಲ, ಗುಣಪಡಿಸುವ ಶಕ್ತಿ ಇದೆ ಎಂಬ ವರದಿ ಕೈಸೇರಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.