ETV Bharat / state

ಕಾಂಗ್ರೆಸ್ ಕಾಲದ ಹಗರಣಗಳನ್ನು ಜನರ ಮುಂದಿಡುತ್ತೇವೆ.. ಸಿ ಟಿ ರವಿ

author img

By

Published : Sep 4, 2022, 4:58 PM IST

ಕಾಂಗ್ರೆಸ್ ಅಧಿಕಾರದಲ್ಲಿರುವಾಗ ನಡೆದಿರುವ ಹಗರಣಗಳ ತನಿಖೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಕಾಲದ ಹಗರಣಗಳನ್ನು ಜನರ ಮುಂದಿಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

we-will-bring-the-scandal-of-the-congress-says-ct-ravi
ಕಾಂಗ್ರೆಸ್ ಕಾಲದ ಹಗರಣಗಳನ್ನು ಜನರ ಮುಂದಿಡುತ್ತೇವೆ.. ಸಿ ಟಿ ರವಿ

ಬೆಂಗಳೂರು : ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣವನ್ನು ಬಯಲಿಗೆ ಎಳೆಯುವ ಮತ್ತು ತನಿಖೆ ನಡೆಸುವ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ಕಾಲದ ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣಗಳನ್ನು ಬಯಲಿಗೆಳೆಯಬೇಕು. ಆ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್ ಹಗರಣಗಳನ್ನು ಬಯಲಿಗೆಳೆಯುವ ವಿಚಾರದ ಕುರಿತು ಈಗಲೇ ಹೆಚ್ಚಿನ ವಿವರ ನೀಡಲ್ಲ, ಮುಂದೆ ನಿಮಗೇ ತಿಳಿಯುತ್ತದೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ : ಜಲಧಾರೆಯಿಂದ ಮಳೆ ಆಗಿದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಸಿ ಟಿ ರವಿ ವ್ಯಂಗ್ಯವಾಡಿದರು. ಹಾಗಾದರೆ ಅತಿವೃಷ್ಟಿಗೆ ಕುಮಾರಸ್ವಾಮಿ ಕಾರಣ. ಜಲಧಾರೆಯಿಂದ ಮಳೆ ಬಂತು ಎನ್ನುವುದಾದರೆ ರಾಮನಗರದಲ್ಲಿ ಜಾಸ್ತಿ ಮಳೆಯಾಗಿದೆಯಾ ? ಹಾಗಾದರೆ ಪಾಕಿಸ್ತಾನದಲ್ಲೂ ಅತಿವೃಷ್ಟಿ ಆಗಿದೆ. ಪಾಕಿಸ್ತಾನದಲ್ಲೂ ಮಳೆ ಆಗಲಿ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದರಾ? ಎಂದು ವ್ಯಂಗ್ಯವಾಡಿದರು. ‌

ಅರವಿಂದ್ ಲಿಂಬಾವಳಿ ವರ್ತನೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು. ಇಲ್ಲವಾದರೆ ವೈಯಕ್ತಿಕವಾಗಿಯೂ ನಷ್ಟ, ಪಕ್ಷಕ್ಕೂ ನಷ್ಟ. ಲಿಂಬಾವಳಿ ಹಿರಿಯರು, ಸಚಿವರಾಗಿದ್ದವರು. ಲಿಂಬಾವಳಿ ಹೇಳಿಕೆಯನ್ನು ಸಮಗ್ರವಾಗಿ ನೋಡಬೇಕು. ಸಮಗ್ರವಾಗಿ ನೋಡಿದಾಗ ಒಂದು ದೃಷ್ಟಿಕೋನ ಸಿಗುತ್ತದೆ ಎಂದರು.

ಬಿಜೆಪಿಯಿಂದ ಸೇವಾ ಪಾಕ್ಷಿಕ : ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಜನ್ಮದಿನ, ಸೆಪ್ಟೆಂಬರ್ 25 ದೀನದಯಾಳ್ ಉಪಾಧ್ಯಾಯರ ಜನ್ಮದಿನ. ಅಕ್ಟೋಬರ್ 2 ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ. ಈ ಹಿನ್ನೆಲೆ ಸೇವಾ ಪಾಕ್ಷಿಕವನ್ನು ಬಿಜೆಪಿ ಕಾರ್ಯಕರ್ತರು ಆಚರಿಸುತ್ತೇವೆ‌. ಸೆ. 17 ರಂದು ರಾಷ್ಟ್ರಾದ್ಯಂತ ಯುವ ಮೋರ್ಚಾದವರು ರಕ್ತದಾನ ಶಿಬಿರ ಮಾಡುತ್ತಾರೆ. ಆರೋಗ್ಯ ಶಿಬಿರ ಆಯೋಜಿಸುತ್ತಾರೆ ಎಂದು ತಿಳಿಸಿದರು.

ಜೊತೆಗೆ ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಿಸುವುದು. ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ಅಭಿವೃದ್ಧಿ ಮಾಡುವುದು. ಕೆರೆ ಬಾವಿ ನದಿಗಳ ಸ್ವಚ್ಛತೆಯಲ್ಲಿ ಭಾಗಿಯಾಗಲಿದ್ದಾರೆ. 2025 ಕ್ಕೆ ಭಾರತ ಕ್ಷಯಮುಕ್ತವಾಗಬೇಕು ಅನ್ನೋದು ಮೋದಿಯವರ ಸಂಕಲ್ಪ. ಆದ್ದರಿಂದ ಶಾಸಕರು, ಸಂಸದರು, ಜನನಾಯಕರು 5 ಕ್ಷಯ ರೋಗಿಗಳಿಗೆ ಸಹಾಯ ಮಾಡುವುದು. ಸಾಮಾಜಿಕ ಸದ್ಭಾವನ ಯೋಜನೆ ರೂಪಿಸುವುದು, ಕಮಲ ಕ್ರೀಡಾಕೂಟದ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಸಿ ಟಿ ರವಿ ಮಾಹಿತಿ ನೀಡಿದರು.

ಜನಸಂವಾದ ಕಾರ್ಯಕ್ರಮ ಮತ್ತು ಜನೋತ್ಸವ ಕಾರ್ಯಕ್ರಮ : ರಾಜ್ಯ ಸರ್ಕಾರದ ವತಿಯಿಂದ ಜನ ಸಂವಾದ ಕಾರ್ಯಕ್ರಮ, ಜನೋತ್ಸವ ಕಾರ್ಯಕ್ರಮಗಳನ್ನು ಮಾಡಲು ಸಿಎಂ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯೋಜನೆ ರೂಪಿಸಿದ್ದೇವೆ. ಕರ್ನಾಟಕದಲ್ಲಿ ಕೇಂದ್ರ ಮತ್ತು ರಾಜ್ಯದ ಯೋಜನಾ ಫಲಾನುಭವಿಗಳಿದ್ದಾರೆ. 65 ರಿಂದ 70 % ಫಲಾನುಭವಿಗಳಿದ್ದು, ಅವರನ್ನು ಸಂಪರ್ಕಿಸುವ ಸಲುವಾಗಿ ಚರ್ಚೆ ನಡೆಸಿದ್ದೇವೆ. ಬಿಜೆಪಿ ರಾಜ್ಯ ನಾಯಕರ ಪ್ರವಾಸದ ಬಗ್ಗೆಯೂ ಚರ್ಚೆ ಆಗಿದೆ ಎಂದರು.

ಬೆಂಗಳೂರಿನ ಹೆಸರನ್ನು ಯಾರಿಂದಲೂ ಹಾಳು ಮಾಡಲು ಆಗುವುದಿಲ್ಲ. ರಾಜಕಾಲುವೆ ಒತ್ತುವರಿ ಬಿಜೆಪಿ ಸರ್ಕಾರ ಬಂದ ಮೇಲೆ ಆಗಿದ್ಯಾ? ಕೆರೆಗಳ ಒತ್ತುವರಿ ಮಾಡಿದ್ದು ಯಾರು ಎಂದು ಅವರೇ ಉತ್ತರ ಕೊಡಬೇಕು. ಯಾವುದನ್ನೂ ಸರಿಮಾಡಲು ಸಾಧ್ಯವಿದೆಯೋ ಅದನ್ನು ಸರ್ಕಾರ ಮಾಡುತ್ತಿದೆ. ಉಪನಗರಗಳ ನಿರ್ಮಾಣ ಮಾಡೋದಕ್ಕೆ ಸಿಎಂ ಆಗಲೇ ಘೋಷಣೆ ಮಾಡಿದ್ದಾರೆ ಎಂದರು.

ರಾಜಕಾಲುವೆ ಒತ್ತುವರಿ ವಿರುದ್ದ ಸೂಕ್ತ ಕ್ರಮ : ರಾಜಕಾಲುವೆ ಒತ್ತುವರಿಯನ್ನು ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಒತ್ತುವರಿಯನ್ನು ಈಗಾಗಲೇ ಹೊಡೆಯುವ ಕೆಲಸ ಪ್ರಾರಂಭವಾಗಿದೆ. ಇನ್ನೂ ಕೆಲವರು ಕೋರ್ಟ್‌ಗೆ ಹೋಗಿ ಸ್ಟೇ ಕೂಡ ತಂದಿದ್ದಾರೆ. ಒಂದೊಂದು ನಕ್ಷೆಯಲ್ಲಿ ಒಂದೊಂದು ರೀತಿ ಇದೆ. ನಕ್ಷೆಯಲ್ಲಿ ಕೆಲ ಗೊಂದಲವಿದೆ. ತಪ್ಪು ಮಾಡಿದವರನ್ನು ಬೆಂಬಲಿಸುವ ಕೆಲಸ ಮಾಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ : ಮಹಿಳೆಯ ಜೊತೆ ದುರ್ನಡತೆ: ಶಾಸಕ ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣವನ್ನು ಬಯಲಿಗೆ ಎಳೆಯುವ ಮತ್ತು ತನಿಖೆ ನಡೆಸುವ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ಕಾಲದ ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣಗಳನ್ನು ಬಯಲಿಗೆಳೆಯಬೇಕು. ಆ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್ ಹಗರಣಗಳನ್ನು ಬಯಲಿಗೆಳೆಯುವ ವಿಚಾರದ ಕುರಿತು ಈಗಲೇ ಹೆಚ್ಚಿನ ವಿವರ ನೀಡಲ್ಲ, ಮುಂದೆ ನಿಮಗೇ ತಿಳಿಯುತ್ತದೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ : ಜಲಧಾರೆಯಿಂದ ಮಳೆ ಆಗಿದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಸಿ ಟಿ ರವಿ ವ್ಯಂಗ್ಯವಾಡಿದರು. ಹಾಗಾದರೆ ಅತಿವೃಷ್ಟಿಗೆ ಕುಮಾರಸ್ವಾಮಿ ಕಾರಣ. ಜಲಧಾರೆಯಿಂದ ಮಳೆ ಬಂತು ಎನ್ನುವುದಾದರೆ ರಾಮನಗರದಲ್ಲಿ ಜಾಸ್ತಿ ಮಳೆಯಾಗಿದೆಯಾ ? ಹಾಗಾದರೆ ಪಾಕಿಸ್ತಾನದಲ್ಲೂ ಅತಿವೃಷ್ಟಿ ಆಗಿದೆ. ಪಾಕಿಸ್ತಾನದಲ್ಲೂ ಮಳೆ ಆಗಲಿ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದರಾ? ಎಂದು ವ್ಯಂಗ್ಯವಾಡಿದರು. ‌

ಅರವಿಂದ್ ಲಿಂಬಾವಳಿ ವರ್ತನೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು. ಇಲ್ಲವಾದರೆ ವೈಯಕ್ತಿಕವಾಗಿಯೂ ನಷ್ಟ, ಪಕ್ಷಕ್ಕೂ ನಷ್ಟ. ಲಿಂಬಾವಳಿ ಹಿರಿಯರು, ಸಚಿವರಾಗಿದ್ದವರು. ಲಿಂಬಾವಳಿ ಹೇಳಿಕೆಯನ್ನು ಸಮಗ್ರವಾಗಿ ನೋಡಬೇಕು. ಸಮಗ್ರವಾಗಿ ನೋಡಿದಾಗ ಒಂದು ದೃಷ್ಟಿಕೋನ ಸಿಗುತ್ತದೆ ಎಂದರು.

ಬಿಜೆಪಿಯಿಂದ ಸೇವಾ ಪಾಕ್ಷಿಕ : ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಜನ್ಮದಿನ, ಸೆಪ್ಟೆಂಬರ್ 25 ದೀನದಯಾಳ್ ಉಪಾಧ್ಯಾಯರ ಜನ್ಮದಿನ. ಅಕ್ಟೋಬರ್ 2 ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ. ಈ ಹಿನ್ನೆಲೆ ಸೇವಾ ಪಾಕ್ಷಿಕವನ್ನು ಬಿಜೆಪಿ ಕಾರ್ಯಕರ್ತರು ಆಚರಿಸುತ್ತೇವೆ‌. ಸೆ. 17 ರಂದು ರಾಷ್ಟ್ರಾದ್ಯಂತ ಯುವ ಮೋರ್ಚಾದವರು ರಕ್ತದಾನ ಶಿಬಿರ ಮಾಡುತ್ತಾರೆ. ಆರೋಗ್ಯ ಶಿಬಿರ ಆಯೋಜಿಸುತ್ತಾರೆ ಎಂದು ತಿಳಿಸಿದರು.

ಜೊತೆಗೆ ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಿಸುವುದು. ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ಅಭಿವೃದ್ಧಿ ಮಾಡುವುದು. ಕೆರೆ ಬಾವಿ ನದಿಗಳ ಸ್ವಚ್ಛತೆಯಲ್ಲಿ ಭಾಗಿಯಾಗಲಿದ್ದಾರೆ. 2025 ಕ್ಕೆ ಭಾರತ ಕ್ಷಯಮುಕ್ತವಾಗಬೇಕು ಅನ್ನೋದು ಮೋದಿಯವರ ಸಂಕಲ್ಪ. ಆದ್ದರಿಂದ ಶಾಸಕರು, ಸಂಸದರು, ಜನನಾಯಕರು 5 ಕ್ಷಯ ರೋಗಿಗಳಿಗೆ ಸಹಾಯ ಮಾಡುವುದು. ಸಾಮಾಜಿಕ ಸದ್ಭಾವನ ಯೋಜನೆ ರೂಪಿಸುವುದು, ಕಮಲ ಕ್ರೀಡಾಕೂಟದ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಸಿ ಟಿ ರವಿ ಮಾಹಿತಿ ನೀಡಿದರು.

ಜನಸಂವಾದ ಕಾರ್ಯಕ್ರಮ ಮತ್ತು ಜನೋತ್ಸವ ಕಾರ್ಯಕ್ರಮ : ರಾಜ್ಯ ಸರ್ಕಾರದ ವತಿಯಿಂದ ಜನ ಸಂವಾದ ಕಾರ್ಯಕ್ರಮ, ಜನೋತ್ಸವ ಕಾರ್ಯಕ್ರಮಗಳನ್ನು ಮಾಡಲು ಸಿಎಂ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯೋಜನೆ ರೂಪಿಸಿದ್ದೇವೆ. ಕರ್ನಾಟಕದಲ್ಲಿ ಕೇಂದ್ರ ಮತ್ತು ರಾಜ್ಯದ ಯೋಜನಾ ಫಲಾನುಭವಿಗಳಿದ್ದಾರೆ. 65 ರಿಂದ 70 % ಫಲಾನುಭವಿಗಳಿದ್ದು, ಅವರನ್ನು ಸಂಪರ್ಕಿಸುವ ಸಲುವಾಗಿ ಚರ್ಚೆ ನಡೆಸಿದ್ದೇವೆ. ಬಿಜೆಪಿ ರಾಜ್ಯ ನಾಯಕರ ಪ್ರವಾಸದ ಬಗ್ಗೆಯೂ ಚರ್ಚೆ ಆಗಿದೆ ಎಂದರು.

ಬೆಂಗಳೂರಿನ ಹೆಸರನ್ನು ಯಾರಿಂದಲೂ ಹಾಳು ಮಾಡಲು ಆಗುವುದಿಲ್ಲ. ರಾಜಕಾಲುವೆ ಒತ್ತುವರಿ ಬಿಜೆಪಿ ಸರ್ಕಾರ ಬಂದ ಮೇಲೆ ಆಗಿದ್ಯಾ? ಕೆರೆಗಳ ಒತ್ತುವರಿ ಮಾಡಿದ್ದು ಯಾರು ಎಂದು ಅವರೇ ಉತ್ತರ ಕೊಡಬೇಕು. ಯಾವುದನ್ನೂ ಸರಿಮಾಡಲು ಸಾಧ್ಯವಿದೆಯೋ ಅದನ್ನು ಸರ್ಕಾರ ಮಾಡುತ್ತಿದೆ. ಉಪನಗರಗಳ ನಿರ್ಮಾಣ ಮಾಡೋದಕ್ಕೆ ಸಿಎಂ ಆಗಲೇ ಘೋಷಣೆ ಮಾಡಿದ್ದಾರೆ ಎಂದರು.

ರಾಜಕಾಲುವೆ ಒತ್ತುವರಿ ವಿರುದ್ದ ಸೂಕ್ತ ಕ್ರಮ : ರಾಜಕಾಲುವೆ ಒತ್ತುವರಿಯನ್ನು ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಒತ್ತುವರಿಯನ್ನು ಈಗಾಗಲೇ ಹೊಡೆಯುವ ಕೆಲಸ ಪ್ರಾರಂಭವಾಗಿದೆ. ಇನ್ನೂ ಕೆಲವರು ಕೋರ್ಟ್‌ಗೆ ಹೋಗಿ ಸ್ಟೇ ಕೂಡ ತಂದಿದ್ದಾರೆ. ಒಂದೊಂದು ನಕ್ಷೆಯಲ್ಲಿ ಒಂದೊಂದು ರೀತಿ ಇದೆ. ನಕ್ಷೆಯಲ್ಲಿ ಕೆಲ ಗೊಂದಲವಿದೆ. ತಪ್ಪು ಮಾಡಿದವರನ್ನು ಬೆಂಬಲಿಸುವ ಕೆಲಸ ಮಾಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ : ಮಹಿಳೆಯ ಜೊತೆ ದುರ್ನಡತೆ: ಶಾಸಕ ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.