ETV Bharat / state

ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ: ಮಾಜಿ ಸಚಿವ ನಾಡಗೌಡ

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ವೆಂಕಟರಾವ್​ ನಾಡಗೌಡ ಅವರು, ನಮ್ಮ ಸರ್ಕಾರ ಗೊಂದಲದಿಂದ ಬಿದ್ದು ಹೋಗಿದೆ. ಆದರೆ ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

author img

By

Published : Sep 20, 2019, 4:31 PM IST

ವೆಂಕಟರಾವ್​ ನಾಡಗೌಡ,Venkatrao Nadagouda

ಬೆಂಗಳೂರು: ಗೊಂದಲದಿಂದಾಗಿ ನಮ್ಮ ಸರ್ಕಾರ ಬಿದ್ದು ಹೋಗಿದೆ. ಆದರೆ ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ ಎಂದು ಮಾಜಿ ಸಚಿವ ವೆಂಕಟರಾವ್​ ನಾಡಗೌಡ ಹೇಳಿದ್ದಾರೆ.

ಮಾಜಿ ಸಚಿವ ವೆಂಕಟರಾವ್​ ನಾಡಗೌಡ

ಇಂದು ವಿಧಾನಸೌಧದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದೇ ವರ್ಷದಲ್ಲಿ ಎರಡೆರಡು ಚುನಾವಣೆ ಎದುರಿಸೋದು ಕಷ್ಟ. ಮಧ್ಯಂತರ ಚುನಾವಣೆ ಬರುತ್ತೆ ಎಂದು ನಿರ್ದಿಷ್ಟವಾಗಿ ಹೇಳೋದು ಕಷ್ಟ. ಪ್ರಜಾಪ್ರಭುತ್ವ ದೇಶದಲ್ಲಿ ವರ್ಷಕ್ಕೊಂದು ಚುನಾವಣೆ ಸೂಕ್ತ ಅಲ್ಲ. ಒಂದು ಬಾರಿ ಜನಾದೇಶ ಆದ ಬಳಿಕ ಐದು ವರ್ಷಗಳ ಕಾಲ ಸರ್ಕಾರ ಅಧಿಕಾರದಲ್ಲಿರಬೇಕು ಎಂದರು.

ಈ ಸರ್ಕಾರ ಬೀಳಬಾರದು, ಎರಡು ವರ್ಷ ಕೆಲಸ ಮಾಡಲಿ ಅನ್ನುವ ಬಯಕೆ ನಮಗೂ ಇದೆ. ಹೀಗೆ ಬಯಸುವುದು ತಪ್ಪಾ ಎಂದು ನಾಡಗೌಡ ಪ್ರಶ್ನಿಸಿದರು. ಇನ್ನು ಸಣ್ಣಪುಟ್ಟ ಅಸಮಧಾನ ಜೆಡಿಎಸ್​ನಲ್ಲಿ ಇದ್ದರೆ ಪಕ್ಷದ ವರಿಷ್ಠರಾದ ದೇವೇಗೌಡರು ಬಗೆಹರಿಸ್ತಾರೆ ಎಂದು ಮಾಜಿ ಸಚಿವ ತಿಳಿಸಿದರು.

ಬೆಂಗಳೂರು: ಗೊಂದಲದಿಂದಾಗಿ ನಮ್ಮ ಸರ್ಕಾರ ಬಿದ್ದು ಹೋಗಿದೆ. ಆದರೆ ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ ಎಂದು ಮಾಜಿ ಸಚಿವ ವೆಂಕಟರಾವ್​ ನಾಡಗೌಡ ಹೇಳಿದ್ದಾರೆ.

ಮಾಜಿ ಸಚಿವ ವೆಂಕಟರಾವ್​ ನಾಡಗೌಡ

ಇಂದು ವಿಧಾನಸೌಧದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದೇ ವರ್ಷದಲ್ಲಿ ಎರಡೆರಡು ಚುನಾವಣೆ ಎದುರಿಸೋದು ಕಷ್ಟ. ಮಧ್ಯಂತರ ಚುನಾವಣೆ ಬರುತ್ತೆ ಎಂದು ನಿರ್ದಿಷ್ಟವಾಗಿ ಹೇಳೋದು ಕಷ್ಟ. ಪ್ರಜಾಪ್ರಭುತ್ವ ದೇಶದಲ್ಲಿ ವರ್ಷಕ್ಕೊಂದು ಚುನಾವಣೆ ಸೂಕ್ತ ಅಲ್ಲ. ಒಂದು ಬಾರಿ ಜನಾದೇಶ ಆದ ಬಳಿಕ ಐದು ವರ್ಷಗಳ ಕಾಲ ಸರ್ಕಾರ ಅಧಿಕಾರದಲ್ಲಿರಬೇಕು ಎಂದರು.

ಈ ಸರ್ಕಾರ ಬೀಳಬಾರದು, ಎರಡು ವರ್ಷ ಕೆಲಸ ಮಾಡಲಿ ಅನ್ನುವ ಬಯಕೆ ನಮಗೂ ಇದೆ. ಹೀಗೆ ಬಯಸುವುದು ತಪ್ಪಾ ಎಂದು ನಾಡಗೌಡ ಪ್ರಶ್ನಿಸಿದರು. ಇನ್ನು ಸಣ್ಣಪುಟ್ಟ ಅಸಮಧಾನ ಜೆಡಿಎಸ್​ನಲ್ಲಿ ಇದ್ದರೆ ಪಕ್ಷದ ವರಿಷ್ಠರಾದ ದೇವೇಗೌಡರು ಬಗೆಹರಿಸ್ತಾರೆ ಎಂದು ಮಾಜಿ ಸಚಿವ ತಿಳಿಸಿದರು.

Intro:Body:KN_BNG_02_NADAGOWDA_BYTE_SCRIPT_7201951
ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ: ಮಾಜಿ ಸಚಿವ ವೆಂಕಟ್ರಾವ್ ನಾಡಗೌಡ

ಬೆಂಗಳೂರು: ಗೊಂದಲದಿಂದಾಗಿ ನಮ್ಮ ಸರ್ಕಾರ ಬಿದ್ದು ಹೋಯ್ತು. ಆದರೆ ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ ಎಂದು ಮಾಜಿ ಸಚಿವ ವೆಂಕಟ್ರಾವ್ ನಾಡಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದೇ ವರ್ಷದಲ್ಲಿ ಎರೆಡೆರಡು ಚುನಾವಣೆ ಎದುರಿಸೋದು ಕಷ್ಟ. ಮಧ್ಯಂತರ ಚುನಾವಣೆ ಬರುತ್ತೆ ಅಂತ ನಿರ್ಧಿಷ್ಟವಾಗಿ ಹೇಳೋದು ಕಷ್ಟ. ಪ್ರಜಾಪ್ರಭುತ್ವ ದೇಶದಲ್ಲಿ ವರ್ಷಕ್ಕೊಂದು ಚುನಾವಣೆ ಸೂಕ್ತ ಅಲ್ಲ. ಒಂದು ಸಾರಿ ಜನಾದೇಶ ಆದ ಬಳಿಕ ಐದು ವರ್ಷ ಒಂದು ಸರ್ಕಾರ ಅಧಿಕಾರದಲ್ಲಿ ಇರಬೇಕು ಎಂದು ಅಭಿಪ್ರಾಯ ಪಟ್ಟರು.

ಯಡಿಯೂರಪ್ಪ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅನಿರೀಕ್ಷಿತವಾಗಿ ಚುನಾವಣೆ ಬಂದರೆ ಎಲ್ಲರೂ ಕೂಡ ಅದನ್ನು ಅನಿವಾರ್ಯವಾಗಿ ಅದನ್ನು ಎದುರಿಸಬೇಕಾಗುತ್ತದೆ‌ ಎಂದು ತಿಳಿಸಿದರು.

ಕೆಂದ್ರದಿಂದ ಒಂದು ಪೃಸೆ ಅನುದಾನ ಬಂದಿಲ್ಲ.‌ ಆ ಅಸಮಧಾನ ನಮಗೂ ಇದೆ. ಕೇಂದ್ರದಲ್ಲಿ ಅವರದೇ ಸರ್ಕಾರ ಇದ್ರೂ ಕೇಂದ್ರದಿಂದ ಅನುದಾನ ಬಂದಿಲ್ಲ. ಇದು ಬಿಜೆಪಿ ಮತ್ತು ಕೇಂದ್ರ ನಡುವೆ ಸರಿ ಇಲ್ವಾ ಅನ್ನೋ ಪ್ರಶ್ನೆ ಬರುತ್ತದೆ. ಇದರಿಂದ ತಪ್ಪು ಸಂದೇಶ ಹೋಗುತ್ತದೆ ಎಂದು ಕಿಡಿ ಕಾರಿದರು.

ನಾವೆಲ್ಲದರು ಹೋದರೆ ಅದನ್ನು ಏನೋ ಬಿಂಬಿಸಲಾಗುತ್ತಿದೆ. ನಾನು ಈಗ ಒಬ್ಬ ಮಂತ್ರಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಅದಕ್ಕೆ ಅನ್ಯ ಅರ್ಥ ಕಲ್ಪಿಸಲಾಗುತ್ತದಾ?. ಹಾಗಾದರೆ ಕಷ್ಟ ಆಗುತ್ತದೆ ಕೆಲಸ ಮಾಡಲು ಎಂದು ವಿವರಿಸಿದರು.

ಸರ್ಕಾರ ಬೀಳಬಾರದು ಎರಡು ವರ್ಷ ಕೆಲಸ ಮಾಡಲಿ ಅನ್ನೋದು ಬಯಕೆ ಇದೆ. ಅದು ತಪ್ಪಾ. ನಾವು ಈ ರೀತಿ ಹೇಳಿದ್ರೆ ಬಿಜೆಪಿ ಪರ ಒಲವಿದೆ ಎಂದಲ್ಲ. ಸಣ್ಣ ಪುಟ್ಟ ಅಸಮಧಾನ ಜೆಡಿಎಸ್ ನಲ್ಲಿ ಇದ್ದರೆ ದೇವೇಗೌಡ ರು ಬಗೆಹರಿಸ್ತಾರೆ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.