ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ನೈಟ್ ಕರ್ಫ್ಯೂ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಏಕಾಂಗಿ ಸತ್ಯಾಗ್ರಹ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರ ಜನವರಿ 2 ರವರೆಗೆ ಕರ್ಫ್ಯೂ ಜಾರಿಗೆ ಮಾಡಿದೆ. ಕರ್ಫ್ಯೂ ಯಾಕೆ, ಯಾರಿಗಾಗಿ ಮಾಡಿದ್ರು ಅಂತ ಅವ್ರಿಗೆನೇ ಗೊತ್ತಿಲ್ಲ. ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರಿಲ್ಲ. ಬಾರ್, ಹೊಟೇಲ್ ತೆಗೆದಿರಬಹುದು. ಬಸ್ಗಳು ಓಡಾಡಬಹುದು ಅಂದ್ರೆ ಇದೆಂಥ ಕರ್ಫ್ಯೂ?, ಹದಗೆಟ್ಟ, ಅವಿವೇಕತನದ ಕರ್ಫ್ಯೂ ಬೇಡ. ಇಂತಹ ಕರ್ಫ್ಯೂ ಜನರಲ್ಲಿ ಭಯ ಹುಟ್ಟಿಸ್ತಿದೆ. ಯಾವುದೇ ಕಾರಣಕ್ಕೂ ಇಂತಹ ಕರ್ಫ್ಯೂ ಬೇಕಾಗಿಲ್ಲ. ಜನವರಿ 1ಕ್ಕೆ ಹೊಸವರ್ಷ ಆಚರಣೆ ಆಗಬೇಕು. ಪೊಲೀಸರ ಭದ್ರತೆ ಕೊಡಿ ಅಂತ ಹೇಳಿದರು.