ETV Bharat / state

ಕಿಡ್ನ್ಯಾಪ್​ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಗ್ಯಾಂಗ್​ ಬಂಧನ! - ಬೆಂಗಳೂರು ಅಪರಾಧ ಸುದ್ದಿ

ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ಸಾಗಿದ್ದಾರೆ.

three kidnapers arrested in Bengaluru  Bengaluru crime news  Avalahalli police station news  ಬೆಂಗಳೂರಿನಲ್ಲಿ ನಾಲ್ವರು ಕಿಡ್ನ್ಯಾಪರ್ಸ್ ​ಬಂಧನ  ಬೆಂಗಳೂರು ಅಪರಾಧ ಸುದ್ದಿ  ಆವಲಹಳ್ಳಿ ಪೊಲೀಸ್​ ಠಾಣೆ ಸುದ್ದಿ
ಕಿಡ್ನ್ಯಾಪ್​ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಗ್ಯಾಂಗ್​ ಬಂಧನ
author img

By

Published : Feb 19, 2022, 3:03 AM IST

ಬೆಂಗಳೂರು: ಆ ಗ್ಯಾಂಗ್​ ಸಿನಿಮಾ ರೀತಿಯಲ್ಲಿ ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿದರು. ಬಳಿಕ ಮನೆಯವರಿಗೆ ಕರೆ ಮಾಡಿ ದುಡ್ಡು ಕೊಡುವಂತೆ ಬೆದರಿಕೆ ಹಾಕಿದರು. ಆದ್ರೆ ಮೂರೇ ದಿನದಲ್ಲಿ ಖದೀಮರು ಸಿಕ್ಕಿ ಹಾಕಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಡುಸೊಣ್ಣೇನಹಳ್ಳಿ ಅಲೆಕ್ಸಾಂಡರ್​ನನ್ನು (50) ನಿಶಾಂತ್ (25), ಸಂತೋಷ್ (24) ಮತ್ತು ನವೀನ್ (23) ಎಂಬ ಆರೋಪಿಗಳು ಕಿಡ್ನ್ಯಾಪ್​ ಮಾಡಿ ಮೂರು ದಿನಗಳ ಕಾಲ ಕೋರಮಂಗಲ ಲಾಡ್ಜ್ ನಲ್ಲಿಟ್ಟಿದ್ದರು. ಬಳಿಕ ಅಲೆಕ್ಸಾಂಡರ್ ಹೆಂಡತಿ ರತ್ನಮ್ಮ ಬಳಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಓದಿ: ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಇದರಿಂದ ಕಂಗಲಾದ ರತ್ನಮ್ಮ ಆವಲಹಳ್ಳಿ ಪೊಲೀಸ್​ ಠಾಣೆಗೆ ಮಾಹಿತಿ ರವಾನಿಸಿದ್ದರು. ತಕ್ಷಣವೇ ಎತ್ತೆಚ್ಚುಕೊಂಡ ಇನ್ಸ್​ಪೆಕ್ಟರ್ ಪ್ರಕಾಶ್ ಡಿ.ಆರ್ ತಂಡವನ್ನ ರಚನೆ ಮಾಡಿ ಕಾರ್ಯಾಚರಣೆಗೆ ಇಳಿಸಿದರು.

ಹಣಕ್ಕೆ ಬೇಡಿಕೆ ಇಟ್ಟು ಕರೆ ಮಾಡಿದ ಮೊಬೈಲ್ ನಂಬರ್ ಟವರ್​ನ್ನು ಪರಿಶೀಲನೆ ಮಾಡಿದಾಗ ಬೆಂಗಳೂರಿನ ಕೊರಮಂಗಲದ ಲಾಡ್ಜ್​ ಸ್ಥಳವನ್ನು ತೊರಿಸಿತ್ತು. ಬಳಿಕ ಹಿಂಬಾಲಿಸಿಕೊಂಡು ಹೊದ ಪೊಲೀಸರಿಗೆ ಮೂವರು ಆರೋಪಿಗಳಿಂದ ಮಾಡಿರುವ ಕೃತ್ಯ ಕಂಡುಬಂದಿತ್ತು. ನಂತರ ಆರೋಪಿಗಳನ್ನ ವಶಕ್ಕೆ ಪಡೆದು ದೂರು ದಾಖಲು ಮಾಡಿ ತನಿಖೆಯನ್ನ ಆರಂಭಿಸಿದ್ದಾರೆ.

ಬೆಂಗಳೂರು: ಆ ಗ್ಯಾಂಗ್​ ಸಿನಿಮಾ ರೀತಿಯಲ್ಲಿ ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿದರು. ಬಳಿಕ ಮನೆಯವರಿಗೆ ಕರೆ ಮಾಡಿ ದುಡ್ಡು ಕೊಡುವಂತೆ ಬೆದರಿಕೆ ಹಾಕಿದರು. ಆದ್ರೆ ಮೂರೇ ದಿನದಲ್ಲಿ ಖದೀಮರು ಸಿಕ್ಕಿ ಹಾಕಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಡುಸೊಣ್ಣೇನಹಳ್ಳಿ ಅಲೆಕ್ಸಾಂಡರ್​ನನ್ನು (50) ನಿಶಾಂತ್ (25), ಸಂತೋಷ್ (24) ಮತ್ತು ನವೀನ್ (23) ಎಂಬ ಆರೋಪಿಗಳು ಕಿಡ್ನ್ಯಾಪ್​ ಮಾಡಿ ಮೂರು ದಿನಗಳ ಕಾಲ ಕೋರಮಂಗಲ ಲಾಡ್ಜ್ ನಲ್ಲಿಟ್ಟಿದ್ದರು. ಬಳಿಕ ಅಲೆಕ್ಸಾಂಡರ್ ಹೆಂಡತಿ ರತ್ನಮ್ಮ ಬಳಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಓದಿ: ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಇದರಿಂದ ಕಂಗಲಾದ ರತ್ನಮ್ಮ ಆವಲಹಳ್ಳಿ ಪೊಲೀಸ್​ ಠಾಣೆಗೆ ಮಾಹಿತಿ ರವಾನಿಸಿದ್ದರು. ತಕ್ಷಣವೇ ಎತ್ತೆಚ್ಚುಕೊಂಡ ಇನ್ಸ್​ಪೆಕ್ಟರ್ ಪ್ರಕಾಶ್ ಡಿ.ಆರ್ ತಂಡವನ್ನ ರಚನೆ ಮಾಡಿ ಕಾರ್ಯಾಚರಣೆಗೆ ಇಳಿಸಿದರು.

ಹಣಕ್ಕೆ ಬೇಡಿಕೆ ಇಟ್ಟು ಕರೆ ಮಾಡಿದ ಮೊಬೈಲ್ ನಂಬರ್ ಟವರ್​ನ್ನು ಪರಿಶೀಲನೆ ಮಾಡಿದಾಗ ಬೆಂಗಳೂರಿನ ಕೊರಮಂಗಲದ ಲಾಡ್ಜ್​ ಸ್ಥಳವನ್ನು ತೊರಿಸಿತ್ತು. ಬಳಿಕ ಹಿಂಬಾಲಿಸಿಕೊಂಡು ಹೊದ ಪೊಲೀಸರಿಗೆ ಮೂವರು ಆರೋಪಿಗಳಿಂದ ಮಾಡಿರುವ ಕೃತ್ಯ ಕಂಡುಬಂದಿತ್ತು. ನಂತರ ಆರೋಪಿಗಳನ್ನ ವಶಕ್ಕೆ ಪಡೆದು ದೂರು ದಾಖಲು ಮಾಡಿ ತನಿಖೆಯನ್ನ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.