ETV Bharat / state

ಸಂಪಂಗಿ ಕೆರೆಯಲ್ಲಿ ಹುಡುಗರ ಪುಂಡಾಟ: ಈಜು ಬಾರದ ಬಾಲಕನಿಗೆ ನೀರಲ್ಲಿ ಥಳಿತ! - ಸಂಪಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕರ ಪುಂಡಾಟ

ಸಿಲಿಕಾನ್ ಸಿಟಿಯಲ್ಲಿ ಹುಡುಗರು ಪುಂಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಈಜು ಬಾರದ ಬಾಲಕನಿಗೆ ಹಿಗ್ಗಾ ಮುಗ್ಗ ಥಳಿಸಲಾಗಿದೆ. ನಗರದ ಸಂಪಂಗಿ ಕೆರೆಯಲ್ಲಿ ಈ ಘಟನೆ ನಡೆದಿದ್ದು,ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಯುವಕರ ಪುಂಡಾಟ: ವಿಡಿಯೋ ವೈರಲ್
author img

By

Published : Nov 21, 2019, 12:28 PM IST

ಬೆಂಗಳೂರು: ಈಜು ಬಾರದ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಗರದ ಸಂಪಂಗಿ ಕೆರೆಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಹರ್ಷವರ್ಧನ್ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ, ಚರಣ್, ಕುಳ್ಳಿ ಹಾಗೂ ಸಂದೀಪ್ ಈಜಾಡಲು ಸಂಪಗಿ ಕೆರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಎಲ್ಲರೂ ಈಜಾಡುವಾಗ, ಹರ್ಷವರ್ಧನ್ ಈಜು ಬಾರದ ಕಾರಣ ದಡದಲ್ಲಿ ನಿಂತಿದ್ದಾನೆ. ಈ ವೇಳೆ ಬಾಲಕನನ್ನು ಇತರರು ಬಲವಂತವಾಗಿ ನೀರಿಗೆಳೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಗೊಳಗಾದ ಬಾಲಕನ ಬಲಗಣ್ಣಿಗೆ ಗಾಯವಾಗಿದ್ದು ರಕ್ತ ಹೆಪ್ಪುಗಟ್ಟಿದೆ. ನಂತರದಲ್ಲಿ ಆತನನ್ನು ನೀರಿನಲ್ಲಿ ಮುಳುಗಿಸಿ ಈಜುವಂತೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಲಾಗಿದೆ.

ಬಾಲಕನ ಪೋಷಕರು ಈ ಕುರಿತು ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂಪಂಗಿ ಕೆರೆಯಲ್ಲಿ ಹುಡುಗರ ಪುಂಡಾಟ, ಬಾಲಕನ ಮೇಲೆ ದೌರ್ಜನ್ಯ: ವಿಡಿಯೋ ವೈರಲ್

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಚೇತನ್ ಸಿಂಗ್ ರಾಥೋರ್, ಬಾಲಕನಿಗೆ ಕೆರೆಯಲ್ಲಿ ಹಿಂಸೆ ಕೊಟ್ಟ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರು ಜನ ಹುಡುಗರಲ್ಲಿ ಐವರು ಅಪ್ರಾಪ್ತರಾಗಿದ್ದು, ಐದು ಜನರನ್ನು ಜ್ಯೂವೆನಲ್ ಕೋರ್ಟ್​ಗೆ ಹಾಜರುಪಡಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಸಂದೀಪ್ ಎಂಬಾತ ಸ್ಟೋರ್ ಕೀಪರ್ ಕೆಲಸ ಮಾಡ್ತಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಬೆಂಗಳೂರು: ಈಜು ಬಾರದ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಗರದ ಸಂಪಂಗಿ ಕೆರೆಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಹರ್ಷವರ್ಧನ್ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ, ಚರಣ್, ಕುಳ್ಳಿ ಹಾಗೂ ಸಂದೀಪ್ ಈಜಾಡಲು ಸಂಪಗಿ ಕೆರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಎಲ್ಲರೂ ಈಜಾಡುವಾಗ, ಹರ್ಷವರ್ಧನ್ ಈಜು ಬಾರದ ಕಾರಣ ದಡದಲ್ಲಿ ನಿಂತಿದ್ದಾನೆ. ಈ ವೇಳೆ ಬಾಲಕನನ್ನು ಇತರರು ಬಲವಂತವಾಗಿ ನೀರಿಗೆಳೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಗೊಳಗಾದ ಬಾಲಕನ ಬಲಗಣ್ಣಿಗೆ ಗಾಯವಾಗಿದ್ದು ರಕ್ತ ಹೆಪ್ಪುಗಟ್ಟಿದೆ. ನಂತರದಲ್ಲಿ ಆತನನ್ನು ನೀರಿನಲ್ಲಿ ಮುಳುಗಿಸಿ ಈಜುವಂತೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಲಾಗಿದೆ.

ಬಾಲಕನ ಪೋಷಕರು ಈ ಕುರಿತು ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂಪಂಗಿ ಕೆರೆಯಲ್ಲಿ ಹುಡುಗರ ಪುಂಡಾಟ, ಬಾಲಕನ ಮೇಲೆ ದೌರ್ಜನ್ಯ: ವಿಡಿಯೋ ವೈರಲ್

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಚೇತನ್ ಸಿಂಗ್ ರಾಥೋರ್, ಬಾಲಕನಿಗೆ ಕೆರೆಯಲ್ಲಿ ಹಿಂಸೆ ಕೊಟ್ಟ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರು ಜನ ಹುಡುಗರಲ್ಲಿ ಐವರು ಅಪ್ರಾಪ್ತರಾಗಿದ್ದು, ಐದು ಜನರನ್ನು ಜ್ಯೂವೆನಲ್ ಕೋರ್ಟ್​ಗೆ ಹಾಜರುಪಡಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಸಂದೀಪ್ ಎಂಬಾತ ಸ್ಟೋರ್ ಕೀಪರ್ ಕೆಲಸ ಮಾಡ್ತಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆ.

Intro:ಸಿಲಿಕಾನ್ ಸಿಟಿಯಲ್ಲಿ ಯುವಕರ ಪುಂಡಾಟ
ಈಜು ಬಾರದ ಯುವಕನಿಗೆ ಹಿಗ್ಗಾ ಮುಗ್ಗ ಥಳಿತ ವಿಡಿಯೋ ವೈರಲ್

ಸಿಲಿಕಾನ್ ಸಿಟಿಯಲ್ಲಿ ಬಾಲಕರ ಗುಂಪು ಪುಂಡಾಟಿಕೆ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಪುಂಡಾಟಿಕೆ ನಡೆಸಿರುವ ಯುವಕರ ಗುಂಪು ವಿರುದ್ದ ಬಾಲಕನ ಪೋಷಕರು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹರ್ಷವರ್ಧನ ಎಂಬ ಯುವಕನನ್ನು ಆರೋಪಿಗಳಾದ ಮ್ಯಾನುಯಲ್, ಸೂರ್ಯ,ಚರಣ್, ಕುಳ್ಳಿ ಎಂಬ ಯುವಕರ ತಂಡ ಸಂಪಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಂಪಗಿ ಕೆರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ಎಲ್ಲಾ ಆರೋಪಿಗಳು ನೀರಿನಲ್ಲಿ ಆಟವಾಡಿದ್ದಾರೆ. ಈ ವೇಳೆ ಬಾಲಕ ಹರ್ಷವರ್ಧನ್ ಈಜು ಬಾರದ ಕಾರಣ ದಡದಲ್ಲಿ ನಿಂತಿದ್ದಾನೆ. ಆದರೆ ಯುವಕರ ತಂಡ ಬಾಲಕನನ್ನ ಬಲವಂತಾ ಮಾಡಿ ಈಜು ಬಾರದಿದ್ದರು ಸಹ ಆತನನ್ನ ಎಳೆದು ನೀರಿನಿಂದ ಹೊರಗಡೆ ಬರದಂತೆ ನೀರಿನಲ್ಲಿ ಮುಳುಗಿಸಿ ಈಜುವಂತೆ ಬಲವಾಂತ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಪರಿಣಾಮ ಯುವಕನ ಬಲಕಣ್ಣಿಗೆ ಬಲವಾಂ ತಗಾಯವಾಗಿದ್ದು ರಕ್ತ ಹೆಪ್ಪುಗಟ್ಟಿದೆ. ಅಷ್ಟು ಮಾತ್ರವಲ್ಲದೇ ಆತನ‌ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಯುವಕನ ಪೋಷಕರು ಸಂಪಗಿರಾಮನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನೀಕೆ ನಡೆಸಿ ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆBody:KN_BNG_02_BOYS_7204498Conclusion:KN_BNG_02_BOYS_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.