ETV Bharat / state

ಕರ್ನಾಟಕ ಲಾಕ್‌ಡೌನ್:  ನೌಕರರಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದ ಸರ್ಕಾರ...! - ಕರ್ನಾಟಕ ರಾಜ್ಯದಲ್ಲಿ ಕೂರೊನಾ ವೈರಸ್

ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಸಿಬ್ಬಂದಿ ಹೊರತುಪಡಿಸಿ ಇತರ ಇಲಾಖೆಗಳ ಸಿಬ್ಬಂದಿಗೆ ಮಾರ್ಚ್ 31 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಿ‌ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಲಾಕ್‌ಡೌನ್
ಕರ್ನಾಟಕ ಲಾಕ್‌ಡೌನ್
author img

By

Published : Mar 23, 2020, 11:28 PM IST

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೂರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಸಿಬ್ಬಂದಿ ಹೊರತುಪಡಿಸಿ ಇತರ ಇಲಾಖೆಗಳ ಸಿಬ್ಬಂದಿಗೆ ಮಾರ್ಚ್ 31 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಿ‌ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯಾವ ಇಲಾಖೆಗಳಿಗೆ ವಿನಾಯಿತಿ ಇಲ್ಲ:

1) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2) ವೈದ್ಯಕೀಯ ಶಿಕ್ಷಣ ಇಲಾಖೆ
3) ಒಳಾಡಳಿತ ಇಲಾಖೆ
4) ಕಂದಾಯ ಇಲಾಖೆ
5) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

6) ನಗರಾಭಿವೃದ್ದಿ
7) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
8) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
9) ಸಾರಿಗೆ
10) ಇಂಧನ ಇಲಾಖೆಗಳನ್ನು, ಹೊರತುಪಡಿಸಿ ಉಳಿದ ಎಲ್ಲ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್- ಬಿ, ಗ್ರೂಪ್‌ - ಸಿ ಮತ್ತು ಗ್ರೂಪ್ ಡಿ ಅಧಿಕಾರಿ ಹಾಗು ನೌಕರರಿಗೆ
ಮಾರ್ಚ್ 31 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ.

ಈ ರೀತಿ ವಿನಾಯಿತಿ ನೀಡಲಾಗಿರುವ ಇಲಾಖೆಗಳಡಿ ಬರುವ ಮಂಡಳಿ/ನಿಗಮ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಬಿ, ಗ್ರೂಪ್‌-ಸಿ ಮತ್ತು ಗ್ರೂಪ್-ಡಿ ಅಧಿಕಾರಿ / ನೌಕರರಿಗೆ ಹಾಜರಾತಿಯಿಂದ ವಿನಾಯಿತಿ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರು / ಇಲಾಖಾ ಮುಖ್ಯಸ್ಥರು ನಿರ್ಧರಿಸಬಹುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

exempted employees from attending office
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ
exempted employees from attending office
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ

ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಎಲ್ಲಾ ಅಧಿಕಾರಿಗಳು/ನೌಕರರು ಕೇಂದ್ರ ಸ್ಥಾನದಲ್ಲಿ ಲಭ್ಯವಿರುವುದು ಹಾಗೂ ತುರ್ತು ಕಾರಣಗಳಿದ್ದಾಗ ಶೇ.25ಕ್ಕೆ ಮೀರದಂತ ಇಂತಹ ಅಧಿಕಾರಿ / ನೌಕರರ ಸೇವೆಯನ್ನು ಇಲಾಖೆಯ ಕಾರ್ಯದರ್ಶಿಯವರು / ಇಲಾಖಾ ಮುಖ್ಯಸ್ಥರು ಬಯಸಿದಲ್ಲಿ ಅಧಿಕಾರಿ /ನೌಕರರು ಯಾವುದೇ ಕಾರಣ ನೀಡದೇ ಕಚೇರಿಗೆ ಹಾಜರಾಗುವ ನಿಬಂಧನೆ ಹಾಕಲಾಗಿದೆ.

ಕಚೇರಿಗೆ ಹಾಜರಾಗಲು ವಿನಾಯಿತಿ ಕೋರುವ ಅಧಿಕಾರಿ/ನೌಕರರುಗಳ ಬಗ್ಗೆ ಸಂಬಂಧಿಸಿದ ಇಲಾಖಾ ಕಾರ್ಯದರ್ಶಿ / ಮುಖ್ಯಸ್ಥರು ನಿರ್ಣಯ ತೆಗೆದುಕೊಳ್ಳಬಹುದಾಗಿದೆ.

ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು ವೈದ್ಯಕೀಯ ಹಾಗೂ ಇತರ ಕಾರಣಗಳಿಗಾಗಿ ಮಾರ್ಚ್ 31 ರವರಗೆ ಕಚೇರಿಗೆ ಹಾಜರಾಗಲು ವಿನಾಯಿತಿ ಬಯಸಿದಲ್ಲಿ ಅದರ ಬಗ್ಗೆ ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿಗಳು/ಇಲಾಖಾ ಮುಖ್ಯಸ್ತರು ಸೂಕ್ತ ನಿರ್ಣಯ ತೆಗೆದುಕೊಳ್ಳಬಹುದಾಗಿದೆ ಎಂದು ಸರ್ಕಾರದ ಮುಖ್ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೂರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಸಿಬ್ಬಂದಿ ಹೊರತುಪಡಿಸಿ ಇತರ ಇಲಾಖೆಗಳ ಸಿಬ್ಬಂದಿಗೆ ಮಾರ್ಚ್ 31 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಿ‌ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯಾವ ಇಲಾಖೆಗಳಿಗೆ ವಿನಾಯಿತಿ ಇಲ್ಲ:

1) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2) ವೈದ್ಯಕೀಯ ಶಿಕ್ಷಣ ಇಲಾಖೆ
3) ಒಳಾಡಳಿತ ಇಲಾಖೆ
4) ಕಂದಾಯ ಇಲಾಖೆ
5) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

6) ನಗರಾಭಿವೃದ್ದಿ
7) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
8) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
9) ಸಾರಿಗೆ
10) ಇಂಧನ ಇಲಾಖೆಗಳನ್ನು, ಹೊರತುಪಡಿಸಿ ಉಳಿದ ಎಲ್ಲ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್- ಬಿ, ಗ್ರೂಪ್‌ - ಸಿ ಮತ್ತು ಗ್ರೂಪ್ ಡಿ ಅಧಿಕಾರಿ ಹಾಗು ನೌಕರರಿಗೆ
ಮಾರ್ಚ್ 31 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ.

ಈ ರೀತಿ ವಿನಾಯಿತಿ ನೀಡಲಾಗಿರುವ ಇಲಾಖೆಗಳಡಿ ಬರುವ ಮಂಡಳಿ/ನಿಗಮ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಬಿ, ಗ್ರೂಪ್‌-ಸಿ ಮತ್ತು ಗ್ರೂಪ್-ಡಿ ಅಧಿಕಾರಿ / ನೌಕರರಿಗೆ ಹಾಜರಾತಿಯಿಂದ ವಿನಾಯಿತಿ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರು / ಇಲಾಖಾ ಮುಖ್ಯಸ್ಥರು ನಿರ್ಧರಿಸಬಹುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

exempted employees from attending office
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ
exempted employees from attending office
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ

ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಎಲ್ಲಾ ಅಧಿಕಾರಿಗಳು/ನೌಕರರು ಕೇಂದ್ರ ಸ್ಥಾನದಲ್ಲಿ ಲಭ್ಯವಿರುವುದು ಹಾಗೂ ತುರ್ತು ಕಾರಣಗಳಿದ್ದಾಗ ಶೇ.25ಕ್ಕೆ ಮೀರದಂತ ಇಂತಹ ಅಧಿಕಾರಿ / ನೌಕರರ ಸೇವೆಯನ್ನು ಇಲಾಖೆಯ ಕಾರ್ಯದರ್ಶಿಯವರು / ಇಲಾಖಾ ಮುಖ್ಯಸ್ಥರು ಬಯಸಿದಲ್ಲಿ ಅಧಿಕಾರಿ /ನೌಕರರು ಯಾವುದೇ ಕಾರಣ ನೀಡದೇ ಕಚೇರಿಗೆ ಹಾಜರಾಗುವ ನಿಬಂಧನೆ ಹಾಕಲಾಗಿದೆ.

ಕಚೇರಿಗೆ ಹಾಜರಾಗಲು ವಿನಾಯಿತಿ ಕೋರುವ ಅಧಿಕಾರಿ/ನೌಕರರುಗಳ ಬಗ್ಗೆ ಸಂಬಂಧಿಸಿದ ಇಲಾಖಾ ಕಾರ್ಯದರ್ಶಿ / ಮುಖ್ಯಸ್ಥರು ನಿರ್ಣಯ ತೆಗೆದುಕೊಳ್ಳಬಹುದಾಗಿದೆ.

ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು ವೈದ್ಯಕೀಯ ಹಾಗೂ ಇತರ ಕಾರಣಗಳಿಗಾಗಿ ಮಾರ್ಚ್ 31 ರವರಗೆ ಕಚೇರಿಗೆ ಹಾಜರಾಗಲು ವಿನಾಯಿತಿ ಬಯಸಿದಲ್ಲಿ ಅದರ ಬಗ್ಗೆ ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿಗಳು/ಇಲಾಖಾ ಮುಖ್ಯಸ್ತರು ಸೂಕ್ತ ನಿರ್ಣಯ ತೆಗೆದುಕೊಳ್ಳಬಹುದಾಗಿದೆ ಎಂದು ಸರ್ಕಾರದ ಮುಖ್ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.