ETV Bharat / state

ಪೊಲೀಸ್ ಸಿಬ್ಬಂದಿಯ ಕಾರ್ಯದಕ್ಷತೆ ಹೆಚ್ಚಿಸಲಿರುವ 'ಸುಬಾಹು' ವ್ಯವಸ್ಥೆ

author img

By

Published : Aug 12, 2021, 11:19 AM IST

ಪೊಲೀಸ್‌ ಸಿಬ್ಬಂದಿಗೆ ಬೀಟ್ ನಿಗದಿ, ಹಾಜರಾತಿ ದಾಖಲಿಸುವ ವ್ಯವಸ್ಥೆ ಹಾಗೂ ಇತರೆ ಮಾಹಿತಿಗಳನ್ನು ಒಳಗೊಂಡ ವಿಶೇಷ ಆ್ಯಪ್​ ಅನ್ನು ಬೆಂಗಳೂರು ನಗರ ಪೊಲೀಸರು ಅಭಿವೃದ್ದಿಪಡಿಸಿದ್ದಾರೆ.

Subhu App for Police
ಪೊಲೀಸರಿಗೆ ಆ್ಯಪ್

ಬೆಂಗಳೂರು: ಸಿಬ್ಬಂದಿಯ ಕಾರ್ಯದಕ್ಷತೆ ಉತ್ತಮಪಡಿಸಲು 'ಸುಬಾಹು' ವ್ಯವಸ್ಥೆಯನ್ನು ನಗರ ಪೊಲೀಸರು ಇತ್ತೀಚೆಗೆ ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಸ್ವಆಸಕ್ತಿವಹಿಸಿ ಸುಬಾಹು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಈ ಆ್ಯಪ್ ಅನ್ನು ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಸಾರ್ವಜನಿಕರು ಬಳಸಲು ಸಾಧ್ಯವಿಲ್ಲ. ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಆ್ಯಂಡ್ರಾಯ್ಡ್​ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.

Subhu App for Police
ಸುಬಾಹು ಆ್ಯಪ್ ವೈಶಿಷ್ಟ್ಯತೆಗಳು

ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳ ಬೀಟ್ ಹೊಣೆಯನ್ನು ಆಯಾ ಸಿಬ್ಬಂದಿಗೆ ವಹಿಸಲಾಗಿದೆ. ನಿತ್ಯ ಠಾಣೆಯಲ್ಲಿರುವ ಹಿರಿಯ ಅಧಿಕಾರಿಗಳು ಬೀಟ್‌ಗೆ ಹೊರಡುವ ಸಿಬ್ಬಂದಿಯ ಫೋಟೋವನ್ನು ಅವರ ಮೊಬೈಲ್‌ನಿಂದಲೇ ತೆಗೆದು, ಜಿಪಿಎಸ್ ಆನ್ ಮಾಡಿ ಆ್ಯಪ್ ಮೂಲಕ ಬೀಟ್ ನಿಗದಿಪಡಿಸುತ್ತಾರೆ.

ಇದನ್ನೂ ಓದಿ: ಟ್ವಿಟರ್‌ನಲ್ಲಿ 10 ಲಕ್ಷ ಫಾಲೋವರ್ಸ್ ಹೊಂದಿದ ರಾಜ್ಯದ ಮೊದಲ ರಾಜಕಾರಣಿ ಬಿಎಸ್​ವೈ

ಬೀಟ್ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯೂಆರ್ ಕೊಡ್ ಅನ್ನು ತಮ್ಮ ಮೊಬೈಲ್‌ನಿಂದ ಸ್ಕ್ಯಾನ್ ಮಾಡಬೇಕು. ಆಗ ಸರ್ವರ್ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಾಧಿಕಾರಿಗಳಿಗೆ ರವಾನೆಯಾಗುತ್ತದೆ.

ಅಲ್ಲದೆ, ಅಪಘಡ ಅಥವಾ ಯಾವಾದರೂ ಅಪರಾಧ ನಡೆದಾಗ ಸಂಬಂಧಿಸಿದ ಆರೋಪಿ, ಘಟನಾ ಸ್ಥಳ ಹಾಗೂ ಅಗತ್ಯ ಮಾಹಿತಿಯನ್ನು ಬೀಟ್ ಸಿಬ್ಬಂದಿ ಆ್ಯಪ್‌ನಲ್ಲಿ ಹಾಕಬಹುದು. ಜೊತೆಗೆ ಹಳೆಯ ಅಪರಾಧಿ, ರೌಡಿಗಳ ಬಗ್ಗೆಯೂ ಮಾಹಿತಿ ಹಾಕಬೇಕು. ಹೊಸದಾಗಿ ಬಂದಿರುವ ಅಧಿಕಾರಿಗಳು ಕೂಡ ಆ್ಯಪ್‌ನಲ್ಲಿರುವ ರೂಟ್ ಮ್ಯಾಪ್ ಮೂಲಕ ಸಂಚರಿಸಬಹುದು.

ಬೆಂಗಳೂರು: ಸಿಬ್ಬಂದಿಯ ಕಾರ್ಯದಕ್ಷತೆ ಉತ್ತಮಪಡಿಸಲು 'ಸುಬಾಹು' ವ್ಯವಸ್ಥೆಯನ್ನು ನಗರ ಪೊಲೀಸರು ಇತ್ತೀಚೆಗೆ ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಸ್ವಆಸಕ್ತಿವಹಿಸಿ ಸುಬಾಹು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಈ ಆ್ಯಪ್ ಅನ್ನು ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಸಾರ್ವಜನಿಕರು ಬಳಸಲು ಸಾಧ್ಯವಿಲ್ಲ. ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಆ್ಯಂಡ್ರಾಯ್ಡ್​ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.

Subhu App for Police
ಸುಬಾಹು ಆ್ಯಪ್ ವೈಶಿಷ್ಟ್ಯತೆಗಳು

ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳ ಬೀಟ್ ಹೊಣೆಯನ್ನು ಆಯಾ ಸಿಬ್ಬಂದಿಗೆ ವಹಿಸಲಾಗಿದೆ. ನಿತ್ಯ ಠಾಣೆಯಲ್ಲಿರುವ ಹಿರಿಯ ಅಧಿಕಾರಿಗಳು ಬೀಟ್‌ಗೆ ಹೊರಡುವ ಸಿಬ್ಬಂದಿಯ ಫೋಟೋವನ್ನು ಅವರ ಮೊಬೈಲ್‌ನಿಂದಲೇ ತೆಗೆದು, ಜಿಪಿಎಸ್ ಆನ್ ಮಾಡಿ ಆ್ಯಪ್ ಮೂಲಕ ಬೀಟ್ ನಿಗದಿಪಡಿಸುತ್ತಾರೆ.

ಇದನ್ನೂ ಓದಿ: ಟ್ವಿಟರ್‌ನಲ್ಲಿ 10 ಲಕ್ಷ ಫಾಲೋವರ್ಸ್ ಹೊಂದಿದ ರಾಜ್ಯದ ಮೊದಲ ರಾಜಕಾರಣಿ ಬಿಎಸ್​ವೈ

ಬೀಟ್ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯೂಆರ್ ಕೊಡ್ ಅನ್ನು ತಮ್ಮ ಮೊಬೈಲ್‌ನಿಂದ ಸ್ಕ್ಯಾನ್ ಮಾಡಬೇಕು. ಆಗ ಸರ್ವರ್ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಾಧಿಕಾರಿಗಳಿಗೆ ರವಾನೆಯಾಗುತ್ತದೆ.

ಅಲ್ಲದೆ, ಅಪಘಡ ಅಥವಾ ಯಾವಾದರೂ ಅಪರಾಧ ನಡೆದಾಗ ಸಂಬಂಧಿಸಿದ ಆರೋಪಿ, ಘಟನಾ ಸ್ಥಳ ಹಾಗೂ ಅಗತ್ಯ ಮಾಹಿತಿಯನ್ನು ಬೀಟ್ ಸಿಬ್ಬಂದಿ ಆ್ಯಪ್‌ನಲ್ಲಿ ಹಾಕಬಹುದು. ಜೊತೆಗೆ ಹಳೆಯ ಅಪರಾಧಿ, ರೌಡಿಗಳ ಬಗ್ಗೆಯೂ ಮಾಹಿತಿ ಹಾಕಬೇಕು. ಹೊಸದಾಗಿ ಬಂದಿರುವ ಅಧಿಕಾರಿಗಳು ಕೂಡ ಆ್ಯಪ್‌ನಲ್ಲಿರುವ ರೂಟ್ ಮ್ಯಾಪ್ ಮೂಲಕ ಸಂಚರಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.