ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ : ಖಾಸಗಿ ಶಾಲೆಗಳ ವಿರೋಧ

ಪರೀಕ್ಷೆಯಲ್ಲಿ ಹೆಚ್ಚು ಬದಲಾವಣೆ ಮಾಡದೇ, 2 ಅಂಕದ ಪ್ರಶ್ನೆ‌ಯನ್ನು ಕಡಿಮೆ ಮಾಡಿ 5 ಅಂಕ ಪ್ರಶ್ನೆಗಳನ್ನ ಪರಿಚಯಿಸಿದೆ. 49 ಪ್ರಶ್ನೆಗಳಿಂದ 38 ಪ್ರಶ್ನೆಗಳಿಗೆ ಇಳಿಸಿದೆ. ಕಲಿಕಾ ಗುಣಮಟ್ಟದ ವೃದ್ಧಿ, ಕಂಠಪಾಠ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೆ ಮಾಡಿತ್ತು.‌ ಆದರೆ‌ ಇದಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.

author img

By

Published : Sep 26, 2019, 9:31 PM IST

ಸಚಿವ ಸುರೇಶ್ ಕುಮಾರ್

ಬೆಂಗಳೂರು : ಪರೀಕ್ಷೆಗಳಲ್ಲಿ ಮಾಸ್ ಕಾಪಿ ಮಾಡುವುದನ್ನ ತಡೆಯಲು ಹಾಗೂ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಿ, ‌ವಿವರಣಾತ್ಮಕ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿದೆ. ಆದರೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹೊಸ ಪರೀಕ್ಷಾ ನಿಯಮಕ್ಕೆ ವಿರೋಧ ವ್ಯಕ್ತವಾಗಿದೆ.‌

ಪರೀಕ್ಷೆಯಲ್ಲಿ ಹೆಚ್ಚು ಬದಲಾವಣೆ ಮಾಡದೇ, 2 ಅಂಕದ ಪ್ರಶ್ನೆ‌ಯನ್ನು ಕಡಿಮೆ ಮಾಡಿ 5 ಅಂಕದ ಪ್ರಶ್ನೆಗಳನ್ನ ಪರಿಚಯಿಸಿದೆ. 49 ಪ್ರಶ್ನೆಗಳಿಂದ 38 ಪ್ರಶ್ನೆಗಳಿಗೆ ಇಳಿಸಿದೆ. ಕಲಿಕಾ ಗುಣಮಟ್ಟದ ವೃದ್ಧಿ, ಕಂಠಪಾಠ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೆ ಮಾಡಿತ್ತು.‌ ಆದರೆ‌ ಇದಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಗೆ ಖಾಸಗಿ ಶಾಲೆಗಳ ವಿರೋಧ

ಏಕಾಏಕಿ ಪರೀಕ್ಷಾ ಪದ್ಧತಿ ಬದಲಾಯಿಸಿರುವುದರಿಂದ ಮಕ್ಕಳು ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಖಾಸಗಿ ಶಾಲೆಗಳ ವಾದ. ಹೀಗಾಗಿ 6-8ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಮಾಡಿದರೆ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಿದೆ. ಆ ನಂತರ ಎಸ್‌ಎಸ್‌ಎಲ್‌ಸಿ ಪರಿಕ್ಷೆ ಪದ್ಧತಿ ಬದಲಾಯಿಸಿ ಎಂದು ಖಾಸಗಿ ಶಾಲೆಗಳ ಒಕ್ಕೂಟ, ಕುಸುಮ ಸೇರಿದಂತೆ ಹಲವು‌ ಸಂಘಟನೆಗಳು ಸಚಿವ ಸುರೇಶ್ ಕುಮಾರ್​ಗೆ ಮನವಿ ಮಾಡಿದರು.‌

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವರು, ಹೊಸ ಪದ್ಧತಿ ಸಂಬಂಧ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕೂಡ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ಇದನ್ನ ಅರ್ಥ ಮಾಡಿಕೊಳ್ಳಲು ಸಮಯ ಬೇಕಿದೆ ಎಂದು ಹಲವು ಸಂಘಟನೆಗಳು ಮನವಿ ಮಾಡಿದೆ. ಹೀಗಾಗಿ, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಅಂಕಗಳನ್ನು ಪಡೆಯದಿದ್ದರೆ, ಅನುತ್ತೀರ್ಣ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದರು.

ಬೆಂಗಳೂರು : ಪರೀಕ್ಷೆಗಳಲ್ಲಿ ಮಾಸ್ ಕಾಪಿ ಮಾಡುವುದನ್ನ ತಡೆಯಲು ಹಾಗೂ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಿ, ‌ವಿವರಣಾತ್ಮಕ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿದೆ. ಆದರೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹೊಸ ಪರೀಕ್ಷಾ ನಿಯಮಕ್ಕೆ ವಿರೋಧ ವ್ಯಕ್ತವಾಗಿದೆ.‌

ಪರೀಕ್ಷೆಯಲ್ಲಿ ಹೆಚ್ಚು ಬದಲಾವಣೆ ಮಾಡದೇ, 2 ಅಂಕದ ಪ್ರಶ್ನೆ‌ಯನ್ನು ಕಡಿಮೆ ಮಾಡಿ 5 ಅಂಕದ ಪ್ರಶ್ನೆಗಳನ್ನ ಪರಿಚಯಿಸಿದೆ. 49 ಪ್ರಶ್ನೆಗಳಿಂದ 38 ಪ್ರಶ್ನೆಗಳಿಗೆ ಇಳಿಸಿದೆ. ಕಲಿಕಾ ಗುಣಮಟ್ಟದ ವೃದ್ಧಿ, ಕಂಠಪಾಠ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೆ ಮಾಡಿತ್ತು.‌ ಆದರೆ‌ ಇದಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಗೆ ಖಾಸಗಿ ಶಾಲೆಗಳ ವಿರೋಧ

ಏಕಾಏಕಿ ಪರೀಕ್ಷಾ ಪದ್ಧತಿ ಬದಲಾಯಿಸಿರುವುದರಿಂದ ಮಕ್ಕಳು ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಖಾಸಗಿ ಶಾಲೆಗಳ ವಾದ. ಹೀಗಾಗಿ 6-8ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಮಾಡಿದರೆ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಿದೆ. ಆ ನಂತರ ಎಸ್‌ಎಸ್‌ಎಲ್‌ಸಿ ಪರಿಕ್ಷೆ ಪದ್ಧತಿ ಬದಲಾಯಿಸಿ ಎಂದು ಖಾಸಗಿ ಶಾಲೆಗಳ ಒಕ್ಕೂಟ, ಕುಸುಮ ಸೇರಿದಂತೆ ಹಲವು‌ ಸಂಘಟನೆಗಳು ಸಚಿವ ಸುರೇಶ್ ಕುಮಾರ್​ಗೆ ಮನವಿ ಮಾಡಿದರು.‌

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವರು, ಹೊಸ ಪದ್ಧತಿ ಸಂಬಂಧ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕೂಡ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ಇದನ್ನ ಅರ್ಥ ಮಾಡಿಕೊಳ್ಳಲು ಸಮಯ ಬೇಕಿದೆ ಎಂದು ಹಲವು ಸಂಘಟನೆಗಳು ಮನವಿ ಮಾಡಿದೆ. ಹೀಗಾಗಿ, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಅಂಕಗಳನ್ನು ಪಡೆಯದಿದ್ದರೆ, ಅನುತ್ತೀರ್ಣ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದರು.

Intro:ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಗೆ ಖಾಸಗಿ ಶಾಲೆಗಳ ವಿರೋಧ..‌

ಬೆಂಗಳೂರು: ಪರೀಕ್ಷೆಗಳಲ್ಲಿ ಮಾಸ್ ಕಾಪಿ ಮಾಡುವುದನ್ನ ತಡೆಯಲು ಹಾಗೂ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಉದ್ದೇಶದಿಂದ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಿ,‌ವಿವರಣಾತ್ಮಕ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿದೆ.

ಆದರೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹೊಸ ಪರೀಕ್ಷಾ ನಿಯಮಕ್ಕೆ ವಿರೋಧ ವ್ಯಕ್ತವಾಗಿದೆ..‌ ಪರೀಕ್ಷೆಯಲ್ಲಿ ಹೆಚ್ಚು ಬದಲಾವಣೆ ಮಾಡದೇ, 2 ಅಂಕದ ಪ್ರಶ್ನೆ‌ಯನ್ನ‌ ಕಡಿಮೆ ಮಾಡಿ 5 ಅಂಕ ಪ್ರಶ್ನೆಗಳನ್ನ ಪರಿಚಯಿತು.. 49 ಪ್ರಶ್ನೆಗಳಿಂದ 38 ಪ್ರಶ್ನೆಗಳಿಗೆ ಇಳಿಸಿದೆ. ಕಲಿಕಾ ಗುಣಮಟ್ಟದ ವೃದ್ಧಿ, ಕಂಠಪಾಠ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೆ ಮಾಡಿತ್ತು..‌ ಆದರೆ‌ ಇದಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.

ಏಕಾಏಕಿ ಪರೀಕ್ಷಾ ಪದ್ಧತಿ ಬದಲಾಯಿಸುವುದ ರಿಂದ ಮಕ್ಕಳು ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಖಾಸಗಿ ಶಾಲೆಗಳ ವಾದ.. ಹೀಗಾಗಿ 6-8ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಮಾಡಿದರೆ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಿದೆ. ಆ ನಂತರ ಎಸ್‌ಎಸ್‌ಎಲ್‌ಸಿ ಪದ್ಧತಿ ಬದಲಾಯಿಸಿ ಎಂದು ಇಂದು ಖಾಸಗಿ ಶಾಲೆಗಳ ಒಕ್ಕೂಟ, ಕುಸುಮ ಸೇರಿದಂತೆ ಹಲವು‌ ಸಂಘಟನೆಗಳು ಸಚಿವ ಸುರೇಶ್ ಕುಮಾರ್ ಗೆ ಇಂದು ಮನವಿ ಮಾಡಿದರು..‌

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವರು, ಹೊಸ ಪದ್ಧತಿ ಸಂಬಂಧ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕೂಡ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ಇದನ್ನ ಅರ್ಥ ಮಾಡಿಕೊಳ್ಳಲು ಸಮಯ ಬೇಕಿದೆ ಎಂದು ಹಲವು ಸಂಘಟನೆಗಳು ಮನವಿ ಮಾಡಿದೆ..‌ ಹೀಗಾಗಿ, ಇಲಾಖೆ ಅಧಿಕಾರಿ ಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಅಂಕಗಳನ್ನು ಪಡೆಯದಿದ್ದರೆ, ಅನುತ್ತೀರ್ಣ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದರು.


Byte- ಸುರೇಶ್ ಕುಮಾರ್, ಶಿಕ್ಷಣ ಸಚಿವರು

KN_BNG_03_SSLC_EXAM_PATEREN_SCRIPT_7201801


Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.