ETV Bharat / state

ಗೆದ್ದರೂ ಕೆಲಸ‌ ಮಾಡುತ್ತೇನೆ, ಸೋತರೂ ಕೆಲಸ‌ ಮಾಡಿಸುತ್ತೇನೆ: ಪ್ರಕಾಶ್​ ರೈ

ಚುನಾವಣೆಯಲ್ಲಿ ನಾನು ಒಬ್ಬೊಂಟಿ ಅಲ್ಲ. ಆಪ್, ಸಿಪಿಯು, ಸಿಪಿಎಂ ಹಾಗೂ ವಿವಿಧ ಸಣ್ಣ ಪಕ್ಷಗಳು, ಮಹಿಳಾ ಸಂಘಟನೆ, ಕನ್ನಡ, ತಮಿಳು, ತೆಲುಗು ಸಂಘಟನೆಗಳ ಜನ ನಮ್ಮೊಂದಿಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಇಂದು ನಮ್ಮೊಂದಿಗೆ‌ ಕೆಲಸ‌ ಮಾಡುತ್ತಿದ್ದಾರೆ ಎಂದು ಪ್ರಕಾಶ್ ರೈ ಹೇಳಿದರು.

author img

By

Published : Apr 11, 2019, 4:41 PM IST

Updated : Apr 11, 2019, 11:36 PM IST

ಪ್ರಕಾಶ್ ರಾಜ್

ಬೆಂಗಳೂರು: ನಾನು ನಾಲ್ಕೈದು ವರ್ಷಕ್ಕೆ ಬಂದಿಲ್ಲ. ಹದಿನೈದು ವರ್ಷ ಇಲ್ಲಿಯೇ ಇರುತ್ತೇನೆ. ಗೆದ್ದರೂ ಕೆಲಸ‌ ಮಾಡುತ್ತೇನೆ, ಸೋತರೂ ಕೆಲಸ‌ ಮಾಡಿಸುತ್ತೇನೆ. ಗೆದ್ದವರು ನಿದ್ದೆ ಮಾಡಲು ಬಿಡಲ್ಲ. ಯಾವುದೇ ಪಕ್ಷಕ್ಕೂ ಸೇರಲ್ಲ. ಆದರೆ ಷರತ್ತುಬದ್ಧ ಬೆಂಬಲ ಕೊಡಲು ಸಿದ್ಧ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.

ಮಾಧ್ಯಮ‌ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದಿಂದಲೂ ನಾನು ಟಿಕೆಟ್ ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಾಂಗ್ರೆಸ್​​ನವರಿಗೆ ಅಭ್ಯರ್ಥಿ ಹಾಕದಂತೆ ಮನವಿ ಮಾಡಿದ್ದೆ. ಜನವರಿ 1ರಂದೇ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದೆ. ಅದಕ್ಕೆ ಬದ್ಧನಾಗಿ ಇದ್ದೇನೆ. ಪಕ್ಷ ಸೇರಿದ್ದರೆ ಪರ್ಯಾಯ ರಾಜಕಾರಣ ಆಗುತ್ತಿರಲಿಲ್ಲ. ಇತರೆ ರಾಜಕಾರಣಿಗಳಂತೆ ಅಂತ ನಾನೂ ಆಗುತ್ತಿದ್ದೆ. ಚುನಾವಣೆ ನಂತರ ನಾನು ಯಾವುದೇ ಪಕ್ಷವನ್ನೂ ಸೇರಲ್ಲ. ಆದರೆ ಬೆಂಗಳೂರು ಕೇಂದ್ರ ಮತ್ತು ಕರ್ನಾಟಕದ ಸಮಸ್ಯೆಗೆ ಆದ್ಯತೆ ನೀಡುವ ಪಕ್ಷಕ್ಕೆ ಷರತ್ತಿನ‌ ಮೇರೆಗೆ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮ‌ ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ

ಎರಡೂ ಪಕ್ಷದ ಪ್ರಣಾಳಿಕೆ ಹಾಸ್ಯಾಸ್ಪದವಾಗಿದೆ. ಸುಸ್ಥಿರ ಬಜೆಟ್ ಇಬ್ಬರಿಗೂ ಗೊತ್ತಿಲ್ಲ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಇಲ್ಲ. ಬರೀ ರಕ್ಷಣಾ ಕ್ಷೇತ್ರಕ್ಕೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಎರಡೂ ಪಕ್ಷ ಕುಟುಂಬಕ್ಕೆ ಆರು ಸಾವಿರ ಕೊಡುವ ಭರವಸೆ ನೀಡಿವೆ. ಆದರೆ ಅವರ ಬಜೆಟ್​ನಲ್ಲಿ ನಮಗೆ ಯಾವುದೇ ವಿಷನ್ ಕಾಣುತ್ತಿಲ್ಲ. ನಾಳೆ ನಾನು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇನೆ ಎಂದರು.

ಚುನಾವಣೆಯಲ್ಲಿ ನಾನು ಒಬ್ಬೊಂಟಿ ಅಲ್ಲ. ಆಪ್, ಸಿಪಿಯು, ಸಿಪಿಎಂ ಹಾಗೂ ವಿವಿಧ ಸಣ್ಣ ಪಕ್ಷಗಳು, ಮಹಿಳಾ ಸಂಘಟನೆ, ಕನ್ನಡ, ತಮಿಳು, ತೆಲುಗು ಸಂಘಟನೆಗಳ ಜನ ನಮ್ಮೊಂದಿಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಇಂದು ನಮ್ಮೊಂದಿಗೆ‌ ಕೆಲಸ‌ ಮಾಡುತ್ತಿದ್ದಾರೆ ಎಂದರು.

ಜಾತ್ಯಾತೀತ ವಿಚಾರದಲ್ಲಿ ಬರೀ‌ ಬಿಜೆಪಿಯನ್ನು ಯಾಕೆ ಬೈಯುತ್ತೀರಿ, ಕಾಂಗ್ರೆಸ್, ಜೆಡಿಎಸ್ ಕೂಡ ಜಾತ್ಯಾತೀತ ಅಲ್ಲ. ಯಾವ ಸಮುದಾಯಕ್ಕೆ ಎಲ್ಲಿ‌ ಸೀಟು‌ ಕೊಟ್ಟರೆ ಅನುಕೂಲ, ಅಲ್ಪಸಂಖ್ಯಾತರಿಗೆ ಸೀಟು‌ ಕೊಟ್ಟರೆ ನಮಗೆ ಎಲ್ಲಿ ಲಾಭ ಆಗುತ್ತೆ ಎಂದು‌ ಲೆಕ್ಕ ಹಾಕುತ್ತಾರೆ. ಆದರೆ ನಾನು ಜಾತ್ಯಾತೀತ. ನನಗೆ ಎಲ್ಲರೂ ಒಂದೇ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಆದರೆ ಮೈತ್ರಿ ಮೇಲ್ಮಟ್ಟದಲ್ಲಿ ಮಾತ್ರ ಆಗಿದೆ ಎಂದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಬಾಲ್ಯ ಕಳೆದಿದ್ದೇನೆ. ಶಾಲೆ, ಆಟ, ಪಾಠ, ಕಾಲೇಜು, ದಶಕದ ಸಾಹಿತ್ಯ, ರಂಗಭೂಮಿ ಒಡನಾಟ, ಸಿನಿಮಾ‌ರಂಗ ಪ್ರವೇಶ ಎಲ್ಲವೂ ಈ ಕ್ಷೇತ್ರದಲ್ಲಿಯೇ ಆಗಿದೆ. ನನ್ನ ನೆನಪು ಎಲ್ಲವೂ ಇಲ್ಲಿಯೇ ಇದೆ. ಹಾಗಾಗಿ ನಾನು ಇಲ್ಲಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಕ್ಷೇತ್ರದ ಆಯ್ಕೆಯನ್ನು ರೈ ಸಮರ್ಥಿಸಿಕೊಂಡರು.

ಮತದಾನಕ್ಕೆ ಕೊನೆಯ 20 ದಿನ ರಾಜಕೀಯ ಪಕ್ಷಗಳು ಮಾಡುವುದನ್ನು ನಾನು ಕಳೆದ 6 ತಿಂಗಳಿಂದಲೇ ಮಾಡುತ್ತಿದ್ದೇನೆ. ಸ್ಲಂಗಳು, ಕಾಲೋನಿಗಳಿಗೆ‌ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. 2 ಸಾವಿರ ಸ್ಲಂಗಳು ಬೆಂಗಳೂರಿನಲ್ಲಿವೆ. ಅಲ್ಲಿನವರನ್ನು ಮತಬ್ಯಾಂಕ್ ಮಾಡಿಕೊಳ್ಳಲಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಕಡೆಗಣಿಸಲಾಗಿದೆ, ವ್ಯವಸ್ಥೆ ಸರಿಯಿಲ್ಲ. ನಮ್ಮ ಶಾಲೆಗಳಲ್ಲಿ‌ ಗುಣಮಟ್ಟ‌ ಇಲ್ಲದ‌ ಕಾರಣ ನಾವೇ ನಮ್ಮ‌ ತೆರಿಗೆ ಹಣದಿಂದ ಕಟ್ಟಿದ ಶಾಲೆ‌ ಬಿಟ್ಟು ಖಾಸಗಿ ಶಾಲೆ ಎನ್ನುವ ಮಾಫಿಯಾಗೆ ಹೋಗುತ್ತಿದ್ದೇವೆ. ನಾವೇ ಕಟ್ಟಿದ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಸರಿಯಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ. ಸರ್ಕಾರ, ರಾಜಕೀಯ ಪಕ್ಷಗಳು ಈ ಮಾಫಿಯಾವನ್ನು ಬೆಳೆಸಿವೆ. ಕುಡಿಯುವ ನೀರಿನ ಪೂರೈಕೆ ವಿಚಾರದಲ್ಲಿಯೂ ಬಿಬಿಎಂಪಿ ಇದನ್ನೇ ಮಾಡುತ್ತಿದೆ. ನಗರದಲ್ಲಿ ಇದ್ದ 250 ಕೆರೆಗಳಲ್ಲಿ 50 ಕೆರೆ ಏಕಾಯ್ತು? ಮಂದಾಲೋಚನೆ ಇರಲಿಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು: ನಾನು ನಾಲ್ಕೈದು ವರ್ಷಕ್ಕೆ ಬಂದಿಲ್ಲ. ಹದಿನೈದು ವರ್ಷ ಇಲ್ಲಿಯೇ ಇರುತ್ತೇನೆ. ಗೆದ್ದರೂ ಕೆಲಸ‌ ಮಾಡುತ್ತೇನೆ, ಸೋತರೂ ಕೆಲಸ‌ ಮಾಡಿಸುತ್ತೇನೆ. ಗೆದ್ದವರು ನಿದ್ದೆ ಮಾಡಲು ಬಿಡಲ್ಲ. ಯಾವುದೇ ಪಕ್ಷಕ್ಕೂ ಸೇರಲ್ಲ. ಆದರೆ ಷರತ್ತುಬದ್ಧ ಬೆಂಬಲ ಕೊಡಲು ಸಿದ್ಧ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.

ಮಾಧ್ಯಮ‌ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದಿಂದಲೂ ನಾನು ಟಿಕೆಟ್ ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಾಂಗ್ರೆಸ್​​ನವರಿಗೆ ಅಭ್ಯರ್ಥಿ ಹಾಕದಂತೆ ಮನವಿ ಮಾಡಿದ್ದೆ. ಜನವರಿ 1ರಂದೇ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದೆ. ಅದಕ್ಕೆ ಬದ್ಧನಾಗಿ ಇದ್ದೇನೆ. ಪಕ್ಷ ಸೇರಿದ್ದರೆ ಪರ್ಯಾಯ ರಾಜಕಾರಣ ಆಗುತ್ತಿರಲಿಲ್ಲ. ಇತರೆ ರಾಜಕಾರಣಿಗಳಂತೆ ಅಂತ ನಾನೂ ಆಗುತ್ತಿದ್ದೆ. ಚುನಾವಣೆ ನಂತರ ನಾನು ಯಾವುದೇ ಪಕ್ಷವನ್ನೂ ಸೇರಲ್ಲ. ಆದರೆ ಬೆಂಗಳೂರು ಕೇಂದ್ರ ಮತ್ತು ಕರ್ನಾಟಕದ ಸಮಸ್ಯೆಗೆ ಆದ್ಯತೆ ನೀಡುವ ಪಕ್ಷಕ್ಕೆ ಷರತ್ತಿನ‌ ಮೇರೆಗೆ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮ‌ ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ

ಎರಡೂ ಪಕ್ಷದ ಪ್ರಣಾಳಿಕೆ ಹಾಸ್ಯಾಸ್ಪದವಾಗಿದೆ. ಸುಸ್ಥಿರ ಬಜೆಟ್ ಇಬ್ಬರಿಗೂ ಗೊತ್ತಿಲ್ಲ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಇಲ್ಲ. ಬರೀ ರಕ್ಷಣಾ ಕ್ಷೇತ್ರಕ್ಕೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಎರಡೂ ಪಕ್ಷ ಕುಟುಂಬಕ್ಕೆ ಆರು ಸಾವಿರ ಕೊಡುವ ಭರವಸೆ ನೀಡಿವೆ. ಆದರೆ ಅವರ ಬಜೆಟ್​ನಲ್ಲಿ ನಮಗೆ ಯಾವುದೇ ವಿಷನ್ ಕಾಣುತ್ತಿಲ್ಲ. ನಾಳೆ ನಾನು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇನೆ ಎಂದರು.

ಚುನಾವಣೆಯಲ್ಲಿ ನಾನು ಒಬ್ಬೊಂಟಿ ಅಲ್ಲ. ಆಪ್, ಸಿಪಿಯು, ಸಿಪಿಎಂ ಹಾಗೂ ವಿವಿಧ ಸಣ್ಣ ಪಕ್ಷಗಳು, ಮಹಿಳಾ ಸಂಘಟನೆ, ಕನ್ನಡ, ತಮಿಳು, ತೆಲುಗು ಸಂಘಟನೆಗಳ ಜನ ನಮ್ಮೊಂದಿಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಇಂದು ನಮ್ಮೊಂದಿಗೆ‌ ಕೆಲಸ‌ ಮಾಡುತ್ತಿದ್ದಾರೆ ಎಂದರು.

ಜಾತ್ಯಾತೀತ ವಿಚಾರದಲ್ಲಿ ಬರೀ‌ ಬಿಜೆಪಿಯನ್ನು ಯಾಕೆ ಬೈಯುತ್ತೀರಿ, ಕಾಂಗ್ರೆಸ್, ಜೆಡಿಎಸ್ ಕೂಡ ಜಾತ್ಯಾತೀತ ಅಲ್ಲ. ಯಾವ ಸಮುದಾಯಕ್ಕೆ ಎಲ್ಲಿ‌ ಸೀಟು‌ ಕೊಟ್ಟರೆ ಅನುಕೂಲ, ಅಲ್ಪಸಂಖ್ಯಾತರಿಗೆ ಸೀಟು‌ ಕೊಟ್ಟರೆ ನಮಗೆ ಎಲ್ಲಿ ಲಾಭ ಆಗುತ್ತೆ ಎಂದು‌ ಲೆಕ್ಕ ಹಾಕುತ್ತಾರೆ. ಆದರೆ ನಾನು ಜಾತ್ಯಾತೀತ. ನನಗೆ ಎಲ್ಲರೂ ಒಂದೇ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಆದರೆ ಮೈತ್ರಿ ಮೇಲ್ಮಟ್ಟದಲ್ಲಿ ಮಾತ್ರ ಆಗಿದೆ ಎಂದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಬಾಲ್ಯ ಕಳೆದಿದ್ದೇನೆ. ಶಾಲೆ, ಆಟ, ಪಾಠ, ಕಾಲೇಜು, ದಶಕದ ಸಾಹಿತ್ಯ, ರಂಗಭೂಮಿ ಒಡನಾಟ, ಸಿನಿಮಾ‌ರಂಗ ಪ್ರವೇಶ ಎಲ್ಲವೂ ಈ ಕ್ಷೇತ್ರದಲ್ಲಿಯೇ ಆಗಿದೆ. ನನ್ನ ನೆನಪು ಎಲ್ಲವೂ ಇಲ್ಲಿಯೇ ಇದೆ. ಹಾಗಾಗಿ ನಾನು ಇಲ್ಲಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಕ್ಷೇತ್ರದ ಆಯ್ಕೆಯನ್ನು ರೈ ಸಮರ್ಥಿಸಿಕೊಂಡರು.

ಮತದಾನಕ್ಕೆ ಕೊನೆಯ 20 ದಿನ ರಾಜಕೀಯ ಪಕ್ಷಗಳು ಮಾಡುವುದನ್ನು ನಾನು ಕಳೆದ 6 ತಿಂಗಳಿಂದಲೇ ಮಾಡುತ್ತಿದ್ದೇನೆ. ಸ್ಲಂಗಳು, ಕಾಲೋನಿಗಳಿಗೆ‌ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. 2 ಸಾವಿರ ಸ್ಲಂಗಳು ಬೆಂಗಳೂರಿನಲ್ಲಿವೆ. ಅಲ್ಲಿನವರನ್ನು ಮತಬ್ಯಾಂಕ್ ಮಾಡಿಕೊಳ್ಳಲಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಕಡೆಗಣಿಸಲಾಗಿದೆ, ವ್ಯವಸ್ಥೆ ಸರಿಯಿಲ್ಲ. ನಮ್ಮ ಶಾಲೆಗಳಲ್ಲಿ‌ ಗುಣಮಟ್ಟ‌ ಇಲ್ಲದ‌ ಕಾರಣ ನಾವೇ ನಮ್ಮ‌ ತೆರಿಗೆ ಹಣದಿಂದ ಕಟ್ಟಿದ ಶಾಲೆ‌ ಬಿಟ್ಟು ಖಾಸಗಿ ಶಾಲೆ ಎನ್ನುವ ಮಾಫಿಯಾಗೆ ಹೋಗುತ್ತಿದ್ದೇವೆ. ನಾವೇ ಕಟ್ಟಿದ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಸರಿಯಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ. ಸರ್ಕಾರ, ರಾಜಕೀಯ ಪಕ್ಷಗಳು ಈ ಮಾಫಿಯಾವನ್ನು ಬೆಳೆಸಿವೆ. ಕುಡಿಯುವ ನೀರಿನ ಪೂರೈಕೆ ವಿಚಾರದಲ್ಲಿಯೂ ಬಿಬಿಎಂಪಿ ಇದನ್ನೇ ಮಾಡುತ್ತಿದೆ. ನಗರದಲ್ಲಿ ಇದ್ದ 250 ಕೆರೆಗಳಲ್ಲಿ 50 ಕೆರೆ ಏಕಾಯ್ತು? ಮಂದಾಲೋಚನೆ ಇರಲಿಲ್ಲವೇ ಎಂದು ವಾಗ್ದಾಳಿ ನಡೆಸಿದರು.

Intro:- ಪ್ರಶಾಂತ್ ಕುಮಾರ್

ಗೆದ್ದರೆ ಕೆಲಸ‌ ಮಾಡುತ್ತೇನೆ,ಸೋತರೆ ಕೆಲಸ‌ ಮಾಡಿಸುತ್ತೇನೆ: ಪ್ರಕಾಶ್ ರಾಜ್

ಬೆಂಗಳೂರು:ನಾನು ನಾಲ್ಕೈದು ವರ್ಷಕ್ಕೆ ಬಂದಿಲ್ಲ ಹದಿನೈದು ವರ್ಷ ಇಲ್ಲಿಯೇ ಇರುತ್ತೇನೆ ಗೆದ್ದರೆ ಕೆಲಸ‌ ಮಾಡುತ್ತೇನೆ ಸೋತರೆ ಕೆಲಸ‌ ಮಾಡಿಸುತ್ತೇನೆ ಗೆದ್ದವರು ನಿದ್ದೆ ಮಾಡಲು ಬಿಡಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ,ಯಾವುದೇ ಪಕ್ಷಕ್ಕೂ ಸೇರಲ್ಲ ಆದರೆ ಷರತ್ತುಬದ್ದ ಬೆಂಬಲ ಕೊಡಲು ಸಿದ್ದ ಎಂದಿದ್ದಾರೆ.Body:ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ‌ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ನಾನು ಚುನಾವಣೆಯಲ್ಲಿ ಗೆದ್ದರೆ ಕೆಲಸ ಮಾಡುತ್ತೇನೆ ಒಂದು ವೇಳೆ ಸೋತರೆ ಕೆಲಸ ಮಾಡಿಸುತ್ತೇನೆ, ಐದು ವರ್ಷಕ್ಕೆ ಬಂದಿಲ್ಲ 15 ವರ್ಷ ಕೆಲಸ ಮಾಡಲು ಬಂದಿದ್ದೇನೆ, ಪ್ರಮುಖ‌ ಪಕ್ಷದ ರಾಜಕಾರಣಿ ಒಬ್ಬರು ಗುಪ್ತಚರ ಮಾಹಿತಿ ಬಂದಿದೆ ನೀವು 3 ಲಕ್ಷ ಮತ ಪಡೆಯಿತ್ತೀರಿ‌ ಎಂದಿದ್ದಾರೆ ಒಂದು ವೇಳೆ ಎರಡನೇ ಸ್ಥಾನಕ್ಕೆ ಬಂದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು ನಾನು ಗೆದ್ದರೆ ಕೆಲಸ‌ ಮಾಡುತ್ತೇನೆ ಸೋತರೆ ನಾಲ್ಕೂವರೆ ವರ್ಷ ನಿಮ್ಮನ್ನು ನಿದ್ದೆ ಮಾಡಲು ಬಿಡಲ್ಲ ಎಂದರು.

ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದಿಂದಲೂ ನಾನು ಟಿಕೆಟ್ ನಿರೀಕ್ಷೆ ಮಾಡಿರಲಿಲ್ಲ ಆದರೆ ಕಾಂಗ್ರೆಸ್ ನವರಿಗೆ ಅಭ್ಯರ್ಥಿ ಹಾಕದಂತೆ ಮನವಿ ಮಾಡಿದ್ದೆ, ಜನವರಿ 1 ರಂದೇ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದೆ ಅದಕ್ಕೇ ಬದ್ದನಾಗಿ ಇದ್ದೇನೆ, ಪಕ್ಷ ಸೇರಿದ್ದರೆ ಪರ್ಯಾಯ ರಾಜಕಾರಣ ಆಗುತ್ತಿರಲಿಲ್ಲ,ಇತರ ರಾಜಕಾರಣಿ ಅಂತ ನಾನೂ ಆಗುತ್ತಿದ್ದೆ,ಚುನಾವಣೆ ನಂತರ ನಾನು ಯಾವುದೇ ಪಕ್ಷವನ್ನೂ ಸೇರಲ್ಲ ಆದರೆ ಬೆಂಗಳೂರು ಕೇಂದ್ರ ಮತ್ತು ಕರ್ನಾಟಕದ ಸಮಸ್ಯೆಗೆ ಆಧ್ಯತೆ ನೀಡುವ ಪಕ್ಷಕ್ಕೆ ಷರತ್ತಿನ‌ ಮೇರೆಗೆ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಎರಡೂ ಪಕ್ಷದ ಪ್ರಣಾಳಿಕೆ ಹಾಸ್ಯಾಸ್ಪದವಾಗಿದೆ ಸುಸ್ಥಿರ ಬಜೆಟ್ ಇಬ್ಬರಿಗೂ ಗೊತ್ತಿಲ್ಲ, ಶಿಕ್ಷಣ,ಆರೋಗ್ಯಕ್ಕೆ ಆಧ್ಯತೆ ಇಲ್ಲ, ಬರೀ ರಕ್ಷಣಾ ಕ್ಷೇತ್ರಕ್ಕೆ ಒತ್ತು ನೀಡಿದ್ದೇವೆ ಎನ್ನುತ್ತಾರೆ, ಎರಡೂ ಪಕ್ಷ ಕುಟುಂಬಕ್ಕೆ ಆರು ಸಾವಿರ ಕೊಡುವ ಭರವಸೆ ನೀಡಿವೆ ಆದರೆ ಅವರ ಬಜೆಟ್ ನಲ್ಲಿ ನಮಗೆ ಯಾವುದೆಡ ವಿಷನ್ ಕಾಣುತ್ತಿಲ್ಲ,ನಾಳೆ ನಾನು ಪ್ರಣಾಳಿಕೆ ಬಿಡಿಗಡೆ ಮಾಡಲಿದ್ದೇನೆ ಎಂದರು.

ಚುನಾವಣೆಯಲ್ಲಿ ನಾನು ಒಬ್ಬೊಂಟಿ ಅಲ್ಲ, ಆಪ್,ಸಿಪಿಯು,ಸಿಪಿಎಂ,ವಿವಿಧ ಸಣ್ಣಪಕ್ಷ ಪಕ್ಷಗಳು,ಮಹಿಳಾ ಸಂಘಟನೆ, ಕನ್ನಡ,ತಮಿಳ್, ತೆಲುಗು ಸಂಘಟನೆಗಳ ಜನ ನಮ್ಮೊಂದಿಗಿದ್ದಾರೆ, ಜೆಡಿಎಸ್ ಕಾರ್ಯಕರ್ತರು ಕೂಡ ಇಂದು ನಮ್ಮೊಂದಿಗೆ‌ ಕೆಲಸ‌ ಮಾಡುತ್ತಿದ್ದಾರೆ ಎಂದರು.

ಜಾತ್ಯತೀತ ವಿಚಾರದಲ್ಲಿ ಬರೀ‌ ಬಿಜೆಪಿಯನ್ನು ಯಾಕೆ ಬೈಯುತ್ತೀರಿ,ಕಾಂಗ್ರೆಸ್, ಜೆಡಿಎಸ್ ಕೂಡ ಜಾತ್ಯಾತೀತ ಅಲ್ಲ, ಯಾವ ಸಮುದಾಯಕ್ಕೆ ಎಲ್ಲಿ‌ ಸೀಟು‌ ಕೊಟ್ಟರೆ ಅನುಕೂಲ,ಅಲ್ಪಸಂಖ್ಯಾತರಿಗೆ ಇಂದು ಸೀಟು‌ ಕೊಟ್ಟರೆ ನಮಗೆ ಎಲ್ಲ ಲಾಭ ಆಗುತ್ತೆ ಎಂದು‌ ಲೆಕ್ಕ ಹಾಕುತ್ತಾರೆ ಆದರೆ ನಾನು ಜಾತ್ಯಾತೀತ, ನನಗೆ ಎಲ್ಲರೂ ಒಂದೇ,ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ ಆದರೆ ಮೈತ್ರಿ ಮೇಲ್ಮಟ್ಟದಲ್ಲಿ ಮಾತ್ರ ಆಗಿದೆ,
ಜನರ ಮಧ್ಯ ಜೀವನ ಪೂರ್ತಿ ಹೊಡೆದಾಡಿಕೊಂಡವರಿಗೆ ನಾಚಿಕೆ ಮಾನ ಮರ್ಯಾದೆ ಇದೆ ಅವರಿಗೂ ಸ್ವಾಭಿಮಾನ ಇದೆ, ಕಾರ್ಯಕರ್ತರನ್ನು ತಪ್ಪಿಸುವಲ್ಲಿ ಇಬ್ಬರೂ ಸೋತಿದ್ದರಿಂದಲೆ ಇಂದು ತಮಾಷೆಯ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಬಾಲ್ಯ ಕಳೆದಿದ್ದೇನೆ,ಶಾಲೆ,ಆಟ,ಪಾಠ,ಕಾಲೇಜು, ದಶಕದ ಸಾಹಿತ್ಯ,ರಂಗಭೂಮಿ ಒಡನಾಟ, ಸಿನಿಮಾ‌ರಂಗ ಪ್ರವೇಶ ಎಲ್ಲವೂ ಈ ಕ್ಷೇತ್ರದಲ್ಲಿಯೇ ಆಗಿದೆ, ನನ್ನ ನೆನಪು ಎಲ್ಲವೂ ಇಲ್ಲಿಯೇ ಇದೆ ಹಾಗಾಗಿ ನಾನು ಇಲ್ಲಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಕ್ಷೇತ್ರದ ಆಯ್ಕೆಯನ್ನು ರೈ ಸಮರ್ಥಿಸಿಕೊಂಡರು.

ಮತದಾನಕ್ಕೆ ಕೊನೆಯ 20 ದಿನ ರಾಜಕೀಯ ಪಕ್ಷಗಳು ಮಾಡುವುದನ್ನು ನಾನು ಕಳೆದ 6 ತಿಂಗಳಿಂದಲೇ ಮಾಡುತ್ತಿದ್ದೇನೆ, ಸ್ಲಂಗಳು,ಕಾಲೋನಿಗಳಿಗೆ‌ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ, 2 ಸಾವಿರ ಸ್ಲಂ ಗಳು ಬೆಂಗಳೂರಿನಲ್ಲಿ ಇವೆ‌ ಅಲ್ಲಿನವರನ್ನು ಮತಬ್ಯಾಂಕ್ ಮಾಡಿಕೊಳ್ಳಲಾಗಿದೆ,
ಎಲ್ಲಾ ಸರ್ಕಾರಿ ಶಾಲೆಗಳನ್ನು ಕಡೆಗಣಿಸಲಾಗಿದೆ, ವ್ಯವಸ್ಥೆ ಸರಿಯಿಲ್ಲ, ನಮ್ಮ ಶಾಲೆಗಳಲ್ಲಿ‌ ಗುಣಮಟ್ಟ‌ ಇಲ್ಲದ‌ ಕಾರಣ ನಾವೇ ನಮ್ಮ‌ ತೆರಿಗೆ ಹಣದಿಂದ ಕಟ್ಟಿದ ಶಾಲೆ‌ ಬಿಟ್ಟು ಖಾಸಗಿ ಶಾಲೆ ಎನ್ನುವ ಮಾಫಿಯಾಗೆ ಹೋಗುತ್ತಿದ್ದೇವೆ, ನಾವೇ ಕಟ್ಟಿದ ಸರ್ಕಾರಿ ಆಸ್ಪತ್ರೆಯಲ್ಲಿ ಸೌಕಭ್ಯ ಸರಿಯಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ,ಸರ್ಕಾರ,ರಾಜಕೀಯ ಪಕ್ಷಗಳು ಈ ಮಾಫಿಯಾವನ್ನು ಬೆಳೆಸಿವೆ, ಕುಡಿಯುವ ನೀರಿನ ಪೂರೈಕೆ ವಿಚಾರದಲ್ಲಿಯೂ ಬಿಬಿಎಂಪಿ ಇದನ್ನೇ ಮಾಡುತ್ತಿದೆ, ನಗರದಲ್ಲಿ ಇದ್ದ 250 ಕೆರೆಗಳಲ್ಲಿ 50 ಕೆರೆ ಏಕಾಯ್ತು, ಮಂದಾಲೋಚನೆ ಇರಲಿಲ್ಲವೇ, ಯಾವುದೇ ವಿಜನ್ ಇಲ್ಲ ಇವರಿಗೆ ಎಂದು ವಾಗ್ದಾಳಿ ನಡೆಸಿದರು.

ಉದ್ಯೋಗ ಅಂದರೆ ಏನು ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಿಲ್ಲ, ಆರು ಸಾವಿರ‌ ಕೊಡುವ ಭರವಸೆ ಆ ಪಕ್ಷಗಳ ಪ್ರಣಾಳಿಕೆಯಲ್ಲಿ ಕೊಟ್ಟಿವೆ.ಸಾಲಮನ್ನಾ ಮಾಡುತ್ತೇವೆ ಎನ್ನುತ್ತಾರೆ ಆದರೆ ಒಂದು ಬಾರಿ ಸಾಲಮನ್ನಾಗೆ 50 ಸಾವಿರ ಪ್ರತಿ ವ್ಯಕ್ತಿ ತಲೆ ಮೇಲೆ ಹೊರೆ ಬೀಳುತ್ತದೆ ಆದರೆ ಮುಂದಿನ ವರ್ಷವೂ ಸಾಲಮನ್ನಾ ಮಾಡಿದರೆ ಏನು‌ ಕಥೆ? ಸಾಲಮನ್ನಾ ಬದಲು ಶಾಶತ್ವತ ಪರಿಹಾರ ಯಾಕೆ ಕಲ್ಪಿಸಲ್ಲ.ನಮಗೆ ಸಮಸ್ಯೆಗಳ ಬಗ್ಗೆ ಮಾತನಾಡುವ ಸಂಸದ‌ ಬೇಕು,ಪರ್ಯಾಯ ರಾಜಕಾರಣ ಬೇಕು ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಪರ್ಯಾಯ ರಾಜಕಾರಣಕ್ಕಾಗಿ ನಾನು ರಾಜಕೀಯ ಪ್ರವೇಶ ಮಾಡಿದ್ದೇನೆ, ಜನರ ಬೇಸರದ ದನಿಯಾಗಿ ನಾನು ರಾಜಕೀಯಕ್ಕಾಗಿ ಬಂದಿದ್ದೇನೆ ಎಂದರು.

ನಾನು ಲೆಕ್ಕಾಚಾರದ ರಾಜಕಾರಣಿ ಅಲ್ಲ, ಯಾವ ಮತ ಬ್ಯಾಂಕ್ ನನ್ನ ಉದ್ದೇಶವಲ್ಲ ,ಅದರ ಲೆಕ್ಕ ಹಾಕಲ್ಲ, ಲೆಕ್ಕ ಹಾಕಿ‌ ಹಾಕಿಯೇ ಪಕ್ಷಗಳು ಜನರಿಗೆ ಮೋಸ ಮಾಡಿವೆ, ನೀರು,ಆರೋಗ್ಯ, ಟ್ರಾಫಿಕ್ ಸಮಸ್ಯೆ ಪರಿಹಾರ ಮುಖ್ಯ, ಜನ ಯಾವ ಪಕ್ಷಕ್ಕೂ ಸೇರಿದವರಲ್ಲ, ಜನರೊಂದಿಗೆ ನಾನು ಪರ್ಯಾಯ ರಾಜಕಾರಣ ಮಾಡುತ್ತೇನೆ ಎಂದರು.

ವೈಯಕ್ತಿಕವಾಗಿ ಮೋದಿ ಮತ್ತೆ ಪ್ರಧಾನಿ ಆಗುವುದು ನನಗೆ ಇಷ್ಟವಿಲ್ಲ,ಪರ್ಯಾಯ ನಾಯಕ ರಾಹುಲ್ ಗಾಂಧಿ ಅಥವಾ ಮತ್ತೊಬ್ಬರು ಏಕಾಗಬಾರದು, ನಮ್ಮ ದೇಶದಲ್ಲಿ ಜನರು ನೇರವಾಗಿ ಮಂತ್ರಿ,ಮುಖ್ಯಮಂತ್ರಿ,ಪ್ರಧಾನಮಂತ್ರಿಯನ್ನು ಆರಿಸಲ್ಲ,‌ಜನ ತಮ್ಮ ಕ್ಷೇತ್ರದ ಪ್ರತಿನಿಧಿ‌ಯನ್ನು ಮಾತ್ರ ಆಯ್ಕೆ ಮಾಡುತ್ತಾನೆ.ಆ ಪ್ರತಿನಿಧಿಗಳು ಸಿಎಂ,ಪಿಎಂ ಆಯ್ಕೆ ಮಾಡುತ್ತಾರೆ ಈ ಬಾರಿ ಬಿಜೆಪಿಗೆ ಬಹುಮತ ಬರಲ್ಲ‌ ಎಂದರು.
Conclusion:
Last Updated : Apr 11, 2019, 11:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.