ಬೆಂಗಳೂರು:ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ಹಣ ಪಡೆಯುತ್ತಿಲ್ಲ. ಸರ್ಕಾರ ಡೀಸೆಲ್ ರೇಟ್ ಕಡಿಮೆ ಮಾಡಬೇಕು ಎಂದು ಪ್ರಯಾಣಿಕ ಪುಂಡರಿಕಾಕ್ಷಾ ಒತ್ತಾಯಿಸಿದ್ದಾರೆ.
ಜನ ಇಲ್ಲದ ಮೇಲೆ ಖಾಸಗಿ ಬಸ್ ಮಾಲೀಕರು ಹೇಗೆ ಕಾರ್ಯಾಚರಣೆ ನಡೆಸುತ್ತಾರೆ. ಡೀಸೆಲ್ ಉಚಿತವಾಗಿ ಸಿಗುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಸರಿಯೋ ತಪ್ಪೋ ಗೊತ್ತಿಲ್ಲ, ಘನ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಜನ ಸಾಮಾನ್ಯರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕು.
ನೈಟ್ ಕರ್ಫ್ಯೂ ಎಲ್ಲರೂ ಮಲಗಿದ ಮೇಲೆ ಮಾಡಿದರೆ ಏನು ಪ್ರಯೋಜನ. ಜನ ಸಾಮಾಜಿಕ ಅಂತರ ಕಾಯ್ದುಕೊಂಡರೆ ಸಾಕು ಎಂದರು.