ETV Bharat / state

ಬೆಲೆ ಏರಿಕೆ ಖಂಡಿಸಿ ಮಿಸ್ಟರ್ ವಾಜಪೇಯಿ ಎತ್ತಿನಗಾಡಿಯಲ್ಲಿ ಬಂದಿದ್ರು: ಯಡಿಯೂರಪ್ಪಗೆ ಸಿದ್ದು ಟಾಂಗ್

author img

By

Published : Sep 20, 2021, 2:26 PM IST

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅಚ್ಚೇ ದಿನ ಅಂದರೆ ಬೆಲೆ ಏರಿಕೆನಾ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​​, ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಸೈಕಲ್​ ಜಾಥಾ ನಡೆಸಿದ್ದು, ಡಿಕೆಶಿ, ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಭಾಗಿಯಾಗಿದ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರು ವಾಗ್ದಾಳಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಡೀಸೆಲ್ - ಪೆಟ್ರೋಲ್​ನಿಂದ 23 ಲಕ್ಷ ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹ ಮಾಡಿದೆ. ರಾಜ್ಯದಲ್ಲಿ ಒಂದು ವರ್ಷಕ್ಕೆ 7 ಲಕ್ಷ‌ ಕೋಟಿ ರೂ. ಸುಂಕ ಸಂಗ್ರಹಿಸಲಾಗ್ತಿದೆ. ಬೆಲೆ ಇಳಿಕೆಗೆ ಆಯಿಲ್ ಬಾಂಡ್ ಹೊರೆಯಾಗಲ್ಲ. ತಮಿಳುನಾಡಿನಲ್ಲಿ 3 ರೂ. ಕಡಿಮೆ ಮಾಡಲಾಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎರಡೂ ತೈಲಗಳ ಮೇಲಿನ ಬೆಲೆ ಇಳಿಸಲಿ ಎಂದು ಒತ್ತಾಯಿಸಿದರು.

ಬಿಎಸ್​ವೈಗೆ ಸಿದ್ದು ಟಾಂಗ್​

ತೈಲ ದರ ಏರಿಕೆ ಖಂಡಿಸಿ ಈ ಹಿಂದೆ ಮಿಸ್ಟರ್ ವಾಜಪೇಯಿ ಎತ್ತಿನಗಾಡಿಯಲ್ಲಿ ಬಂದಿದ್ರು. ಇದಕ್ಕೆ ಯಡಿಯೂರಪ್ಪ ಏನ್​ ಹೇಳ್ತಾರೆ ಅನ್ನೋ ಮೂಲಕ ಸೈಕಲ್ ಜಾಥಾ ಟೀಕಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

‘ಭಂಡ ಸರ್ಕಾರ ಬೆಲೆ ಇಳಿಸಲ್ಲ’

ಪ್ರಶ್ನಿಸಿದ್ರೆ ಕೇಸ್ ಹಾಕುತ್ತಾರೆ ಅನ್ನೋ ಭಯ ಜನರಿಗಿದೆ. ರಾಜ್ಯದ ಜನತೆ ಮುಂದಿನ ಬಾರಿ ಯಡಿಯೂರಪ್ಪ ಅಲ್ಲ, ಅವರ ಥರದ ನೂರು ಜನ ಬಂದರೂ ಬಿಜೆಪಿ ಸೋಲಿಸುತ್ತಾರೆ. ರಾಜ್ಯದಲ್ಲಿರುವುದು ಹೇಡಿ ಸರ್ಕಾರ, ಭಂಡ ಸರ್ಕಾರ. ಈ‌ ಸರ್ಕಾರ ಯಾವುದರ ಬೆಲೆಯನ್ನೂ ಇಳಿಸಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟ ಗೊತ್ತಿಲ್ಲ. ಜನರ ಕಣ್ಣೀರ ಬೆಲೆ ಗೊತ್ತಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಹೇಳಿದರು.

‘ನಾನು 224 ಶಾಸಕರ ಸಂಪರ್ಕದಲ್ಲಿದ್ದೇನೆ’

ಆಪರೇಷನ್ ಹಸ್ತ ಮಾಡುತ್ತಿದೆ ಎಂಬ ಮಾಜಿ ಸಿಎಂ ಬಿಎಸ್​​​ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು 224 ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ಯಾರ ಜೊತೆನೂ ಮಾತುಕತೆ ನಡೆಸಿಲ್ಲ. ಅಧ್ಯಕ್ಷರನ್ನು ಬೇಕಾದರೆ ಕೇಳಿ ಎಂದರು.

‘ಆಪರೇಷನ್​ ಹಸ್ತ-ಕಮಲದ ಬಗ್ಗೆ ಮಾತಾಡ್ತಿಲ್ಲ’

ಕಾಂಗ್ರೆಸ್ ಆಪರೇಷನ್ ಹಸ್ತ ಮಾಡ್ತಿದೆ ಎಂಬ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಆಪರೇಷನ್​ ಹಸ್ತ - ಕಮಲದ ಬಗ್ಗೆ ಮಾತಾಡಲ್ಲ. ಬಿಜೆಪಿಯವರು ಯಾರ್ಯಾರ ಜತೆ ಮಾತುಕತೆ ನಡೆಸಿದ್ದಾರೆ ಅನ್ನೋದನ್ನು ಬಹಿರಂಗಪಡಿಸಲಿ. ಆಮೇಲೆ ನಾನು ಆ ಬಗ್ಗೆ ಮಾತಾಡುತ್ತೇನೆ ಎಂದರು.

ವಿಧಾನಸೌಧಕ್ಕೆ ಸೈಕಲ್ ಜಾಥಾ

ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ಬೆಳಗ್ಗೆ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಿತು. ಈ ವೇಳೆ, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸೈಕಲ್​ನಿಂದ ಕೆಳಗೆ ಬೀಳ್ತಿದ್ದ ಡಿಕೆಶಿ

ಎಂಎಲ್​ಸಿ ರಾಥೋಡ್​​​ ಸೈಕಲ್​ ಡಿಕೆಶಿ ಸೈಕಲ್​ಗೆ ಟಚ್​ ಆಗಿದ್ದರಿಂದ ಕೆಳಗೆ ಬೀಳುತ್ತಿದ್ದ ಡಿಕೆಶಿಯನ್ನು ಅವರ ಗನ್​ ಮ್ಯಾನ್ ಹಿಡಿದುಕೊಂಡರು.

ಕಾಂಗ್ರೆಸ್​ನಿಂದ ನಿಯಮ ಉಲ್ಲಂಘನೆ

ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಕಾಂಗ್ರೆಸ್ಸಿಗರು ವಿಧಾನಸೌಧದ ಒಳಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದರು. ಈ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಿದರು.

ಇದನ್ನೂ ಓದಿ: Shocking: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ!?

ಬೆಂಗಳೂರು ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​​, ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಸೈಕಲ್​ ಜಾಥಾ ನಡೆಸಿದ್ದು, ಡಿಕೆಶಿ, ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಭಾಗಿಯಾಗಿದ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರು ವಾಗ್ದಾಳಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಡೀಸೆಲ್ - ಪೆಟ್ರೋಲ್​ನಿಂದ 23 ಲಕ್ಷ ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹ ಮಾಡಿದೆ. ರಾಜ್ಯದಲ್ಲಿ ಒಂದು ವರ್ಷಕ್ಕೆ 7 ಲಕ್ಷ‌ ಕೋಟಿ ರೂ. ಸುಂಕ ಸಂಗ್ರಹಿಸಲಾಗ್ತಿದೆ. ಬೆಲೆ ಇಳಿಕೆಗೆ ಆಯಿಲ್ ಬಾಂಡ್ ಹೊರೆಯಾಗಲ್ಲ. ತಮಿಳುನಾಡಿನಲ್ಲಿ 3 ರೂ. ಕಡಿಮೆ ಮಾಡಲಾಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎರಡೂ ತೈಲಗಳ ಮೇಲಿನ ಬೆಲೆ ಇಳಿಸಲಿ ಎಂದು ಒತ್ತಾಯಿಸಿದರು.

ಬಿಎಸ್​ವೈಗೆ ಸಿದ್ದು ಟಾಂಗ್​

ತೈಲ ದರ ಏರಿಕೆ ಖಂಡಿಸಿ ಈ ಹಿಂದೆ ಮಿಸ್ಟರ್ ವಾಜಪೇಯಿ ಎತ್ತಿನಗಾಡಿಯಲ್ಲಿ ಬಂದಿದ್ರು. ಇದಕ್ಕೆ ಯಡಿಯೂರಪ್ಪ ಏನ್​ ಹೇಳ್ತಾರೆ ಅನ್ನೋ ಮೂಲಕ ಸೈಕಲ್ ಜಾಥಾ ಟೀಕಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

‘ಭಂಡ ಸರ್ಕಾರ ಬೆಲೆ ಇಳಿಸಲ್ಲ’

ಪ್ರಶ್ನಿಸಿದ್ರೆ ಕೇಸ್ ಹಾಕುತ್ತಾರೆ ಅನ್ನೋ ಭಯ ಜನರಿಗಿದೆ. ರಾಜ್ಯದ ಜನತೆ ಮುಂದಿನ ಬಾರಿ ಯಡಿಯೂರಪ್ಪ ಅಲ್ಲ, ಅವರ ಥರದ ನೂರು ಜನ ಬಂದರೂ ಬಿಜೆಪಿ ಸೋಲಿಸುತ್ತಾರೆ. ರಾಜ್ಯದಲ್ಲಿರುವುದು ಹೇಡಿ ಸರ್ಕಾರ, ಭಂಡ ಸರ್ಕಾರ. ಈ‌ ಸರ್ಕಾರ ಯಾವುದರ ಬೆಲೆಯನ್ನೂ ಇಳಿಸಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟ ಗೊತ್ತಿಲ್ಲ. ಜನರ ಕಣ್ಣೀರ ಬೆಲೆ ಗೊತ್ತಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಹೇಳಿದರು.

‘ನಾನು 224 ಶಾಸಕರ ಸಂಪರ್ಕದಲ್ಲಿದ್ದೇನೆ’

ಆಪರೇಷನ್ ಹಸ್ತ ಮಾಡುತ್ತಿದೆ ಎಂಬ ಮಾಜಿ ಸಿಎಂ ಬಿಎಸ್​​​ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು 224 ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ಯಾರ ಜೊತೆನೂ ಮಾತುಕತೆ ನಡೆಸಿಲ್ಲ. ಅಧ್ಯಕ್ಷರನ್ನು ಬೇಕಾದರೆ ಕೇಳಿ ಎಂದರು.

‘ಆಪರೇಷನ್​ ಹಸ್ತ-ಕಮಲದ ಬಗ್ಗೆ ಮಾತಾಡ್ತಿಲ್ಲ’

ಕಾಂಗ್ರೆಸ್ ಆಪರೇಷನ್ ಹಸ್ತ ಮಾಡ್ತಿದೆ ಎಂಬ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಆಪರೇಷನ್​ ಹಸ್ತ - ಕಮಲದ ಬಗ್ಗೆ ಮಾತಾಡಲ್ಲ. ಬಿಜೆಪಿಯವರು ಯಾರ್ಯಾರ ಜತೆ ಮಾತುಕತೆ ನಡೆಸಿದ್ದಾರೆ ಅನ್ನೋದನ್ನು ಬಹಿರಂಗಪಡಿಸಲಿ. ಆಮೇಲೆ ನಾನು ಆ ಬಗ್ಗೆ ಮಾತಾಡುತ್ತೇನೆ ಎಂದರು.

ವಿಧಾನಸೌಧಕ್ಕೆ ಸೈಕಲ್ ಜಾಥಾ

ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ಬೆಳಗ್ಗೆ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಿತು. ಈ ವೇಳೆ, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸೈಕಲ್​ನಿಂದ ಕೆಳಗೆ ಬೀಳ್ತಿದ್ದ ಡಿಕೆಶಿ

ಎಂಎಲ್​ಸಿ ರಾಥೋಡ್​​​ ಸೈಕಲ್​ ಡಿಕೆಶಿ ಸೈಕಲ್​ಗೆ ಟಚ್​ ಆಗಿದ್ದರಿಂದ ಕೆಳಗೆ ಬೀಳುತ್ತಿದ್ದ ಡಿಕೆಶಿಯನ್ನು ಅವರ ಗನ್​ ಮ್ಯಾನ್ ಹಿಡಿದುಕೊಂಡರು.

ಕಾಂಗ್ರೆಸ್​ನಿಂದ ನಿಯಮ ಉಲ್ಲಂಘನೆ

ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಕಾಂಗ್ರೆಸ್ಸಿಗರು ವಿಧಾನಸೌಧದ ಒಳಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದರು. ಈ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಿದರು.

ಇದನ್ನೂ ಓದಿ: Shocking: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.