ETV Bharat / state

'ಮಂಡ್ಯ ಜಿಲ್ಲೆಯ ಎಲ್ಲಾ 8 ಜೆಡಿಎಸ್‌ ಶಾಸಕರ ಸೌಲಭ್ಯಗಳು ನಿಂತೇ ಹೋಗಿವೆಯಾ'

author img

By

Published : Oct 9, 2019, 4:08 PM IST

ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತಾ ಅರ್ಪಣೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗವಹಿಸಿದ್ದರು.

ಸಂಸದೆ ಸುಮಲತಾ

ಮಂಡ್ಯ:ಯಾರು ವಿದೇಶದಲ್ಲಿ ಇದ್ದರು. ಏನ್ ಮಾಡ್ತಾ ಇದ್ದರು ಅನ್ನೋದು ಮಾಧ್ಯಮಗಳೇ ತೋರಿಸಿವೆ. ಹೇಳುವುದು ಒಂದು, ಮಾಡುವುದು ಇನ್ನೊಂದು, ಬೇರೆ ಬೇರೆ ರೀತಿ ನಡೆದುಕೊಳ್ಳುವ ರಾಜಕಾರಣಿ ನಾನಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದರು.

ಸಂಸದೆ ಸುಮಲತಾ ಅಂಬರೀಶ್..

ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಕೃತಜ್ಞತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ರಾಜಕಾರಣಿಗಳ ರೀತಿ ನಾನಲ್ಲ. ಅವರು ಹೇಳುವುದು ಒಂದು, ಮಾಡುವುದು ಒಂದಲ್ಲ ಎಂದು ಟಾಂಗ್ ನೀಡಿದರು.

ಇನ್ನು, ಕಬ್ಬು ಬೆಳೆಗಾರರ ರಕ್ಷಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ಸಮಸ್ಯೆ ನನ್ನ ವ್ಯಾಪ್ತಿಗೆ ಬರೋದಿಲ್ಲ. ಇದು ಶಾಸಕರ ವ್ಯಾಪ್ತಿಗೆ ಬರುತ್ತದೆ. ಆದರೂ ಪ್ರತಿನಿತ್ಯ ಡಿಸಿಯವರಿಂದ ವರದಿ ಪಡೆದು ಸಮಸ್ಯೆ ಪರಿಹರಿಸಲು ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಗೆದ್ದ ನಂತರ ಶಾಸಕರ ಸೌಲಭ್ಯಗಳು ನಿಂತು ಹೋಗಿದ್ಯಾ ಎನ್ನುವ ಮೂಲಕ ಜೆಡಿಎಸ್ ನಾಯಕರಿಗೆ ಪ್ರಶ್ನೆ ಹಾಕಿದರು.

ಜಿಲ್ಲೆಯಲ್ಲಿ 8 ಶಾಸಕರು ಇದ್ದಾರೆ. ಅವರು ಏನು ಮಾಡುತ್ತಿದ್ದಾರೆ. ನಾನೇ ಒಬ್ಬಳೇ ಕಾಣಿಸುತ್ತಿದ್ದೇನಾ ಎಂದು ಪ್ರಶ್ನೆ ಮಾಡಿದರು. ಮಾಜಿ ಸಂಸದರು ಯಾಕೆ ಅವರ ಪಕ್ಷದ ಶಾಸಕರನ್ನು ಕೇಳುತ್ತಿಲ್ಲ ಎಂದು ಟಾಂಗ್ ನೀಡಿದರು‌.

ಮಂಡ್ಯ:ಯಾರು ವಿದೇಶದಲ್ಲಿ ಇದ್ದರು. ಏನ್ ಮಾಡ್ತಾ ಇದ್ದರು ಅನ್ನೋದು ಮಾಧ್ಯಮಗಳೇ ತೋರಿಸಿವೆ. ಹೇಳುವುದು ಒಂದು, ಮಾಡುವುದು ಇನ್ನೊಂದು, ಬೇರೆ ಬೇರೆ ರೀತಿ ನಡೆದುಕೊಳ್ಳುವ ರಾಜಕಾರಣಿ ನಾನಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದರು.

ಸಂಸದೆ ಸುಮಲತಾ ಅಂಬರೀಶ್..

ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಕೃತಜ್ಞತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ರಾಜಕಾರಣಿಗಳ ರೀತಿ ನಾನಲ್ಲ. ಅವರು ಹೇಳುವುದು ಒಂದು, ಮಾಡುವುದು ಒಂದಲ್ಲ ಎಂದು ಟಾಂಗ್ ನೀಡಿದರು.

ಇನ್ನು, ಕಬ್ಬು ಬೆಳೆಗಾರರ ರಕ್ಷಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ಸಮಸ್ಯೆ ನನ್ನ ವ್ಯಾಪ್ತಿಗೆ ಬರೋದಿಲ್ಲ. ಇದು ಶಾಸಕರ ವ್ಯಾಪ್ತಿಗೆ ಬರುತ್ತದೆ. ಆದರೂ ಪ್ರತಿನಿತ್ಯ ಡಿಸಿಯವರಿಂದ ವರದಿ ಪಡೆದು ಸಮಸ್ಯೆ ಪರಿಹರಿಸಲು ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಗೆದ್ದ ನಂತರ ಶಾಸಕರ ಸೌಲಭ್ಯಗಳು ನಿಂತು ಹೋಗಿದ್ಯಾ ಎನ್ನುವ ಮೂಲಕ ಜೆಡಿಎಸ್ ನಾಯಕರಿಗೆ ಪ್ರಶ್ನೆ ಹಾಕಿದರು.

ಜಿಲ್ಲೆಯಲ್ಲಿ 8 ಶಾಸಕರು ಇದ್ದಾರೆ. ಅವರು ಏನು ಮಾಡುತ್ತಿದ್ದಾರೆ. ನಾನೇ ಒಬ್ಬಳೇ ಕಾಣಿಸುತ್ತಿದ್ದೇನಾ ಎಂದು ಪ್ರಶ್ನೆ ಮಾಡಿದರು. ಮಾಜಿ ಸಂಸದರು ಯಾಕೆ ಅವರ ಪಕ್ಷದ ಶಾಸಕರನ್ನು ಕೇಳುತ್ತಿಲ್ಲ ಎಂದು ಟಾಂಗ್ ನೀಡಿದರು‌.

Intro:ಮಂಡ್ಯ: ಯಾರು ವಿದೇಶದಲ್ಲಿ ಇದ್ದರು. ಏನ್ ಮಾಡ್ತಾ ಇದ್ದರು ಅನ್ನೋದು ಮಾದ್ಯಮಗಳೇ ತೋರಿಸಿವೆ. ಹೇಳುವುದು ಒಂದು, ಮಾಡುವುದು ಇನ್ನೊಂದು, ಬೇರೆ ಬೇರೆ ರೀತಿ ನಡೆದುಕೊಳ್ಳುವ ರಾಜಕಾರಣಿ ನಾನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದರು.


Body:ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಕೃತಜ್ಞತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾದ್ಯಮಗಳ ಜೊತೆ ಮಾತನಾಡಿ, ಬೇರೆ ರಾಜಕಾರಣಿಗಳ ರೀತಿ ನಾನಲ್ಲ. ಅವರು ಹೇಳುವುದು ಒಂದು, ಮಾಡುವುದು ಒಂದಲ್ಲ ಎಂದು ಟಾಂಗ್ ನೀಡಿದರು.
ಇನ್ನು ಕಬ್ಬು ಬೆಳೆಗಾರರ ರಕ್ಷಣೆ ಕುರಿತು ಪ್ರತಿಕ್ರಿಯೆ ನೀಡಿ. ಈ ಸಮಸ್ಯೆ ನನ್ನ ವ್ಯಾಪ್ತಿಗೆ ಬರೋದಿಲ್ಲ. ಇದು ಶಾಸಕರ ವ್ಯಾಪ್ತಿಗೆ ಬರುತ್ತದೆ. ಆದರೂ ಪ್ರತಿನಿತ್ಯ ಡಿಸಿಯವರಿಂದ ವರದಿ ಪಡೆದು ಸಮಸ್ಯೆ ಪರಿಹರಿಸಲು ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನು ಗೆದ್ದ ನಂತರ ಶಾಸಕ ಸೌಲಭ್ಯಗಳು ನಿಂತಿ ಹೋಗಿದ್ಯಾ ಎನ್ನುವ ಮೂಲಕ ಜೆಡಿಎಸ್ ನಾಯಕರಿಗೆ ಪ್ರಶ್ನೆ ಹಾಕಿದರು.
ಜಿಲ್ಲೆಯಲ್ಲಿ 8 ಶಾಸಕರು ಇದಾರೆ. ಅವರು ಏನು ಮಾಡುತ್ತಿದ್ದಾರೆ. ನಾನೇ ಒಬ್ಬಳೇ ಕಾಣಿಸುತ್ತಿದ್ದೇನಾ ಎಂದು ಪ್ರಶ್ನೆ ಮಾಡಿದರು. ಮಾಜಿ ಸಂಸದರು ಯಾಕೆ ಅವರ ಪಕ್ಷದ ಶಾಸಕರನ್ನು ಕೇಳುತ್ತಿಲ್ಲ ಎಂದು ಟಾಂಗ್ ನೀಡಿದರು‌.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.