ETV Bharat / state

ಪೊಲೀಸ್ ಠಾಣೆ ಮುಟ್ಟುವ ಧೈರ್ಯ ಯಾರೂ ಮಾಡಬಾರದು: ಶೋಭಾ ಕರಂದ್ಲಾಜೆ

ಸಮಾಜಕ್ಕೋಸ್ಕರ ಇರುವ ಪೊಲೀಸ್ ಠಾಣೆ ಮುಟ್ಟುವ ಧೈರ್ಯ ಮಾಡಬಾರದು. ಒಂದು ಸುಸಜ್ಜಿತ ಪೊಲೀಸ್ ಠಾಣೆಯನ್ನ ಸಂಪೂರ್ಣ ಧ್ವಂಸ ಮಾಡಿದ್ದಾರೆ. ಈ ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

author img

By

Published : Aug 12, 2020, 3:46 PM IST

ಸಂಸದೆ ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ತನಿಖಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರದ ಡಿಜೆ ಹಳ್ಳಿಯಲ್ಲಿ ನಡೆದ ಪ್ರಕರಣ ವ್ಯವಸ್ಥಿತವಾದ ಷಡ್ಯಂತ್ರವಾಗಿದೆ. ಕೇರಳದಿಂದ ಎಸ್​ಡಿಪಿಐನವರು ಬಂದು ಹಾನಿ ಮಾಡಿದ್ದಾರೆ. ನಾನು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಅಗತ್ಯ ತನಿಖೆ ಆಗಬೇಕು. ಜಮೀರ್ ಬರ್ತಾರೆ, ರಿಜ್ವಾನ್ ಬರ್ತಾರೆ, ಇವೆಲ್ಲವೂ ಕೂಡ ಷಡ್ಯಂತ್ರ ಎಂದರು.

ಸಮಾಜಕ್ಕೋಸ್ಕರ ಇರುವ ಪೊಲೀಸ್ ಠಾಣೆ ಮುಟ್ಟುವ ಧೈರ್ಯ ಯಾರೂ ಮಾಡಬಾರದು. ಒಂದು ಸುಸಜ್ಜಿತ ಪೊಲೀಸ್ ಠಾಣೆಯನ್ನ ಸಂಪೂರ್ಣ ಧ್ವಂಸ ಮಾಡಿದ್ದಾರೆ. ಈ ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವುದೇ ಸಂಘಟನೆ ಈ ಕೃತ್ಯ ಮಾಡಿದ್ದರೂ ಅದನ್ನ ಬ್ಯಾನ್ ಮಾಡಬೇಕು ಎಂದರು.

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ತನಿಖಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರದ ಡಿಜೆ ಹಳ್ಳಿಯಲ್ಲಿ ನಡೆದ ಪ್ರಕರಣ ವ್ಯವಸ್ಥಿತವಾದ ಷಡ್ಯಂತ್ರವಾಗಿದೆ. ಕೇರಳದಿಂದ ಎಸ್​ಡಿಪಿಐನವರು ಬಂದು ಹಾನಿ ಮಾಡಿದ್ದಾರೆ. ನಾನು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಅಗತ್ಯ ತನಿಖೆ ಆಗಬೇಕು. ಜಮೀರ್ ಬರ್ತಾರೆ, ರಿಜ್ವಾನ್ ಬರ್ತಾರೆ, ಇವೆಲ್ಲವೂ ಕೂಡ ಷಡ್ಯಂತ್ರ ಎಂದರು.

ಸಮಾಜಕ್ಕೋಸ್ಕರ ಇರುವ ಪೊಲೀಸ್ ಠಾಣೆ ಮುಟ್ಟುವ ಧೈರ್ಯ ಯಾರೂ ಮಾಡಬಾರದು. ಒಂದು ಸುಸಜ್ಜಿತ ಪೊಲೀಸ್ ಠಾಣೆಯನ್ನ ಸಂಪೂರ್ಣ ಧ್ವಂಸ ಮಾಡಿದ್ದಾರೆ. ಈ ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವುದೇ ಸಂಘಟನೆ ಈ ಕೃತ್ಯ ಮಾಡಿದ್ದರೂ ಅದನ್ನ ಬ್ಯಾನ್ ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.