ETV Bharat / state

ವಂಚಕ ಮನ್ಸೂರ್​ಗೆ ಮತ್ತೆ 14 ದಿನ ನ್ಯಾಯಂಗ ಬಂಧನ: ನ್ಯಾಯಲಯ ಆದೇಶ

author img

By

Published : Aug 16, 2019, 10:41 PM IST

ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್​ನ ಎಸ್ಐಟಿ ಕಸ್ಟಡಿ‌ ಅಂತ್ಯ ಹಿನ್ನೆಲೆ, ಎಸ್ಐಟಿ ವಿಚಾರಣೆಗೆ ಮನ್ಸೂರ್ ಖಾನ್​ನ ಅಗತ್ಯ ಇಲ್ಲದ ಕಾರಣ ನ್ಯಾಯಧೀಶರು 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದರು.

mansoor-khan-sentenced-to-14-days-judicial-custody

ಬೆಂಗಳೂರು: ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್​ನ ಎಸ್ಐಟಿ ಕಸ್ಟಡಿ‌ ಅಂತ್ಯ ಹಿನ್ನೆಲೆ, ಇಂದು ಸಿಟಿ ಸಿವಿಲ್ ನ್ಯಾಯಲಯ ಆವರಣದ 1ನೇ ಸಿಸಿಹೆಚ್ ನ್ಯಾಯಾಲದ ನ್ಯಾಯಾಧೀಶ ಶಿವಶಂಕರ ಅಮರಣ್ಣನವರ್‌ ಎದುರು ಖಾನ್​ನನ್ನು ಹಾಜರು ಪಡಿಸಲಾಯ್ತು. ಈ ವೇಳೆ ಎಸ್ಐಟಿ ವಿಚಾರಣೆ ಮುಕ್ತಾಯ ಹಿನ್ನೆಲೆ ಮತ್ತೆ ಕಸ್ಟಡಿಗೆ ಕೇಳದೆ ಇರುವ ಕಾರಣ ಮುಂದಿನ 14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

ಎಸ್ಐಟಿಯ ಪರ ವಕೀಲರು, ಮನ್ಸೂರ್ ನ್ಯಾಯಲಯಕ್ಕೆ ಸ್ವಇಚ್ಚಾ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ ಎಂದಿದ್ದರಿಂದ, ನ್ಯಾಯಧೀಶರು ಮನ್ಸೂರ್‌ನನ್ನು ಪ್ರಶ್ನಿಸಿದಕ್ಕೆ, ನನಗೆ ಹೃದಯ ಸಮಸ್ಯೆ ಇದೆ. ಈ ಚಿಕಿತ್ಸೆ ಮುಗಿದ ನಂತರ ವಕೀಲರ ಜೊತೆ ಚರ್ಚೆ ಮಾಡಿ‌ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಮನ್ಸೂರ್‌ ಉತ್ತರಿಸಿದ.

ಇದೇ ವೇಳೆ ಮನ್ಸೂರ್ ಖಾನ್​ ಇಮೇಲ್‌ಗಳನ್ನು ಎಫ್ಎಸ್ಎಲ್‌ (ವಿಧಿವಿಜ್ಞಾನ ಪ್ರಯೋಗಾಲಯ)ಗೆ ಕಳುಹಿಸಲು ಕೋರ್ಟ್ ಅನುಮತಿ ಬೇಕು. ಈಗಾಗಲೇ ಅಮೆಜಾನ್ ಕ್ಲೌಡ್ ಸೇರಿ ನಾಲ್ಕು ಇಮೇಲ್ ಪರಿಶೀಲನೆ ನಡೆಸಿದ್ದಾಗಿದೆ ಎಂದು ಎಸ್ಐಟಿ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದರು. ಈ ವೇಳೆ ಎಸ್ಐಟಿ ಯಾವೆಲ್ಲಾ ಮಾಹಿತಿಗಳನ್ನು ಇಮೇಲ್‌ನಿಂದ ತೆಗದುಕೊಳ್ಳುತ್ತಾರೋ ಅದರ ಒಂದು ಪ್ರತಿ ನಮಗೆ ನೀಡುವಂತೆ ಮನ್ಸೂರ್ ಪರ ವಕೀಲರು ಮನವಿ ಮಾಡಿದರು.

ನಂತರ ವಾದ ಪ್ರತಿವಾದ ಆಲಿಸಿ ಎಸ್ಐಟಿ ವಿಚಾರಣೆಗೆ ಮನ್ಸೂರ್ ಖಾನ್​ನ ಅಗತ್ಯ ಇಲ್ಲದ ಕಾರಣ, ನ್ಯಾಯಧೀಶರು 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದರು. ಕಳೆದ ಆಗಸ್ಟ್ 3ರಂದು‌ ಆರೋಪಿಯನ್ನು ವಿಶೇಷ ತನಿಖಾ ತಂಡ 14 ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಬೆಂಗಳೂರು: ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್​ನ ಎಸ್ಐಟಿ ಕಸ್ಟಡಿ‌ ಅಂತ್ಯ ಹಿನ್ನೆಲೆ, ಇಂದು ಸಿಟಿ ಸಿವಿಲ್ ನ್ಯಾಯಲಯ ಆವರಣದ 1ನೇ ಸಿಸಿಹೆಚ್ ನ್ಯಾಯಾಲದ ನ್ಯಾಯಾಧೀಶ ಶಿವಶಂಕರ ಅಮರಣ್ಣನವರ್‌ ಎದುರು ಖಾನ್​ನನ್ನು ಹಾಜರು ಪಡಿಸಲಾಯ್ತು. ಈ ವೇಳೆ ಎಸ್ಐಟಿ ವಿಚಾರಣೆ ಮುಕ್ತಾಯ ಹಿನ್ನೆಲೆ ಮತ್ತೆ ಕಸ್ಟಡಿಗೆ ಕೇಳದೆ ಇರುವ ಕಾರಣ ಮುಂದಿನ 14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

ಎಸ್ಐಟಿಯ ಪರ ವಕೀಲರು, ಮನ್ಸೂರ್ ನ್ಯಾಯಲಯಕ್ಕೆ ಸ್ವಇಚ್ಚಾ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ ಎಂದಿದ್ದರಿಂದ, ನ್ಯಾಯಧೀಶರು ಮನ್ಸೂರ್‌ನನ್ನು ಪ್ರಶ್ನಿಸಿದಕ್ಕೆ, ನನಗೆ ಹೃದಯ ಸಮಸ್ಯೆ ಇದೆ. ಈ ಚಿಕಿತ್ಸೆ ಮುಗಿದ ನಂತರ ವಕೀಲರ ಜೊತೆ ಚರ್ಚೆ ಮಾಡಿ‌ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಮನ್ಸೂರ್‌ ಉತ್ತರಿಸಿದ.

ಇದೇ ವೇಳೆ ಮನ್ಸೂರ್ ಖಾನ್​ ಇಮೇಲ್‌ಗಳನ್ನು ಎಫ್ಎಸ್ಎಲ್‌ (ವಿಧಿವಿಜ್ಞಾನ ಪ್ರಯೋಗಾಲಯ)ಗೆ ಕಳುಹಿಸಲು ಕೋರ್ಟ್ ಅನುಮತಿ ಬೇಕು. ಈಗಾಗಲೇ ಅಮೆಜಾನ್ ಕ್ಲೌಡ್ ಸೇರಿ ನಾಲ್ಕು ಇಮೇಲ್ ಪರಿಶೀಲನೆ ನಡೆಸಿದ್ದಾಗಿದೆ ಎಂದು ಎಸ್ಐಟಿ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದರು. ಈ ವೇಳೆ ಎಸ್ಐಟಿ ಯಾವೆಲ್ಲಾ ಮಾಹಿತಿಗಳನ್ನು ಇಮೇಲ್‌ನಿಂದ ತೆಗದುಕೊಳ್ಳುತ್ತಾರೋ ಅದರ ಒಂದು ಪ್ರತಿ ನಮಗೆ ನೀಡುವಂತೆ ಮನ್ಸೂರ್ ಪರ ವಕೀಲರು ಮನವಿ ಮಾಡಿದರು.

ನಂತರ ವಾದ ಪ್ರತಿವಾದ ಆಲಿಸಿ ಎಸ್ಐಟಿ ವಿಚಾರಣೆಗೆ ಮನ್ಸೂರ್ ಖಾನ್​ನ ಅಗತ್ಯ ಇಲ್ಲದ ಕಾರಣ, ನ್ಯಾಯಧೀಶರು 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದರು. ಕಳೆದ ಆಗಸ್ಟ್ 3ರಂದು‌ ಆರೋಪಿಯನ್ನು ವಿಶೇಷ ತನಿಖಾ ತಂಡ 14 ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

Intro:ಐಎಂಎ ಬಹುಕೋಟಿ ವಂಚಕ
14ದಿನ ನ್ಯಾಯಂಗ ಬಂಧನಕ್ಕೆ ನೀಡಿದ ನ್ಯಾಯಲಯ

ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್ ಕಸ್ಟಡಿ‌ ಅಂತ್ಯ ಹಿನ್ನೆಲೆ ಇಂದು ಸಿಸಿಎಚ್೧ ‌ಕೋರ್ಟ್‌ ಹಾಲ್‌ನ ನ್ಯಾಯಾಧೀಶ ಶಿವಶಂಕರ ಅಮರಣ್ಣನವರ್‌ ಎದುರು ಹಾಜರು ಪಡಿಸಲಾಯ್ತು.ಈ ವೇಳೆ ಎಸ್ಐಟಿ ವಿಚಾರಣೆ ಮುಕ್ತಾಯ ಹಿನ್ನೆಲೆ ಕಸ್ಟಡಿ ಕೇಳದೆ ಇರುವ ಕಾರಣ 14ದಿನಗಳ ಕಾಲ ನ್ಯಾಯಂಗಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

ಇನ್ನು ಎಸ್ಐಟಿ ಪರ ವಕೀಲರು ನ್ಯಾಯಲಯಕ್ಕೆ ಮನ್ಸೂರ್ ಸ್ವಇಚ್ಚಾ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ
ಎಂದ್ರು. ಈ ವೇಳೆ ಕೋರ್ಟ್ ಹಾಲ್‌ನಲ್ಲಿ ಮನ್ಸೂರ್‌ನನ್ನು ಈ ಬಗ್ಗೆ ನ್ಯಾಯಧೀಶರು ಪ್ರಶ್ನಿಸಿದಾಗ ನನಗೆ ಹೃದಯ ಸಮಸ್ಯೆ ಇದೆ ಈ ಚಿಕಿತ್ಸೆ ಮುಗಿದ ನಂತರ ವಕೀಲರ ಜೊತೆ ಚರ್ಚೆ ಮಾಡಿ‌ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣದ ಸ್ವಇಚ್ಚಾ ಹೇಳಿಕೆ ನೀಡುತ್ತೇನೆ ಎಂದ್ರು.

ಈ ವೇಳೆ ಎಸ್ಐಟಿ ವಕೀಲರು ಮನ್ಸೂರ್ ಇಮೇಲ್‌ಗಳನ್ನ ಎಫ್ಎಸ್ಎಲ್‌ಗೆ ಕಳುಹಿಸಲು ಕೋರ್ಟ್ ಅನುಮತಿ ಬೇಕು.ಈಗಾಗಲೇ ಅಮೆಜಾನ್ ಕ್ಲೌಡ್ ಸೇರಿ ನಾಲ್ಕು ಇಮೇಲ್ ಪರಿಶೀಲನೆ ನಡೆಸಿದ್ದಾಗಿದೆ ಎಂದು ಎಸ್ಐಟಿ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದ್ರು.
ಈ ವೇಳೆ ಮನ್ಸೂರು ವಕೀಲರು ಎಸ್ಐಟಿ ಎಫ್ ಎಸ್ ಎಲ್
ಯಾವೆಲ್ಲಾ ಮಾಹಿತಿಗಳನ್ನು ಇಮೇಲ್‌ನಿಂದ ತೆಗದುಕೊಳ್ಳುತ್ತಾರೋ ಅದರ ಒಂದು ಪ್ರತಿ ನಮಗೆ ನೀಡುವಂತೆ ಮನ್ಸೂರ್ ಪರ ವಕೀಲರು ಮನವಿ ಮಾಡಿದರು..

ನಂತ್ರ ವಾದ ಪ್ರತಿವಾದ ಆಲಿಸಿ ಎಸ್ಐಟಿ ವಿಚಾರಣೆಗೆ ಅಗತ್ಯ ಇಲ್ಲದ ಕಾರಣ 14ದಿನ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಕಳೆದ ಆಗಸ್ಟ್ ೩ರಂದು‌ ಆರೋಪಿಯನ್ನು ವಿಶೇಷ ತನಿಖಾ ತಂಡ ೧೪ ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.ಇಂದು ಎಸ್ಐಟಿ ಕಸ್ಟಡಿ ಅಂತ್ಯವಾಗುವ ಹಿನ್ನೆಲೆ ಹಾಜರು ಪಡಿಸಲಾಯ್ತು.Body:KN_BNG_09_MANUSUR_7204498Conclusion:KN_BNG_09_MANUSUR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.