ಬೆಂಗಳೂರು: ಇತ್ತೀಚೆಗಷ್ಟೆ ಮೃತಪಟ್ಟ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿದೆ.

ಸ್ವಾತಂತ್ರ್ಯ ಉದ್ಯಾನವನದ ಮುಂಭಾಗದಲ್ಲಿ 8*8 ಚದರ ಜಾಗದಲ್ಲಿ ಸ್ಥಾಪಿಸಲು ಅನುಮತಿ ಕೋರಲಾಗಿದೆ. ದೊರೆಸ್ವಾಮಿ 104 ವರ್ಷ ಕಾಲ ಬುದುಕಿದ್ದು, ನಿರಂತರವಾಗಿ ನಾಡು, ನುಡಿ, ಜಲ ರಕ್ಷಣೆಗಾಗಿ ಹೋರಾಡಿದ್ದಾರೆ.
ಕರ್ನಾಟಕದ ಏಕೀಕರಣಕ್ಕೆ, ಕೊಳಗೇರಿ ಸುಧಾರಣೆಗೆ ದುಡಿದಿದ್ದಾರೆ. ಹೀಗಾಗಿ ಯುವ ಪೀಳಿಗೆಗೆ ಮಾದರಿಯಾಗುವಂತೆ ದೊರೆಸ್ವಾಮಿ ಪುತ್ಥಳಿ ಸ್ಥಾಪಿಸಲು ಅನುಮತಿ ಕೇಳಿದ್ದಾರೆ.