ETV Bharat / state

ಪಾಲಿಕೆ ಚಿತಾಗಾರಗಳಲ್ಲಿ ಹೆಣ ಸುಡಲು ಕ್ಯೂ: ನೌಕರರಿಗೂ ಹೆಚ್ಚಿದ ಒತ್ತಡ - Bangalore latest update news

ಕೋವಿಡ್ ಸೋಕಿನಿಂದ ಬೆಂಗಳೂರಿನಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಬೆಳಗ್ಗೆ ಏಳರಿಂದ ರಾತ್ರಿ ಹನ್ನೆರೆಡಾದರೂ ಶವಗಳು ಬರುವುದು ತಪ್ಪುತ್ತಿಲ್ಲ. ಒಂದೊಂದು ಹೆಣ ಸುಡಲೂ ಒಂದರಿಂದ, ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ.

Bangalore
ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಶವಗಳಿರುವ ಆ್ಯಂಬುಲೆನ್ಸ್
author img

By

Published : Apr 14, 2021, 2:51 PM IST

ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ನಗರದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಚಿತಾಗಾರಗಳ ಸ್ಥಿತಿ ಬಿಗಡಾಯಿಸುತ್ತಿದೆ.

ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದಲ್ಲಿ ಇಂದು ಮುಂಜಾನೆಯಿಂದಲೂ ಶವಗಳಿರುವ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ. ಬೆಳಗ್ಗೆ ಏಳರಿಂದ ರಾತ್ರಿ ಹನ್ನೆರೆಡಾದರೂ ಶವಗಳು ಮುಗಿಯುತ್ತಿಲ್ಲ. ಒಂದೊಂದು ಹೆಣ ಸುಡಲೂ ಒಂದರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ.

ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಶವಗಳಿರುವ ಆ್ಯಂಬುಲೆನ್ಸ್

ಆದರೆ, ಸ್ಮಶಾನದಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾದ ಸವಲತ್ತುಗಳಿಲ್ಲ. ಸರಿಯಾದ ಪ್ರಮಾಣದಲ್ಲಿ ಮಾಸ್ಕ್, ಕೈಗವಸು, ಪಿಪಿಇ ಕಿಟ್, ಸ್ಯಾನಿಟೈಸರ್ ಕೂಡಾ ಕೊಟ್ಟಿಲ್ಲ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಕುತ್ತು ಬರುವ ಆತಂಕ ಇದೆ ಎಂದು ನೌಕರರೊಬ್ಬರು ತಿಳಿಸಿದರು.

ಕೋವಿಡ್ ಸೋಂಕಿತರ ಮೃತದೇಹ ಸುಡುವುದಕ್ಕೆಂದೇ ಮೇಡಿ ಅಗ್ರಹಾರ, ಸುಮನಹಳ್ಳಿ, ಬೊಮ್ಮಹಳ್ಳಿ, ಕೆಂಗೇರಿ, ಪೆನತ್ತೂರುಗಳಲ್ಲಿ 5 ಚಿತಾಗಾರಗಳನ್ನು ಮೀಸಲಿಡಲಾಗಿದೆ. ಆದ್ರೆ ಪೆನತ್ತೂರು, ಕೆಂಗೇರಿಗಳಲ್ಲಿ ಈಗಾಗಲೇ ಒಂದು ಯಂತ್ರ ಕೆಟ್ಟಿದೆ ಎಂದು ನೌಕರರಾದ ರಾಜಾ ತಿಳಿಸಿದರು.

ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ನಗರದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಚಿತಾಗಾರಗಳ ಸ್ಥಿತಿ ಬಿಗಡಾಯಿಸುತ್ತಿದೆ.

ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದಲ್ಲಿ ಇಂದು ಮುಂಜಾನೆಯಿಂದಲೂ ಶವಗಳಿರುವ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ. ಬೆಳಗ್ಗೆ ಏಳರಿಂದ ರಾತ್ರಿ ಹನ್ನೆರೆಡಾದರೂ ಶವಗಳು ಮುಗಿಯುತ್ತಿಲ್ಲ. ಒಂದೊಂದು ಹೆಣ ಸುಡಲೂ ಒಂದರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ.

ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಶವಗಳಿರುವ ಆ್ಯಂಬುಲೆನ್ಸ್

ಆದರೆ, ಸ್ಮಶಾನದಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾದ ಸವಲತ್ತುಗಳಿಲ್ಲ. ಸರಿಯಾದ ಪ್ರಮಾಣದಲ್ಲಿ ಮಾಸ್ಕ್, ಕೈಗವಸು, ಪಿಪಿಇ ಕಿಟ್, ಸ್ಯಾನಿಟೈಸರ್ ಕೂಡಾ ಕೊಟ್ಟಿಲ್ಲ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಕುತ್ತು ಬರುವ ಆತಂಕ ಇದೆ ಎಂದು ನೌಕರರೊಬ್ಬರು ತಿಳಿಸಿದರು.

ಕೋವಿಡ್ ಸೋಂಕಿತರ ಮೃತದೇಹ ಸುಡುವುದಕ್ಕೆಂದೇ ಮೇಡಿ ಅಗ್ರಹಾರ, ಸುಮನಹಳ್ಳಿ, ಬೊಮ್ಮಹಳ್ಳಿ, ಕೆಂಗೇರಿ, ಪೆನತ್ತೂರುಗಳಲ್ಲಿ 5 ಚಿತಾಗಾರಗಳನ್ನು ಮೀಸಲಿಡಲಾಗಿದೆ. ಆದ್ರೆ ಪೆನತ್ತೂರು, ಕೆಂಗೇರಿಗಳಲ್ಲಿ ಈಗಾಗಲೇ ಒಂದು ಯಂತ್ರ ಕೆಟ್ಟಿದೆ ಎಂದು ನೌಕರರಾದ ರಾಜಾ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.