ETV Bharat / state

ಎಪಿಎಂಸಿ ಕಾಯ್ದೆ ಕೆಲ ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ: ಸಿಎಂ ಕಿಡಿ

author img

By

Published : Dec 25, 2020, 4:43 PM IST

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಎಲ್ಲಿ ಬೇಕಾದರೂ ತಾನು ಬೆಳೆದ ಬೆಳೆ ಮಾರಾಟ ಮಾಡುವ ಅವಕಾಶವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಕಿಸಾನ್‌ ಸಮ್ಮಾನ್ ಯೋಜನೆ ಕಾರ್ಯಕ್ರಮದಲ್ಲಿ ಹೇಳಿದರು.

Kisan Samman program
ಯಡಿಯೂರಪ್ಪ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ‌ ನಿಮಿತ್ತ ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ಕಿಸಾನ್‌ ಸಮ್ಮಾನ್ ಯೋಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ವೇಳೆ, ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಕಳೆದ 50 ವರ್ಷ ಹಿಂದೆ ಶಿಕಾರಿಪುರದಲ್ಲಿ ಎಪಿಎಂಸಿಯಲ್ಲಿ ಧರಣಿ ಕೂತಿದ್ದೆ. ರೈತ ಬೆಳೆದಂತಹ ಬೆಳೆಗೆ ಎಲ್ಲಿ ಒಳ್ಳೆಯ ಬೆಲೆ ಸಿಗುತ್ತೆ ಅಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ಸಿಗಬೇಕು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಒಂದು ವಾರ ಸತ್ಯಾಗ್ರಹ ಮಾಡಿದ್ದೆ‌‌ ಎಂದು ಸ್ಮರಿಸಿದರು.

ಕಿಸಾನ್‌ ಸಮ್ಮಾನ್ ಯೋಜನೆ ಕಾರ್ಯಕ್ರಮ

ಇಂದು ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾನು ಸಿಎಂ ಆಗುವ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಎಲ್ಲಿ ಬೇಕಾದರೂ ತಾನು ಬೆಳೆದ ಬೆಳೆ ಮಾರಾಟ ಮಾಡುವ ಅವಕಾಶ ಪ್ರಧಾನಿ ಮೋದಿ ನೀಡಿದರು. ಆದರೆ, ಇದನ್ನು ಕೆಲ ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ. ಶೇ 99ರಷ್ಟು ರೈತರು ಇದನ್ನು ಸ್ವಾಗತಿಸಿದ್ದಾರೆ. ರೈತರ ಕಣ್ಣೀರನ್ನು ಒರೆಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ‌‌ ನೀಡಿ, ರೈತ ನೆಮ್ಮದಿಯಿಂದ ಗೌರವ, ಸ್ವಾಭಿಮಾನದಿಂದ ಬಾಳಲು ನಾವು ಸಿದ್ಧರಿದ್ದೇವೆ ಎಂಬ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸ್ವಾತಂತ್ರ್ಯದ ಬಳಿಕ ಯಾವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಮಾಡಿದ ದೇಶದ ಹಿರಿಯರ ಮನಸ್ಸಿಗೆ ನೆಮ್ಮದಿ ಕೊಡುವ ರಾಜಕೀಯ ನಡೆದಿಲ್ಲ. ದೇಶ ಮೊದಲು ಎಂಬ ಶಬ್ದಕ್ಕೆ ಅರ್ಥ ಬರುವಂಥ ರೀತಿಯಲ್ಲಿ ದೇಶದಲ್ಲಿ ರಾಜಕಾರಣ‌ ಮಾಡಿಲ್ಲ. ಕಾಂಗ್ರೆಸ್​​​​ನವರು ದೇಶವನ್ನು ಲೂಟಿ ಮಾಡುವ ಕೆಲಸ‌ ಮಾಡಿದರು ಎಂದು ಕಿಡಿ ಕಾರಿದರು.

ಓದಿ...ಮೋದಿ ಪ್ರಧಾನಿಯಾಗಿ ಇರೋತನಕ ಯಾವುದೇ ಕಂಪನಿ ರೈತರ ಭೂಮಿ ಕಿತ್ತುಕೊಳ್ಳೋಕೆ ಸಾಧ್ಯವೇ ಇಲ್ಲ: ಅಮಿತ್ ಶಾ

ಅನ್ನದಾನತನಿಗೆ‌ ಗೌರವ ಬರುವ ರೀತಿಯಲ್ಲಿ ದೇಶದ ರಾಜನೀತಿ ನಡೆಯಲಿಲ್ಲ.‌ ಅಟಲ್ ಅವರು ಹೊಸ‌ ಪಕ್ಷ ಕಟ್ಟಿದರು. ದೇಶದ ರೈತನಿಗೆ ಎಲ್ಲ ಗೌರವ ಸಿಗುವ ನಿಟ್ಟಿನಲ್ಲಿ ಮೋದಿ ಕೆಲಸ‌ ಮಾಡುತ್ತಿದ್ದಾರೆ. ಅನ್ನದಾತನಿಗೆ ಬೇಕಾದ ಕೆಲಸ‌ ಮಾಡಬೇಕು. ಸ್ವಾತಂತ್ರ್ಯ ಬಂದ ನಂತರವೂ ಆತ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ರೈತರ ಬೆಳೆದ ಉತ್ಪನ್ನಗಳು ರೈತನದ್ದಾಗಿರಲಿಲ್ಲ. ಅದು ದಲ್ಲಾಳಿಗಳದ್ದಾಗಿತ್ತು. ಅದರಿಂದ ಹೊರಗೆ ತರಬೇಕು ಎಂದು ಕಾನೂನು ತಿದ್ದುಪಡಿ ತರಲಾಗಿದೆ ಎಂದು ವಿವರಿಸಿದರು.

ವಿರೋಧಿಗಳು ನಮ್ಮ ರೈತರು ಸ್ವಾಭಿಮಾನಿಯಾಗಿರಬಾರದು ಎಂಬ ದೃಷ್ಟಿಯಿಂದ ಅವರ ಮೇಲೆ ಹತೋಟಿ‌ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿಮ್ಮ ಪರವಾಗಿದೆ.‌ ಮೋದಿ ನಿಮ್ಮನ್ನು ಸ್ವಾಭಿಮಾನಿ ರೈತನಾಗಿ ಪರಿವರ್ತನೆ ಮಾಡುವ ಕೆಲಸ‌ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಅವರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಾಗೂ ವಿವಿಧ ಯೋಜನೆಗಳ ಲೋಕಾರ್ಪಣೆಯ ವರ್ಚುಯಲ್ ಕಾರ್ಯಕ್ರಮದಲ್ಲೂ ಸಿಎಂ ಭಾಗಿಯಾದರು. ಪ್ರಧಾನಿ ಮೋದಿ ಜೊತೆಗಿನ‌ ರೈತರ ಸಂವಾದವನ್ನು ಆಲಿಸಿದರು.

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ‌ ನಿಮಿತ್ತ ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ಕಿಸಾನ್‌ ಸಮ್ಮಾನ್ ಯೋಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ವೇಳೆ, ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಕಳೆದ 50 ವರ್ಷ ಹಿಂದೆ ಶಿಕಾರಿಪುರದಲ್ಲಿ ಎಪಿಎಂಸಿಯಲ್ಲಿ ಧರಣಿ ಕೂತಿದ್ದೆ. ರೈತ ಬೆಳೆದಂತಹ ಬೆಳೆಗೆ ಎಲ್ಲಿ ಒಳ್ಳೆಯ ಬೆಲೆ ಸಿಗುತ್ತೆ ಅಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ಸಿಗಬೇಕು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಒಂದು ವಾರ ಸತ್ಯಾಗ್ರಹ ಮಾಡಿದ್ದೆ‌‌ ಎಂದು ಸ್ಮರಿಸಿದರು.

ಕಿಸಾನ್‌ ಸಮ್ಮಾನ್ ಯೋಜನೆ ಕಾರ್ಯಕ್ರಮ

ಇಂದು ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾನು ಸಿಎಂ ಆಗುವ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಎಲ್ಲಿ ಬೇಕಾದರೂ ತಾನು ಬೆಳೆದ ಬೆಳೆ ಮಾರಾಟ ಮಾಡುವ ಅವಕಾಶ ಪ್ರಧಾನಿ ಮೋದಿ ನೀಡಿದರು. ಆದರೆ, ಇದನ್ನು ಕೆಲ ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ. ಶೇ 99ರಷ್ಟು ರೈತರು ಇದನ್ನು ಸ್ವಾಗತಿಸಿದ್ದಾರೆ. ರೈತರ ಕಣ್ಣೀರನ್ನು ಒರೆಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ‌‌ ನೀಡಿ, ರೈತ ನೆಮ್ಮದಿಯಿಂದ ಗೌರವ, ಸ್ವಾಭಿಮಾನದಿಂದ ಬಾಳಲು ನಾವು ಸಿದ್ಧರಿದ್ದೇವೆ ಎಂಬ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸ್ವಾತಂತ್ರ್ಯದ ಬಳಿಕ ಯಾವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಮಾಡಿದ ದೇಶದ ಹಿರಿಯರ ಮನಸ್ಸಿಗೆ ನೆಮ್ಮದಿ ಕೊಡುವ ರಾಜಕೀಯ ನಡೆದಿಲ್ಲ. ದೇಶ ಮೊದಲು ಎಂಬ ಶಬ್ದಕ್ಕೆ ಅರ್ಥ ಬರುವಂಥ ರೀತಿಯಲ್ಲಿ ದೇಶದಲ್ಲಿ ರಾಜಕಾರಣ‌ ಮಾಡಿಲ್ಲ. ಕಾಂಗ್ರೆಸ್​​​​ನವರು ದೇಶವನ್ನು ಲೂಟಿ ಮಾಡುವ ಕೆಲಸ‌ ಮಾಡಿದರು ಎಂದು ಕಿಡಿ ಕಾರಿದರು.

ಓದಿ...ಮೋದಿ ಪ್ರಧಾನಿಯಾಗಿ ಇರೋತನಕ ಯಾವುದೇ ಕಂಪನಿ ರೈತರ ಭೂಮಿ ಕಿತ್ತುಕೊಳ್ಳೋಕೆ ಸಾಧ್ಯವೇ ಇಲ್ಲ: ಅಮಿತ್ ಶಾ

ಅನ್ನದಾನತನಿಗೆ‌ ಗೌರವ ಬರುವ ರೀತಿಯಲ್ಲಿ ದೇಶದ ರಾಜನೀತಿ ನಡೆಯಲಿಲ್ಲ.‌ ಅಟಲ್ ಅವರು ಹೊಸ‌ ಪಕ್ಷ ಕಟ್ಟಿದರು. ದೇಶದ ರೈತನಿಗೆ ಎಲ್ಲ ಗೌರವ ಸಿಗುವ ನಿಟ್ಟಿನಲ್ಲಿ ಮೋದಿ ಕೆಲಸ‌ ಮಾಡುತ್ತಿದ್ದಾರೆ. ಅನ್ನದಾತನಿಗೆ ಬೇಕಾದ ಕೆಲಸ‌ ಮಾಡಬೇಕು. ಸ್ವಾತಂತ್ರ್ಯ ಬಂದ ನಂತರವೂ ಆತ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ರೈತರ ಬೆಳೆದ ಉತ್ಪನ್ನಗಳು ರೈತನದ್ದಾಗಿರಲಿಲ್ಲ. ಅದು ದಲ್ಲಾಳಿಗಳದ್ದಾಗಿತ್ತು. ಅದರಿಂದ ಹೊರಗೆ ತರಬೇಕು ಎಂದು ಕಾನೂನು ತಿದ್ದುಪಡಿ ತರಲಾಗಿದೆ ಎಂದು ವಿವರಿಸಿದರು.

ವಿರೋಧಿಗಳು ನಮ್ಮ ರೈತರು ಸ್ವಾಭಿಮಾನಿಯಾಗಿರಬಾರದು ಎಂಬ ದೃಷ್ಟಿಯಿಂದ ಅವರ ಮೇಲೆ ಹತೋಟಿ‌ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿಮ್ಮ ಪರವಾಗಿದೆ.‌ ಮೋದಿ ನಿಮ್ಮನ್ನು ಸ್ವಾಭಿಮಾನಿ ರೈತನಾಗಿ ಪರಿವರ್ತನೆ ಮಾಡುವ ಕೆಲಸ‌ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಅವರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಾಗೂ ವಿವಿಧ ಯೋಜನೆಗಳ ಲೋಕಾರ್ಪಣೆಯ ವರ್ಚುಯಲ್ ಕಾರ್ಯಕ್ರಮದಲ್ಲೂ ಸಿಎಂ ಭಾಗಿಯಾದರು. ಪ್ರಧಾನಿ ಮೋದಿ ಜೊತೆಗಿನ‌ ರೈತರ ಸಂವಾದವನ್ನು ಆಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.