ETV Bharat / state

ಕೆಂಪೇಗೌಡ ಬಸ್‌ ನಿಲ್ದಾಣವಾದ ಆಗಿನ ಧರ್ಮಾಂಬುಧಿ ಕೆರೆಗೆ ಸ್ವಾಮಿ ವಿವೇಕಾನಂದರ ಭೇಟಿ!

author img

By

Published : Jun 21, 2019, 4:20 AM IST

Updated : Jun 21, 2019, 2:18 PM IST

ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ವಾಮಿ ವಿವೇಕಾನಂದರು ಪ್ರತಿನಿತ್ಯ ಬಂದು ಧರ್ಮಾಂಬುಧಿ ಕೆರೆಯಲ್ಲಿ ಮಿಂದೆಳುತ್ತಿದ್ದರಂತೆ. ತುಳುಸಿ ತೋಟದಲ್ಲಿ ಧಾನ್ಯ ಮಾಡಿ, ಲಾಲ್​ದಾಸ್ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರಂತೆ.

ಕೆಂಪೇಗೌಡ ಬಸ್‌ ನಿಲ್ದಾಣ

ಬೆಂಗಳೂರು: ಬೆಂಗಳೂರಿನ ಹೃದಯದಂತಿರುವ ಕೆಂಪೇಗೌಡ ಬಸ್‌ ನಿಲ್ದಾಣವಿರುವ ಜಾಗ ಈ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಕಾಲಕ್ಕೆ ತಕ್ಕಂತೆ ಮೈದಾನ, ಬಸ್‌ ನಿಲ್ದಾಣವಾಗಿ ರೂಪಾಂತರವಾಗುತ್ತ ಬಂದ ಈ ಸ್ಥಳಕ್ಕೆ ತನ್ನದೇ ಆದ ಇತಿಹಾಸವಿದೆ. ಆಗಿನ ಧರ್ಮಾಂಬುಧಿ ಕೆರೆಯೇ ಸದ್ಯ ಕೆಂಪೇಗೌಡ ಬಸ್‌ ನಿಲ್ದಾಣವಾಗಿದ್ದು, ಈ ಬಸ್ ನಿಲ್ದಾಣ ಈಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ.

ಒಂದಾನೊಂದು ಕಾಲದಲ್ಲಿ ಕೆರೆಯ ಜಾಗವಾಗಿದ್ದ ಕೆಂಪೇಗೌಡ ಬಸ್ ನಿಲ್ದಾಣವನ್ನು ಮೊದಲಿಗೆ ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್​ಆರ್​ಟಿಸಿ) ಎಂದು ಕರೆಯಲಾಗುತ್ತಿತ್ತು. ನಂತರ ಅದನ್ನೇ ಕೆಂಪೇಗೌಡ ಬಸ್ ನಿಲ್ದಾಣ ಎಂದು ಬದಲಾಯಿಸಲಾಯಿತು. ಕೆರೆಯ ಜಾಗವಾಗಿದ್ದ ಈ ಸ್ಥಳ ನಂತರ ಆಟದ ಮೈದಾನವಾಗಿಯೂ ಮಾರ್ಪಾಡಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.

ಧರ್ಮಾಂಬುಧಿ ಕೆರೆಗೆ ವಿವೇಕಾನಂದರು:

ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ವಾಮಿ ವಿವೇಕಾನಂದರು ಪ್ರತಿನಿತ್ಯ ಬಂದು ಧರ್ಮಾಂಬುಧಿ ಕೆರೆಯಲ್ಲಿ ಮಿಂದೆಳುತ್ತಿದ್ದರಂತೆ. ತುಳುಸಿ ತೋಟದಲ್ಲಿ ಧಾನ್ಯ ಮಾಡಿ, ಲಾಲ್​ದಾಸ್ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರಂತೆ ಎಂದು ಚಿಕ್ಕಪೇಟೆಯ ಮಾಜಿ ಪಾಲಿಕೆ ಸದಸ್ಯ ಶಿವಕುಮಾರ್ ಮಾಹಿತಿ ನೀಡಿದರು.

ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದ ಇತಿಹಾಸ

ಧರ್ಮಾಂಬುಧಿ ಕೆರೆಯು ಬತ್ತಿ ಹೋದ ನಂತರ ಅದು ಸುಭಾಷ್ ಮೈದಾನವಾಗಿ ಸಾಕಷ್ಟು ಕಾರ್ಯಕ್ರಮಗಳು ನಡೆದಿದೆಯಂತೆ. ಸಮಾವೇಶ, ವಸ್ತು ಪ್ರದರ್ಶನ, ನಾಟಕ ಪ್ರದರ್ಶನ ಸೇರಿದಂತೆ ಇತರೆ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಎನ್ನುತ್ತಾರೆ ಶಿವಕುಮಾರ್.

ಬೆಂಗಳೂರು: ಬೆಂಗಳೂರಿನ ಹೃದಯದಂತಿರುವ ಕೆಂಪೇಗೌಡ ಬಸ್‌ ನಿಲ್ದಾಣವಿರುವ ಜಾಗ ಈ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಕಾಲಕ್ಕೆ ತಕ್ಕಂತೆ ಮೈದಾನ, ಬಸ್‌ ನಿಲ್ದಾಣವಾಗಿ ರೂಪಾಂತರವಾಗುತ್ತ ಬಂದ ಈ ಸ್ಥಳಕ್ಕೆ ತನ್ನದೇ ಆದ ಇತಿಹಾಸವಿದೆ. ಆಗಿನ ಧರ್ಮಾಂಬುಧಿ ಕೆರೆಯೇ ಸದ್ಯ ಕೆಂಪೇಗೌಡ ಬಸ್‌ ನಿಲ್ದಾಣವಾಗಿದ್ದು, ಈ ಬಸ್ ನಿಲ್ದಾಣ ಈಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ.

ಒಂದಾನೊಂದು ಕಾಲದಲ್ಲಿ ಕೆರೆಯ ಜಾಗವಾಗಿದ್ದ ಕೆಂಪೇಗೌಡ ಬಸ್ ನಿಲ್ದಾಣವನ್ನು ಮೊದಲಿಗೆ ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್​ಆರ್​ಟಿಸಿ) ಎಂದು ಕರೆಯಲಾಗುತ್ತಿತ್ತು. ನಂತರ ಅದನ್ನೇ ಕೆಂಪೇಗೌಡ ಬಸ್ ನಿಲ್ದಾಣ ಎಂದು ಬದಲಾಯಿಸಲಾಯಿತು. ಕೆರೆಯ ಜಾಗವಾಗಿದ್ದ ಈ ಸ್ಥಳ ನಂತರ ಆಟದ ಮೈದಾನವಾಗಿಯೂ ಮಾರ್ಪಾಡಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.

ಧರ್ಮಾಂಬುಧಿ ಕೆರೆಗೆ ವಿವೇಕಾನಂದರು:

ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ವಾಮಿ ವಿವೇಕಾನಂದರು ಪ್ರತಿನಿತ್ಯ ಬಂದು ಧರ್ಮಾಂಬುಧಿ ಕೆರೆಯಲ್ಲಿ ಮಿಂದೆಳುತ್ತಿದ್ದರಂತೆ. ತುಳುಸಿ ತೋಟದಲ್ಲಿ ಧಾನ್ಯ ಮಾಡಿ, ಲಾಲ್​ದಾಸ್ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರಂತೆ ಎಂದು ಚಿಕ್ಕಪೇಟೆಯ ಮಾಜಿ ಪಾಲಿಕೆ ಸದಸ್ಯ ಶಿವಕುಮಾರ್ ಮಾಹಿತಿ ನೀಡಿದರು.

ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದ ಇತಿಹಾಸ

ಧರ್ಮಾಂಬುಧಿ ಕೆರೆಯು ಬತ್ತಿ ಹೋದ ನಂತರ ಅದು ಸುಭಾಷ್ ಮೈದಾನವಾಗಿ ಸಾಕಷ್ಟು ಕಾರ್ಯಕ್ರಮಗಳು ನಡೆದಿದೆಯಂತೆ. ಸಮಾವೇಶ, ವಸ್ತು ಪ್ರದರ್ಶನ, ನಾಟಕ ಪ್ರದರ್ಶನ ಸೇರಿದಂತೆ ಇತರೆ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಎನ್ನುತ್ತಾರೆ ಶಿವಕುಮಾರ್.

Intro:ಧರ್ಮಾಂಬುಧಿ ಕೆರೆ ಕಟ್ಟೆಗೆ ಬಂದಿದ್ದರು ಸ್ವಾಮಿ ವಿವೇಕಾನಂದಾರು; ಸುವರ್ಣ ಮಹೋತ್ಸವದ ಸವಿ ನೆನಪು..‌

ಬೆಂಗಳೂರು: ಅರ್ಧ ಶತಮಾನ ದಾಟಿರುವ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಈಗ ಸುವರ್ಣ ಮಹೋತ್ಸವದ ಸಂಭ್ರಮ.. ಒಂದಾನೊಂದು ಕಾಲದಲ್ಲಿ ಕೆರೆಯ ಜಾಗವಾಗಿದ್ದ ಆಗಿನ ಧರ್ಮಾಂಬುಧಿ ಕೆರೆಯೇ ಈಗ ಕೆಂಪೇಗೌಡ ಬಸ್‌ ನಿಲ್ದಾಣ.. ಈ ಹಿಂದೇ ಕೆಂಪೇಗೌಡ ಬಸ್ ನಿಲ್ದಾಣವನ್ನ ( ಕೆಎಸ್ ಆರ್ ಟಿಸಿ) ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ ( ಎಂಎಸ್ ಆರ್ ಟಿಸಿ)
ಅಂತ ಕರೆಯಲಾಗುತ್ತಿತ್ತು..‌ ನಂತರ ಅದನ್ನೇ ಕೆಂಪೇಗೌಡ ಬಸ್ ನಿಲ್ದಾಣ ಎಂದು ಬದಲಾಯಿಸಲಾಯಿತು..

ಅಂದಹಾಗೇ, ಸುವರ್ಣ ಮಹೋತ್ಸವದ ಈ ಸವಿ ನೆನಪಿನಲ್ಲಿರೋ ಕೆಂಪೇಗೌಡ ಬಸ್ ನಿಲ್ದಾಣವೂ ಈ ಹಿಂದೆ ಕೆರೆಯ ಜಾಗವಾಗಿತ್ತು.. ನಂತರ ಆಟದ ಮೈದಾನವಾಗಿಯೂ ಮಾರ್ಪಾಡು ಹೊಂದಿತ್ತು.. ಆದರೆ ವಿಶೇಷ ಎಂಬಂತೆ ಆಗ ಧರ್ಮಾಂಬುಧಿ ಕೆರೆ ಇದ್ದಾಗ ಸ್ವಾಮಿ ವಿವೇಕಾನಂದರು ಬಂದು ಹೋಗಿದ್ದನ್ನಾ ನೆನಪಿಸಿಕೊಳ್ಳುತ್ತಾರೆ, ಚಿಕ್ಕಪೇಟೆಯ ಮಾಜಿ ಪಾಲಿಕೆ ಸದಸ್ಯ ಶಿವಕುಮಾರ್...

ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದರು ನೆಲೆಸಿದ್ದಾಗ ಪ್ರತಿನಿತ್ಯ ಬಂದು ಧರ್ಮಾಂಧಿ ಕೆರೆಯಲ್ಲಿ ಮಿಂದೆಳುತ್ತಿದ್ದರಂತೆ.. ಅಲ್ಲಿಂದ ತುಳುಸಿ ತೋಟದಲ್ಲಿ ಹೋಗಿ ಧಾನ್ಯ ಮಾಡಿ,, ಲಾಲ್ ದಾಸ್ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಪುನಸ್ಕಾರ ಮಾಡುತ್ತಿದ್ದರು.. ಈಗ ಆ ಕೆರೆಯ ಜಾಗವೇ ಕೆಂಪೇಗೌಡ ಬಸ್ ನಿಲ್ದಾಣವಾಗಿದೆ ಅಂತ ಹಳೆಯ ನೆನಪುಗಳನ್ನ ಮೆಲುಕು‌ ಹಾಕಿದರು..‌

ಇವೆಲ್ಲದರ ಜೊತೆಗೆ ಕೆರೆಯು ಬತ್ತಿಹೋದ ನಂತರ ಅದು ಸುಬಾಷ್ ಮೈದಾನವಾಗಿದ್ದಾಗ ಸಾಕಷ್ಟು ಕಾರ್ಯಕ್ರಮಗಳು ನಡೆದಿದೆಯಂತೆ.. ಸಮಾವೇಶ,
ವಸ್ತು ಪ್ರದರ್ಶನ, ನಾಟಕ ಪ್ರದರ್ಶನ ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯುತ್ತಿತ್ತು ಅಂತ ಶಿವಕುಮಾರ್ ಮಾಹಿತಿ ನೀಡಿದರು..

ಒಟ್ಟಾರೆ,, ಕೆರೆಯಿಂದ ಮೈದಾನದ ಅಂಗಳವಾಗಿ ನಂತರ ಇಡೀ ನಗರಕ್ಕೆ ಮುಖ್ಯಕೇಂದ್ರ ಬಿಂದುವಾಗಿ‌ ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಈಗ ಕಾಣಬಹುದು..

KN_BNG_03_20_MAJESTIC_@50_SCRIPT_DEEPA_7201801

VIEDOS ( SET FROM BACKPACK)
FILE NAME MAJESTIC @50

Byte- ಶಿವಕುಮಾರ್- ಮಾಜಿ ಪಾಲಿಕೆ ಸದಸ್ಯ..



Body:..Conclusion:..
Last Updated : Jun 21, 2019, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.