ETV Bharat / state

ಬಸ್ ಟಿಕೆಟ್ ದರ ಏರಿಕೆ.. ಏನಂತಾರೆ ಅಧಿಕಾರಿಗಳು..? - ಕೆಎಸ್​ಆರ್​ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ಪ್ರತಿಕ್ರಿಯೆ

ಸಾರ್ವಜನಿಕರಿಗೆ ಶಾಕ್ ನೀಡಿ ನಿನ್ನೆಯಷ್ಟೇ ಬಸ್​ ಟಿಕೆಟ್ ದರ ಏರಿಸಲಾಗಿದೆ. ಈ ಕುರಿತು ಕೆಎಸ್​ಆರ್​ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

Increase bus ticket prices . G.T Prabhakar's response
ಬಸ್ ಟಿಕೆಟ್ ದರದ ಏರಿಕೆ.. ಜಿ.ಟಿ. ಪ್ರಭಾಕರ್ ಪ್ರತಿಕ್ರಿಯೆ
author img

By

Published : Feb 26, 2020, 11:59 PM IST

ಬೆಂಗಳೂರು: ಸಾರ್ವಜನಿಕರಿಗೆ ನಿನ್ನೆಯಷ್ಟೇ ಶಾಕ್ ನೀಡಿ ಬಸ್​ ಟಿಕೆಟ್ ದರ ಏರಿಸಲಾಗಿದೆ. ಬಿಎಂಟಿಸಿ ಹೊರೆತುಪಡಿಸಿ, ಇತರ ಸಾರಿಗೆ ಬಸ್​ಗಳ ಟಿಕೆಟ್ ದರ ಏರಿಕೆಯಾಗಿದೆ. ಹವಾನಿಯಂತ್ರಿತ ಬಸ್ ಗಳು‌ ಹೊರತುಪಡಿಸಿ, ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ, ನಾನ್ ಎಸಿ ಸ್ಲೀಪರ್​ಗಳ ಬಸ್​ಗಳ ದರವನ್ನು ಶೇ.12 ರಷ್ಟು ಹೆಚ್ಚಳ ಮಾಡಲಾಗಿದೆ. ವೋಲ್ವೋ ಮತ್ತು ಎಸಿ ಸ್ಲೀಪರ್ ಬಸ್​ಗಳ‌ ದರ ಹೆಚ್ಚಳವಾಗಿಲ್ಲ.

ಬಸ್ ಟಿಕೆಟ್ ದರದ ಏರಿಕೆ.. ಜಿ.ಟಿ. ಪ್ರಭಾಕರ್ ಪ್ರತಿಕ್ರಿಯೆ
ಇತ್ತ‌ ದರ ಏರಿಕೆ ಸಂಬಂಧ ಪ್ರತಿಕ್ರಿಯಿಸಿರುವ ಕೆಎಸ್​ಆರ್​ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್, 6 ವರ್ಷಗಳ ಬಳಿಕ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆ ಅನಿರ್ವಾಯವಾಗಿತ್ತು. ಏರಿಕೆ ಮಾಡದಿದ್ದರೆ ನಿಗಮ ಮುಳುಗಿ ಹೋಗಬೇಕಿತ್ತು. ಡೀಸೆಲ್ ಪೆಟ್ರೋಲ್ ದರ ಏರಿಕೆ, ಬಸ್​​​​ಗಳಿಗೆ ಉಪಯೋಗಿಸುವ ಉಪಕರಣಗಳ ಬೆಲೆ ಏರಿಕೆ ಸೇರಿದಂತೆ ಹತ್ತು ಹಲವು ಕಾರಣಗಳಿಂದ ದರ ಏರಿಕೆ ಮಾಡಲೇ ಬೇಕಾಯಿತು ಎಂದಿದ್ದಾರೆ.

ಇತ್ತ ಪ್ರಯಾಣಿಕರು, ಹೆಚ್ಚಳದ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯ ಬಳಕೆ ವಸ್ತುಗಳಿಂದ ಹಿಡಿದು ಪ್ರತಿಯೊಂದು ಬೆಲೆಯು ಗಗನಕೇರಿದೆ. ಹೀಗಿರುವಾಗ, ನಿತ್ಯ ಓಡಾಡುವ ಸಾರಿಗೆ ಬಸ್​​​ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗಕ್ಕೆ ಪೆಟ್ಟು ಬೀಳುತ್ತೆ. ದರ ಏರಿಕೆ ಶೇಕಡವಾರು ಕಡಿಮೆ ಮಾಡಬೇಕಿತ್ತು ಎನ್ನುತ್ತಿದ್ದಾರೆ.

ಬೆಂಗಳೂರು: ಸಾರ್ವಜನಿಕರಿಗೆ ನಿನ್ನೆಯಷ್ಟೇ ಶಾಕ್ ನೀಡಿ ಬಸ್​ ಟಿಕೆಟ್ ದರ ಏರಿಸಲಾಗಿದೆ. ಬಿಎಂಟಿಸಿ ಹೊರೆತುಪಡಿಸಿ, ಇತರ ಸಾರಿಗೆ ಬಸ್​ಗಳ ಟಿಕೆಟ್ ದರ ಏರಿಕೆಯಾಗಿದೆ. ಹವಾನಿಯಂತ್ರಿತ ಬಸ್ ಗಳು‌ ಹೊರತುಪಡಿಸಿ, ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ, ನಾನ್ ಎಸಿ ಸ್ಲೀಪರ್​ಗಳ ಬಸ್​ಗಳ ದರವನ್ನು ಶೇ.12 ರಷ್ಟು ಹೆಚ್ಚಳ ಮಾಡಲಾಗಿದೆ. ವೋಲ್ವೋ ಮತ್ತು ಎಸಿ ಸ್ಲೀಪರ್ ಬಸ್​ಗಳ‌ ದರ ಹೆಚ್ಚಳವಾಗಿಲ್ಲ.

ಬಸ್ ಟಿಕೆಟ್ ದರದ ಏರಿಕೆ.. ಜಿ.ಟಿ. ಪ್ರಭಾಕರ್ ಪ್ರತಿಕ್ರಿಯೆ
ಇತ್ತ‌ ದರ ಏರಿಕೆ ಸಂಬಂಧ ಪ್ರತಿಕ್ರಿಯಿಸಿರುವ ಕೆಎಸ್​ಆರ್​ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್, 6 ವರ್ಷಗಳ ಬಳಿಕ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆ ಅನಿರ್ವಾಯವಾಗಿತ್ತು. ಏರಿಕೆ ಮಾಡದಿದ್ದರೆ ನಿಗಮ ಮುಳುಗಿ ಹೋಗಬೇಕಿತ್ತು. ಡೀಸೆಲ್ ಪೆಟ್ರೋಲ್ ದರ ಏರಿಕೆ, ಬಸ್​​​​ಗಳಿಗೆ ಉಪಯೋಗಿಸುವ ಉಪಕರಣಗಳ ಬೆಲೆ ಏರಿಕೆ ಸೇರಿದಂತೆ ಹತ್ತು ಹಲವು ಕಾರಣಗಳಿಂದ ದರ ಏರಿಕೆ ಮಾಡಲೇ ಬೇಕಾಯಿತು ಎಂದಿದ್ದಾರೆ.

ಇತ್ತ ಪ್ರಯಾಣಿಕರು, ಹೆಚ್ಚಳದ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯ ಬಳಕೆ ವಸ್ತುಗಳಿಂದ ಹಿಡಿದು ಪ್ರತಿಯೊಂದು ಬೆಲೆಯು ಗಗನಕೇರಿದೆ. ಹೀಗಿರುವಾಗ, ನಿತ್ಯ ಓಡಾಡುವ ಸಾರಿಗೆ ಬಸ್​​​ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗಕ್ಕೆ ಪೆಟ್ಟು ಬೀಳುತ್ತೆ. ದರ ಏರಿಕೆ ಶೇಕಡವಾರು ಕಡಿಮೆ ಮಾಡಬೇಕಿತ್ತು ಎನ್ನುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.